ETV Bharat / sitara

ಬಾಯ್​​ಫ್ರೆಂಡ್ ಬಗ್ಗೆ ನೋ ಕಾಮೆಂಟ್ ಎಂದ ರಶ್ಮಿಕಾ ಮಂದಣ್ಣ!

ತೆಲುಗು ಸಿನಿರಂಗ ಜೊತೆ ಜೊತೆಗೆ ಬಾಲಿವುಡ್​ನಲ್ಲೂ ಬ್ಯೂಸಿ ಆಗಿರುವ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಇಂದು ,ಇನ್​ಸ್ಟಾಗ್ರಾಂನಲ್ಲಿ ಲೈವ್ ಬಂದು ಸುಮಾರು 30 ನಿಮಿಷಗಳ ಕಾಲ ಅಭಿಮಾನಿಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ, ತಮಗೆ ಯಾರ್​ ಮೇಲೆ ಹೆವಿ ಲವ್​ ಅಂತಾ ಸಹ ಹೇಳಿದ್ದಾರೆ.

author img

By

Published : Apr 26, 2021, 8:20 PM IST

rashmika mandanna
rashmika mandanna

ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ, ಮಿಂಚುತ್ತಿರುವ ಮಲೆನಾಡಿನ ಬೆಡಗಿ ರಶ್ಮಿಕಾ ಮಂದಣ್ಣ. ಸದ್ಯ ಕನ್ನಡ ಸಿನಿಮಾಗಳಿಗಿಂತ, ತೆಲುಗು ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ, ಅಭಿನಯಿಸುತ್ತಿರೋ ನ್ಯಾಷಿನಲ್ ಕ್ರಶ್ ರಶ್ಮಿಕಾ, ಬಹಳ ದಿನಗಳ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಮಾತಾಡಿದ್ದಾರೆ.

ಸದ್ಯ ಅಲ್ಲು ಅರ್ಜುನ್​ ಜೊತೆ, ಪುಷ್ಪ ಸಿನಿಮಾದ ಚಿತ್ರೀಕರಣಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಮಂದಣ್ಣ, ಹೈದಾರಾಬಾದ್​​​​​​​​ನಲ್ಲಿದ್ದಾರೆ. ಹೈದರಾಬಾದ್ ಮನೆಯಲ್ಲೇ, ಇನ್​​ಸ್ಟಾಗ್ರಾಂನಲ್ಲಿ ಲೈವ್ ಬಂದು ಸುಮಾರು 30 ನಿಮಿಷಗಳ ಕಾಲ, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮೊದಲಿಗೆ ಕೊರೊನಾ ಬಗ್ಗೆ ಎಲ್ಲರೂ ಸೇಫ್ ಆಗಿರಿ, ಅಂತಾ ಹೇಳುವ ಮೂಲಕ, ಅಲ್ಲು ಅರ್ಜುನ್ ಜೊತೆಗಿನ ಪುಷ್ಪ ಹಾಗೂ ಸಿದ್ಧಾರ್ಥ್​ ಮಲ್ರೋತ್ರ ಜತೆ ಮಿಷನ್​ ಮಜ್ನು ಹಾಗೂ ಅಮಿತಾಬ್​ ಬಚ್ಚನ್​ ಅವರೊಂದಿಗೆ ಗುಡ್​ ಬೈ ಸಿನಿಮಾ ಬಗ್ಗೆ ನಟಿಸುತ್ತಿರುವುದರ ಕುರಿತು ಸಂತಸ ಹಂಚಿಕೊಂಡಿದ್ದಾರೆ. ಇನ್ನು ಅಲ್ಲು ಅರ್ಜುನ್ ಸರಳ ವ್ಯಕ್ತಿತ್ವದ ಸ್ಟಾರ್ ಅಂತಾ ರಶ್ಮಿಕಾ ಮಂದಣ್ಣ, ಹೊಗಳಿದ್ದಾರೆ. ಇನ್ನು ಅಭಿಮಾನಿಯೊಬ್ಬ ನಿಮಗೆ ಯಾರ ಮೇಲೆ, ಕ್ರಶ್ ಆಗಿದೆ ಅಂತಾ ಕೇಳಿದಿಕ್ಕೆ, ನನಗೆ ನನ್ನ ಕೆಲಸದ ಮೇಲೆ ತುಂಬಾನೇ ಲವ್ ಆಗುತ್ತೆ ಅಂತಾ ಜಾಣ್ಮೆಯ ಉತ್ತರ ಕೊಟ್ಟಿದ್ದಾರೆ.

ಮತ್ತೊಬ್ಬ ಅಭಿಮಾನಿ ಅದೇ ಪ್ರಶ್ನೆ ಕೇಳಿದ್ದಕ್ಕೆ ನೋ‌ ಕಾಮೆಂಟ್ ಅಂತಾ ಹೇಳಿದ್ದಾರೆ. ಇನ್ನು ಕನ್ನಡದಲ್ಲಿ ರಶ್ಮಿಕಾ ಮಂದಣ್ಣ ಅಚ್ಚು ಮೆಚ್ಚಿನ ಚಿತ್ರ ಕಿರಿಕ್ ಪಾರ್ಟಿ ಅಂತೆ, ಹಾಗೇ ಈ ಬಾರಿಯ ಐಪಿಎಲ್ ತಂಡಗಳಲ್ಲಿ, ನಮ್ಮದೇ ಕಪ್ ಅಂತಾ ಬೆಂಗಳೂರು ರಾಯಲ್ ಚಾಲೆಂಜರ್ಸ್ ಅಂತಾ ಹೇಳುವ ಮೂಲಕ ಬೆಂಗಳೂರು ಫ್ಯಾನ್ಸ್ ಅಂತಾ ಫ್ರೂವ್ ಮಾಡಿದ್ದಾರೆ. ಮತ್ತೆ ವಿಜಯ ದೇವರಕೊಂಡ ಜೊತೆ ಸಿನಿಮಾ ಮಾಡ್ತೀರಾ, ಅಂತಾ ಅಭಿಮಾನಿ ಕೇಳಿದ ಪ್ರಶ್ನೆಗೆ, ರಶ್ಮಿಕಾ ಮಂದಣ್ಣ ಒಳ್ಳೆ, ಕಥೆ ಬಂದರೆ ಮತ್ತೆ ವಿಜಯ ದೇವರಕೊಂಡ ಜೊತೆ ಸಿನಿಮಾ ಮಾಡ್ತೀನಿ ಅಂತಾ ರಶ್ಮಿಕಾ ಹೇಳಿದ್ದಾರೆ. ಹೀಗೆ ಹಲವಾರು ವಿಚಾರಗಳನ್ನ ರಶ್ಮಿಕಾ ಮಂದಣ್ಣ ಹಂಚಿಕೊಂಡು, ಈ ಕೊರೊನಾ ಟೈಮಲ್ಲಿ ಮನೆಯಲ್ಲೇ ಸೇಫ್ ಆಗಿರಿ ಅಂತಾ ಜನರಿಗೆ ಕಿವಿ ಮಾತು ಹೇಳಿದ್ದಾರೆ.

ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ, ಮಿಂಚುತ್ತಿರುವ ಮಲೆನಾಡಿನ ಬೆಡಗಿ ರಶ್ಮಿಕಾ ಮಂದಣ್ಣ. ಸದ್ಯ ಕನ್ನಡ ಸಿನಿಮಾಗಳಿಗಿಂತ, ತೆಲುಗು ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ, ಅಭಿನಯಿಸುತ್ತಿರೋ ನ್ಯಾಷಿನಲ್ ಕ್ರಶ್ ರಶ್ಮಿಕಾ, ಬಹಳ ದಿನಗಳ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ಮಾತಾಡಿದ್ದಾರೆ.

ಸದ್ಯ ಅಲ್ಲು ಅರ್ಜುನ್​ ಜೊತೆ, ಪುಷ್ಪ ಸಿನಿಮಾದ ಚಿತ್ರೀಕರಣಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಮಂದಣ್ಣ, ಹೈದಾರಾಬಾದ್​​​​​​​​ನಲ್ಲಿದ್ದಾರೆ. ಹೈದರಾಬಾದ್ ಮನೆಯಲ್ಲೇ, ಇನ್​​ಸ್ಟಾಗ್ರಾಂನಲ್ಲಿ ಲೈವ್ ಬಂದು ಸುಮಾರು 30 ನಿಮಿಷಗಳ ಕಾಲ, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮೊದಲಿಗೆ ಕೊರೊನಾ ಬಗ್ಗೆ ಎಲ್ಲರೂ ಸೇಫ್ ಆಗಿರಿ, ಅಂತಾ ಹೇಳುವ ಮೂಲಕ, ಅಲ್ಲು ಅರ್ಜುನ್ ಜೊತೆಗಿನ ಪುಷ್ಪ ಹಾಗೂ ಸಿದ್ಧಾರ್ಥ್​ ಮಲ್ರೋತ್ರ ಜತೆ ಮಿಷನ್​ ಮಜ್ನು ಹಾಗೂ ಅಮಿತಾಬ್​ ಬಚ್ಚನ್​ ಅವರೊಂದಿಗೆ ಗುಡ್​ ಬೈ ಸಿನಿಮಾ ಬಗ್ಗೆ ನಟಿಸುತ್ತಿರುವುದರ ಕುರಿತು ಸಂತಸ ಹಂಚಿಕೊಂಡಿದ್ದಾರೆ. ಇನ್ನು ಅಲ್ಲು ಅರ್ಜುನ್ ಸರಳ ವ್ಯಕ್ತಿತ್ವದ ಸ್ಟಾರ್ ಅಂತಾ ರಶ್ಮಿಕಾ ಮಂದಣ್ಣ, ಹೊಗಳಿದ್ದಾರೆ. ಇನ್ನು ಅಭಿಮಾನಿಯೊಬ್ಬ ನಿಮಗೆ ಯಾರ ಮೇಲೆ, ಕ್ರಶ್ ಆಗಿದೆ ಅಂತಾ ಕೇಳಿದಿಕ್ಕೆ, ನನಗೆ ನನ್ನ ಕೆಲಸದ ಮೇಲೆ ತುಂಬಾನೇ ಲವ್ ಆಗುತ್ತೆ ಅಂತಾ ಜಾಣ್ಮೆಯ ಉತ್ತರ ಕೊಟ್ಟಿದ್ದಾರೆ.

ಮತ್ತೊಬ್ಬ ಅಭಿಮಾನಿ ಅದೇ ಪ್ರಶ್ನೆ ಕೇಳಿದ್ದಕ್ಕೆ ನೋ‌ ಕಾಮೆಂಟ್ ಅಂತಾ ಹೇಳಿದ್ದಾರೆ. ಇನ್ನು ಕನ್ನಡದಲ್ಲಿ ರಶ್ಮಿಕಾ ಮಂದಣ್ಣ ಅಚ್ಚು ಮೆಚ್ಚಿನ ಚಿತ್ರ ಕಿರಿಕ್ ಪಾರ್ಟಿ ಅಂತೆ, ಹಾಗೇ ಈ ಬಾರಿಯ ಐಪಿಎಲ್ ತಂಡಗಳಲ್ಲಿ, ನಮ್ಮದೇ ಕಪ್ ಅಂತಾ ಬೆಂಗಳೂರು ರಾಯಲ್ ಚಾಲೆಂಜರ್ಸ್ ಅಂತಾ ಹೇಳುವ ಮೂಲಕ ಬೆಂಗಳೂರು ಫ್ಯಾನ್ಸ್ ಅಂತಾ ಫ್ರೂವ್ ಮಾಡಿದ್ದಾರೆ. ಮತ್ತೆ ವಿಜಯ ದೇವರಕೊಂಡ ಜೊತೆ ಸಿನಿಮಾ ಮಾಡ್ತೀರಾ, ಅಂತಾ ಅಭಿಮಾನಿ ಕೇಳಿದ ಪ್ರಶ್ನೆಗೆ, ರಶ್ಮಿಕಾ ಮಂದಣ್ಣ ಒಳ್ಳೆ, ಕಥೆ ಬಂದರೆ ಮತ್ತೆ ವಿಜಯ ದೇವರಕೊಂಡ ಜೊತೆ ಸಿನಿಮಾ ಮಾಡ್ತೀನಿ ಅಂತಾ ರಶ್ಮಿಕಾ ಹೇಳಿದ್ದಾರೆ. ಹೀಗೆ ಹಲವಾರು ವಿಚಾರಗಳನ್ನ ರಶ್ಮಿಕಾ ಮಂದಣ್ಣ ಹಂಚಿಕೊಂಡು, ಈ ಕೊರೊನಾ ಟೈಮಲ್ಲಿ ಮನೆಯಲ್ಲೇ ಸೇಫ್ ಆಗಿರಿ ಅಂತಾ ಜನರಿಗೆ ಕಿವಿ ಮಾತು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.