ವಿಶ್ವವೇ ಭಾರತ ಚಿತ್ರರಂಗದ ಕಡೆ ತಿರುಗುವಂತೆ ಮಾಡಿದ್ದ ಸಿನಿಮಾ ಕೆಜಿಎಫ್. ಈ ಚಿತ್ರದಲ್ಲಿ ಲೀಡ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಮಚಂದ್ರ ರಾಜು ತಮ್ಮ ಖಡಕ್ ನಟನೆ ಮೂಲಕ ಎಲ್ಲರ ಗಮನ ಸೆಳೆದಿದ್ರು.

ಅಲ್ಲದೆ ಕೆಜಿಎಫ್ ಚಾಪ್ಟರ್ 1 ನಂತ್ರ ಬೇರೆ ಬೇರೆ ಭಾಷೆಗಳಿಂದಲೂ ಕೂಡ ರಾಮಚಂದ್ರಗೆ ಆಫರ್ಗಳು ಬಂದಿದ್ವು. ಆದ್ರೆ ಸದ್ಯ ಗರುಡ ಕನ್ನಡದ ಮತ್ತೊಂದು ಸಿನಿಮಾದಲ್ಲಿ ವಿಲನ್ ಆಗಲು ರೆಡಿಯಾಗಿದ್ದಾರೆ.

ಹೌದು, ಹರಿ ಸಂತೋಷ್ ನಿರ್ದೇಶನ ಮಾಡುತ್ತಿರುವ ಧನ್ವೀರ್ ಅಭಿನಯದ ಬಂಪರ್ ಚಿತ್ರದಲ್ಲಿ ರಾಮಚಂದ್ರ ವಿಲನ್ ಪಾತ್ರ ಮಾಡುತ್ತಿದ್ದಾರೆ. ಬಂಪರ್ ಚಿತ್ರಕ್ಕಾಗಿ ಒಬ್ಬ ಒಳ್ಳೆ ವಿಲನ್ಹುಡುಕುವಾಗ ಹರಿ ಸಂತೋಷ್ ಕಣ್ಣಿಗೆ ಬಿದ್ದವರು ಈ ಗರುಡ. ಇನ್ನು ಬಂಪರ್ ಚಿತ್ರದಲ್ಲಿ ರಾಮಚಂದ್ರ ವಿಲನ್ ಪಾತ್ರ ಮಾಡುತ್ತಿರುವ ವಿಷಯ ಗಾಂಧಿನಗರದಲ್ಲಿ ಜೋರಾಗಿ ಹರಿದಾಡುತ್ತಿದ್ದು, ಚಿತ್ರದ ಮೇಲಿನ ಕುತೂಹಲ ಇಮ್ಮಡಿಯಾಗಿದೆ.
