ETV Bharat / sitara

ಸ್ಯಾಂಡಲ್​​​ವುಡ್​​ಗೆ ಎಂಟ್ರಿ ಕೊಡ್ತಿದ್ದಾರೆ ರಾಕ್ಷಸರು!

author img

By

Published : Dec 14, 2019, 8:16 AM IST

‘ರಾಕ್ಷಸರು’ ಮೆಡ್ ಇನ್ ಪಾಪಿಸ್ತಾನ್ ಎಂಬ ಸಬ್​​​ ಟೈಟಲ್​ ಇಟ್ಟುಕೊಂಡ ಸಿನಿಮಾವೊಂದು ಚಂದನವನದಲ್ಲಿ ಸದ್ದು ಮಾಡುತ್ತಿದೆ. ಇದೀಗ ಚಿತ್ರೀಕರಣ ಮುಗಿಸಿಕೊಂಡು ಸೆನ್ಸಾರ್ ಮಂಡಳಿಯಿಂದ ‘ಎ’ ಅರ್ಹತಾ ಪತ್ರ ಪಡೆದು ಬಿಡುಗಡೆಯಾಗಲು ಸಿದ್ಧವಾಗಿದೆ.

rakshasaru ready to release
ರಾಕ್ಷಸರು!

‘ರಾಕ್ಷಸರು’ ಮೆಡ್ ಇನ್ ಪಾಪಿಸ್ತಾನ್ ಎಂಬ ಸಬ್​​​ ಟೈಟಲ್​ ಇಟ್ಟುಕೊಂಡ ಸಿನಿಮಾವೊಂದು ಚಂದನವನದಲ್ಲಿ ಸದ್ದು ಮಾಡುತ್ತಿದೆ. ಇದೀಗ ಚಿತ್ರೀಕರಣ ಮುಗಿಸಿಕೊಂಡು ಸೆನ್ಸಾರ್ ಮಂಡಳಿಯಿಂದ ‘ಎ’ ಅರ್ಹತಾ ಪತ್ರ ಪಡೆದು ಬಿಡುಗಡೆಯಾಗಲು ಸಿದ್ಧವಾಗಿದೆ.

ಗರುಡಾದ್ರಿ ಸಿನಿಮಾಸ್ ಅಡಿಯಲ್ಲಿ ನಿರ್ಮಾಪಕ ರಮೇಶ್ ಕಶ್ಯಪ್ ಹಾಗೂ ವಂದನ ರಮೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕ್ರೈಂ ಹಿನ್ನೆಲೆ ಇದ್ದರೂ ಒಂದು ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದೆಯಂತೆ. ನಿರ್ಮಾಪಕ ರಮೇಶ್ ಕಶ್ಯಪ್ ಈ ಹಿಂದೆ ಮಾಲಾಶ್ರೀ ಅಭಿನಯದ ‘ಮಹಾಕಾಳಿ’, ಶಿವರಾಜ್​​ಕುಮಾರ್ ಅಭಿನಯದ ‘ಭಾಗ್ಯದ ಬಳೆಗಾರ’ ಹಾಗೂ ಹೆಚ್ಚು ಹೆಸರು ತಂದು ಕೊಟ್ಟ ಯೋಗಿ ಅಭಿನಯದ ‘ನಂದ ಲವ್ಸ್ ನಂದಿತ’ ಚಿತ್ರಗಳ ನಿರ್ಮಾಪಕರು. ಈ ಸಿನಿಮಾಕ್ಕೆ ರಜತ್ ಆಕ್ಷನ್​ ಕಟ್​​ ಹೇಳಿದ್ದು, ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.

ಎಮಿಲ್ ಸಂಗೀತ (ಜಿಂಕೆ ಮರೀನಾ...ಜಿಂಕೆ ಮರೀನಾ ಹಾಡು ಖ್ಯಾತಿಯ) ನೀಡಿರುವ ಈ ಚಿತ್ರಕ್ಕೆ ಜನಾರ್ಧನ ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್​​​ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ರಾಜಶೇಖರ್ ಸಂಭಾಷಣೆ ಒದಗಿಸಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ಡೈಲಾಗ್​ ಕಿಂಗ್​​ ಸಾಯಿಕುಮಾರ್, ನಾಜಾರ್, ಸುಮನ್, ರಾಜೀವ್ ಖೇರ್, ಟಗರು ಖ್ಯಾತಿಯ ತ್ರಿವೇಣಿ ಜೊತೆಗೆ ಹತ್ತು ಹೊಸ ಕಲಾವಿದರು ಬಣ್ಣ ಹಚ್ಚಿದ್ದಾರೆ.

‘ರಾಕ್ಷಸರು’ ಮೆಡ್ ಇನ್ ಪಾಪಿಸ್ತಾನ್ ಎಂಬ ಸಬ್​​​ ಟೈಟಲ್​ ಇಟ್ಟುಕೊಂಡ ಸಿನಿಮಾವೊಂದು ಚಂದನವನದಲ್ಲಿ ಸದ್ದು ಮಾಡುತ್ತಿದೆ. ಇದೀಗ ಚಿತ್ರೀಕರಣ ಮುಗಿಸಿಕೊಂಡು ಸೆನ್ಸಾರ್ ಮಂಡಳಿಯಿಂದ ‘ಎ’ ಅರ್ಹತಾ ಪತ್ರ ಪಡೆದು ಬಿಡುಗಡೆಯಾಗಲು ಸಿದ್ಧವಾಗಿದೆ.

ಗರುಡಾದ್ರಿ ಸಿನಿಮಾಸ್ ಅಡಿಯಲ್ಲಿ ನಿರ್ಮಾಪಕ ರಮೇಶ್ ಕಶ್ಯಪ್ ಹಾಗೂ ವಂದನ ರಮೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕ್ರೈಂ ಹಿನ್ನೆಲೆ ಇದ್ದರೂ ಒಂದು ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದೆಯಂತೆ. ನಿರ್ಮಾಪಕ ರಮೇಶ್ ಕಶ್ಯಪ್ ಈ ಹಿಂದೆ ಮಾಲಾಶ್ರೀ ಅಭಿನಯದ ‘ಮಹಾಕಾಳಿ’, ಶಿವರಾಜ್​​ಕುಮಾರ್ ಅಭಿನಯದ ‘ಭಾಗ್ಯದ ಬಳೆಗಾರ’ ಹಾಗೂ ಹೆಚ್ಚು ಹೆಸರು ತಂದು ಕೊಟ್ಟ ಯೋಗಿ ಅಭಿನಯದ ‘ನಂದ ಲವ್ಸ್ ನಂದಿತ’ ಚಿತ್ರಗಳ ನಿರ್ಮಾಪಕರು. ಈ ಸಿನಿಮಾಕ್ಕೆ ರಜತ್ ಆಕ್ಷನ್​ ಕಟ್​​ ಹೇಳಿದ್ದು, ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.

ಎಮಿಲ್ ಸಂಗೀತ (ಜಿಂಕೆ ಮರೀನಾ...ಜಿಂಕೆ ಮರೀನಾ ಹಾಡು ಖ್ಯಾತಿಯ) ನೀಡಿರುವ ಈ ಚಿತ್ರಕ್ಕೆ ಜನಾರ್ಧನ ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್​​​ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ರಾಜಶೇಖರ್ ಸಂಭಾಷಣೆ ಒದಗಿಸಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ಡೈಲಾಗ್​ ಕಿಂಗ್​​ ಸಾಯಿಕುಮಾರ್, ನಾಜಾರ್, ಸುಮನ್, ರಾಜೀವ್ ಖೇರ್, ಟಗರು ಖ್ಯಾತಿಯ ತ್ರಿವೇಣಿ ಜೊತೆಗೆ ಹತ್ತು ಹೊಸ ಕಲಾವಿದರು ಬಣ್ಣ ಹಚ್ಚಿದ್ದಾರೆ.

ರಾಕ್ಷಸರು ಮೆಡ್ ಇನ್ ಪಾಪಿಸ್ತಾನ್ ಸಿದ್ದ

ಸಾಹಸ ಭರಿತ ಕನ್ನಡ ಸಿನಿಮಾ ರಾಕ್ಷಸರುಮೆಡ್ ಇನ್ ಪಾಪಿಸ್ತಾನ್ ಎಂಬ ಸೀಲ್ ಹೊತ್ತು ಚಿತ್ರೀಕರಣ ಮುಗಿಸಿಕೊಂಡು ಸೆನ್ಸಾರ್ ಮಂಡಳಿ ಇಂದ ಅರ್ಹತಾ ಪತ್ರ ಪಡೆದು ಬಿಡುಗಡೆ ಆಗಲು ಸಿದ್ದವಾಗಿದೆ.

ಗರುಡಾದ್ರಿ ಸಿನಿಮಾಸ್ ಅಡಿಯಲ್ಲಿ ನಿರ್ಮಾಪಕ ರಮೇಶ್ ಕಶ್ಯಪ್ ಹಾಗೂ ವಂದನ ರಮೇಶ್ ಸಿದ್ದಮಾಡಿರುವ ಚಿತ್ರ ಕ್ರೈಂ ಹಿನ್ನಲೆ ಇದ್ದರೂ ಒಂದು ನೈಜ ಘಟನೆ ಆಧಾರಿತ ಚಿತ್ರ. ನಿರ್ಮಾಪಕ ರಮೇಶ್ ಕಶ್ಯಪ್ ಈ ಹಿಂದೆ ಮಾಲಾಶ್ರೀ ಅಭಿನಯದ ಮಹಾ ಕಾಳಿ’, ಶಿವರಾಜಕುಮಾರ್ ಅಭಿನಯದ ಭಾಗ್ಯದ ಬಳೆಗಾರಹಾಗೂ ಹೆಚ್ಚು ಹೆಸರು ತಂದು ಕೊಟ್ಟ ಯೋಗಿ ಅಭಿನಯದ ನಂದ ಲವ್ಸ್ ನಂದಿತಚಿತ್ರಗಳ ನಿರ್ಮಾಪಕರು.

ಕನ್ನಡ ಅಷ್ಟೇ ಅಲ್ಲದೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಡಬ್ ಆಗಿ ಸಿದ್ದ ಮಾಡಿದ್ದಾರೆ ನಿರ್ದೇಶಕ ರಜತ್. ಚಿತ್ರೀಕರಣ ಬೆಂಗಳೂರಿನ ಸುತ್ತ ಮುತ್ತ ನಡೆಸಿದ್ದಾರೆ.

ಎಮಿಲ್ ಸಂಗೀತ (ಜಿಂಕೆ ಮರೀನಾ...ಜಿಂಕೆ ಮರೀನಾ ಹಾಡಿನ ಖ್ಯಾತಿ) ನೀಡಿರುವ ಈ ಚಿತ್ರಕ್ಕೆ ಜನಾರ್ಧನ ಬಾಬು ಛಾಯಾಗ್ರಹಣ, ಕೆ ಎಂ ಪ್ರಕಾಷ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ರಾಜಶೇಖರ್ ಸಂಭಾಷಣೆ ಒದಗಿಸಿದ್ದಾರೆ.

ಹಲವು ಭಾಷೆಗಳಲ್ಲಿ ಪರಿಚಯ ಇರುವ ನಟರುಗಳಾದ ಸಾಯಿಕುಮಾರ್, ನಾಜಾರ್, ಸುಮನ್, ರಾಜೀವ್ ಖೇರ್, ಟಗರು ಖ್ಯಾತಿಯ ತ್ರಿವೇಣಿ ಜೊತೆಗೆ ಹತ್ತು ಹೊಸ ಕಲಾವಿದರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಐವರು ಪೊಲೀಸ್ ವೇಷದಲ್ಲಿ ಮತ್ತು ಐವರು ವಿಲನ್ ಪಾತ್ರದಲ್ಲಿ ಚಿತ್ರ ರಂಗಕ್ಕೆ ಅಡಿಯಿಟ್ಟಿದ್ದಾರೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.