ಈಗ ನಾವೇನು ಅಷ್ಟೋ ಇಷ್ಟೋ ಹಾಡುತ್ತಿದ್ದೆವೆಯೋ ಅದು ಎಸ್ಪಿಬಿ ಅವರು ಹಾಕಿದ ಭಿಕ್ಷೆ. ಇಂಥ ಮತ್ತೊಂದು ಗಾಯಕ ಹುಟ್ಟಿ ಬರಬೇಕೆಂದ್ರೆ ಇನ್ನೂ 500 ವರ್ಷಬೇಕು. ಅಂಥದ್ದೊಂದು ಮೇರು ಪರ್ವತವನ್ನು ನಾವಿಂದು ಕಳೆದುಕೊಂಡಿದ್ದೇವೆ' ಎಂದು ಗಾಯಕ ರಾಜೇಶ್ ಕೃಷ್ಣನ್ ಭಾವುಕರಾಗಿದ್ದಾರೆ.
![Rajesh Krishnan who spoke about S PB](https://etvbharatimages.akamaized.net/etvbharat/prod-images/kn-bng-03-rajeshkrishnan-photo-ka10018_25092020160340_2509f_1601030020_163.jpg)
ಹಿರಿಯ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ ಅವರ ನಿಧನ ನೋವುಂಟು ಮಾಡಿದೆ. ಶಾಲೆ ಮತ್ತು ಕಾಲೇಜಿನ ಸಮಯದಿಂದಲೇ ಅವರ ಹಾಡುಗಳನ್ನು ಕೇಳಿ ಅಭಿಮಾನಿಯಾಗಿದ್ದೆ ಎಂದಿರುವ ರಾಜೇಶ್ ಕೃಷ್ಣನ್, ಮುಂದೊಂದು ದಿನ ಅವರ ಜತೆ ವೇದಿಕೆ ಹಂಚಿಕೊಳ್ಳುವ ಸೌಭಾಗ್ಯ ಸಿಗುತ್ತೆ ಎಂದು ಭಾವಿಸಿರಲಿಲ್ಲ. ಆದರೆ, ಆ ಗಳಿಗೆಯೂ ನನಗೆ ಸಿಕ್ಕಿತ್ತು.
ಇದೀಗ ಅವರೊಂದಿಗೆ ಕಳೆದ ಆ ಸಮಯ ಮತ್ತು ಬಿಟ್ಟು ಹೋದ ಹಾಡುಗಳನ್ನೇ ಕೇಳುತ್ತ ಅವರ ನೆನಪು ಮಾಡಿಕೊಳ್ಳುತ್ತಿದ್ದೇನೆ ಎಂದು ಶಿಷ್ಯ ರಾಜೇಶ್ ಕೃಷ್ಣ ಕಂಬನಿ ಮಿಡಿದಿದ್ದಾರೆ.