ETV Bharat / sitara

ರಿಲೀಸ್​​​ಗೆ ರೆಡಿಯಾದ 'ರಾಜಲಕ್ಷ್ಮಿ': ಸಿನಿಮಾ ಹೆಸರಿನ ಹಿಂದಿದೆ ಒಂದು ಗುಟ್ಟು! - kannada movie rajalakshmi

ರಾಜಲಕ್ಷ್ಮಿ ಸಿನಿಮಾ ರಿಲೀಸ್​​ಗೆ ರೆಡಿಯಾಗಿದ್ದು, ಈ ಸಿನಿಮಾ ಮುಂದಿನ ವಾರ ಚಿತ್ರಮಂದಿರಕ್ಕೆ ಬರಲಿದೆ. ಚಿತ್ರದ ಟೈಟಲ್ ವಿಚಾರಕ್ಕೆ ಬಂದ್ರೆ ನಿರ್ಮಾಪಕ ಮೋಹನ್ ತಂದೆಯ ಹೆಸರು ರಾಜ ಮತ್ತು ತಾಯಿಯ ಹೆಸರು ಲಕ್ಷ್ಮಿಯಂತೆ. ಅವರಿಬ್ಬರ  ಹೆಸರನ್ನು ಸೇರಿಸಿ ಚಿತ್ರಕ್ಕೆ ಟೈಟಲ್‌ ಇಡಲಾಗಿದೆ.

ರಾಜಲಕ್ಷ್ಮಿ ಸಿನಿಮಾ ತಂಡ
author img

By

Published : Nov 11, 2019, 7:54 PM IST

ಎಸ್.ಮೋಹನ್ ಕುಮಾರ್ ನಿರ್ಮಾಣದ, ಕಾಂತರಾಜ್‍ ಗೌಡ ನಿರ್ದೇಶನ ಮಾಡಿರುವ 'ರಾಜಲಕ್ಷ್ಮಿ' ಚಿತ್ರ ಸದ್ಯ ರಿಲೀಸ್​​ಗೆ ರೆಡಿಯಾಗಿದ್ದು, ಇದೇ ನವೆಂಬರ್ 22ರಂದು ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಸದ್ಯ ಚಿತ್ರತಂಡ ಪ್ರಮೋಷನ್​​​​ನಲ್ಲಿ ಬ್ಯುಸಿ ಇದ್ದು, ಇಂದು ಚಿತ್ರದ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದೆ.

ಮಂಡ್ಯದಳ್ಳಿ ಕೆರಗೋಡು ಸಮೀಪದ ಸಿದ್ದಗೌಡನ ಹೋಬಳಿಯಲ್ಲಿ ನಡೆದ ನೈಜ ಘಟನೆಯನ್ನ ಈ ಚಿತ್ರದಲ್ಲಿ ತರಲಾಗಿದೆ. ರಾಜಲಕ್ಷ್ಮಿ ಚಿತ್ರದ ಹಾಡುಗಳಿಗೆ ಈಗಾಗಲೇ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ‌. ಹಳ್ಳಿಯ ರಾಜಕಾರಣದ ನೈಜತೆಯನ್ನು ಈ ಚಿತ್ರದ ಮೂಲಕ ಜನರಿಗೆ ತೋರಿಸಲು ನಿರ್ದೇಶಕ ಕಾಂತರಾಜ್ ಗೌಡ ರೆಡಿಯಾಗಿದ್ದು, ಚಿತ್ರದಲ್ಲಿ ನಾಯಕನಾಗಿ ರಂಗಭೂಮಿ ಕಲಾವಿದ ನವೀನ್ ತೀರ್ಥಹಳ್ಳಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ನಾಯಕನನ್ನು ಕಾಲೇಜು ವ್ಯಾಸಂಗ ಮಾಡಿಕೊಂಡೇ ವ್ಯವಸಾಯ ಮಾಡುವ ಯುವ ರೈತನ ಪಾತ್ರದಲ್ಲಿ ತೋರಿಸಲಾಗಿದೆ. ನವೀನ್​​ಗೆ ಜೋಡಿಯಾಗಿ ರಶ್ಮಿಗೌಡ ಕಾಣಿಸಿಕೊಂಡಿದ್ದಾರೆ.

ರಾಜಲಕ್ಷ್ಮಿ ಸಿನಿಮಾ ತಂಡ

ಇನ್ನು ಚಿತ್ರದ ಟೈಟಲ್ ವಿಚಾರಕ್ಕೆ ಬಂದ್ರೆ ನಿರ್ಮಾಪಕ ಮೋಹನ್ ತಂದೆಯ ಹೆಸರು ರಾಜ ಮತ್ತು ತಾಯಿಯ ಹೆಸರು ಲಕ್ಷ್ಮಿಯಂತೆ. ಅವರಿಬ್ಬರ ಹೆಸರನ್ನು ಸೇರಿಸಿ ಚಿತ್ರಕ್ಕೆ ಟೈಟಲ್‌ ಇಡಲಾಗಿದೆ. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಹೊನ್ನವಳ್ಳಿ ಕೃಷ್ಣ, ಟೆನ್ನಿಸ್​ ಕೃಷ್ಣ, ಕೆ.ಹೆಚ್.ಮೀಸೆಮೂರ್ತಿ, ಕಿರಣ್‍ಗೌಡ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮುತ್ತುರಾಜ್ ಅಭಿನಯಿಸಿದ್ದು, ಚಿತ್ರ ಮುಂದಿನ ವಾರ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

ಎಸ್.ಮೋಹನ್ ಕುಮಾರ್ ನಿರ್ಮಾಣದ, ಕಾಂತರಾಜ್‍ ಗೌಡ ನಿರ್ದೇಶನ ಮಾಡಿರುವ 'ರಾಜಲಕ್ಷ್ಮಿ' ಚಿತ್ರ ಸದ್ಯ ರಿಲೀಸ್​​ಗೆ ರೆಡಿಯಾಗಿದ್ದು, ಇದೇ ನವೆಂಬರ್ 22ರಂದು ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಸದ್ಯ ಚಿತ್ರತಂಡ ಪ್ರಮೋಷನ್​​​​ನಲ್ಲಿ ಬ್ಯುಸಿ ಇದ್ದು, ಇಂದು ಚಿತ್ರದ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದೆ.

ಮಂಡ್ಯದಳ್ಳಿ ಕೆರಗೋಡು ಸಮೀಪದ ಸಿದ್ದಗೌಡನ ಹೋಬಳಿಯಲ್ಲಿ ನಡೆದ ನೈಜ ಘಟನೆಯನ್ನ ಈ ಚಿತ್ರದಲ್ಲಿ ತರಲಾಗಿದೆ. ರಾಜಲಕ್ಷ್ಮಿ ಚಿತ್ರದ ಹಾಡುಗಳಿಗೆ ಈಗಾಗಲೇ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ‌. ಹಳ್ಳಿಯ ರಾಜಕಾರಣದ ನೈಜತೆಯನ್ನು ಈ ಚಿತ್ರದ ಮೂಲಕ ಜನರಿಗೆ ತೋರಿಸಲು ನಿರ್ದೇಶಕ ಕಾಂತರಾಜ್ ಗೌಡ ರೆಡಿಯಾಗಿದ್ದು, ಚಿತ್ರದಲ್ಲಿ ನಾಯಕನಾಗಿ ರಂಗಭೂಮಿ ಕಲಾವಿದ ನವೀನ್ ತೀರ್ಥಹಳ್ಳಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ನಾಯಕನನ್ನು ಕಾಲೇಜು ವ್ಯಾಸಂಗ ಮಾಡಿಕೊಂಡೇ ವ್ಯವಸಾಯ ಮಾಡುವ ಯುವ ರೈತನ ಪಾತ್ರದಲ್ಲಿ ತೋರಿಸಲಾಗಿದೆ. ನವೀನ್​​ಗೆ ಜೋಡಿಯಾಗಿ ರಶ್ಮಿಗೌಡ ಕಾಣಿಸಿಕೊಂಡಿದ್ದಾರೆ.

ರಾಜಲಕ್ಷ್ಮಿ ಸಿನಿಮಾ ತಂಡ

ಇನ್ನು ಚಿತ್ರದ ಟೈಟಲ್ ವಿಚಾರಕ್ಕೆ ಬಂದ್ರೆ ನಿರ್ಮಾಪಕ ಮೋಹನ್ ತಂದೆಯ ಹೆಸರು ರಾಜ ಮತ್ತು ತಾಯಿಯ ಹೆಸರು ಲಕ್ಷ್ಮಿಯಂತೆ. ಅವರಿಬ್ಬರ ಹೆಸರನ್ನು ಸೇರಿಸಿ ಚಿತ್ರಕ್ಕೆ ಟೈಟಲ್‌ ಇಡಲಾಗಿದೆ. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಹೊನ್ನವಳ್ಳಿ ಕೃಷ್ಣ, ಟೆನ್ನಿಸ್​ ಕೃಷ್ಣ, ಕೆ.ಹೆಚ್.ಮೀಸೆಮೂರ್ತಿ, ಕಿರಣ್‍ಗೌಡ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮುತ್ತುರಾಜ್ ಅಭಿನಯಿಸಿದ್ದು, ಚಿತ್ರ ಮುಂದಿನ ವಾರ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

Intro:ರಿಲೀಸ್ ಗೆ ರೆಡಿಯಾದ ಮಂಡ್ಯದಳ್ಳಿ ಸೊಗಡಿನ "ರಾಜಲಕ್ಷಿ "


ಎಸ್ ಮೋಹನ್ ಕುಮಾರ್ ನಿರ್ಮಾಣದ ,ವೃತ್ತಿಯಲ್ಲಿ ವಕೀಲನಾಗಿರುವ ಕಾಂತರಾಜ್‍ಗೌಡ ನಿರ್ದೇಶನ ಮಾಡಿರುವ , ಮಂಡ್ಯದ ಹಳ್ಳಿ ಸೊಗಡಿನ " ರಾಜಲಕ್ಷ್ಮಿ" ಚಿತ್ರ ಸದ್ಯ ರಿಲೀಸ್ಗೆ ರೆಡಿಯಾಗಿದ್ದು, ಇದೇ ನವೆಂಬರ್ 22ರಂದು ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಸದ್ಯ ಚಿತ್ರತಂಡ ಪ್ರಮೋಷನ್ ನಲ್ಲಿ ಬ್ಯುಸಿ ಇದ್ದು ಇಂದು ಪ್ರೆಸ್ ಮೀಟ್ ಮಾಡುವ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನು ಅಫಿಷಿಯಲ್ ಆಗಿ ಅನೌನ್ಸ್ ಮಾಡಿದರು.ಮಂಡ್ಯದಳ್ಳಿ ಕೆರಗೋಡು ಸಮೀಪದ ಸಿದ್ದಗೌಡನ ಹೋಬಳಿಯಲ್ಲಿ ನಡೆದ ನೈಜ ಘಟನೆ ಆಧರಿಸಿದ ಚಿತ್ರವಾದ ರಾಜಲಕ್ಷಿ ಚಿತ್ರದ ಹಾಡುಗಳಿಗೆ ಈಗಾಗಲೇ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ‌. ಹಳ್ಳಿಯ ರಾಜಕಾರಣದ ನೈಜತೆಯನ್ನು ಈ ಚಿತ್ರದ ಮೂಲಕ ಜನರಿಗೆ ತೋರಿಸಲು ನಿರ್ದೇಶಕ ಕಾಂತರಾಜ್ ಗೌಡರೆಡಿಯಾಗಿದ್ದು.ಚಿತ್ರದಲ್ಲಿನಾಯಕನಾಗಿರಂಗಭೂಮಿ
ಕಲಾವಿದ ನವೀನ್ ತೀರ್ಥಹಳ್ಳಿ ಕಾಣಿಸಿದ್ದಾರೆ. Body:ಚಿತ್ರದಲ್ಲಿ ನಾಯಕಕಾಲೇಜ್ ವ್ಯಾಸಂಗ ಮಾಡಿಕೊಂಡೆವ್ಯವಸಾಯ ಮಾಡುವ ಯುವ ರೈತನ ಪಾತ್ರದಲ್ಲಿ ನಟಿಸಿದ್ದು.ಹಳ್ಳಿಯ ಬಜಾರಿ ಹುಡುಗಿ ಪಾತ್ರದಲ್ಲಿ ರಶ್ಮಿಗೌಡ ಕಾಣಿಸಿದ್ದಾರೆ.
ಇನ್ನು ಚಿತ್ರದ ಟೈಟಲ್ ವಿಚಾರಕ್ಕೆ ಬಂದ್ರೆ ನಿರ್ಮಾಪಕ ಮೋಹನ್ ತಂದೆಯ ಹೆಸರು ರಾಜ ಮತ್ತು ತಾಯಿಯ ಹೆಸರು ಲಕ್ಷ್ಮಿಯಂತೆ.ಅವರಿಬ್ಬರ ಈಹೆಸರನ್ನು ಸೇರಿಸಿ ಚಿತ್ರಕ್ಕೆ ಟೈಟಲ್‌ ಇಡಲಾಗಿದ್ದು. ಚಿತ್ರದಲ್ಲಿ ನಾಯಕ ಮತ್ತು ನಾಯಕಿಯೂ ಹೆಸರು ರಾಜ ಮತ್ತು ಲಕ್ಷ್ಮೀ ಎಂದೆ ಇರಲಿದೆಯಂತೆ. ಇನ್ನೂ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎ.ಟಿ.ರವೀಶ್ ಸಂಗೀತ ಸಂಯೋಜಿಸಿದ್ದು ಈಗಾಗಲೇ
ಹಾಡುಗಳಿಗೆ ಉತ್ತಮ‌ ರೆಸ್ಪಾನ್ಸ್ ಸಿಕ್ಕಿದೆ.ಇನ್ನು ರಾಜಲಕ್ಷ್ಮಿ ಚಿತ್ರದಲ್ಲಿ ಬಹುದೊಡ್ಡ ತಾರಾಬಳಗವಿದ್ದು ಕರ್ನಾಟಕ ಅಷ್ಟು ಜಿಲ್ಲೆಯ ಕಲಾವಿದರನ್ನು ಆಯ್ಕೆ ಮಾಡಿ ಈ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದು. ಪ್ರಮುಖ
ಪಾತ್ರಗಳಲ್ಲಿ ಹೊನ್ನವಳ್ಳಿ ಕೃಷ್ಣ, ಟೆನಿಸ್‍ ಕೃಷ್ಣ
ಕೆ.ಎಚ್.ಮೀಸೆಮೂರ್ತಿ, ಕಿರಣ್‍ಗೌಡ, ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮುತ್ತುರಾಜ್, ಅಭಿನಹಿಸಿದ್ದು.
ಮುಂದಿನ ವಾರ ರಾಜ ಲಕ್ಷ್ಮಿ ಜೊತೆ ಚಿತ್ರಮಂದಿರಕ್ಕೆ ಬರೋಕೆ ರೆಡಿಯಾಗಿದ್ದೇನೆ.

ಸತೀಶ ಎಂಬಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.