ETV Bharat / sitara

'ಹೇಗಾದ್ರೂ ಮಾಡಿ ನನ್ನ ಕಳುಹಿಸಿ, ಅವನನ್ನು ಕರೆಯಿಸಿಕೊಂಡು ಬಿಡಿ ಪ್ಲೀಸ್​': ರಾಘಣ್ಣನ ಕಣ್ಣೀರು

author img

By

Published : Nov 16, 2021, 7:47 PM IST

'ಪುನೀತ್​ ನಮನ' ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ರಾಘವೇಂದ್ರ ರಾಜ್​ಕುಮಾರ್ ​(Raghavendra Rajkumar) ಅಗಲಿದ ತಮ್ಮನ ನೆನೆದು ಕಣ್ಣೀರಾದರು.

raghavendra rajkumar emotional speech
raghavendra rajkumar emotional speech

ಬೆಂಗಳೂರು: ದಿ.ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಕನ್ನಡ ಚಿತ್ರರಂಗವಲ್ಲದೇ ದಕ್ಷಿಣ ಭಾರತದ ಚಿತ್ರರಂಗದ ಗಣ್ಯಾತಿಗಣ್ಯರು ನಗರದ ಪ್ಯಾಲೇಸ್‌ ಮೈದಾನದಲ್ಲಿ ನೆರೆದಿದ್ದರು.

ಈ ಕಾರ್ಯಕ್ರಮದಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿದ ಪುನೀತ್ ರಾಜ್​ಕುಮಾರ್ ಸಹೋದರ ರಾಘವೇಂದ್ರ ರಾಜ್​ಕುಮಾರ್, ತಮ್ಮನನ್ನು ಕಳೆದುಕೊಂಡ ನೋವು ತಡೆದುಕೊಳ್ಳಲಾರದೇ ಕಣ್ಣೀರು ಸುರಿಸಿದರು.


'ಕಳೆದ 20 ದಿನಗಳಿಂದ ನೊಂದು, ನೋವು ತಡೆದು, ನುಂಗಿಕೊಂಡು ಏನಾಯ್ತಪ್ಪಾ ಎಂದು ಮೆಲುಕು ಹಾಕಿದ್ರೆ ಒಬ್ಬ ತಮ್ಮ, ನಮಗೆ ಆತ ಪವರ್. ಆ ಪವರ್ ಹೋದ ಮೇಲೆ ಇನ್ನು ನಾವು ಬಲ್ಬ್​ ಏನ್ ಮಾಡುವುದಕ್ಕೆ ಆಗುತ್ತೆ ಎಂದು ಅಂದುಕೊಂಡೆವು. ಆದರೆ, ಅವನು ಮಲಗಿಕೊಂಡ ದಿನ ಆತನ ಸುತ್ತಮುತ್ತ ರಾಜ್ಯದ ಮೂರು ಶಕ್ತಿಗಳಿದ್ದವು. ಪೊಲೀಸ್, ಸರ್ಕಾರ ಹಾಗೂ ಅಭಿಮಾನಿಗಳೇ ಅವರು. ಈ ನೋವನ್ನು ನಮ್ಮ ತಂದೆ-ತಾಯಿ ಮುಂದೆ ಹೇಳಿಕೊಳ್ಳೋಣ ಅಂದರೆ ಅವರನ್ನು ತೆಗೆದುಕೊಂಡು ಹೋಗಿ ಅಲ್ಲೇ ಮಲಗಿಸಿಬಿಟ್ಟಿದ್ದೇವೆ. ಈ ಸಂದರ್ಭದಲ್ಲಿ ನಾನು ಶಿವಣ್ಣನ ಮುಖ ನೋಡಿದೆ. ಈ ವೇಳೆ ನಮಗೆ ನಾಚಿಕೆಯಾಯಿತು. ನಾವಿಬ್ಬರೂ ಸೇರಿ ಇವನನ್ನು ಕಳಿಸಿಕೊಡಬೇಕೇ? ಎಂಬ ಕೊರಗು ಪ್ರತಿದಿನ ಕಾಡುತ್ತಿದೆ' ಎಂದು ಭಾವುಕರಾದರು. ಸಹೋದರನ ಮಾತುಗಳನ್ನು ಕೇಳಿ ನಟ ಶಿವರಾಜ್​ ಕುಮಾರ್​ ಕೂಡ ಕಣ್ಣೀರು ಸುರಿಸಿದರು.

ಇದನ್ನೂ ಓದಿ: ನನಗೆ ಸದ್ಯ ಮನೆ ಇಲ್ಲ, ಮುಂದೆ ಎಂದಾದರೂ ಖರೀದಿಸುವೆ; ಪುನೀತ್ ಸಮಾಜಮುಖಿ ಸೇವೆ ಮುಂದುವರೆಸುವೆ: ತೆಲುಗು ನಟ ವಿಶಾಲ್

ಮುಂದುವರೆದು ಮಾತನಾಡಿದ ರಾಘಣ್ಣ, 'ನೀವೆಲ್ಲರೂ ಸೇರಿ ನನಗೊಂದು ಸಹಾಯ ಮಾಡಿ. ಹೇಗಾದರೂ ಮಾಡಿ ನನ್ನ ಕಳಿಸಿ, ಅವನನ್ನು ಕರೆಯಿಸಿಕೊಂಡು ಬಿಡಿ, ನಾನು ಇರುವುದಿಲ್ಲ ಎಂದರು. ಇದೇ ವೇಳೆ ನಾವು ಪುನೀತ್​ನನ್ನು ಹೂತಿಲ್ಲ, ಬಿತ್ತಿದ್ದೇವೆ. ನೂರಾರು ಪುನೀತರು ಹುಟ್ಟಿ ಬರುತ್ತಾರೆ' ಎಂದು ಉಮ್ಮಳಿಸಿ ಬರುತ್ತಿದ್ದ ದು:ಖದಿಂದಲೇ ಹೇಳಿದರು.

ಬೆಂಗಳೂರು: ದಿ.ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಕನ್ನಡ ಚಿತ್ರರಂಗವಲ್ಲದೇ ದಕ್ಷಿಣ ಭಾರತದ ಚಿತ್ರರಂಗದ ಗಣ್ಯಾತಿಗಣ್ಯರು ನಗರದ ಪ್ಯಾಲೇಸ್‌ ಮೈದಾನದಲ್ಲಿ ನೆರೆದಿದ್ದರು.

ಈ ಕಾರ್ಯಕ್ರಮದಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿದ ಪುನೀತ್ ರಾಜ್​ಕುಮಾರ್ ಸಹೋದರ ರಾಘವೇಂದ್ರ ರಾಜ್​ಕುಮಾರ್, ತಮ್ಮನನ್ನು ಕಳೆದುಕೊಂಡ ನೋವು ತಡೆದುಕೊಳ್ಳಲಾರದೇ ಕಣ್ಣೀರು ಸುರಿಸಿದರು.


'ಕಳೆದ 20 ದಿನಗಳಿಂದ ನೊಂದು, ನೋವು ತಡೆದು, ನುಂಗಿಕೊಂಡು ಏನಾಯ್ತಪ್ಪಾ ಎಂದು ಮೆಲುಕು ಹಾಕಿದ್ರೆ ಒಬ್ಬ ತಮ್ಮ, ನಮಗೆ ಆತ ಪವರ್. ಆ ಪವರ್ ಹೋದ ಮೇಲೆ ಇನ್ನು ನಾವು ಬಲ್ಬ್​ ಏನ್ ಮಾಡುವುದಕ್ಕೆ ಆಗುತ್ತೆ ಎಂದು ಅಂದುಕೊಂಡೆವು. ಆದರೆ, ಅವನು ಮಲಗಿಕೊಂಡ ದಿನ ಆತನ ಸುತ್ತಮುತ್ತ ರಾಜ್ಯದ ಮೂರು ಶಕ್ತಿಗಳಿದ್ದವು. ಪೊಲೀಸ್, ಸರ್ಕಾರ ಹಾಗೂ ಅಭಿಮಾನಿಗಳೇ ಅವರು. ಈ ನೋವನ್ನು ನಮ್ಮ ತಂದೆ-ತಾಯಿ ಮುಂದೆ ಹೇಳಿಕೊಳ್ಳೋಣ ಅಂದರೆ ಅವರನ್ನು ತೆಗೆದುಕೊಂಡು ಹೋಗಿ ಅಲ್ಲೇ ಮಲಗಿಸಿಬಿಟ್ಟಿದ್ದೇವೆ. ಈ ಸಂದರ್ಭದಲ್ಲಿ ನಾನು ಶಿವಣ್ಣನ ಮುಖ ನೋಡಿದೆ. ಈ ವೇಳೆ ನಮಗೆ ನಾಚಿಕೆಯಾಯಿತು. ನಾವಿಬ್ಬರೂ ಸೇರಿ ಇವನನ್ನು ಕಳಿಸಿಕೊಡಬೇಕೇ? ಎಂಬ ಕೊರಗು ಪ್ರತಿದಿನ ಕಾಡುತ್ತಿದೆ' ಎಂದು ಭಾವುಕರಾದರು. ಸಹೋದರನ ಮಾತುಗಳನ್ನು ಕೇಳಿ ನಟ ಶಿವರಾಜ್​ ಕುಮಾರ್​ ಕೂಡ ಕಣ್ಣೀರು ಸುರಿಸಿದರು.

ಇದನ್ನೂ ಓದಿ: ನನಗೆ ಸದ್ಯ ಮನೆ ಇಲ್ಲ, ಮುಂದೆ ಎಂದಾದರೂ ಖರೀದಿಸುವೆ; ಪುನೀತ್ ಸಮಾಜಮುಖಿ ಸೇವೆ ಮುಂದುವರೆಸುವೆ: ತೆಲುಗು ನಟ ವಿಶಾಲ್

ಮುಂದುವರೆದು ಮಾತನಾಡಿದ ರಾಘಣ್ಣ, 'ನೀವೆಲ್ಲರೂ ಸೇರಿ ನನಗೊಂದು ಸಹಾಯ ಮಾಡಿ. ಹೇಗಾದರೂ ಮಾಡಿ ನನ್ನ ಕಳಿಸಿ, ಅವನನ್ನು ಕರೆಯಿಸಿಕೊಂಡು ಬಿಡಿ, ನಾನು ಇರುವುದಿಲ್ಲ ಎಂದರು. ಇದೇ ವೇಳೆ ನಾವು ಪುನೀತ್​ನನ್ನು ಹೂತಿಲ್ಲ, ಬಿತ್ತಿದ್ದೇವೆ. ನೂರಾರು ಪುನೀತರು ಹುಟ್ಟಿ ಬರುತ್ತಾರೆ' ಎಂದು ಉಮ್ಮಳಿಸಿ ಬರುತ್ತಿದ್ದ ದು:ಖದಿಂದಲೇ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.