ETV Bharat / sitara

ಅದೇ ಹಳೆಯ ಸೂತ್ರ ಹಿಡಿದು ಬಂದ್ರಾ ನಿರ್ಮಾಪಕ ಕೆ.ಮಂಜು?

ನಿರ್ಮಾಪಕ ಕೆ.ಮಂಜು ಕಥೆಗಳ ಆಯ್ಕೆಗೆ ಒಂದು ವೇದಿಕೆ ಸಿದ್ಧಪಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಥೆಗಳ ಕೊರತೆ ಇದೆ ಎಂಬ ಉದ್ದೇಶಕ್ಕೆ ಮಂಜು ಈ ಐಡಿಯಾ ಮಾಡಿದ್ದರೂ ಅವರ ಐಡಿಯಾ ಹಳೆಯದು ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ.

author img

By

Published : Jun 21, 2019, 3:07 PM IST

ಕೆ. ಮಂಜು

ಕನ್ನಡ ಚಿತ್ರರಂಗದಲ್ಲಿ ಕಥೆಗಳ ಕೊರತೆ ಇದೆ ಎಂಬ ಕೂಗು ಇಂದು ನಿನ್ನೆಯದಲ್ಲ. ದಶಕಗಳ ಹಿಂದೆ ನಾದಬ್ರಹ್ಮ ಹಂಸಲೇಖ ‘ಕಥಾ ಕಣಜ’ವನ್ನು ಸ್ಥಾಪಿಸಿ ಅಲ್ಲಿ ಜಮೆ ಆಗಿದ್ದ ಕಥೆಗಳನ್ನು ಕನ್ನಡ ನಿರ್ಮಾಪಕರಿಗೆ ಕೊಡುವುದು ಎಂದು ತೀರ್ಮಾನಿಸಿದ್ದರು. ಅದು ಯಾಕೋ ಸರಿ ಹೋಗಲಿಲ್ಲ ಎಂದು ಕೆಲವು ದಿನಗಳ ನಂತರ ಹಂಸಲೇಖ ಹೇಳಿದ್ದರು.

ಇತ್ತೀಚಿಗೆ ‘ನಿಮ್ ಕಥೆ ನಾವ್ ಕೆಳ್ತೇವೆ‘ ಎಂಬ ಎಂಟರ್​​ಟೈನ್ಮೆಂಟ್ ವೇದಿಕೆ ಕೂಡಾ ಸ್ಥಾಪಿತವಾಯ್ತು. ಸಾವನ ಪ್ರಕಾಶನ ಅತ್ಯುತ್ತಮ ಹತ್ತು ಕತೆಗಳನ್ನು ಪುಸ್ತಕ ರೂಪದಲ್ಲಿ ತಂದು ಅತ್ಯುತ್ತಮ ಕಥೆಗೆ ಒಂದು ಲಕ್ಷ ರೂಪಾಯಿ ಎಂದು ತೀರ್ಮಾನಿಸಿತು. ಒಂದು ತಿಂಗಳ ಅವಧಿಯಲ್ಲಿ ಈ ಸಂಸ್ಥೆಗೆ 350 ಕಥೆಗಳು ಬಂದವು. ಅದರಲ್ಲಿ ಒಂದು ಕಥೆಯೂ ಆಯ್ಕೆ ಆಗಲಿಲ್ಲ. ನಂತರ ಸಾವನ ಪ್ರಕಾಶನ ಪುಸ್ತಕ ಮಾಡುವ ಯೋಜನೆಯನ್ನು ನಿಲ್ಲಿಸಿತು. ಈ ತಂಡದಲ್ಲಿ ನಿರ್ದೇಶಕ ಎಂ.ಜಿ.ಶ್ರೀನಿವಾಸ್, ಪತ್ರಕರ್ತ ಹಾಗೂ ಸಾಹಿತಿ ಜೋಗಿ, ಶ್ರುತಿ, ಲೂಸಿಯ ಪವನ್ ಕುಮಾರ್, ರಾಮ ರಾಮ ರೇ ಸತ್ಯಪ್ರಕಾಶ್, ಹರೀಶ್ ಮಲ್ಲಯ್ಯ ಕೂಡಾ ಇದ್ದರು.

ಇದೀಗ ಅದೇ ರೂಪದಲ್ಲಿ ನಿರ್ಮಾಪಕ ಕೆ.ಮಂಜು ಕೂಡಾ ಕಥೆಗಳ ಆಯ್ಕೆಗೆ ಒಂದು ವೇದಿಕೆ ಸಿದ್ಧ ಮಾಡಿದ್ದಾರೆ. ಆಯ್ಕೆ ಆದ ಕಥೆಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲು ನಿರ್ಮಾಪಕ ಕೆ.ಮಂಜು ಮುಂದಾಗಿದ್ದಾರೆ. ಇದನ್ನು ಆಯ್ಕೆ ಮಾಡುವುದಕ್ಕೆ ಓದು ತಂಡ ಕೂಡಾ ಮಾಡಿದ್ದಾರೆ. ಜುಲೈ 15 ಒಳಗೆ ಕಥೆಗಳು ಕೆ.ಮಂಜು ಕಚೇರಿ ಸೇರಬೇಕು. ಇದು ಸ್ವಂತ ಕಥೆ ಆಗಿರಬೇಕು ಎಂದು ಕೆ. ಮಂಜು ಹೇಳಿದ್ದಾರೆ. ಕೆ.ಮಂಜು ಐಡಿಯಾ ನಕಲು ಆದರೆ ಕೇಳುವ ಕಥೆ ಮಾತ್ರ ಸ್ವಂತದ್ದಾಗಿರಬೇಕಾ..? ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಕಥೆಗಳ ಕೊರತೆ ಇದೆ ಎಂಬ ಕೂಗು ಇಂದು ನಿನ್ನೆಯದಲ್ಲ. ದಶಕಗಳ ಹಿಂದೆ ನಾದಬ್ರಹ್ಮ ಹಂಸಲೇಖ ‘ಕಥಾ ಕಣಜ’ವನ್ನು ಸ್ಥಾಪಿಸಿ ಅಲ್ಲಿ ಜಮೆ ಆಗಿದ್ದ ಕಥೆಗಳನ್ನು ಕನ್ನಡ ನಿರ್ಮಾಪಕರಿಗೆ ಕೊಡುವುದು ಎಂದು ತೀರ್ಮಾನಿಸಿದ್ದರು. ಅದು ಯಾಕೋ ಸರಿ ಹೋಗಲಿಲ್ಲ ಎಂದು ಕೆಲವು ದಿನಗಳ ನಂತರ ಹಂಸಲೇಖ ಹೇಳಿದ್ದರು.

ಇತ್ತೀಚಿಗೆ ‘ನಿಮ್ ಕಥೆ ನಾವ್ ಕೆಳ್ತೇವೆ‘ ಎಂಬ ಎಂಟರ್​​ಟೈನ್ಮೆಂಟ್ ವೇದಿಕೆ ಕೂಡಾ ಸ್ಥಾಪಿತವಾಯ್ತು. ಸಾವನ ಪ್ರಕಾಶನ ಅತ್ಯುತ್ತಮ ಹತ್ತು ಕತೆಗಳನ್ನು ಪುಸ್ತಕ ರೂಪದಲ್ಲಿ ತಂದು ಅತ್ಯುತ್ತಮ ಕಥೆಗೆ ಒಂದು ಲಕ್ಷ ರೂಪಾಯಿ ಎಂದು ತೀರ್ಮಾನಿಸಿತು. ಒಂದು ತಿಂಗಳ ಅವಧಿಯಲ್ಲಿ ಈ ಸಂಸ್ಥೆಗೆ 350 ಕಥೆಗಳು ಬಂದವು. ಅದರಲ್ಲಿ ಒಂದು ಕಥೆಯೂ ಆಯ್ಕೆ ಆಗಲಿಲ್ಲ. ನಂತರ ಸಾವನ ಪ್ರಕಾಶನ ಪುಸ್ತಕ ಮಾಡುವ ಯೋಜನೆಯನ್ನು ನಿಲ್ಲಿಸಿತು. ಈ ತಂಡದಲ್ಲಿ ನಿರ್ದೇಶಕ ಎಂ.ಜಿ.ಶ್ರೀನಿವಾಸ್, ಪತ್ರಕರ್ತ ಹಾಗೂ ಸಾಹಿತಿ ಜೋಗಿ, ಶ್ರುತಿ, ಲೂಸಿಯ ಪವನ್ ಕುಮಾರ್, ರಾಮ ರಾಮ ರೇ ಸತ್ಯಪ್ರಕಾಶ್, ಹರೀಶ್ ಮಲ್ಲಯ್ಯ ಕೂಡಾ ಇದ್ದರು.

ಇದೀಗ ಅದೇ ರೂಪದಲ್ಲಿ ನಿರ್ಮಾಪಕ ಕೆ.ಮಂಜು ಕೂಡಾ ಕಥೆಗಳ ಆಯ್ಕೆಗೆ ಒಂದು ವೇದಿಕೆ ಸಿದ್ಧ ಮಾಡಿದ್ದಾರೆ. ಆಯ್ಕೆ ಆದ ಕಥೆಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲು ನಿರ್ಮಾಪಕ ಕೆ.ಮಂಜು ಮುಂದಾಗಿದ್ದಾರೆ. ಇದನ್ನು ಆಯ್ಕೆ ಮಾಡುವುದಕ್ಕೆ ಓದು ತಂಡ ಕೂಡಾ ಮಾಡಿದ್ದಾರೆ. ಜುಲೈ 15 ಒಳಗೆ ಕಥೆಗಳು ಕೆ.ಮಂಜು ಕಚೇರಿ ಸೇರಬೇಕು. ಇದು ಸ್ವಂತ ಕಥೆ ಆಗಿರಬೇಕು ಎಂದು ಕೆ. ಮಂಜು ಹೇಳಿದ್ದಾರೆ. ಕೆ.ಮಂಜು ಐಡಿಯಾ ನಕಲು ಆದರೆ ಕೇಳುವ ಕಥೆ ಮಾತ್ರ ಸ್ವಂತದ್ದಾಗಿರಬೇಕಾ..? ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ.

ಅದೇ ಹಳೆ ಸೂತ್ರ ಹಿಡಿದು ಬಂದಿದ್ದಾರೆ ನಿರ್ಮಾಪಕ ಕೆ ಮಂಜು

ಕನ್ನಡ ಭಾಷೆಯಲ್ಲಿ ಕಥೆಗಳು ಇಲ್ಲ ಎಂಬ ಕೂಗು ಇಂದು ನಿನ್ನೆಯದಲ್ಲ. ದಶಕಗಳ ಹಿಂದೆ ನಾದ ಬ್ರಹ್ಮ ಹಂಸಲೇಖ ಕಥಾ ಕಣಜ ಅಂತ ಸ್ಥಾಪನೆ ಮಾಡಿ ಅಲ್ಲಿ ಜಮೆ ಆಗಿದ್ದ ಕತೆಗಳನ್ನು ಕನ್ನಡ ನಿರ್ಮಾಪಕರಿಗೆ ಕೊಡುವುದು ಎಂಬ ತೀರ್ಮಾನ ಆಗಿದ್ದು ಉಂಟು. ಅದು ಯಾಕೋ ಸರಿ ಆಗಲಿಲ್ಲ ಎಂದು ಆಮೇಲೆ ಹಂಸಲೇಖ ಅವರು ಹೇಳಿದ್ದರು.

ಇತ್ತೀಚಿಗೆ ವ್ರೈಟ್ ಕರ್ನಾಟಕ – ನಿಮ್ ಕಥೆ ನಾವ್ ಕೆಲ್ತೆವೆ ಎಂದು ಸಿದ್ದಿ ಎಂಟರ್ಟೈನ್ಮೇಂಟ್ ವೇದಿಕೆ ಸ್ಥಾಪಿಸಿತು. ಸಾವನ ಪ್ರಕಾಶನ ಅತ್ಯುತ್ತಮ ಹತ್ತು ಕತೆಗಳನ್ನು ಪುಸ್ತಕ ರೂಪ ತಂದು ಅತ್ಯುತ್ತಮ ಕಥೆಗೆ ಒಂದು ಲಕ್ಷ ಅಂತ ತೀರ್ಮಾನ ಆಯಿತು. ಒಂದು ತಿಂಗಳ ಆವದಿಯಲ್ಲಿ ಈ ಸಂಸ್ಥೆಗೆ 350 ಕಥೆಗಳು ಬಂದವು ಅದರಲ್ಲಿ ಒಂದು ಕಥೆಯು ಆಯ್ಕೆ ಆಗಲಿಲ್ಲ. ಸಾವನ ಪ್ರಕಾಶನ ಪುಸ್ತಕ ಮಾಡುವ ಯೋಜನೆಯನ್ನು ಡ್ರಾಪ್ ಮಾಡಿದರು. ಈ ತಂಡದಲ್ಲಿ ನಿರ್ದೇಶಕ ಎಂ ಜಿ ಶ್ರೀನಿವಾಸ್, ಪತ್ರಕರ್ತ ಹಾಗೂ ಸಾಹಿತಿ ಜೋಗಿ, ಶ್ರುತಿ, ಲುಸಿಯ ಪವನ್ ಕುಮಾರ್, ರಾಮ ರಾಮ ರೇ ಸತ್ಯಪ್ರಕಾಶ್, ಹರೀಶ್ ಮಲ್ಲಯ್ಯ ಸಹ ಇದ್ದರು

ಈಗ ಅದೇ ರೂಪದಲ್ಲಿ ನಿರ್ಮಾಪಕ ಕೆ ಮಂಜು ಅವರು ಕಥೆಗಳ ಆಯ್ಕೆಗೆ ಒಂದು ವೇದಿಕೆ ಸಿದ್ದ ಮಾಡಿದ್ದಾರೆ. ಆಯ್ಕೆ ಆದ ಕಥೆಗೆ ಒಂದು ಲಕ್ಷ ಬಹುಮಾನ ನೀಡಲು ನಿರ್ಮಾಪಕ ಕೆ ಮಂಜು ಮುಂದಾಗಿದ್ದಾರೆ. ಇದನ್ನು ಆಯ್ಕೆ ಮಾಡುವುದಕ್ಕೆ ಓದು ತಂಡ ಸಹ ಮಾಡಿದ್ದಾರೆ. ಜುಲೈ 15 ರಲ್ಲಿ ಕಥೆಗಳು ಕೆ ಮಂಜು ಸ್ಕ್ರಿಪ್ಟ್ ಕಚೇರಿ ಕೈ ಸೇರಬೇಕು. ಇದು ಸ್ವಂತ ಕಥೆ ಆಗಿರಬೇಕು.

ಕೆ ಮಂಜು ಐಡಿಯಾ ನಕಲು ಆದರೆ ಕೇಳುವ ಕಥೆ ಮಾತ್ರ ಸ್ವಂತದ್ದಾಗಿರಬೇಕು ಎಂದು ಗಾಂಧಿನಗರ ಕುಹಕ ಆಡುತ್ತಿದೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.