ಇದೀಗ ಎಲ್ಲೆಡೆ ನಾಡಹಬ್ಬ ದಸರಾ ಸಂಭ್ರಮ. ಕಿರುತೆರೆ ವಾಹಿನಿಗಳು ಕೂಡಾ ಇದಕ್ಕೆ ಹೊರತಾಗಿಲ್ಲ. ದಸರಾ ಸಂಭ್ರಮಕ್ಕಾಗಿ ಹಲವು ಕಾರ್ಯಕ್ರಮಗಳನ್ನು ವಾಹಿನಿಗಳು ಈಗಾಗಲೇ ವೀಕ್ಷಕರಿಗಾಗಿ ಪ್ರಸಾರ ಮಾಡುತ್ತಿವೆ. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ವಾಹಿನಿಗಳು ಮನೆಬಾಗಿಲಿಗೆ ದೇವಿ ದರುಶನ ಮಾಡಿಸುತ್ತಿವೆ. ಕಲರ್ಸ್ ಕನ್ನಡ ವಾಹಿನಿಯು ನವಶಕ್ತಿ ವೈಭವ ಕಾರ್ಯಕ್ರಮದ ಮೂಲಕ ಕಿರುತೆರೆ ವೀಕ್ಷಕರಿಗೆ ದೇವಿ ದರುಶನ ಮಾಡಿಸುತ್ತಿದೆ.
![priyanka upendra playing guest roll in mangalagowri maduve](https://etvbharatimages.akamaized.net/etvbharat/prod-images/kn-bng-01-priyankaupendra-mgm-photo-ka10018_20102020141047_2010f_1603183247_1089.jpg)
ಇದರ ಜೊತೆಗೆ ಮಂಗಳಗೌರಿ ಮದುವೆ ಧಾರಾವಾಹಿಯ ಮಹಾಸಂಚಿಕೆಯು ಕೂಡಾ ದಸರಾ ಹಬ್ಬದ ಪ್ರಯುಕ್ತ ಪ್ರಸಾರ ಕಾಣಲಿದ್ದು ಬಹಳ ಕುತೂಹಲದಿಂದ ಕೂಡಿದೆ. ಇಂದು ರಾತ್ರಿ ಮಂಗಳಗೌರಿ ಮದುವೆಯ ಮಹಾಸಂಚಿಕೆ ಪ್ರಸಾರವಾಗಲಿದ್ದು ಅದರಲ್ಲಿ ಪ್ರಿಯಾಂಕ ಉಪೇಂದ್ರ ನಟಿಸಲಿದ್ದಾರೆ.
![priyanka upendra playing guest roll in mangalagowri maduve](https://etvbharatimages.akamaized.net/etvbharat/prod-images/kn-bng-01-priyankaupendra-mgm-photo-ka10018_20102020141047_2010f_1603183247_306.jpg)
ಧಾರಾವಾಹಿಯಲ್ಲಿ ಕಿಡ್ನ್ಯಾಪ್ ಆಗಿರುವ ಪ್ರಿಯಾಂಕರನ್ನು ಕಾಪಾಡಲು ಮಂಗಳಗೌರಿ ಧಾವಿಸಿ ಬರುತ್ತಾಳೆ. ಇತ್ತ ನಾಯಕನೂ ಈ ವಿಚಾರ ತಿಳಿದು ಆತಂಕಗೊಳ್ಳುತ್ತಾನೆ. ಕೊನೆಯಲ್ಲಿ ರೌಡಿಗಳಿಂದ ಪ್ರಿಯಾಂಕ ಅವರನ್ನು ಕಾಪಾಡಲು ಮಂಗಳಗೌರಿ ದೇವಿಯ ರೂಪ ತಾಳುತ್ತಾಳೆ. ಅಂತೂ ರೋಚಕವಾಗಿರುವ ಈ ಸಂಚಿಕೆಗಳನ್ನು ನೋಡಲು ಮರೆಯದಿರಿ.