ಬಾಗಲಕೋಟೆ : ಡ್ರಗ್ಸ್ ಎಂಬುದು ಚಟ. ಇದು ಇಡೀ ಮನುಕುಲಕ್ಕೆ ಸಂಬಂಧಿಸಿದ್ದು. ಕೇವಲ ಸಿನಿಮಾ ನಟ-ನಟಿಯರು ಎಂದು ಪ್ರತ್ಯೇಕ ಮಾಡುವುದು ಸರಿಯಲ್ಲ ಎಂದು ಕಿರುತೆರೆ ಹಾಗೂ ನಟ ಮಾಸ್ಟರ್ ಆನಂದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಇಳಕಲ್ ತಾಲೂಕಿನ ಸಿದ್ದನಕೊಳ್ಳದ ಮಠದಲ್ಲಿ 'ಭಾವೈಕ್ಯ ಬ್ರಹ್ಮ' ಎಂಬ ಚಿತ್ರದ ಚಿತ್ರೀಕರಣ ನಡೆಯುದ್ದು ಈ ವೇಳೆ ಸ್ಯಾಂಡಲ್ವುಡ್ನಲ್ಲಿ ಕೇಳಿಬರುತ್ತಿರುವ ಡ್ರಗ್ ಮಾಫಿಯಾ ಕುರಿತು ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು.
ಕೇವಲ ಸಿನಿಮಾ ರಂಗದಲ್ಲಿರುವ ನಾಯಕ-ನಾಯಕಿಯರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದರೆ ತಪ್ಪಾಗುತ್ತದೆ. ಇವರಷ್ಟೇ ಕಣ್ಣಿಗೆ ಕಾಣುತ್ತಾರೆ ಎಂದು ಹೇಳುವುದು ಅಷ್ಟು ಸರಿಯಲ್ಲ. ಲಕ್ಷಾಂತರ ಜನರಿದ್ದಾರೆ. ಡ್ರಗ್ಸ್ ಸೇವನೆ ಮಾಡುವವರನ್ನು ಎಲ್ಲರನ್ನೂ ಹಿಡಿಯಿರಿ. ಕೇವಲ ಸಿನಿಮಾ ನಟ-ನಟಿಯರಿಗಷ್ಟೇ ಮಾತ್ರ ಏಕೆ ಸೀಮಿತಗೊಳಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದರು.
ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ, ಏಕೆಂದರೆ ಎರಡು ದಿನಗಳಿಂದ ನೆಟ್ವರ್ಕ್ ಇಲ್ಲದ ಪ್ರದೇಶದಲ್ಲಿ ಚಿತ್ರೀಕರಣದಲ್ಲಿದ್ದೇವೆ. ಯಾರು ಡಗ್ಸ್ ತೆಗೆದುಕೊಳ್ಳುತ್ತಾರೆ ಅವರು ಅವರ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯವಿದೆ ಎಂದು ಹೇಳಿ ಡಾ.ರಾಜ್ಕುಮಾರ್ ಹಾಡಿರುವ ಬಾಳುವಂತ ಹೂವೇ ಬಾಡುವ ಆಸೆ ಏಕೆ ಎಂಬ ಹಾಡನ್ನು ನೆನೆಪಿಕೊಂಡರು. ಭಾವೈಕ್ಯ ಬ್ರಹ್ಮ ಚಿತ್ರಕ್ಕೆ ಮಾಸ್ಟರ್ ಆನಂದ್ ನಾಯಕ ನಟನಾಗಿ ನಟಿಸಿದ್ದಾರೆ.