ETV Bharat / sitara

ದಚ್ಚು ಪ್ರೇರಣೆ... ಪ್ರಾಣಿ-ಪಕ್ಷಿ ದತ್ತು ಪಡೆದ ನಟಿಯರು

author img

By

Published : Jun 10, 2021, 6:08 PM IST

Updated : Jun 10, 2021, 9:41 PM IST

ಚಾಲೆಂಜಿಗ್ ಸ್ಟಾರ್ ಅವರ ಪ್ರೇರಣೆಯಿಂದ ನಟಿಯರಾದ ಕಾವ್ಯ ಗೌಡ, ಶ್ರುತಿ ನಾಯ್ಡು ಹಾಗೂ ಪ್ರಿಯಾಂಕಾ ಚಿಂಚೋಳಿ ಸೇರಿದಂತೆ ಹಲವು ಸೆಲಬ್ರೆಟಿಗಳು ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ.

ಕಾವ್ಯ ಗೌಡ
ಕಾವ್ಯ ಗೌಡ

ಚಾಲೆಂಜಿಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳು, ಪಕ್ಷಿಗಳೆಂದರೆ ವಿಶೇಷ ಪ್ರೀತಿ. ಇದೇ ಕಾರಣದಿಂದ ತಮ್ಮ ಫಾರ್ಮ್ ಹೌಸ್​ನಲ್ಲಿ ಒಂದಷ್ಟು ಪ್ರಾಣಿ ಪಕ್ಷಿಗಳನ್ನು ಬಲು ಪ್ರೀತಿ, ಮಮಕಾರದಿಂದ ಸಾಕಿ ಸಲಹುತ್ತಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಇಟ್ಟಿರುವ ದರ್ಶನ್, ಮೃಗಾಲಯದಲ್ಲಿರುವ ಪ್ರಾಣಿಗಳನ್ನು ಸಾರ್ವಜನಿಕರು ದತ್ತು ಪಡೆಯುವಂತೆ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕನ್ನಡ ಕಿರುತೆರೆ ನಟಿಯರು ಪ್ರಾಣಿ - ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ.

Kavya Gowda adopted white peacock in Atul Bihari Vajpayee Zoological Park
ದತ್ತು ಪಡೆದಿರುವ ಕುರಿತು ನೀಡಲಾದ ಸರ್ಟಿಫಿಕೇಟ್​

ಚಾಲೆಂಜಿಗ್ ಸ್ಟಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಕಾವ್ಯ ಗೌಡ ಹಂಪಿ ಮೃಗಾಲಯದಲ್ಲಿನ ಬಿಳಿ ನವಿಲನ್ನು ದತ್ತು ಪಡೆದುಕೊಂಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಎಂದು ಜನಪ್ರಿಯಗೊಂಡಿರುವ ಹಂಪಿ ಮೃಗಾಲಯದಲ್ಲಿರುವ ಬಿಳಿ ನವಿಲನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆದಿದ್ದಾರೆ. ಈ ಕುರಿತು ಸ್ವತಃ ಕಾವ್ಯ ಗೌಡ ಅವರೇ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/p/CP4oYqwlUtu/?utm_medium=copy_link

ಅಡಾಪ್ಶನ್ ಸರ್ಟಿಫಿಕೇಟ್ ಹಂಚಿಕೊಂಡ ಕಾವ್ಯ
''ಕೋವಿಡ್ ಮಹಾಮಾರಿಯಿಂದ ಮಾನವಕುಲಕ್ಕೆ ಎಷ್ಟು ತೊಂದರೆ ಆಗಿದೆಯೋ ಅಷ್ಟೇ ತೊಂದರೆ ಪ್ರಾಣಿ ಸಂಕುಲಕ್ಕೂ ಆಗಿದೆ. ಅದರಿಂದ ಹಂಪಿ ಕ್ಷೇತ್ರದ 'ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್‌ನ ಬಿಳಿ ನವಿಲನ್ನು ದತ್ತು ಪಡೆದಿದ್ದೇನೆ. ನಾನು ಚಿಕ್ಕಂದಿನಲ್ಲಿ ತುಂಬಾ ಇಷ್ಟ ಪಡುತ್ತಿದ್ದ ಪಕ್ಷಿ ನವಿಲು ಮತ್ತು ಇದು ನಮ್ಮ ರಾಷ್ಟ್ರೀಯ ಪಕ್ಷಿ. ಈ ನನ್ನ ಕೆಲಸಕ್ಕೆ ಮುಖ್ಯ ಕಾರಣಕರ್ತರು 'ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್'. ಅವರಿಗೂ ತುಂಬು ಹೃದಯದ ಧನ್ಯವಾದಗಳು'' ಎಂದು ಬರೆದುಕೊಂಡಿದ್ದಾರೆ.

ಆಮೆ ದತ್ತು ಪಡೆದ ಪ್ರಿಯಾಂಕಾ ಚಿಂಚೋಳಿ
ಆಮೆ ದತ್ತು ಪಡೆದ ಪ್ರಿಯಾಂಕಾ ಚಿಂಚೋಳಿ

ಆಮೆ ದತ್ತು ಪಡೆದ ನಟಿ ಪ್ರಿಯಾಂಕಾ ಚಿಂಚೋಳಿ: ನಟಿ ಪ್ರಿಯಾಂಕಾ ಚಿಂಚೋಳಿ ನೀರಾಮೆಯನ್ನು ದತ್ತು ಪಡೆದಿದ್ದಾರೆ.

'ಕೇವಲ ಒಂದು ರೋಗಾಣುವಿನಿಂದಾಗಿ, ನಮ್ಮನ್ನು ನಾವು ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ಬೇರೆಯವರ ಬಗ್ಗೆ ಯೋಚಿಸುವ ಶಕ್ತಿಯನ್ನು ಕೂಡ ಕಳೆದುಕೊಂಡಿದ್ದೇವೆ. ಆದರೆ ಈ ಸ್ವಾರ್ಥ ಚಿಂತನೆಯ ನಡುವೆಯೂ ಪ್ರಾಣಿಗಳಿಗೂ ಸಹ ನಮ್ಮ ನೆರವು ಬೇಕೆಂದು ತಿಳಿಸಿಕೊಟ್ಟವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು. ಇವರಿಂದ ಪ್ರೇರಿತಗೊಂಡ ನಾನು ನೀರಾಮೆಯನ್ನು ಕಲಬುರಗಿಯ 'ಚಿಲ್ಟ್ರನ್ ಪಾರ್ಕ್ ಆಂಡ್ ಮಿನಿ ಜೂನಿಂದ ದತ್ತು ಪಡೆದಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

ನಟಿ ಪ್ರಿಯಾಂಕಾ ಚಿಂಚೋಳಿ
ನಟಿ ಪ್ರಿಯಾಂಕಾ ಚಿಂಚೋಳಿ


ನಟಿ, ನಿರ್ಮಾಪಕಿ, ನಿರ್ದೇಶಕಿ ಶ್ರುತಿ ನಾಯ್ಡು ಅವರು ಹಿರಿಯ ನಟ ಸುಂದರ ಕೃಷ್ಣ ಅರಸ್ ಅವರ ಮೊಮ್ಮಗ ಧೀರ ರಾಜೇಂದ್ರ ಹೆಸರಿನಲ್ಲಿ ಜೀಬ್ರಾ ದತ್ತು ಪಡೆದಿದ್ದಾರೆ. 'ಮುಂದಿನ ಪೀಳಿಗೆಯ ಮಕ್ಕಳಿಗೆ ಪ್ರಾಣಿ, ಪ್ರಕೃತಿ ಬಗ್ಗೆ ಗೌರವ ಹೆಚ್ಚಬೇಕಿದೆ. ಆದ್ದರಿಂದ ಧೀರ ರಾಜೇಂದ್ರ ಹೆಸರಿನಲ್ಲಿ ಜೀಬ್ರಾ ದತ್ತು ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರಾಣಿ ದತ್ತು ಪಡೆದ ಶ್ರುತಿ ನಾಯ್ಡು
ಪ್ರಾಣಿ ದತ್ತು ಪಡೆದ ಶ್ರುತಿ ನಾಯ್ಡು

ಇನ್ನು ನಟ ಪ್ರಮೋದ್ ಕೂಡ ಬಿಳಿ ನವಿಲನ್ನು ದತ್ತು ಪಡೆದಿದ್ದಾರೆ. ('ಡಿ ಬಾಸ್' ಮನವಿಗೆ ಸ್ಪಂದಿಸಿದ ಅಭಿಮಾನಿಗಳು.. ಪ್ರಾಣಿ ಸಂಗ್ರಾಹಲಯಕ್ಕೆ ಬಂತು ಕೋಟಿ ಹಣ)

ಚಾಲೆಂಜಿಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳು, ಪಕ್ಷಿಗಳೆಂದರೆ ವಿಶೇಷ ಪ್ರೀತಿ. ಇದೇ ಕಾರಣದಿಂದ ತಮ್ಮ ಫಾರ್ಮ್ ಹೌಸ್​ನಲ್ಲಿ ಒಂದಷ್ಟು ಪ್ರಾಣಿ ಪಕ್ಷಿಗಳನ್ನು ಬಲು ಪ್ರೀತಿ, ಮಮಕಾರದಿಂದ ಸಾಕಿ ಸಲಹುತ್ತಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಇಟ್ಟಿರುವ ದರ್ಶನ್, ಮೃಗಾಲಯದಲ್ಲಿರುವ ಪ್ರಾಣಿಗಳನ್ನು ಸಾರ್ವಜನಿಕರು ದತ್ತು ಪಡೆಯುವಂತೆ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕನ್ನಡ ಕಿರುತೆರೆ ನಟಿಯರು ಪ್ರಾಣಿ - ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ.

Kavya Gowda adopted white peacock in Atul Bihari Vajpayee Zoological Park
ದತ್ತು ಪಡೆದಿರುವ ಕುರಿತು ನೀಡಲಾದ ಸರ್ಟಿಫಿಕೇಟ್​

ಚಾಲೆಂಜಿಗ್ ಸ್ಟಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಕಾವ್ಯ ಗೌಡ ಹಂಪಿ ಮೃಗಾಲಯದಲ್ಲಿನ ಬಿಳಿ ನವಿಲನ್ನು ದತ್ತು ಪಡೆದುಕೊಂಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಎಂದು ಜನಪ್ರಿಯಗೊಂಡಿರುವ ಹಂಪಿ ಮೃಗಾಲಯದಲ್ಲಿರುವ ಬಿಳಿ ನವಿಲನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆದಿದ್ದಾರೆ. ಈ ಕುರಿತು ಸ್ವತಃ ಕಾವ್ಯ ಗೌಡ ಅವರೇ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/p/CP4oYqwlUtu/?utm_medium=copy_link

ಅಡಾಪ್ಶನ್ ಸರ್ಟಿಫಿಕೇಟ್ ಹಂಚಿಕೊಂಡ ಕಾವ್ಯ
''ಕೋವಿಡ್ ಮಹಾಮಾರಿಯಿಂದ ಮಾನವಕುಲಕ್ಕೆ ಎಷ್ಟು ತೊಂದರೆ ಆಗಿದೆಯೋ ಅಷ್ಟೇ ತೊಂದರೆ ಪ್ರಾಣಿ ಸಂಕುಲಕ್ಕೂ ಆಗಿದೆ. ಅದರಿಂದ ಹಂಪಿ ಕ್ಷೇತ್ರದ 'ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್‌ನ ಬಿಳಿ ನವಿಲನ್ನು ದತ್ತು ಪಡೆದಿದ್ದೇನೆ. ನಾನು ಚಿಕ್ಕಂದಿನಲ್ಲಿ ತುಂಬಾ ಇಷ್ಟ ಪಡುತ್ತಿದ್ದ ಪಕ್ಷಿ ನವಿಲು ಮತ್ತು ಇದು ನಮ್ಮ ರಾಷ್ಟ್ರೀಯ ಪಕ್ಷಿ. ಈ ನನ್ನ ಕೆಲಸಕ್ಕೆ ಮುಖ್ಯ ಕಾರಣಕರ್ತರು 'ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್'. ಅವರಿಗೂ ತುಂಬು ಹೃದಯದ ಧನ್ಯವಾದಗಳು'' ಎಂದು ಬರೆದುಕೊಂಡಿದ್ದಾರೆ.

ಆಮೆ ದತ್ತು ಪಡೆದ ಪ್ರಿಯಾಂಕಾ ಚಿಂಚೋಳಿ
ಆಮೆ ದತ್ತು ಪಡೆದ ಪ್ರಿಯಾಂಕಾ ಚಿಂಚೋಳಿ

ಆಮೆ ದತ್ತು ಪಡೆದ ನಟಿ ಪ್ರಿಯಾಂಕಾ ಚಿಂಚೋಳಿ: ನಟಿ ಪ್ರಿಯಾಂಕಾ ಚಿಂಚೋಳಿ ನೀರಾಮೆಯನ್ನು ದತ್ತು ಪಡೆದಿದ್ದಾರೆ.

'ಕೇವಲ ಒಂದು ರೋಗಾಣುವಿನಿಂದಾಗಿ, ನಮ್ಮನ್ನು ನಾವು ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ಬೇರೆಯವರ ಬಗ್ಗೆ ಯೋಚಿಸುವ ಶಕ್ತಿಯನ್ನು ಕೂಡ ಕಳೆದುಕೊಂಡಿದ್ದೇವೆ. ಆದರೆ ಈ ಸ್ವಾರ್ಥ ಚಿಂತನೆಯ ನಡುವೆಯೂ ಪ್ರಾಣಿಗಳಿಗೂ ಸಹ ನಮ್ಮ ನೆರವು ಬೇಕೆಂದು ತಿಳಿಸಿಕೊಟ್ಟವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು. ಇವರಿಂದ ಪ್ರೇರಿತಗೊಂಡ ನಾನು ನೀರಾಮೆಯನ್ನು ಕಲಬುರಗಿಯ 'ಚಿಲ್ಟ್ರನ್ ಪಾರ್ಕ್ ಆಂಡ್ ಮಿನಿ ಜೂನಿಂದ ದತ್ತು ಪಡೆದಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

ನಟಿ ಪ್ರಿಯಾಂಕಾ ಚಿಂಚೋಳಿ
ನಟಿ ಪ್ರಿಯಾಂಕಾ ಚಿಂಚೋಳಿ


ನಟಿ, ನಿರ್ಮಾಪಕಿ, ನಿರ್ದೇಶಕಿ ಶ್ರುತಿ ನಾಯ್ಡು ಅವರು ಹಿರಿಯ ನಟ ಸುಂದರ ಕೃಷ್ಣ ಅರಸ್ ಅವರ ಮೊಮ್ಮಗ ಧೀರ ರಾಜೇಂದ್ರ ಹೆಸರಿನಲ್ಲಿ ಜೀಬ್ರಾ ದತ್ತು ಪಡೆದಿದ್ದಾರೆ. 'ಮುಂದಿನ ಪೀಳಿಗೆಯ ಮಕ್ಕಳಿಗೆ ಪ್ರಾಣಿ, ಪ್ರಕೃತಿ ಬಗ್ಗೆ ಗೌರವ ಹೆಚ್ಚಬೇಕಿದೆ. ಆದ್ದರಿಂದ ಧೀರ ರಾಜೇಂದ್ರ ಹೆಸರಿನಲ್ಲಿ ಜೀಬ್ರಾ ದತ್ತು ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರಾಣಿ ದತ್ತು ಪಡೆದ ಶ್ರುತಿ ನಾಯ್ಡು
ಪ್ರಾಣಿ ದತ್ತು ಪಡೆದ ಶ್ರುತಿ ನಾಯ್ಡು

ಇನ್ನು ನಟ ಪ್ರಮೋದ್ ಕೂಡ ಬಿಳಿ ನವಿಲನ್ನು ದತ್ತು ಪಡೆದಿದ್ದಾರೆ. ('ಡಿ ಬಾಸ್' ಮನವಿಗೆ ಸ್ಪಂದಿಸಿದ ಅಭಿಮಾನಿಗಳು.. ಪ್ರಾಣಿ ಸಂಗ್ರಾಹಲಯಕ್ಕೆ ಬಂತು ಕೋಟಿ ಹಣ)

Last Updated : Jun 10, 2021, 9:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.