ದಿವಂಗತ ಎ ಆರ್ ಬಾಬು ಅನೇಕ ಸಿನಿಮಾಗಳನ್ನು ನಿರ್ದೇಶಿಸಿ, ಪ್ರೇಮ್ ಅಂತ ನಿರ್ದೇಶಕರನ್ನು ಬೆಳಕಿಗೆ ತಂದವರು. ಅಗಾಗೆ ಅವರು ಚಿತ್ರಗಳಲ್ಲೂ ಅಭಿನಯಿಸುತ್ತಿದ್ದರು. ಇವರು ಕಳೆದ ವರ್ಷ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದರು. ಗಿರ್ಗಿಟ್ಲೆ ಇವರು ನಟಿಸಿರುವ ಕೊನೆಯ ಚಿತ್ರವಾಯಿತು.
ಇನ್ನು ರಾಘವ್ ಉದಯ್ 2016 ನವೆಂಬರ್ 8 ರಂದು ಮಾಸ್ತಿಗುಡಿ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್ನಿಂದ ಅನಿಲ್ ಜೊತೆ ಹಾರಿ ತಿಪ್ಪಗೊಂಡನ ಹಳ್ಳಿ ಕೆರೆಯಲ್ಲಿ ಪ್ರಾಣ ಕಳೆದುಕೊಂಡರು. ಉದಯ್ ಈ ವಾರದ ‘ಗಿರ್ಗಿಟ್ಲೆ’ ಕನ್ನಡ ಸಿನಿಮಾದಲ್ಲಿ ಮುಖ್ಯ ಖಳನ ಪಾತ್ರ ನಿರ್ವಹಿಸಿದ್ದಾರೆ. ಅವರು 2016 ನವೆಂಬರ್ ತಿಂಗಳಿಗೂ ಮುಂಚೆ ಚಿತ್ರದಲ್ಲಿ ಅಭಿನಯಿಸಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಸಹ ಮಾಡಿದ್ದರು.
ಎ ಆರ್ ಬಾಬು ಮತ್ತು ರಾಘವ್ ಉದಯ್ ನೆನಪಿನೊಂದಿಗೆ ‘ಗಿರ್ಗಿಟ್ಲೆ’ ಈ ವಾರ ಬಿಡುಗಡೆ ಭಾಗ್ಯ ಮೂರು ವರ್ಷಗಳ ನಂತರ ಕಾಣುತ್ತಿದೆ.