ETV Bharat / sitara

ಅನಾಥ ಹುಡುಗನ 'ಕಲಿವೀರ'...ಟೈಟಲ್​​​​​​​​​, ಪೋಸ್ಟರ್​​​​ನಿಂದ ಕುತೂಹಲ ಹೆಚ್ಚಿಸಿದ ಸಿನಿಮಾ..! - ಅನಾಥ ಹುಡುಗನ ಕಲಿವೀರ

ನಿಜಜೀವನದಲ್ಲಿ ಯಾರೂ ಇಲ್ಲದ ನಟ ಏಕಲವ್ಯ, ಯೋಗ, ಕೇರಳದ ಕಳರಿ ಪಯಟ್ಟು, ಕತ್ತಿ ವರಸೆ, ಜಿಮ್ನಾಸ್ಟಿಕ್​​​​​, ಮಾರ್ಷಲ್ ಆರ್ಟ್ ಹಾಗೂ ಇನ್ನಿತರ ಕಲೆಗಳನ್ನು ಕಲಿತು ಇದೀಗ ರಿಯಲ್ ಸ್ಟಂಟ್ ಜೊತೆಗೆ ಸಿನಿಮಾದಲ್ಲಿ ಅಭಿನಯಿಸಿರುವುದು ವಿಶೇಷ.

Kaliveera
'ಕಲಿವೀರ'
author img

By

Published : Jan 11, 2020, 11:42 PM IST

'ಕಲಿವೀರ‌', ಮಾಸ್ ಟೈಟಲ್​​​ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಲು ರೆಡಿಯಾಗಿರುವ ಸಿನಿಮಾ. ಬಹುತೇಕ ಚಿತ್ರೀಕರಣ ಮುಗಿಸಿರುವ 'ಕಲಿವೀರ‌' ಚಿತ್ರತಂಡ ತಮ್ಮ ಸಿನಿಮಾ ವಿಶೇಷತೆ ಬಗ್ಗೆ ಹಂಚಿಕೊಳ್ಳಲು ಇಂದು ಸುದ್ದಿಗೋಷ್ಠಿ ಏರ್ಪಡಿಸಿತ್ತು. ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಈ ಚಿತ್ರದ ನಾಯಕ ಏಕಲವ್ಯ, ಯೋಗ, ಕತ್ತಿ ವರಸೆ, ಲಾಠಿ ವರಸೆ ಪ್ರದರ್ಶನ ಮಾಡುವ ಮೂಲಕ ತನ್ನ ಪ್ರತಿಭೆ ಏನು ಎಂಬುದನ್ನು ತೋರಿಸಿದರು‌.

'ಕಲಿವೀರ' ಪ್ರೆಸ್​​​ಮೀಟ್

ಸುದ್ದಿಗೋಷ್ಠಿಯಲ್ಲಿ ನಾಲ್ವರು ನಿರ್ಮಾಪಕರು, ನಿರ್ದೇಶಕ ಅವಿನಾಶ್ ಭೂಷಣ್,ಯುವ ನಟ ಏಕಲವ್ಯ, ತಬಲಾ ನಾಣಿ, ನೀನಾಸಂ ಅಶ್ವಥ್, ನಟಿಯರಾದ ಪಾವನ ಗೌಡ, ಚಿರಶ್ರೀ ಅಂಚನ್ ,ಸಾಹಸ ನಿರ್ದೇಶಕ ಡಿಫರೆಂಟ್​​​​​​ ಡ್ಯಾನಿ, ಸಂಗೀತ ನಿರ್ದೇಶಕ ವಿ.ಮನೋಹರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಅನ್ಯಾಯದ ವಿರುದ್ಧ ಹೋರಾಡುವ ನಾಯಕ ತನಗೆ ತಿಳಿದಿರುವ ವಿದ್ಯೆಗಳಾದ ಯೋಗ, ಮಾರ್ಷಲ್ ಆರ್ಟ್, ಕೇರಳದ ಕಳರಿ ಪಯಟ್ಟು, ಕತ್ತಿ ವರಸೆ, ಲಾಠಿ ವರಸೆಯಿಂದ ಹೋರಾಡಿ ಜಯಶೀಲನಾಗುತ್ತಾನೆ ಎಂಬುದೇ ಈ ಸಿನಿಮಾದ ಕಥಾಹಂದರ.

Kaliveera
'ಕಲಿವೀರ'

ನಿಜಜೀವನದಲ್ಲಿ ಯಾರೂ ಇಲ್ಲದ ನಟ ಏಕಲವ್ಯ, ಯೋಗ, ಕೇರಳದ ಕಳರಿ ಪಯಟ್ಟು, ಕತ್ತಿ ವರಸೆ, ಜಿಮ್ನಾಸ್ಟಿಕ್​​​​​, ಮಾರ್ಷಲ್ ಆರ್ಟ್ ಹಾಗೂ ಇನ್ನಿತರ ಕಲೆಗಳನ್ನು ಕಲಿತು ಇದೀಗ ರಿಯಲ್ ಸ್ಟಂಟ್ ಜೊತೆಗೆ ಸಿನಿಮಾದಲ್ಲಿ ಅಭಿನಯಿಸಿರುವುದು ವಿಶೇಷ. ಚಿತ್ರದಲ್ಲಿ ಚಿರಶ್ರೀ ಏಕಲವ್ಯಗೆ ಜೋಡಿಯಾಗಿದ್ದು, ಪಾವನ ಗೌಡ ವಕೀಲೆ ಪಾತ್ರ ಮಾಡುತ್ತಿದ್ದಾರೆ. ತಬಲಾ ನಾಣಿ ಹಾಗು ನೀನಾಸಂ ಅಶ್ವಥ್ ಕೂಡಾ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಏಕಲವ್ಯ ಅವರ ಪ್ರತಿಭೆ ನೋಡಿ ಸಾಹಸ ನಿರ್ದೇಶಕ ಡಿಫರೆಂಟ್​​​​ ಡ್ಯಾನಿ ನಾಲ್ಕು ಅದ್ಭುತ ಆ್ಯಕ್ಷನ್ ಸನ್ನಿವೇಶಗಳನ್ನು ಕಂಪೋಸ್​​​​​ ಮಾಡಿದ್ದಾರಂತೆ. ಇನ್ನು 'ಕನ್ನಡ ದೇಶದೋಳ್' ಸಿನಿಮಾ ನಿರ್ದೇಶಿಸಿದ್ದ ಅವಿನಾಶ್ ಭೂಷಣ್ ಈ ಚಿತ್ರದ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕಥೆಗೆ ತಕ್ಕಂತೆ, ವಿ. ನಾಗೇಂದ್ರ ಪ್ರಸಾದ್, ಅರಸು ಅಂತಾರೆ, ಗಿರಿಧರ್ ಎಳೆಕ್ಕೊಳೆ ಹಾಗೂ ಸಚಿನ್ ಕಡೂರ್ ಬರೆದಿರುವ ಗೀತೆಗಳಿಗೆ , ವಿ. ಮನೋಹರ್ ಸಂಗೀತ ನೀಡಿದ್ದಾರೆ. ಎಸ್​. ಹಾಲೇಶ್ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ್ದು ಈ ಸಿನಿಮಾ ಪೋಸ್ಟರ್​​​​ನಿಂದಲೇ ಗಮನ ಸೆಳೆಯುತ್ತಿದೆ.

'ಕಲಿವೀರ‌', ಮಾಸ್ ಟೈಟಲ್​​​ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಲು ರೆಡಿಯಾಗಿರುವ ಸಿನಿಮಾ. ಬಹುತೇಕ ಚಿತ್ರೀಕರಣ ಮುಗಿಸಿರುವ 'ಕಲಿವೀರ‌' ಚಿತ್ರತಂಡ ತಮ್ಮ ಸಿನಿಮಾ ವಿಶೇಷತೆ ಬಗ್ಗೆ ಹಂಚಿಕೊಳ್ಳಲು ಇಂದು ಸುದ್ದಿಗೋಷ್ಠಿ ಏರ್ಪಡಿಸಿತ್ತು. ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಈ ಚಿತ್ರದ ನಾಯಕ ಏಕಲವ್ಯ, ಯೋಗ, ಕತ್ತಿ ವರಸೆ, ಲಾಠಿ ವರಸೆ ಪ್ರದರ್ಶನ ಮಾಡುವ ಮೂಲಕ ತನ್ನ ಪ್ರತಿಭೆ ಏನು ಎಂಬುದನ್ನು ತೋರಿಸಿದರು‌.

'ಕಲಿವೀರ' ಪ್ರೆಸ್​​​ಮೀಟ್

ಸುದ್ದಿಗೋಷ್ಠಿಯಲ್ಲಿ ನಾಲ್ವರು ನಿರ್ಮಾಪಕರು, ನಿರ್ದೇಶಕ ಅವಿನಾಶ್ ಭೂಷಣ್,ಯುವ ನಟ ಏಕಲವ್ಯ, ತಬಲಾ ನಾಣಿ, ನೀನಾಸಂ ಅಶ್ವಥ್, ನಟಿಯರಾದ ಪಾವನ ಗೌಡ, ಚಿರಶ್ರೀ ಅಂಚನ್ ,ಸಾಹಸ ನಿರ್ದೇಶಕ ಡಿಫರೆಂಟ್​​​​​​ ಡ್ಯಾನಿ, ಸಂಗೀತ ನಿರ್ದೇಶಕ ವಿ.ಮನೋಹರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಅನ್ಯಾಯದ ವಿರುದ್ಧ ಹೋರಾಡುವ ನಾಯಕ ತನಗೆ ತಿಳಿದಿರುವ ವಿದ್ಯೆಗಳಾದ ಯೋಗ, ಮಾರ್ಷಲ್ ಆರ್ಟ್, ಕೇರಳದ ಕಳರಿ ಪಯಟ್ಟು, ಕತ್ತಿ ವರಸೆ, ಲಾಠಿ ವರಸೆಯಿಂದ ಹೋರಾಡಿ ಜಯಶೀಲನಾಗುತ್ತಾನೆ ಎಂಬುದೇ ಈ ಸಿನಿಮಾದ ಕಥಾಹಂದರ.

Kaliveera
'ಕಲಿವೀರ'

ನಿಜಜೀವನದಲ್ಲಿ ಯಾರೂ ಇಲ್ಲದ ನಟ ಏಕಲವ್ಯ, ಯೋಗ, ಕೇರಳದ ಕಳರಿ ಪಯಟ್ಟು, ಕತ್ತಿ ವರಸೆ, ಜಿಮ್ನಾಸ್ಟಿಕ್​​​​​, ಮಾರ್ಷಲ್ ಆರ್ಟ್ ಹಾಗೂ ಇನ್ನಿತರ ಕಲೆಗಳನ್ನು ಕಲಿತು ಇದೀಗ ರಿಯಲ್ ಸ್ಟಂಟ್ ಜೊತೆಗೆ ಸಿನಿಮಾದಲ್ಲಿ ಅಭಿನಯಿಸಿರುವುದು ವಿಶೇಷ. ಚಿತ್ರದಲ್ಲಿ ಚಿರಶ್ರೀ ಏಕಲವ್ಯಗೆ ಜೋಡಿಯಾಗಿದ್ದು, ಪಾವನ ಗೌಡ ವಕೀಲೆ ಪಾತ್ರ ಮಾಡುತ್ತಿದ್ದಾರೆ. ತಬಲಾ ನಾಣಿ ಹಾಗು ನೀನಾಸಂ ಅಶ್ವಥ್ ಕೂಡಾ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಏಕಲವ್ಯ ಅವರ ಪ್ರತಿಭೆ ನೋಡಿ ಸಾಹಸ ನಿರ್ದೇಶಕ ಡಿಫರೆಂಟ್​​​​ ಡ್ಯಾನಿ ನಾಲ್ಕು ಅದ್ಭುತ ಆ್ಯಕ್ಷನ್ ಸನ್ನಿವೇಶಗಳನ್ನು ಕಂಪೋಸ್​​​​​ ಮಾಡಿದ್ದಾರಂತೆ. ಇನ್ನು 'ಕನ್ನಡ ದೇಶದೋಳ್' ಸಿನಿಮಾ ನಿರ್ದೇಶಿಸಿದ್ದ ಅವಿನಾಶ್ ಭೂಷಣ್ ಈ ಚಿತ್ರದ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕಥೆಗೆ ತಕ್ಕಂತೆ, ವಿ. ನಾಗೇಂದ್ರ ಪ್ರಸಾದ್, ಅರಸು ಅಂತಾರೆ, ಗಿರಿಧರ್ ಎಳೆಕ್ಕೊಳೆ ಹಾಗೂ ಸಚಿನ್ ಕಡೂರ್ ಬರೆದಿರುವ ಗೀತೆಗಳಿಗೆ , ವಿ. ಮನೋಹರ್ ಸಂಗೀತ ನೀಡಿದ್ದಾರೆ. ಎಸ್​. ಹಾಲೇಶ್ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ್ದು ಈ ಸಿನಿಮಾ ಪೋಸ್ಟರ್​​​​ನಿಂದಲೇ ಗಮನ ಸೆಳೆಯುತ್ತಿದೆ.

Intro:Body:ಅನಾಥ ಹುಡ್ಗ ಈಗ ಕಲಿ ವೀರ ಸಿನಿಮಾದ ನಾಯಕ ನಟ!

ಕಲಿ ವೀರ‌. ಮಾಸ್ ಟೈಟಲ್ ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸೌಂಡ್ ಮಾಡೋದಿಕ್ಕೆ ರೆಡಿಯಾಗಿರೋ ಚಿತ್ರ.ಆಲ್ ಮೋಸ್ಟ್ ಚಿತ್ರೀಕರಣ ಮುಗಿಸಿರೋ ಕಲಿ ವೀರ ಚಿತ್ರತಂಡದ ವಿಶೇಷತೆ ಬಗ್ಗೆ ಹಂಚಿಕೊಳ್ಳುವ ಮುನ್ನ, ಈ ಚಿತ್ರದ ಹೀರೋ ಏಕಲವ್ಯ ತಮ್ಮ ಟ್ಯಾಲೆಂಟ್‌ ಏನು ಅನ್ನೋದನ್ನ, ಯೋಗ, ಕತ್ತಿ ವರಸೆ,ಲಾಠಿ ವರೆಸ ಪ್ರದರ್ಶನ ಮಾಡುವ ಮೂಲಕ ಕಲಿ ವೀರ ಚಿತ್ರದ ಪತ್ರಿಕಾಗೋಷ್ಟಿ ಆರಂಭವಾಯಿತ್ತು‌. ಈ ಬಗ್ಗೆ ಮಾತನಾಡೋದಿಕ್ಕೆ, ನಾಲ್ಕು ಜನ ನಿರ್ಮಾಪಕರು, ನಿರ್ದೇಶಕ ಅವಿನಾಶ್ ಭೂಷಣ್,ಯುವ ನಟ ಏಕಲವ್ಯ, ತಬಲಾ ಜಾಣಿ, ನೀನಾಸಂ ಅಶ್ವಥ್, ನಟಿಯಾದ ಪಾವನ ಗೌಡ, ಚಿರಶ್ರೀ ಅಂಚನ್ ,ಸಾಹಸ ನಿರ್ದೇಶಕ ಡಿಫ್ರೆಂಟ್ ಡ್ಯಾನಿ, ಸಂಗೀತ ನಿರ್ದೇಶಕ ವಿ ಮನೋಹರ್ ಉಪಸ್ಥಿತಿ ಇದ್ರು..ಅನ್ಯಾಯ ವಿರುದ್ಧ ನಾಯಕ ನಟ, ತನಗೆ ತಿಳಿದಿರುವ ವಿಧ್ಯೆಗಳಾದ ಯೋಗ, ಮಾರ್ಷಲ್ ಆರ್ಟ್, ಕೇರಳದ ಕಲರಿ ಪಟ್ಟು, ಕತ್ತಿ ವರಸೆ, ಲಾಠಿ ವರಸೆಯಿಂದ ಹೋರಾಟ ಮಾಡಿ ಜಯಶೀಲನಾಗುತ್ತಾನೆ ಅನ್ನೋದು ಕಲಿ ವೀರ ಚಿತ್ರದ ಕಥಾಹಂದರ..ಅನಾಥನಾಗಿರೋ ಏಕಲವ್ಯ, ಯೋಗ ಕಲಿತು, , ಕೇರಳದ ಕಲರಿ ಪಟ್ಟು, ಕತ್ತಿ ವರಸೆ, ಜಿಮ್‌ನ್ಯಾಸ್ಟಿಕ್, ಮಾರ್ಷಲ್ ಆರ್ಟ್ ಕಲಿತು ರಿಯಲ್ ಸ್ಟಂಟ್ ಜೊತೆಗೆ ಅಭಿನಯ ಮಾಡಿರೋ ವಿಶೇಷ..ಚಿರ ಶ್ರೀ ಏಕಲವ್ಯ ಜೋಡಿಯಾಗಿದ್ದು, ಪಾವನ ಗೌಡ ಈ ಚಿತ್ರ ವಕೀಲೆ ಪಾತ್ರ ಮಾಡುತ್ತಿದ್ದಾರೆ..ತಬಲಾ ನಾಣಿ ಕ ಹಾಗು ನೀನಾಸಂ ಅಶ್ವಥ್ ಕೂಡ ವಿಭಿನ್ನ ರೋಲ್ ನಲ್ಲಿ ಕಾಣ್ತಾರೆ..ಏಕಲವ್ಯ ರಿಯಲ್ ಟ್ಯಾಲೆಂಟ್‌ ನೋಡಿ ,ಸಾಹಸ ನಿರ್ದೇಶಕ ಡಿಫ್ರೆಂಟ್ ಡ್ಯಾನಿ ನಾಲ್ಕು ಅದ್ಭುತ ಆಕ್ಷನ್ ಸನ್ನಿವೇಶಗಳನ್ನ ಕಂಪೋಜ್ ಮಾಡಿದ್ದಾರಂತೆ..ಇನ್ನು ಕನ್ನಡ ದೇಶದೋಳ್ ಸಿನಿಮಾ ನಿರ್ದೇಶನ ಮಾಡಿದ್ದ ಅವಿನಾಶ್ ಭೂಷಣ್ ಕಥೆ ಬರೆದು ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.ಈ ಕಥೆಗೆ ತಕ್ಕಂತೆ, ವಿ ನಾಗೇಂದ್ರ ಪ್ರಸಾದ್, ಅರಸು ಅಂತಾರೆ, ಗಿರಿಧರ್ ಎಳೆಕ್ಕೊಳೆ, ಸಚಿನ್ ಕಡೂರ್ ಬರೆದಿರುವ ಗೀತ ರಚನೆಗೆ , ವಿ ಮನೋಹರ್ ಸಂಗೀತ ನೀಡಿದ್ದಾರೆ.. ಎಸ್ ಹಾಲೇಶ್ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ್ದು ಈ ಸಿನಿಮಾ ಪೋಸ್ಟರ್ ನಿಂದಲೇ ಗಮನ ಸೆಳೆಯುತ್ತಿದೆ..ಅನಾಥನಾಗಿರೋ ಏಕಲವ್ಯ ಟ್ಯಾಲೆಂಟ್‌ ಕನ್ನಡ ಸಿನಿಮಾ ಪ್ರೇಕ್ಷಕರು ಅಪ್ಪಿಕೊಳ್ಳುತ್ತಾರ ಕಾದು ನೋಡಬೇಕು..

ಬೈಟ್: ಪಾನತ ಗೌಟ, ನಟಿ
ಏಕಲವ್ಯ, ಯುವ ನಟ
ಅವಿನಾಶ್ ಭೂಷಣ್, ನಿರ್ದೇಶಕ
ವಿ ಮನೋಹರ್, ಸಂಗೀತ ನಿರ್ದೇಶಕConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.