ETV Bharat / sitara

'ಚಂದ್ರ ಚಕೋರಿ'ಯಲ್ಲಿ ಈ ನಟ ನಟಿಸಬೇಕಿತ್ತಂತೆ.. ಆದರೆ, 'ಲವ್' ಅಡ್ಡಿಯಾಯ್ತಂತೆ!

author img

By

Published : Jan 2, 2021, 2:42 PM IST

ಹೀಗೆ 18 ವರ್ಷಗಳ ಹಿಂದೆಯೇ ಜೊತೆಯಾಗಿ ಕೆಲಸ ಮಾಡುವ ಅವಕಾಶವನ್ನು ಮಿಸ್​ ಮಾಡಿಕೊಂಡಿದ್ದರು ಆದಿತ್ಯ ಮತ್ತು ಎಸ್‌ ನಾರಾಯಣ್. ಈಗ '5ಡಿ' ಚಿತ್ರದ ಮೂಲಕ ಮೊದಲ ಬಾರಿಗೆ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಈ ಚಿತ್ರಕ್ಕೆ ಆದಿತ್ಯ ನಾಯಕನಾದ್ರೆ ಸೂಕ್ತ ಎಂದು ಕಥೆಗಾರರು ಹೇಳಿದ್ದರಂತೆ..

Director S. Narayan
ನಿರ್ದೇಶಕ ಎಸ್​. ನಾರಾಯಣ್

ಎಸ್​.ನಾರಾಯಣ್​ ನಿರ್ದೇಶನದ 'ಚಂದ್ರ ಚಕೋರಿ' ಚಿತ್ರ ಒಂದು ವರ್ಷ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿತ್ತು. ಈ ಚಿತ್ರವು ಶ್ರೀಮುರಳಿಗೆ ದೊಡ್ಡ ಬ್ರೇಕ್​ ನೀಡಿತ್ತು. ಆದರೆ, ಶ್ರೀಮುರಳಿಗೂ ಮುನ್ನ ಈ ಚಿತ್ರದಲ್ಲಿ ಆದಿತ್ಯ ನಟಿಸಬೇಕಿತ್ತಂತೆ. ಹಾಗಂತ ಸ್ವತಃ ನಿರ್ದೇಶಕ ಎಸ್​.ನಾರಾಯಣ್​ ಹೇಳಿಕೊಂಡಿದ್ದಾರೆ.

ಶುಕ್ರವಾರ ಸಂಜೆ '5ಡಿ' ಚಿತ್ರದ ಟೈಟಲ್​ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು 'ಕುರಿಗಳು ಸಾರ್​ ಕುರಿಗಳು' ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿ ಜೊತೆ ಜೊತೆಗೆ 'ಚಂದ್ರ ಚಕೋರಿ' ಕೆಲಸವನ್ನೂ ಮಾಡುತ್ತಿದ್ದೆ. 'ಕುರಿಗಳು' ಸೆಟ್​ಗೆ ಸಹಾಯಕ ನಿರ್ದೇಶಕರನ್ನು ಕರೆಸಿಕೊಂಡು, ಬಿಡುವಿದ್ದಾಗಲೆಲ್ಲ 'ಚಂದ್ರ ಚಕೋರಿ'ಯ ಚರ್ಚೆ ಮಾಡುತ್ತಿದ್ದೆ.

ಆ ಚಿತ್ರಕ್ಕೆ ಒಬ್ಬ ಹೊಸ ಹುಡುಗ ಇದ್ದರೆ ಚೆನ್ನ ಅಂತಾ ಎನಿಸುತ್ತಿತ್ತು. ಆ ಸಂದರ್ಭದಲ್ಲಿ ಆದಿತ್ಯ ಸೆಟ್​ಗೆ ಬರುತ್ತಿದ್ದರು. ಅವರು 'ಕುರಿಗಳು' ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿದ್ದರು. ಪ್ರತಿದಿನ ಸೆಟ್​ಗೆ ಬರುತ್ತಿದ್ದ ಅವರನ್ನು ನೋಡಿ, 'ಚಂದ್ರ ಚಕೋರಿ'ಗೆ ಅವರೇ ಸೂಕ್ತ ಎಂದೆನಿಸಿತ್ತು.

ಈ ವಿಷವಾಗಿ ಅವರ ತಂದೆ ರಾಜೇಂದ್ರ ಸಿಂಗ್​ ಬಾಬು ಅವರನ್ನು ಕೇಳಿದ್ದೆ. ಅವರು ತಾವೇ 'ಲವ್​' ಎನ್ನುವ ಚಿತ್ರ ಮಾಡುತ್ತಿರುವುದಾಗಿ ಹೇಳಿದರು. ಹಾಗಾಗಿ ಬೇರೆ ಹೀರೋನನ್ನು ಹುಡುಕಬೇಕಾಯಿತು' ಎಂದು ನಾರಾಯಣ್​ ಹೇಳಿಕೊಂಡಿದ್ದಾರೆ.

ಓದಿ: ಬಹಳ ದಿನಗಳ ನಂತರ ಹೊಸ ಸಿನಿಮಾವೊಂದನ್ನು ಘೋಷಿಸಿದ ನಿರ್ದೇಶಕ ಎಸ್​​​. ನಾರಾಯಣ್​​

ಹೀಗೆ 18 ವರ್ಷಗಳ ಹಿಂದೆಯೇ ಜೊತೆಯಾಗಿ ಕೆಲಸ ಮಾಡುವ ಅವಕಾಶವನ್ನು ಮಿಸ್​ ಮಾಡಿಕೊಂಡಿದ್ದರು ಆದಿತ್ಯ ಮತ್ತು ಎಸ್‌ ನಾರಾಯಣ್. ಈಗ '5ಡಿ' ಚಿತ್ರದ ಮೂಲಕ ಮೊದಲ ಬಾರಿಗೆ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಈ ಚಿತ್ರಕ್ಕೆ ಆದಿತ್ಯ ನಾಯಕನಾದ್ರೆ ಸೂಕ್ತ ಎಂದು ಕಥೆಗಾರರು ಹೇಳಿದ್ದರಂತೆ. ಆದಿತ್ಯ ಅವರನ್ನು ಕೇಳಿದಾಗ, ಕಥೆ ಕೇಳದೆಯೇ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಈಗಾಗಲೇ '5 ಡಿ' ಚಿತ್ರದ ಚಿತ್ರೀಕರಣ ಶುಕ್ರವಾರದಿಂದ ಪ್ರಾರಂಭವಾಗಿದೆ.

ಎಸ್​.ನಾರಾಯಣ್​ ನಿರ್ದೇಶನದ 'ಚಂದ್ರ ಚಕೋರಿ' ಚಿತ್ರ ಒಂದು ವರ್ಷ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿತ್ತು. ಈ ಚಿತ್ರವು ಶ್ರೀಮುರಳಿಗೆ ದೊಡ್ಡ ಬ್ರೇಕ್​ ನೀಡಿತ್ತು. ಆದರೆ, ಶ್ರೀಮುರಳಿಗೂ ಮುನ್ನ ಈ ಚಿತ್ರದಲ್ಲಿ ಆದಿತ್ಯ ನಟಿಸಬೇಕಿತ್ತಂತೆ. ಹಾಗಂತ ಸ್ವತಃ ನಿರ್ದೇಶಕ ಎಸ್​.ನಾರಾಯಣ್​ ಹೇಳಿಕೊಂಡಿದ್ದಾರೆ.

ಶುಕ್ರವಾರ ಸಂಜೆ '5ಡಿ' ಚಿತ್ರದ ಟೈಟಲ್​ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು 'ಕುರಿಗಳು ಸಾರ್​ ಕುರಿಗಳು' ಚಿತ್ರದಲ್ಲಿ ನಟಿಸುವ ಸಂದರ್ಭದಲ್ಲಿ ಜೊತೆ ಜೊತೆಗೆ 'ಚಂದ್ರ ಚಕೋರಿ' ಕೆಲಸವನ್ನೂ ಮಾಡುತ್ತಿದ್ದೆ. 'ಕುರಿಗಳು' ಸೆಟ್​ಗೆ ಸಹಾಯಕ ನಿರ್ದೇಶಕರನ್ನು ಕರೆಸಿಕೊಂಡು, ಬಿಡುವಿದ್ದಾಗಲೆಲ್ಲ 'ಚಂದ್ರ ಚಕೋರಿ'ಯ ಚರ್ಚೆ ಮಾಡುತ್ತಿದ್ದೆ.

ಆ ಚಿತ್ರಕ್ಕೆ ಒಬ್ಬ ಹೊಸ ಹುಡುಗ ಇದ್ದರೆ ಚೆನ್ನ ಅಂತಾ ಎನಿಸುತ್ತಿತ್ತು. ಆ ಸಂದರ್ಭದಲ್ಲಿ ಆದಿತ್ಯ ಸೆಟ್​ಗೆ ಬರುತ್ತಿದ್ದರು. ಅವರು 'ಕುರಿಗಳು' ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿದ್ದರು. ಪ್ರತಿದಿನ ಸೆಟ್​ಗೆ ಬರುತ್ತಿದ್ದ ಅವರನ್ನು ನೋಡಿ, 'ಚಂದ್ರ ಚಕೋರಿ'ಗೆ ಅವರೇ ಸೂಕ್ತ ಎಂದೆನಿಸಿತ್ತು.

ಈ ವಿಷವಾಗಿ ಅವರ ತಂದೆ ರಾಜೇಂದ್ರ ಸಿಂಗ್​ ಬಾಬು ಅವರನ್ನು ಕೇಳಿದ್ದೆ. ಅವರು ತಾವೇ 'ಲವ್​' ಎನ್ನುವ ಚಿತ್ರ ಮಾಡುತ್ತಿರುವುದಾಗಿ ಹೇಳಿದರು. ಹಾಗಾಗಿ ಬೇರೆ ಹೀರೋನನ್ನು ಹುಡುಕಬೇಕಾಯಿತು' ಎಂದು ನಾರಾಯಣ್​ ಹೇಳಿಕೊಂಡಿದ್ದಾರೆ.

ಓದಿ: ಬಹಳ ದಿನಗಳ ನಂತರ ಹೊಸ ಸಿನಿಮಾವೊಂದನ್ನು ಘೋಷಿಸಿದ ನಿರ್ದೇಶಕ ಎಸ್​​​. ನಾರಾಯಣ್​​

ಹೀಗೆ 18 ವರ್ಷಗಳ ಹಿಂದೆಯೇ ಜೊತೆಯಾಗಿ ಕೆಲಸ ಮಾಡುವ ಅವಕಾಶವನ್ನು ಮಿಸ್​ ಮಾಡಿಕೊಂಡಿದ್ದರು ಆದಿತ್ಯ ಮತ್ತು ಎಸ್‌ ನಾರಾಯಣ್. ಈಗ '5ಡಿ' ಚಿತ್ರದ ಮೂಲಕ ಮೊದಲ ಬಾರಿಗೆ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಈ ಚಿತ್ರಕ್ಕೆ ಆದಿತ್ಯ ನಾಯಕನಾದ್ರೆ ಸೂಕ್ತ ಎಂದು ಕಥೆಗಾರರು ಹೇಳಿದ್ದರಂತೆ. ಆದಿತ್ಯ ಅವರನ್ನು ಕೇಳಿದಾಗ, ಕಥೆ ಕೇಳದೆಯೇ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಈಗಾಗಲೇ '5 ಡಿ' ಚಿತ್ರದ ಚಿತ್ರೀಕರಣ ಶುಕ್ರವಾರದಿಂದ ಪ್ರಾರಂಭವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.