ETV Bharat / sitara

'ರಂಗನಾಯಕಿ'ಗೆ ಸಿಕ್ತು ಯು/ಎ ಸರ್ಟಿಫಿಕೇಟ್​​... ದಯಾಳ್ ಫುಲ್ ​​​ಖುಷ್​​​​​​​​​​​​​​​​​​​​​​​​​

author img

By

Published : Aug 19, 2019, 12:07 PM IST

ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ರಂಗನಾಯಕಿ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯಾವುದೇ ಕಟ್, ಮ್ಯೂಟ್ ಇಲ್ಲದೆ ಯು/ಎ ಅರ್ಹತಾ ಪತ್ರ ನೀಡಿದೆ. ಅತ್ಯಾಚಾರಕ್ಕೆ ಒಳಗಾದ ಯುವತಿಯ ಕಥೆಯನ್ನು ಈ ಚಿತ್ರ ಒಳಗೊಂಡಿದೆ.

'ರಂಗನಾಯಕಿ'

ದಯಾಳ್ ಪದ್ಮನಾಭನ್ ನಿರ್ದೇಶನದ 'ರಂಗನಾಯಕಿ' ಚಿತ್ರಕ್ಕೆ ಯು/ಎ ಅರ್ಹತಾ ಪತ್ರ ದೊರೆತಿದ್ದು, ದಯಾಳ್ ಸಂತೋಷ ವ್ಯಕ್ತಪಡಿಸಿದ್ದಾರೆ. ನನ್ನ ಚಿತ್ರಕ್ಕೆ ಖಂಡಿತ ಯು ಅಥವಾ ಯು/ಎ ಸರ್ಟಿಫಿಕೇಟ್ ಸಿಗಲಿದೆ ಎಂದು ಮೊನ್ನೆಯಷ್ಟೇ ದಯಾಳ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು.

Ranganayaki
'ರಂಗನಾಯಕಿ' ಚಿತ್ರದಲ್ಲಿ ಅದಿತಿ ಪ್ರಭುದೇವ

ಚಿತ್ರದ ಯಾವುದೇ ಸನ್ನಿವೇಶಗಳಿಗೆ ಕತ್ತರಿ ಪ್ರಯೋಗ ಮಾಡದೆ, ಯಾವುದೇ ಡೈಲಾಗ್​​​​​​ಗಳನ್ನು ಮ್ಯೂಟ್ ಮಾಡದೆ ಸೆನ್ಸಾರ್ ಮಂಡಳಿ ಅರ್ಹತಾ ಪತ್ರ ನೀಡಿದೆ. ದೇಶವನ್ನೇ ನಡುಗಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣ ನಾನು ಸಿನಿಮಾ ಮಾಡಲು ಸ್ಫೂರ್ತಿ ಎಂದು ದಯಾಳ್ ಹೇಳಿದ್ದಾರೆ. ಅತ್ಯಾಚಾರಕ್ಕೆ ಬಲಿಯಾದ ಹೆಣ್ಣನ್ನು ಸಮಾಜ ಹೇಗೆ ನೋಡುತ್ತದೆ. ಆಕೆ ಎಲ್ಲವನ್ನು ಎದುರಿಸಿ ಹೇಗೆ ಬದುಕುತ್ತಾಳೆ ಎಂಬುದು ಚಿತ್ರದ ಕಥಾವಸ್ತು. ಈ ಚಿತ್ರಕ್ಕೆ 'ರಂಗನಾಯಕಿ' ಎಂದು ಹೆಸರಿಡಲಾಗಿದ್ದರೂ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ರಂಗನಾಯಕಿ' ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ದಯಾಳ್ ಪದ್ಮನಾಭನ್.

ranganayaki
'ರಂಗನಾಯಕಿ'ಗೆ ಸಿಕ್ತು ಯು/ಎ ಸರ್ಟಿಫಿಕೇಟ್​​

ಚಿತ್ರದಲ್ಲಿ ಅತ್ಯಾಚಾರ ಸಂತ್ರಸ್ತೆಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಇವರೊಂದಿಗೆ ತ್ರಿವಿಕ್ರಮ್, ಎಂ.ಜಿ. ಶ್ರೀನಿವಾಸ್, ಲಾಸ್ಯ ನಾಗರಾಜ್​​​ ಹಾಗೂ ಇನ್ನಿತರರು ನಟಿಸಿದ್ದಾರೆ. ಎಸ್​​.ವಿ. ನಾರಾಯಣ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮಣಿಕಾಂತ್ ಖದ್ರಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Ranganayaki
ಅತ್ಯಾಚಾರ ಸಂತ್ರಸ್ತೆ ಪಾತ್ರಧಾರಿಯಾಗಿ ಅದಿತಿ

ದಯಾಳ್ ಪದ್ಮನಾಭನ್ ನಿರ್ದೇಶನದ 'ರಂಗನಾಯಕಿ' ಚಿತ್ರಕ್ಕೆ ಯು/ಎ ಅರ್ಹತಾ ಪತ್ರ ದೊರೆತಿದ್ದು, ದಯಾಳ್ ಸಂತೋಷ ವ್ಯಕ್ತಪಡಿಸಿದ್ದಾರೆ. ನನ್ನ ಚಿತ್ರಕ್ಕೆ ಖಂಡಿತ ಯು ಅಥವಾ ಯು/ಎ ಸರ್ಟಿಫಿಕೇಟ್ ಸಿಗಲಿದೆ ಎಂದು ಮೊನ್ನೆಯಷ್ಟೇ ದಯಾಳ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು.

Ranganayaki
'ರಂಗನಾಯಕಿ' ಚಿತ್ರದಲ್ಲಿ ಅದಿತಿ ಪ್ರಭುದೇವ

ಚಿತ್ರದ ಯಾವುದೇ ಸನ್ನಿವೇಶಗಳಿಗೆ ಕತ್ತರಿ ಪ್ರಯೋಗ ಮಾಡದೆ, ಯಾವುದೇ ಡೈಲಾಗ್​​​​​​ಗಳನ್ನು ಮ್ಯೂಟ್ ಮಾಡದೆ ಸೆನ್ಸಾರ್ ಮಂಡಳಿ ಅರ್ಹತಾ ಪತ್ರ ನೀಡಿದೆ. ದೇಶವನ್ನೇ ನಡುಗಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣ ನಾನು ಸಿನಿಮಾ ಮಾಡಲು ಸ್ಫೂರ್ತಿ ಎಂದು ದಯಾಳ್ ಹೇಳಿದ್ದಾರೆ. ಅತ್ಯಾಚಾರಕ್ಕೆ ಬಲಿಯಾದ ಹೆಣ್ಣನ್ನು ಸಮಾಜ ಹೇಗೆ ನೋಡುತ್ತದೆ. ಆಕೆ ಎಲ್ಲವನ್ನು ಎದುರಿಸಿ ಹೇಗೆ ಬದುಕುತ್ತಾಳೆ ಎಂಬುದು ಚಿತ್ರದ ಕಥಾವಸ್ತು. ಈ ಚಿತ್ರಕ್ಕೆ 'ರಂಗನಾಯಕಿ' ಎಂದು ಹೆಸರಿಡಲಾಗಿದ್ದರೂ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ರಂಗನಾಯಕಿ' ಚಿತ್ರಕ್ಕೂ ನಮ್ಮ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ದಯಾಳ್ ಪದ್ಮನಾಭನ್.

ranganayaki
'ರಂಗನಾಯಕಿ'ಗೆ ಸಿಕ್ತು ಯು/ಎ ಸರ್ಟಿಫಿಕೇಟ್​​

ಚಿತ್ರದಲ್ಲಿ ಅತ್ಯಾಚಾರ ಸಂತ್ರಸ್ತೆಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಇವರೊಂದಿಗೆ ತ್ರಿವಿಕ್ರಮ್, ಎಂ.ಜಿ. ಶ್ರೀನಿವಾಸ್, ಲಾಸ್ಯ ನಾಗರಾಜ್​​​ ಹಾಗೂ ಇನ್ನಿತರರು ನಟಿಸಿದ್ದಾರೆ. ಎಸ್​​.ವಿ. ನಾರಾಯಣ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮಣಿಕಾಂತ್ ಖದ್ರಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Ranganayaki
ಅತ್ಯಾಚಾರ ಸಂತ್ರಸ್ತೆ ಪಾತ್ರಧಾರಿಯಾಗಿ ಅದಿತಿ

ರಂಗನಾಯಕಿ ಯು/ಎ ಪತ್ರ ದಯಾಳ್ ಖುಷಿ

ಸದಾ ಸಕ್ರಿಯವಾಗಿ ಈಗೀಗ ಸೃಜನಶೀಲ ಸಿನಿಮಾಗಳಿಗೆ ಆಸಕ್ತಿ ತೋರಿಸುತ್ತಾ ಹಗ್ಗದ ಕೊನೆ (2014 ರ ಸಿನಿಮಾ) ಸಿನಿಮಾ ಇಂದ ನನ್ನ ಎರಡನೇ ಇನ್ನಿಂಗ್ಸ್ ಪ್ರಾರಂಭ ಎಂದು ಹೇಳಿಕೊಂಡ ದಯಾಳ್ ಪದ್ಮನಾಭನ್ ನುರಿತ ನಿರ್ದೇಶಕ ಹಾಗೂ ಸಿನಿಮಾ ವ್ಯವಹಾರಸ್ಥ. ಈಗಂತೂ ಅವರ ಸಿನಿಮಾಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಪ್ರಶಸ್ತಿ ವಿಚಾರ ಆಗಲಿ, ವಾಣಿಜ್ಯ ಮಂಡಳಿ ಚುನಾವಣೆ ವಿಚಾರವಾಗಲಿ ದಯಾಳ್ ಪದ್ಮನಾಭನ್ ಸತ್ಯಕ್ಕೆ ಹೋರಾಟ ನಡೆಸುವಂತ ವ್ಯಕ್ತಿ ಸಹ.

ಈಗ ಅವರ ಖುಷಿ ಏನಪ್ಪಾ ಅಂದರೆ ರಂಗನಾಯಕಿ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು ಎ ಅರ್ಹತಾ ಪತ್ರ ಕೊಟ್ಟು ಸಿನಿಮಾವನ್ನು ಕೆಲವು ಸೆಸಾರ್ ಅಧಿಕಾರಿಗಳು ತಾರೀಫು ಸಹ ಮಾಡಿದ್ದಾರೆ. ಇದರ ಜೊತೆಗೆ ಯಾವುದೇ ಸನ್ನಿವೇಶಕ್ಕೆ ಕಟ್ ಆಗಲಿ ಮ್ಯೂಟ್ ಆಗಲಿ ಸೆನ್ಸಾರ್ ಮಂಡಳಿ ಸೂಚಿಸಿಲ್ಲ.

ರಂಗನಾಯಕಿ – 1 ವರ್ಜೀನಿಟಿ – ರೇಪ್ ಹಾಗೂ ಕನ್ಯತ್ವ ಬಗ್ಗೆ ಅಳವಡಿಸಿಕೊಂಡಿರುವ ಕಥಾ ವಸ್ತು. 80 ರ ದಶಕದಲ್ಲಿ ಪುಟ್ಟಣ್ಣ ಕಣಗಾಲ್ ಅವರ ರಂಗನಾಯಕಿ ಸಿನಿಮಕ್ಕೂ ಇದಕ್ಕೂ ಯಾವುದೇ ಸಂಬಂದವಿಲ್ಲ. ಅದಿತಿ ಪ್ರಭೂದೇವ, ತ್ರಿವಿಕ್ರಮ್, ಲಾಸ್ಯ ನಾಗರಾಜ್ ಹಾಗೂ ಎಂ ಜಿ ಶ್ರೀನಿವಾಸ್ ಮುಖ್ಯ ಪಾತ್ರದಲಿದ್ದಾರೆ.

ಎಸ್ ವಿ ನಾರಾಯಣ್ ಈ ಚಿತ್ರದ ನಿರ್ಮಾಪಕರು. ಮಣಿಕಾಂತ್ ಖದ್ರಿ ಸಂಗೀತ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.