ETV Bharat / sitara

ಕಾಂಗ್ರೆಸ್ ಮುಖಂಡರನ್ನು ಮಗಳ ಮದುವೆಗೆ ಆಹ್ವಾನಿಸಿದ ಕ್ರೇಜಿಸ್ಟಾರ್

ಸ್ಯಾಂಡಲ್​​​ವುಡ್ ಕ್ರೇಜಿಸ್ಟಾರ್ ಪುತ್ರಿ ಮದುವೆಗೆ ಒಂದು ವಾರವಷ್ಟೇ ಬಾಕಿಯಿದ್ದು, ಇಂದು ರಾಜಕೀಯ ಗಣ್ಯರನ್ನು ಭೇಟಿ ಮಾಡಿದ್ದ ರವಿಚಂದ್ರನ್ ಮಗಳ ಮದುವೆಗೆ ಆಮಂತ್ರಿಸಿದ್ದಾರೆ.

author img

By

Published : May 21, 2019, 11:52 PM IST

Updated : May 21, 2019, 11:58 PM IST

ಕ್ರೇಜಿಸ್ಟಾರ್

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರಿ ಗೀತಾಂಜಲಿ ಮದುವೆ ಮೇ 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಜರುಗಲಿದೆ. ಮದುವೆಗೆ ಇನ್ನು ವಾರವಷ್ಟೇ ಬಾಕಿ ಇದ್ದು, ರವಿಚಂದ್ರನ್ ಇನ್ನೂ ಲಗ್ನಪತ್ರಿಕೆ ಹಂಚುವ ಕಾರ್ಯದಲ್ಲಿ ಬ್ಯುಸಿ ಇದ್ದಾರೆ.

dinesh
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್​​ಗೆ ಆಮಂತ್ರಣ

ಚಿತ್ರರಂಗದ ಗಣ್ಯರನ್ನು ಮದುವೆಗೆ ಆಮಂತ್ರಿಸಿದ ಬಳಿಕ ಈಗ ರಾಜಕೀಯ ಮುಖಂಡರಿಗೆ ಲಗ್ನಪತ್ರಿಕೆ ಹಂಚುತ್ತಿದ್ದಾರೆ. ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಎಂ.ಬಿ ಪಾಟೀಲ್, ಸಿ.ಎಂ. ಇಬ್ರಾಹಿಂ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್​​​​ ಅವರನ್ನು ಭೇಟಿ ಮಾಡಿ ಆಮಂತ್ರಣ ಪತ್ರಿಕೆ ನೀಡಿದರು.

muralidhar
ಕಾಂಗ್ರೆಸ್ ಉಸ್ತುವಾರಿ ವೇಣು​​ಗೋಪಾಲ್​ಗೆ ಆಹ್ವಾನ
siddu
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ಪತ್ರಿಕೆ ನೀಡುತ್ತಿರುವ ರವಿಚಂದ್ರನ್​​

ಪುತ್ರಿ ಮದುವೆಗೆ ಗಣ್ಯಾತಿಗಣ್ಯರು ಅಗಮಿಸಲಿದ್ದು ಸ್ವರ್ಗವನ್ನೇ ಭೂಮಿಗೆ ಇಳಿಸುವ ಪ್ಲಾನ್​​​​​​ನಲ್ಲಿದ್ದಾರೆ ರವಿಮಾಮ. ಇನ್ನು ಮಗಳ ಮದುವೆಗೆ ಬೊಕೆ ತರುವ ಬದಲು ಹಣದ ವೋಚರ್ ನೀಡಿ, ಅದನ್ನು ಅನಾಥಾಶ್ರಮಗಳಿಗೆ ನೀಡುತ್ತೇನೆ. ಇದರಿಂದ ಅವರಿಗೂ ಸಹಾಯವಾಗುತ್ತದೆ ಎಂದು ಮನವಿ ಮಾಡಿದ್ದಾರೆ ರವಿಚಂದ್ರನ್.

Mb patil
ಗೃಹಸಚಿವ ಎಂ.ಪಿ. ಪಾಟೀಲರನ್ನು ಮದುವೆಗೆ ಆಹ್ವಾನಿಸುತ್ತಿರುವ ರವಿಚಂದ್ರನ್​

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರಿ ಗೀತಾಂಜಲಿ ಮದುವೆ ಮೇ 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಜರುಗಲಿದೆ. ಮದುವೆಗೆ ಇನ್ನು ವಾರವಷ್ಟೇ ಬಾಕಿ ಇದ್ದು, ರವಿಚಂದ್ರನ್ ಇನ್ನೂ ಲಗ್ನಪತ್ರಿಕೆ ಹಂಚುವ ಕಾರ್ಯದಲ್ಲಿ ಬ್ಯುಸಿ ಇದ್ದಾರೆ.

dinesh
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್​​ಗೆ ಆಮಂತ್ರಣ

ಚಿತ್ರರಂಗದ ಗಣ್ಯರನ್ನು ಮದುವೆಗೆ ಆಮಂತ್ರಿಸಿದ ಬಳಿಕ ಈಗ ರಾಜಕೀಯ ಮುಖಂಡರಿಗೆ ಲಗ್ನಪತ್ರಿಕೆ ಹಂಚುತ್ತಿದ್ದಾರೆ. ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಎಂ.ಬಿ ಪಾಟೀಲ್, ಸಿ.ಎಂ. ಇಬ್ರಾಹಿಂ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್​​​​ ಅವರನ್ನು ಭೇಟಿ ಮಾಡಿ ಆಮಂತ್ರಣ ಪತ್ರಿಕೆ ನೀಡಿದರು.

muralidhar
ಕಾಂಗ್ರೆಸ್ ಉಸ್ತುವಾರಿ ವೇಣು​​ಗೋಪಾಲ್​ಗೆ ಆಹ್ವಾನ
siddu
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ಪತ್ರಿಕೆ ನೀಡುತ್ತಿರುವ ರವಿಚಂದ್ರನ್​​

ಪುತ್ರಿ ಮದುವೆಗೆ ಗಣ್ಯಾತಿಗಣ್ಯರು ಅಗಮಿಸಲಿದ್ದು ಸ್ವರ್ಗವನ್ನೇ ಭೂಮಿಗೆ ಇಳಿಸುವ ಪ್ಲಾನ್​​​​​​ನಲ್ಲಿದ್ದಾರೆ ರವಿಮಾಮ. ಇನ್ನು ಮಗಳ ಮದುವೆಗೆ ಬೊಕೆ ತರುವ ಬದಲು ಹಣದ ವೋಚರ್ ನೀಡಿ, ಅದನ್ನು ಅನಾಥಾಶ್ರಮಗಳಿಗೆ ನೀಡುತ್ತೇನೆ. ಇದರಿಂದ ಅವರಿಗೂ ಸಹಾಯವಾಗುತ್ತದೆ ಎಂದು ಮನವಿ ಮಾಡಿದ್ದಾರೆ ರವಿಚಂದ್ರನ್.

Mb patil
ಗೃಹಸಚಿವ ಎಂ.ಪಿ. ಪಾಟೀಲರನ್ನು ಮದುವೆಗೆ ಆಹ್ವಾನಿಸುತ್ತಿರುವ ರವಿಚಂದ್ರನ್​
ಕಾಂಗ್ರೆಸ್ ಮುಖಂಡರನ್ನು ಮಗಳ ಮದುವೆಗೆ ಅಹ್ವಾನಿಸಿದ ಕ್ರೇಜಿಸ್ಟಾರ್...!!!!

ಇದೇ ತಿಂಗಳ ೨೮'೨೯ ರಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮುದ್ದಿನ ಮಗಳು ಅಂಜಲಿಯ ಮದುವೆ.ಇನ್ನೂ ಈಗಾಗಲೇ ಕ್ರೇಜಿಸ್ಟಾರ್ ನನ್ನ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಲ್ಲ‌. ಬದಲಾಗಿ ಅದ್ಬುತವಾಗಿ ಮಾಡುತ್ತೇನೆ.ನನ್ನ ಮಗಳ ಮದುವೆಗೆ ಹಣವಲ್ಲ ನನ್ನ ಬುದ್ದಿ ಖರ್ಚ್ ಮಾಡುತ್ತೇನೆ ಎಂದು ಹೇಳಿರುವ ರವಿಮಾಮ.ತನ್ನ ಪ್ರೀತಿಯ ಮಗಳ ಮದುವೆಗಾಗಿ ಭಾರತೀಯ ಚಿತ್ರರಂಗದ ಬಹುತೇಖ ಸ್ಟಾರ್ ಗಳಿಗೆ ಅಮಂತ್ರಣ ನೀಡಿದ್ದಾರೆ.ಅಲ್ಲದೆ ರಾಜಕೀಯ ಮುಖಂಡರಿಗೂ ಸಹ ಅಮಂತ್ರಣ ನೀಡಿದ್ದು.ಇಂದು ಕಾಂಗ್ರೆಸ್ ನ ಮುಖಂಡರಾದ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ. ಗೃಹ ಸಚಿವ ಎಂಬಿ ಪಾಟೀಲ್.ಸಿ ಎಂ ಇಬ್ರಾಹಿಂ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್.ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮುರುಳಿದರ್ ಅವರಿಗೆ ತನ್ನ ಮಗಳ ಮದುವೆಗೆ ಅಹ್ವಾನ ನೀಡಿದ್ದಾರೆ.ಇನ್ನೂ ರವಿಮಾಮನ ಮಗಳ ಮದುವೆಗೆ ಒಂದು ವಾರ ಮಾತ್ರ ಬಾಕಿ ಇದ್ದು .ಕ್ರೇಜಿ ಸ್ಟಾರ್ ಮಗಳ ಮದುವೆಗೆ ಗಣ್ಯಾತಿಗಣ್ಯರು ಅಗಮಿಸಲಿದ್ದು ಸ್ವರ್ಗವನ್ನೇ ಭೂಮಿಗೆ ಇಳಿಸೋ ಪ್ಲಾನ್ ನಲ್ಲಿದ್ದಾರೆ ಈ ಏಕಾಂಗಿ.


ಸತೀಶ ಎ.ಬಿ 
Last Updated : May 21, 2019, 11:58 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.