ETV Bharat / sitara

ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಕ್ರೇಜಿಸ್ಟಾರ್.. ಯಾವ ಸಿನಿಮಾ ಗೊತ್ತಾ?

ಕ್ರೇಜಿಸ್ಟಾರ್ ರವಿಚಂದ್ರನ್ ಶೀಘ್ರದಲ್ಲೇ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೈಸೂರಿನ ರಾಮಕೃಷ್ಣನಗರದ ಮಂಡ್ಯ ರಮೇಶ್ ಅವರ ರಂಗಭೂಮಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕ್ರೇಜಿಸ್ಟಾರ್ ಶೀಘ್ರದಲ್ಲೇ ಮಲ್ಲ-2 ಸಿನಿಮಾ ಮಾಡುವುದಾಗಿ ಹೇಳಿದರು.

author img

By

Published : Jul 15, 2019, 12:10 PM IST

ಕ್ರೇಜಿಸ್ಟಾರ್

ಮೈಸೂರು: ‘ದೃಶ್ಯ’ ಸಿನಿಮಾ ನಂತರ ಸಿನಿಮಾದಲ್ಲಿ ನಟನೆಯಿಂದ ದೂರ ಸರಿದು, ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದ ಕ್ರೇಜಿಸ್ಟಾರ್ ವಿ. ರವಿಚಂದ್ರನ್​​​​​ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ.

ಮಂಡ್ಯ ರಮೇಶ್ ನಟನಾ ರಂಗಭೂಮಿ ಕಾರ್ಯಕ್ರಮದಲ್ಲಿ ರವಿಚಂದ್ರನ್

ತಮ್ಮ ಸಿನಿಮಾಗಳ ಮೂಲಕ ಯುವಸಮೂಹವನ್ನು ತನ್ನತ್ತ ಸೆಳೆದಿದ್ದ ರವಿಮಾಮ ‘ದೃಶ್ಯ‘ ಸಿನಿಮಾ ನಂತರ ಇಲ್ಲಿಯವರೆಗೂ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಅಲ್ಲದೆ ಪುತ್ರಿ ಗೀತಾಂಜಲಿ ಮದುವೆ ಸಮಾರಂಭದಲ್ಲಿ ಕೂಡಾ ಅವರು ಬ್ಯುಸಿ ಇದ್ದರು. ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿ ಇದೀಗ ರವಿಚಂದ್ರನ್ ಮತ್ತೆ ಬಣ್ಣ ಹಚ್ಚಲು ಉತ್ಸಾಹ ತೋರಿದ್ದಾರೆ.

ನಿನ್ನೆ ರಾಮಕೃಷ್ಣನಗರದಲ್ಲಿರುವ ನಟನ ರಂಗಮಂಟಪದಲ್ಲಿ ನಡೆದ 'ಚೋರ ಚರಣದಾಸ' 250ನೇ ಪ್ರಯೋಗದ ನಾಟಕವನ್ನು ವೀಕ್ಷಿಸಿ ನಂತರ ಅವರು ಮಾತನಾಡಿದರು. ಕಲಾವಿದರು ಸದಾ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಬೇಕು ಎಂದು ನನ್ನ ಪತ್ನಿ ಹೇಳುತ್ತಿರುತ್ತಾರೆ. ನಾನೂ ಕೂಡಾ ಸಿನಿಮಾಗೆ ರೆಡಿಯಾಗುತ್ತಿದ್ದೇನೆ. ‘ಮಲ್ಲ-2’ ಸಿನಿಮಾ ಮಾಡಬೇಕು ಅಂದುಕೊಂಡಿದ್ದೀನಿ. ಸಿನಿಮಾದಲ್ಲಿ ಸೋಲು,ಗೆಲುವು ಸಹಜ ಆದರೆ ಅದರಿಂದ ಕುಗ್ಗಬಾರದು. ಒಂದು ವೇಳೆ 'ಪ್ರೇಮಲೋಕ' ಸಿನಿಮಾ ಬರದಿದ್ದಲ್ಲಿ ನಾನು ಯಾರು ಎಂದು ಯಾರಿಗೂ ತಿಳಿಯುತ್ತಿರಲಿಲ್ಲ ಎಂದರು. ಇನ್ನು ಮಂಡ್ಯ ರಮೇಶ್ ಬಗ್ಗೆ ಮಾತನಾಡಿದ ಅವರು ರಮೇಶ್ ಸ್ವತ: ಒಬ್ಬರು ಕಲಾವಿದರಾಗಿ ಬೇರೆ ಕಲಾವಿದರನ್ನು ಬೆಳೆಸುತ್ತಿದ್ದಾರೆ ಎಂದು ಹೊಗಳಿದರು.

ಮೈಸೂರು: ‘ದೃಶ್ಯ’ ಸಿನಿಮಾ ನಂತರ ಸಿನಿಮಾದಲ್ಲಿ ನಟನೆಯಿಂದ ದೂರ ಸರಿದು, ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದ ಕ್ರೇಜಿಸ್ಟಾರ್ ವಿ. ರವಿಚಂದ್ರನ್​​​​​ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ.

ಮಂಡ್ಯ ರಮೇಶ್ ನಟನಾ ರಂಗಭೂಮಿ ಕಾರ್ಯಕ್ರಮದಲ್ಲಿ ರವಿಚಂದ್ರನ್

ತಮ್ಮ ಸಿನಿಮಾಗಳ ಮೂಲಕ ಯುವಸಮೂಹವನ್ನು ತನ್ನತ್ತ ಸೆಳೆದಿದ್ದ ರವಿಮಾಮ ‘ದೃಶ್ಯ‘ ಸಿನಿಮಾ ನಂತರ ಇಲ್ಲಿಯವರೆಗೂ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಅಲ್ಲದೆ ಪುತ್ರಿ ಗೀತಾಂಜಲಿ ಮದುವೆ ಸಮಾರಂಭದಲ್ಲಿ ಕೂಡಾ ಅವರು ಬ್ಯುಸಿ ಇದ್ದರು. ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿ ಇದೀಗ ರವಿಚಂದ್ರನ್ ಮತ್ತೆ ಬಣ್ಣ ಹಚ್ಚಲು ಉತ್ಸಾಹ ತೋರಿದ್ದಾರೆ.

ನಿನ್ನೆ ರಾಮಕೃಷ್ಣನಗರದಲ್ಲಿರುವ ನಟನ ರಂಗಮಂಟಪದಲ್ಲಿ ನಡೆದ 'ಚೋರ ಚರಣದಾಸ' 250ನೇ ಪ್ರಯೋಗದ ನಾಟಕವನ್ನು ವೀಕ್ಷಿಸಿ ನಂತರ ಅವರು ಮಾತನಾಡಿದರು. ಕಲಾವಿದರು ಸದಾ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಬೇಕು ಎಂದು ನನ್ನ ಪತ್ನಿ ಹೇಳುತ್ತಿರುತ್ತಾರೆ. ನಾನೂ ಕೂಡಾ ಸಿನಿಮಾಗೆ ರೆಡಿಯಾಗುತ್ತಿದ್ದೇನೆ. ‘ಮಲ್ಲ-2’ ಸಿನಿಮಾ ಮಾಡಬೇಕು ಅಂದುಕೊಂಡಿದ್ದೀನಿ. ಸಿನಿಮಾದಲ್ಲಿ ಸೋಲು,ಗೆಲುವು ಸಹಜ ಆದರೆ ಅದರಿಂದ ಕುಗ್ಗಬಾರದು. ಒಂದು ವೇಳೆ 'ಪ್ರೇಮಲೋಕ' ಸಿನಿಮಾ ಬರದಿದ್ದಲ್ಲಿ ನಾನು ಯಾರು ಎಂದು ಯಾರಿಗೂ ತಿಳಿಯುತ್ತಿರಲಿಲ್ಲ ಎಂದರು. ಇನ್ನು ಮಂಡ್ಯ ರಮೇಶ್ ಬಗ್ಗೆ ಮಾತನಾಡಿದ ಅವರು ರಮೇಶ್ ಸ್ವತ: ಒಬ್ಬರು ಕಲಾವಿದರಾಗಿ ಬೇರೆ ಕಲಾವಿದರನ್ನು ಬೆಳೆಸುತ್ತಿದ್ದಾರೆ ಎಂದು ಹೊಗಳಿದರು.

Intro:ರವಿಚಂದ್ರನ್Body:


ಮತ್ತೆ ಬಣ್ಣ ಹಚ್ಚಲಿದ್ದಾರೆ ಕ್ರೆಜಿಸ್ಟಾರ್ ಯಾವ ಸಿನೆಮಾ ಗೊತ್ತಾ?
ಮೈಸೂರು: ‘ದೃಶ್ಯ’ಸಿನೆಮಾದ ನಂತರ ಚಲನಚಿತ್ರ ನಟನೆಯಿಂದ ದೂರ ಸರಿದು, ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿರುವ ‘ಪ್ರೇಮಲೋಕ’ಕ್ರೆಜಿಸ್ಟಾರ್ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜುಗೊಳ್ಳುತ್ತಿದ್ದಾರೆ.
ಹೌದು, ಕ್ರೆಜಿಸ್ಟಾರ್ ತಮ್ಮ ಸಿನೆಮಾದ ಮೂಲಕ ಯುವಸಮೂಹವನ್ನು ತನ್ನತ ಸೆಳೆದಿದ್ದರು. ದೃಶ್ಯ ಸಿನೆಮಾ ನಂತರ ಇಲ್ಲಿಯವರೆಗೂ ಅವರ ಯಾವುದೇ ಸಿನೆಮಾದಲ್ಲಿ ನಟಿಸಿಲ್ಲ.ಅಲ್ಲದೇ ಮಗಳ ಮದುವೆ ಸಂಭ್ರಮ ಮುಗಿಸಿದ ನಂತರ ಮತ್ತೆ ಬಣ್ಣ ಹಚ್ಚಲು ಉತ್ಸಹ ತೋರಿದ್ದಾರೆ.
ರಾಮಕೃಷ್ಣನಗರದಲ್ಲಿರುವ ನಟನ ರಂಗಮಂಟಪದಲ್ಲಿ ನಡೆದ ಚೋರ ಚರಣದಾಸ ಇನ್ನೂರ ಐವತ್ತನೇ ಪ್ರಯೋಗದ ನಾಟಕವನ್ನು ವೀಕ್ಷಿಸಿ ನಂತರ ಮಾತನಾಡಿದ ಅವರು, ಕಲಾವಿದರು ಸದಾ ಅಭಿಮಾನಿಗಳ ಮುಂದೆ  ಕಾಣಿಸಿಕೊಳ್ಳಬೇಕು ನನ್ನ ಪತ್ನಿ ಹೇಳುತ್ತಿದ್ದಾಳೆ. ನಾನು ಕೂಡ ಸಿನೆಮಾಗೆ ರೆಡಿಯಾಗುತ್ತಿದ್ದಂತೆ ‘ಮಲ್ಲ-೨’ ಸಿನೆಮಾ ಮಾಡಬೇಕು ಅಂದುಕೊಂಡಿದ್ದೀನಿ. ವಾಣಿಜ್ಯ ದೃಷ್ಟಿಯಿಂದ ನೋಡದ ನನ್ನ ಕನಸಿನ ಲೋಕದಲ್ಲಿ ಸಿನೆಮಾ ಕಟ್ಟುತ್ತೀನಿ ಎಂದು ಹೇಳಿದ್ದಾರೆ.
ಸಿನೆಮಾದಲ್ಲಿ ಸೋಲು=ಗೆಲುವು ಸಹಜ ಆದರೆ. ಅದರಿಂದ ಕುಗ್ಗಬಾರದು ನಾನು ಕೆಲ ಸಿನೆಮಾದಲ್ಲಿ ಸೋತೆ, ಆದರೆ ‘ಪ್ರೇಮಲೋಕ’ ನನ್ನ ಜೀವನವನ್ನು ಕಟ್ಟಿಕೊಡಿತು. ಅಂದು ಪ್ರೇಮಲೋಕ ಬರಲಿಲ್ಲವೆಂದರೆ ನಾನು ಯಾರು ಅಂತ ಜನಕ್ಕೆ ಗೊತ್ತಾಗುತ್ತಿರಲಿಲ್ಲವೆಂದ ಅವರು, ಮಂಡ್ಯ ರಮೇಶ್ ಅವರು ಕಲಾವಿದರಾಗಿ ಕಲಾವಿದರನ್ನು ಬೆಳಸುತ್ತಿದ್ದಾರೆ ಎಂದ್ರು.Conclusion:ರವಿಚಂದ್ರನ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.