ETV Bharat / sitara

'ಆ ದೃಶ್ಯ' ಚಿತ್ರಕ್ಕೆ ಶುಭ ಕೋರಿದ ಸೆಂಚುರಿ ಸ್ಟಾರ್​​​​

author img

By

Published : Nov 7, 2019, 8:42 PM IST

ಡಾ. ರವಿಚಂದ್ರನ್ ನಟಿಸಿರುವ ಸಸ್ಪೆನ್ಸ್​ ಹಾಗೂ ಥ್ರಿಲ್ಲರ್ ಕಥೆ ಹೊಂದಿರುವ 'ಆ ದೃಶ್ಯ' ಸಿನಿಮಾಗೆ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಶುಭ ಕೋರಿದ್ದಾರೆ.

ಡಾ. ರವಿಚಂದ್ರನ್, ಸೆಂಚುರಿ ಸ್ಟಾರ್​​​​

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಆ ದೃಶ್ಯ' ಸಿನಿಮಾ ಇದೇ ನವೆಂಬರ್ 8 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ರವಿಚಂದ್ರನ್ ಎರಡು ಶೇಡ್​​ಗಳಲ್ಲಿ ನಟಿಸಿದ್ದು, ಸುಮಾರು 150 ಥಿಯೇಟರ್​​​ಗಳಲ್ಲಿ ಸಿನಿಮಾ ತೆರೆ ಕಾಣಲಿದೆ.

'ಆ ದೃಶ್ಯ' ಚಿತ್ರಕ್ಕೆ ಶುಭ ಕೋರಿದ ಶಿವರಾಜ್​ಕುಮಾರ್

ಸಸ್ಪೆನ್ಸ್​ ಹಾಗೂ ಥ್ರಿಲ್ಲರ್ ಕಥೆ ಹೊಂದಿರುವ 'ಆ ದೃಶ್ಯ' ಸಿನಿಮಾವನ್ನು ಶಿವ ಗಣೇಶನ್ ನಿರ್ದೇಶಿಸಿದ್ದಾರೆ. ರವಿಚಂದ್ರನ್, ರಮೇಶ್ ಭಟ್, ಅಚ್ಯುತ್ ರಾವ್​​​​​​​​​​​​​​ ಹೊರತುಪಡಿಸಿ ಉಳಿದೆಲ್ಲಾ ನಟರು ರಂಗಭೂಮಿ ಹಿನ್ನೆಲೆ ಉಳ್ಳವರು. ಗೌತಮ್ ಶ್ರೀವತ್ಸ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಇನ್ನು ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ 'ಆ ದೃಶ್ಯ' ಚಿತ್ರಕ್ಕೆ ಶುಭ ಕೋರಿದ್ದಾರೆ. 'ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು. ಇದೇ 8 ನೇ ತಾರೀಖು ಕೆ.ಮಂಜು ನಿರ್ಮಾಣದ 'ಆ ದೃಶ್ಯ' ಸಿನಿಮಾ ಬಿಡುಗಡೆಯಾಗುತ್ತಿದೆ. ಡಾ. ರವಿಚಂದ್ರನ್, ಅಚ್ಯುತ್ ರಾವ್ ಹಾಗೂ ಎಲ್ಲಾ ಹೊಸ ಪ್ರತಿಭೆಗಳಿಗೂ ಆಲ್ ದಿ ಬೆಸ್ಟ್​. 8ನೇ ತಾರೀಖು ಸಿನಿಮಾ ನೋಡುವುದನ್ನು ಮರೆಯಬೇಡಿ. ನಾನೂ ಸಿನಿಮಾ ನೋಡುತ್ತೇನೆ ' ಎಂದು ಶಿವರಾಜ್​ಕುಮಾರ್ ಸೆಲ್ಫಿ ವಿಡಿಯೋ ಮೂಲಕ ಹೇಳಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಆ ದೃಶ್ಯ' ಸಿನಿಮಾ ಇದೇ ನವೆಂಬರ್ 8 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ರವಿಚಂದ್ರನ್ ಎರಡು ಶೇಡ್​​ಗಳಲ್ಲಿ ನಟಿಸಿದ್ದು, ಸುಮಾರು 150 ಥಿಯೇಟರ್​​​ಗಳಲ್ಲಿ ಸಿನಿಮಾ ತೆರೆ ಕಾಣಲಿದೆ.

'ಆ ದೃಶ್ಯ' ಚಿತ್ರಕ್ಕೆ ಶುಭ ಕೋರಿದ ಶಿವರಾಜ್​ಕುಮಾರ್

ಸಸ್ಪೆನ್ಸ್​ ಹಾಗೂ ಥ್ರಿಲ್ಲರ್ ಕಥೆ ಹೊಂದಿರುವ 'ಆ ದೃಶ್ಯ' ಸಿನಿಮಾವನ್ನು ಶಿವ ಗಣೇಶನ್ ನಿರ್ದೇಶಿಸಿದ್ದಾರೆ. ರವಿಚಂದ್ರನ್, ರಮೇಶ್ ಭಟ್, ಅಚ್ಯುತ್ ರಾವ್​​​​​​​​​​​​​​ ಹೊರತುಪಡಿಸಿ ಉಳಿದೆಲ್ಲಾ ನಟರು ರಂಗಭೂಮಿ ಹಿನ್ನೆಲೆ ಉಳ್ಳವರು. ಗೌತಮ್ ಶ್ರೀವತ್ಸ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಇನ್ನು ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ 'ಆ ದೃಶ್ಯ' ಚಿತ್ರಕ್ಕೆ ಶುಭ ಕೋರಿದ್ದಾರೆ. 'ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು. ಇದೇ 8 ನೇ ತಾರೀಖು ಕೆ.ಮಂಜು ನಿರ್ಮಾಣದ 'ಆ ದೃಶ್ಯ' ಸಿನಿಮಾ ಬಿಡುಗಡೆಯಾಗುತ್ತಿದೆ. ಡಾ. ರವಿಚಂದ್ರನ್, ಅಚ್ಯುತ್ ರಾವ್ ಹಾಗೂ ಎಲ್ಲಾ ಹೊಸ ಪ್ರತಿಭೆಗಳಿಗೂ ಆಲ್ ದಿ ಬೆಸ್ಟ್​. 8ನೇ ತಾರೀಖು ಸಿನಿಮಾ ನೋಡುವುದನ್ನು ಮರೆಯಬೇಡಿ. ನಾನೂ ಸಿನಿಮಾ ನೋಡುತ್ತೇನೆ ' ಎಂದು ಶಿವರಾಜ್​ಕುಮಾರ್ ಸೆಲ್ಫಿ ವಿಡಿಯೋ ಮೂಲಕ ಹೇಳಿದ್ದಾರೆ.

Intro:ಗೆಳೆಯ ಕ್ರೇಜಿಸ್ಟಾರ್ ಚಿತ್ರಕ್ಕೆ ಸಪೋರ್ಟ್ ಮಾಡಿದ ಸೆಂಚುರಿ ಸ್ಟಾರ್!!

ಕ್ರೇಜಿಸ್ಟಾರ್​ ರವಿಚಂದ್ರನ್, ಯಂಗ್​ ಲುಕ್​​ನಲ್ಲಿ ಮಿಂಚೋದಿಕ್ಕೆ ರೆಡಿಯಾಗಿರೋ ಚಿತ್ರ ಆ ದೃಶ್ಯ.. ಸಸ್ಪೆನ್ಸ್ ಕಮ್ ಥ್ರಿಲ್ಲರ್ ಕಥೆ ಆಧರಿಸಿರೋ ಆ ದೃಶ್ಯ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ..ಹೀಗಾಗಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ತಮ್ಮ ಸ್ನೇಹಿತ ಕ್ರೇಜಿಸ್ಟಾರ್ ಆ ದೃಶ್ಯ ಸಿನಿಮಾಕ್ಕೆ ವಿಶ್ ಮಾಡಿದ್ದಾರೆ..ನಿರ್ಮಾಪಕ ಕೆ ಮಂಜು ನಿರ್ಮಾಣದ ಆ ದೃಶ್ಯ ಚಿತ್ರಕ್ಕೆ, ರವಿಚಂದ್ರನ್ ಹಾಗು ಯುವ ನಟಿಗೆ ಒಳ್ಳೆದಾಗಲಿ ಅಂತಾ ಶಿವರಾಜ್ ಕುಮಾರ್ ಶುಭಾ ಹಾರೈಯಿಸಿದ್ದಾರೆ..
Body:ದೃಶ್ಯ ಸಿನಿಮಾದಲ್ಲಿ ಮೈಂಡ್​ ಗೇಮ್​ ಆಡಿದ್ದ ರವಿಮಾಮ ಆ ದೃಶ್ಯದಲ್ಲಿ ಮರ್ಡರ್ ಮಿಸ್ಟ್ರಿಯನ್ನ ಭೇದಿಸೊಕ್ಕೆ ರೆಡಿಯಾಗಿದ್ದಾರೆ.ಶಿವ ಕಾರ್ತಿಕ್ ಈ ಸಿನಿಮಾವನ್ನ ನಿರ್ದೇಶನ‌ ಮಾಡಿದ್ದಾರೆ...Conclusion:ರವಿಕುಮಾರ್ ಎಂಕೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.