ETV Bharat / sitara

ಶಾಲಾ ಮಕ್ಕಳಿಗೆ ಶೂ ತೊಡಿಸಿದ ಕಿಚ್ಚ! 'ಮಾಣಿಕ್ಯ'ನ ಸಮಾಜಕಾರ್ಯಕ್ಕೆ ಮೆಚ್ಚುಗೆ

'ಅಕ್ಷರ ಅಮೃತ' ಕಾನ್ಸೆಪ್ಟ್ ಅಡಿ ಕಿಚ್ಚ ಸುದೀಪ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಇಂದು ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು. ಸುದೀಪ್ ಅವರ ನಿವಾಸದಲ್ಲೇ ಈ ಕಾರ್ಯಕ್ರಮ ಜರುಗಿದೆ.

author img

By

Published : Jun 7, 2019, 5:02 PM IST

ಕಿಚ್ಚ

ಕಿಚ್ಚ ಸುದೀಪ್​ ಕೇವಲ ಸಿನಿಮಾ ಮಾತ್ರವಲ್ಲ, ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮದೇ ಆದ ಟ್ರಸ್ಟ್​ ಸ್ಥಾಪಿಸಿ ಆ ಸಂಸ್ಥೆಯ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.

ಶಾಲಾ ಮಕ್ಕಳಿಗೆ ಪುಸ್ತಕ, ಶೂ ವಿತರಿಸುತ್ತಿರುವ ಕಿಚ್ಚ

ಇಂದು ಕೂಡಾ ಸುದೀಪ್ ಚಾರಿಟೆಬಲ್ ಟ್ರಸ್ಟ್​ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಶೂ ವಿತರಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಜೆ.ಪಿ ನಗರದ ಸುದೀಪ್ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವತ: ಕಿಚ್ಚ ಸುದೀಪ್ ಪಾಲ್ಗೊಂಡಿದ್ದರು. ತಾವೇ ಮುಂದೆ ನಿಂತು ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಶೂಗಳನ್ನು ವಿತರಿಸಿದ್ದಾರೆ. ಅಲ್ಲದೆ ಕೆಲವೊಂದು ಮಕ್ಕಳ ಕಾಲಿಗೆ ಸುದೀಪ್ ಅವರೇ ಶೂ ಹಾಕಿ ಸರಳತೆ ಮೆರೆದಿದ್ದಾರೆ.

ಪ್ರತಿ ವರ್ಷ ಕಿಚ್ಚ ಚಾರಿಟೆಬಲ್ ಟ್ರಸ್ಟ್​​​​​​​​​​​​ನಿಂದ 'ಅಕ್ಷರ ಅಮೃತ' ಕಾನ್ಸೆಪ್ಟ್ ಅಡಿ ಈ ರೀತಿಯ ಕೆಲಸಗಳು ನಡೆಯುತ್ತವೆ. ಕಿಚ್ಚನ ಈ ಸಮಾಜ ಸೇವೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ,'ಮಾಣಿಕ್ಯ'ನಿಗೆ ಸಲಾಂ ಹೊಡೆದಿದ್ದಾರೆ.

ಕಿಚ್ಚ ಸುದೀಪ್​ ಕೇವಲ ಸಿನಿಮಾ ಮಾತ್ರವಲ್ಲ, ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮದೇ ಆದ ಟ್ರಸ್ಟ್​ ಸ್ಥಾಪಿಸಿ ಆ ಸಂಸ್ಥೆಯ ಮೂಲಕ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ.

ಶಾಲಾ ಮಕ್ಕಳಿಗೆ ಪುಸ್ತಕ, ಶೂ ವಿತರಿಸುತ್ತಿರುವ ಕಿಚ್ಚ

ಇಂದು ಕೂಡಾ ಸುದೀಪ್ ಚಾರಿಟೆಬಲ್ ಟ್ರಸ್ಟ್​ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಶೂ ವಿತರಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಜೆ.ಪಿ ನಗರದ ಸುದೀಪ್ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವತ: ಕಿಚ್ಚ ಸುದೀಪ್ ಪಾಲ್ಗೊಂಡಿದ್ದರು. ತಾವೇ ಮುಂದೆ ನಿಂತು ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಶೂಗಳನ್ನು ವಿತರಿಸಿದ್ದಾರೆ. ಅಲ್ಲದೆ ಕೆಲವೊಂದು ಮಕ್ಕಳ ಕಾಲಿಗೆ ಸುದೀಪ್ ಅವರೇ ಶೂ ಹಾಕಿ ಸರಳತೆ ಮೆರೆದಿದ್ದಾರೆ.

ಪ್ರತಿ ವರ್ಷ ಕಿಚ್ಚ ಚಾರಿಟೆಬಲ್ ಟ್ರಸ್ಟ್​​​​​​​​​​​​ನಿಂದ 'ಅಕ್ಷರ ಅಮೃತ' ಕಾನ್ಸೆಪ್ಟ್ ಅಡಿ ಈ ರೀತಿಯ ಕೆಲಸಗಳು ನಡೆಯುತ್ತವೆ. ಕಿಚ್ಚನ ಈ ಸಮಾಜ ಸೇವೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ,'ಮಾಣಿಕ್ಯ'ನಿಗೆ ಸಲಾಂ ಹೊಡೆದಿದ್ದಾರೆ.

ಕಿಚ್ಚ ಸುದೀಪ್ ಚಾರಿಟೆಬಲ್ ಟ್ರಸ್ಟ್ ನಿಂದ ಶಾಲ ಮಕ್ಕಳಿಗೆ ಪುಸ್ತಕ ಹಾಗೂ ಶೂ ವಿತರಣೆ


ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಾರಿಟೆಬಲ್ ಟ್ರಸ್ಟ್ ನಿಂದ ಶಾಲ ಮಕ್ಕಳಿಗೆ ಪುಸ್ತಕ ಹಾಗೂ ಶೂ ವಿತರಣೆ.ಇಂದು ಬೆಂಗಳೂರಿನ ಜೆಪಿ ನಗರದ ಸುದೀಪ್ ನಿವಾಸದಲ್ಲಿ ನಡೆದ ಕಾರ್ಯಕ್ರಮ.ಕಿಚ್ಚ ಸುದೀಪ್ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವತಃ ಸುದೀಪ್ ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಶೂ ಗಳನ್ನ ವಿತರಿಸಿದ್ದಾರೆ.ಅಲ್ಲದೆ ಸರ್ಕಾರಿ ಶಾಲ ಮಕ್ಕಳಿಗೆ ಸುದೀಪ್ ಅವರೆ ಶೂ ಹಾಕಿ ಸರಳತೆ ಮೆರೆದಿದ್ದಾರೆ.ಪ್ರತೀ ವರ್ಷ ಕಿಚ್ಚ ಚಾರಿಟೆಬಲ್ ಟ್ರಸ್ಟ್ ನಿಂದ ಈ ತರಹದ ಕೆಲಸಗಳು ನಡೆಯುತ್ತವೆ. ಕಿಚ್ಚನ ಈ ಸಮಾಜ ಸೇವೆಗೆ ಅಭಿಮಾನಿ ದೇವೆರುಗಳು ಮಾಣಿಕ್ಯನಿಗೆ ಸಲಾಂ ಹೊಡೆದಿದ್ದಾರೆ.ಇನ್ನೂ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಅಡಿಯಲ್ಲಿ ಅಕ್ಚರ ಅಮೃತ ಎಂಬ ಕಾನ್ಸೆಪ್ಟ್ ನಲ್ಲಿ ಕಿಚ್ಚ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡ್ತಿರುವ ಬಡಮಕ್ಕಳಿಗೆ ಶೂ ಹಾಗೂ ಪುಸ್ತಕ ನೀಡಿ ಅವರ ವಿದ್ಯಾಭ್ಯಾಸಕ್ಕೆ ಅಸರೆಯಾಗಿದ್ದು.ಇತರರಿಗೆ ಮಾದರಿಯಾಗಿದ್ದಾರೆ ಈ ಮಾಣಿಕ್ಯ....


ಸತೀಶ ಎಂಬಿ.



For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.