ETV Bharat / sitara

ಚಿತ್ರೀಕರಣ ಮುಗಿಸಿದ ‘ಬಿಚ್ಚುಗತ್ತಿ ಭರಮಣ್ಣ ನಾಯಕ‘

author img

By

Published : May 1, 2019, 11:14 AM IST

ಕನ್ನಡ ಚಿತ್ರರಂಗದಲ್ಲಿ ಚರಿತ್ರೆಯ ಪುಟಗಳನ್ನು ತಿರುವು ಹಾಕುವ ಪ್ರಯತ್ನ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಇದಕ್ಕೆ ಪೂರಕವೆನ್ನುವಂತೆ ಸಾಕಷ್ಟು ಐತಿಹಾಸಿಕ, ಪೌರಾಣಿಕ ಸಿನಿಮಾಗಳು ಕನ್ನಡದಲ್ಲಿ ತಯಾರಾಗಿವೆ. ಅದರಲ್ಲಿ ‘ಬಿಚ್ಚುಗತ್ತಿ ಭರಮಣ್ಣ ನಾಯಕ’ ಕೂಡಾ ಒಂದು.

ರಾಜವರ್ಧನ್, ಹರಿಪ್ರಿಯ

ಚಿತ್ರದುರ್ಗದ ಮದಕರಿ ನಾಯಕ ವಂಶದ ‘ಬಿಚ್ಚುಗತ್ತಿ ಭರಮಣ್ಣ ನಾಯಕ’ ಕುರಿತಾದ ಸಿನಿಮಾದಲ್ಲಿ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಅವರ ಮೊದಲ ಐತಿಹಾಸಿಕ ಸಿನಿಮಾ. ಕಳೆದ ವರ್ಷ ಡಿಸೆಂಬರ್​​ನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಈಗ ಶೂಟಿಂಗ್ ಮುಕ್ತಾಯವಾಗಿದೆ. ಹೆಸರಾಂತ ಕಾದಂಬರಿಕಾರ ಬಿ.ಎಲ್​​. ವೇಣು ಅವರ ಕಾದಂಬರಿ ಆಧಾರಿತ ‘ಬಿಚ್ಚುಗತ್ತಿ ಭರಮಣ್ಣ ನಾಯಕ‘ ಎರಡು ಭಾಗಗಳಲ್ಲಿ ತಯಾರಾಗಿ ತೆರೆ ಮೇಲೆ ಬರುತ್ತಿದೆ.

bichugatti
‘ಬಿಚ್ಚುಗತ್ತಿ ಭರಮಣ್ಣ ನಾಯಕ‘

ಚಿತ್ರದುರ್ಗ ಸೀಮೆಯ ಪಾಳೆಗಾರ ಭರಮಣ್ಣ ನಾಯಕನ ಕಥೆಯನ್ನು ಸಿನಿಮಾ ಹೊಂದಿದೆ. 13 ಪಾಳೆಗಾರರ ಪೈಕಿ ಒಬ್ಬರಾದ ಭರಮಣ್ಣ ನಾಯಕ 1675ರಿಂದ 1685 ಅವಧಿಯಲ್ಲಿ ಇದ್ದಂತವರು. ಚಿತ್ರದ ಮೊದಲ ಭಾಗದಲ್ಲಿ ದಳವಾಯಿ ದಂಗೆ ಕುರಿತು ಹೇಳಲಾಗಿದೆ.

Rajvardhan
ರಾಜವರ್ಧನ್​​

ಈ ಸಿನಿಮಾದಲ್ಲಿ ಹರಿಪ್ರಿಯ ಸಿದ್ದಾಂಬೆ ಎಂಬ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಬಹುತೇಕ ವೈವಿಧ್ಯಮಯ ಪಾತ್ರಗಳನ್ನು ಪ್ರೇಕ್ಷಕರು ನೋಡಬಹುದು ಎಂದು ನಿರ್ದೇಶಕ ಹರಿ ಸಂತೋಷ್ ಹೇಳುತ್ತಾರೆ. ಶ್ರೀ ಕೃಷ್ಣ ಪ್ರೊಡಕ್ಷನ್ ಅಡಿ ನಿರ್ಮಾಣ ಆಗಿರುವ ಸಿನಿಮಾದಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಕರ್, ಹಿರಿಯ ನಟ ಶ್ರೀನಿವಾಸ್ ಮೂರ್ತಿ, ಕಲ್ಯಾಣಿ, ಶಿವರಾಮಣ್ಣ, ರೇಖಾ, ರಮೇಶ್ ಪಂಡಿತ್​​​ ನಟಿಸಿದ್ದಾರೆ. ಎಡ್ವರ್ಡ್ ಕೆನಡಿ ಕಲಾ ನಿರ್ದೇಶನವಿರುವ ಸಿನಿಮಾ ಹಾಡುಗಳಿಗೆ ನಾದಬ್ರಹ್ಮ ಹಂಸಲೇಖ ಸಂಗೀತ ನೀಡಿದ್ದಾರೆ.

ಚಿತ್ರದುರ್ಗದ ಮದಕರಿ ನಾಯಕ ವಂಶದ ‘ಬಿಚ್ಚುಗತ್ತಿ ಭರಮಣ್ಣ ನಾಯಕ’ ಕುರಿತಾದ ಸಿನಿಮಾದಲ್ಲಿ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಅವರ ಮೊದಲ ಐತಿಹಾಸಿಕ ಸಿನಿಮಾ. ಕಳೆದ ವರ್ಷ ಡಿಸೆಂಬರ್​​ನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಈಗ ಶೂಟಿಂಗ್ ಮುಕ್ತಾಯವಾಗಿದೆ. ಹೆಸರಾಂತ ಕಾದಂಬರಿಕಾರ ಬಿ.ಎಲ್​​. ವೇಣು ಅವರ ಕಾದಂಬರಿ ಆಧಾರಿತ ‘ಬಿಚ್ಚುಗತ್ತಿ ಭರಮಣ್ಣ ನಾಯಕ‘ ಎರಡು ಭಾಗಗಳಲ್ಲಿ ತಯಾರಾಗಿ ತೆರೆ ಮೇಲೆ ಬರುತ್ತಿದೆ.

bichugatti
‘ಬಿಚ್ಚುಗತ್ತಿ ಭರಮಣ್ಣ ನಾಯಕ‘

ಚಿತ್ರದುರ್ಗ ಸೀಮೆಯ ಪಾಳೆಗಾರ ಭರಮಣ್ಣ ನಾಯಕನ ಕಥೆಯನ್ನು ಸಿನಿಮಾ ಹೊಂದಿದೆ. 13 ಪಾಳೆಗಾರರ ಪೈಕಿ ಒಬ್ಬರಾದ ಭರಮಣ್ಣ ನಾಯಕ 1675ರಿಂದ 1685 ಅವಧಿಯಲ್ಲಿ ಇದ್ದಂತವರು. ಚಿತ್ರದ ಮೊದಲ ಭಾಗದಲ್ಲಿ ದಳವಾಯಿ ದಂಗೆ ಕುರಿತು ಹೇಳಲಾಗಿದೆ.

Rajvardhan
ರಾಜವರ್ಧನ್​​

ಈ ಸಿನಿಮಾದಲ್ಲಿ ಹರಿಪ್ರಿಯ ಸಿದ್ದಾಂಬೆ ಎಂಬ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಬಹುತೇಕ ವೈವಿಧ್ಯಮಯ ಪಾತ್ರಗಳನ್ನು ಪ್ರೇಕ್ಷಕರು ನೋಡಬಹುದು ಎಂದು ನಿರ್ದೇಶಕ ಹರಿ ಸಂತೋಷ್ ಹೇಳುತ್ತಾರೆ. ಶ್ರೀ ಕೃಷ್ಣ ಪ್ರೊಡಕ್ಷನ್ ಅಡಿ ನಿರ್ಮಾಣ ಆಗಿರುವ ಸಿನಿಮಾದಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಕರ್, ಹಿರಿಯ ನಟ ಶ್ರೀನಿವಾಸ್ ಮೂರ್ತಿ, ಕಲ್ಯಾಣಿ, ಶಿವರಾಮಣ್ಣ, ರೇಖಾ, ರಮೇಶ್ ಪಂಡಿತ್​​​ ನಟಿಸಿದ್ದಾರೆ. ಎಡ್ವರ್ಡ್ ಕೆನಡಿ ಕಲಾ ನಿರ್ದೇಶನವಿರುವ ಸಿನಿಮಾ ಹಾಡುಗಳಿಗೆ ನಾದಬ್ರಹ್ಮ ಹಂಸಲೇಖ ಸಂಗೀತ ನೀಡಿದ್ದಾರೆ.

ಬಿಚ್ಚುಗತ್ತಿ ಮುಗೀತು ಚಿತ್ರೀಕರಣ

 

ಕನ್ನಡ ಚಿತ್ರರಂಗದಲ್ಲಿ  ಚರಿತ್ರಿಯೆ ಪುಟಗಳನ್ನು ತಿರುವು ಹಾಕುವ ಸಮಯ ಆಗಾಗ್ಗೆ ನಡೆಯುತ್ತಲೆ ಇರುತ್ತದೆ.

 

ಈಗ ಚಿತ್ರದುರ್ಗದ ಮದಕರಿ ವಂಶದ ಬಿಚ್ಚುಗತ್ತಿ ಭರಮಣ್ಣ ನಾಯಕ ಕುರಿತಾದ ಸಿನಿಮಾ ರಾಜವರ್ಧನ ಅವರ ಮೊದಲ ಐತಿಹಾಸಿಕ ಸಿನಿಮಾ ಚಿತ್ರೀಕರಣ ಸಂಪೂರ್ಣವಾಗಿದೆ. ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಈ ಚಿತ್ರ ಪ್ರಾರಂಭ ಆಗಿತ್ತು.

 

ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮದಕರಿ ನಾಯಕ ಸಿನಿಮಕ್ಕೂ ಮುಂಚೆ ಅವರ ಪೂರ್ವಿಕರ ಸಿನಿಮಾ ಇದು ಬಿಚ್ಚುಗತ್ತಿ ಭರಮಣ್ಣ ನಾಯಕ ಸಿನಿಮಾ ತೆರೆ ಮೇಲೆ ಬರುತ್ತಿದೆ.

 

ಹೆಸರಾಂತ ಕಾದಂಬರಿಕಾರ ಬಿ ಎಲ್ ವೇಣು ಅವರ ಚಿತ್ರಕಥೆ ಅವರದೇ ಆದ ಬಿಚ್ಚುಗತ್ತಿ ಭರಮಣ್ಣ ನಾಯಕ ಕಾದಂಬರಿ ಆಧಾರಿತ ಚಿತ್ರ. ಇದು ಸಹ ಭಾಗ 1 ಹಾಗೂ ಭಾಗ 2 ಆಗಿ ತೆರೆಯ ಮೇಲೆ ಬರಲಿದೆ.

 

ಮೋಹಕ ತಾರೆ ಹರಿಪ್ರಿಯಾ ನಾಯಕಿ ಸಿದ್ದಾಂಬೆ ಪಾತ್ರ ನಿರ್ವಹಿಸಿದ್ದಾರೆ. ಬಹುತೇಕ ವೈವಿಧ್ಯಮಯ ಪಾತ್ರಗಳನ್ನು ಪ್ರೇಕ್ಷಕರು ನೋಡಬಹುದು ಎಂದು ನಿರ್ದೇಶಕ ಹರಿ ಸಂತೋಷ್ ಹೇಳುತ್ತಾರೆ. ಬಾಹುಬಲಿ ಪ್ರಭಾಕರ್ ಅಲ್ಲದೆ ಕನ್ನಡ ಹಿರಿಯ ನಟರುಗಳಾದ ಶ್ರೀನಿವಾಸಮೂರ್ತಿ, ಕಲ್ಯಾಣಿ, ಶಿವರಾಮಣ್ಣ, ರೇಖ, ರಮೇಶ್ ಪಂಡಿತ್ ತಾರಗಣದಲ್ಲಿದ್ದಾರೆ.

ಶ್ರೀ ಕೃಷ್ಣ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾಕ್ಕೆ ಸಂಕಲನ ಕೆ ಎಂ ಪ್ರಕಾಶ್, ಎಡ್ವರ್ಡ್ ಕೆನಡಿ ಕಲಾ ನಿರ್ದೇಶನ, ನಾದ ಬ್ರಹ್ಮ ಹಂಸಲೇಖೆ ಸಂಗೀತ ಒದಗಿಸಿದ್ದಾರೆ.

 

ಭರಮಣ್ಣ ನಾಯಕ ಚಿತ್ರದುರ್ಗದ ಇತಿಹಾಸದಲ್ಲಿ 13 ಪಾಳೆಗಾರರ ಪೈಕಿ ಒಬ್ಬರು. 1675 ರಿಂದ 1685 ವರೆಗೆ ಪಾಳೇಗಾರ ಅದವರು. 

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.