ETV Bharat / sitara

ನಾನು, ಅನುಷ್ಕಾ ಶೆಟ್ಟಿ ಬೆಸ್ಟ್​​ ಫ್ರೆಂಡ್ಸ್​ ಅಷ್ಟೆ... ಮತ್ತೆ ಅಭಿಮಾನಿಗಳ ಬಾಯಿ ಮುಚ್ಚಿಸಿದ ಪ್ರಭಾಸ್​​

author img

By

Published : Aug 17, 2019, 10:45 AM IST

Updated : Aug 17, 2019, 10:57 AM IST

ಬಾಹುಬಲಿ ಜೋಡಿ ಪ್ರಭಾಸ್, ಅನುಷ್ಕಾ ಶೆಟ್ಟಿ ಮದುವೆಯಾಗ್ತಾರೆ ಎಂದು ಹರಿದಾಡುತ್ತಿದ್ದ ಸುದ್ದಿಗೆ ಪ್ರಭಾಸ್​ ಸ್ಪಷ್ಟನೆ ಕೊಟ್ಟಿದ್ದಾರೆ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದು ತಿಳಿಸಿದ್ದಾರೆ.

Anushka and I are very good friends: clarify Prabhas

ಬಾಹುಬಲಿ ಜೋಡಿ ಪ್ರಭಾಸ್, ಅನುಷ್ಕಾ ಶೆಟ್ಟಿ ಮದುವೆಯಾಗ್ತಾರೆ... ಅಮೆರಿಕದಲ್ಲಿ ಮನೆ ಖರೀದಿಸಿದ್ದಾರೆ ಎನ್ನುವ ಸುದ್ದಿ ಭಾರಿ ಸದ್ದು ಮಾಡಿತ್ತು. ಈ ಸುದ್ದಿ ದೇಶಾದ್ಯಂತ ಸಾಕಷ್ಟು ಚರ್ಚೆಯಾಗಿತ್ತು. ಆದರೆ, ಈ ಸಂಬಂಧವನ್ನು ಪ್ರಭಾಸ್ ನಿರಾಕರಿಸಿದ್ದು, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಅಭಿಮಾನಿಗಳ ಬಾಯಿ ಮುಚ್ಚಿಸಿದ್ದಾರೆ.

ಪ್ರಭಾಸ್​ ಮತ್ತು ಅನುಷ್ಕಾ ಶೆಟ್ಟಿ ಅವರನ್ನು ಡ್ರೀಮ್​ ಕಪಲ್​ ಎಂದೇ ಊಹಿಸಿಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ಸಾಹೋ ಚಿತ್ರದ ಪ್ರಮೋಷನ್ಸ್​ ವೇಳೆ ಮುಂಬೈನಲ್ಲಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಈ ನಾನು ಮತ್ತು ಅನುಷ್ಕಾ ಶೆಟ್ಟಿ ತುಂಬಾ ಒಳ್ಳೆ ಸ್ನೇಹಿತರು ಎಂದು ಸ್ಪಷ್ಟಪಡಿಸಿದ್ದಾರೆ.

ಬಾಹುಬಲಿ ಸಿನಿಮಾ ಮುಗಿದ ಬಳಿಕ ನಾನು ಅನುಷ್ಕಾರನ್ನು ಭೇಟಿಯಾಗಲೇ ಇಲ್ಲ. ಹಾಗಾದರೆ ನಾವಿಬ್ಬರೂ ಜೊತೆಯಲ್ಲೇ ಕಾಣಿಸಕೊಳ್ಳಬೇಕಾಗಿತ್ತಲ್ಲವೇ? ನಾವಿಬ್ಬರೂ ಭೇಟಿಯಾಗಿ ಎರಡು ವರ್ಷವಾಗಿದೆ. ಈ ಬಗ್ಗೆ ಕರುಣ್​ ಜೋಹಾರ್​ ಕೂಡ ಕೇಳಿದ್ದರು. ಆಗ ರಾಣಾ, ರಾಜಮೌಳಿ, ನಮ್ಮಿಬ್ಬರ ಮಧ್ಯೆ ಏನಿಲ್ಲ ಎಂಬುದನ್ನು ತಿಳಿಸಿದ್ದಾರೆ. ಮದುವೆಯಾಗ್ತೇವೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದ್ದಾರೆ.

ಪ್ರಭಾಸ್​ ಮತ್ತು ಅನುಷ್ಕಾ ಒಟ್ಟಿಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಾರ್ಲಿಂಗ್​, ಮಿರ್ಚಿ ಮತ್ತು ಬಾಹುಬಲಿ ಎರಡು ಭಾಗಗಳಲ್ಲಿ ಈ ಜೋಡಿ ಮಿಂಚಿದೆ. ಅಲ್ಲದೆ, ಎಲ್ಲ ಚಿತ್ರಗಳಲ್ಲೂ ಅವರ ಕೆಮಿಸ್ಟ್ರಿ ಅದ್ಭುತವಾಗಿ ವರ್ಕೌಟ್​ ಆಗಿದೆ. ಆದ್ದರಿಂದ ಇವರಿಬ್ಬರೂ ಪ್ರೀತಿಸುತ್ತಿದ್ದು, ಮದುವೆಯಾಗಲಿದ್ದಾರೆ ಎಂದು ರೂಮರ್ಸ್ ಹಬ್ಬಿತ್ತು.

ಪ್ರಭಾಸ್​ 'ಸಾಹೋ' ಚಿತ್ರದ ಪ್ರಮೋಷನ್ಸ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಸುಜೀತ್​ ನಿರ್ದೇಶಿಸಿದ್ದು, ಇದೇ ಮೊದಲ ಬಾರಿಗೆ ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ತೆಲುಗಿಗೆ ಕಾಲಿಟ್ಟಿದ್ದಾರೆ. ಇತ್ತ ಅನುಷ್ಕಾ 'ನಿಶಬ್ದಂ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೇಮಂತ್​ ಮಧುಕರ್​ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಾಹುಬಲಿ ಜೋಡಿ ಪ್ರಭಾಸ್, ಅನುಷ್ಕಾ ಶೆಟ್ಟಿ ಮದುವೆಯಾಗ್ತಾರೆ... ಅಮೆರಿಕದಲ್ಲಿ ಮನೆ ಖರೀದಿಸಿದ್ದಾರೆ ಎನ್ನುವ ಸುದ್ದಿ ಭಾರಿ ಸದ್ದು ಮಾಡಿತ್ತು. ಈ ಸುದ್ದಿ ದೇಶಾದ್ಯಂತ ಸಾಕಷ್ಟು ಚರ್ಚೆಯಾಗಿತ್ತು. ಆದರೆ, ಈ ಸಂಬಂಧವನ್ನು ಪ್ರಭಾಸ್ ನಿರಾಕರಿಸಿದ್ದು, ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಅಭಿಮಾನಿಗಳ ಬಾಯಿ ಮುಚ್ಚಿಸಿದ್ದಾರೆ.

ಪ್ರಭಾಸ್​ ಮತ್ತು ಅನುಷ್ಕಾ ಶೆಟ್ಟಿ ಅವರನ್ನು ಡ್ರೀಮ್​ ಕಪಲ್​ ಎಂದೇ ಊಹಿಸಿಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ಸಾಹೋ ಚಿತ್ರದ ಪ್ರಮೋಷನ್ಸ್​ ವೇಳೆ ಮುಂಬೈನಲ್ಲಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಈ ನಾನು ಮತ್ತು ಅನುಷ್ಕಾ ಶೆಟ್ಟಿ ತುಂಬಾ ಒಳ್ಳೆ ಸ್ನೇಹಿತರು ಎಂದು ಸ್ಪಷ್ಟಪಡಿಸಿದ್ದಾರೆ.

ಬಾಹುಬಲಿ ಸಿನಿಮಾ ಮುಗಿದ ಬಳಿಕ ನಾನು ಅನುಷ್ಕಾರನ್ನು ಭೇಟಿಯಾಗಲೇ ಇಲ್ಲ. ಹಾಗಾದರೆ ನಾವಿಬ್ಬರೂ ಜೊತೆಯಲ್ಲೇ ಕಾಣಿಸಕೊಳ್ಳಬೇಕಾಗಿತ್ತಲ್ಲವೇ? ನಾವಿಬ್ಬರೂ ಭೇಟಿಯಾಗಿ ಎರಡು ವರ್ಷವಾಗಿದೆ. ಈ ಬಗ್ಗೆ ಕರುಣ್​ ಜೋಹಾರ್​ ಕೂಡ ಕೇಳಿದ್ದರು. ಆಗ ರಾಣಾ, ರಾಜಮೌಳಿ, ನಮ್ಮಿಬ್ಬರ ಮಧ್ಯೆ ಏನಿಲ್ಲ ಎಂಬುದನ್ನು ತಿಳಿಸಿದ್ದಾರೆ. ಮದುವೆಯಾಗ್ತೇವೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದ್ದಾರೆ.

ಪ್ರಭಾಸ್​ ಮತ್ತು ಅನುಷ್ಕಾ ಒಟ್ಟಿಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಾರ್ಲಿಂಗ್​, ಮಿರ್ಚಿ ಮತ್ತು ಬಾಹುಬಲಿ ಎರಡು ಭಾಗಗಳಲ್ಲಿ ಈ ಜೋಡಿ ಮಿಂಚಿದೆ. ಅಲ್ಲದೆ, ಎಲ್ಲ ಚಿತ್ರಗಳಲ್ಲೂ ಅವರ ಕೆಮಿಸ್ಟ್ರಿ ಅದ್ಭುತವಾಗಿ ವರ್ಕೌಟ್​ ಆಗಿದೆ. ಆದ್ದರಿಂದ ಇವರಿಬ್ಬರೂ ಪ್ರೀತಿಸುತ್ತಿದ್ದು, ಮದುವೆಯಾಗಲಿದ್ದಾರೆ ಎಂದು ರೂಮರ್ಸ್ ಹಬ್ಬಿತ್ತು.

ಪ್ರಭಾಸ್​ 'ಸಾಹೋ' ಚಿತ್ರದ ಪ್ರಮೋಷನ್ಸ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಸುಜೀತ್​ ನಿರ್ದೇಶಿಸಿದ್ದು, ಇದೇ ಮೊದಲ ಬಾರಿಗೆ ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ತೆಲುಗಿಗೆ ಕಾಲಿಟ್ಟಿದ್ದಾರೆ. ಇತ್ತ ಅನುಷ್ಕಾ 'ನಿಶಬ್ದಂ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೇಮಂತ್​ ಮಧುಕರ್​ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Intro:2019ನೇ ಸಾಲಿನ ಅತ್ಯುತ್ತಮ ಬಾಲಸನಟ ರಾಷ್ಟ್ರ
ಪ್ರಶಸ್ತಿಯನ್ನು ರಾಮ ರಾಮ ರೇ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್ ನಿರ್ದೇಶನದ ಒಂದಲ್ಲ-ಎರಡಲ್ಲ ಚಿತ್ರದಲ್ಲಿ ನಟಿಸಿದ್ದ ಬಾಲ ನಟ ಮಾಸ್ಟರ್ ರೋಹಿತ್.ಗೆ ಲಭಿಸಿದೆ. ಹಲವಾರು ಬಾಲ ನಟರನ್ನು ಹಿಂದಿಕ್ಕಿ ಈ ಪುಟ್ಟ ಪೋರ ರಾಷ್ಟ್ರ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾನೆ. ಇನ್ನು ನಿರ್ದೇಶಕ ಸತ್ಯಪ್ರಕಾಶ್ ಈ ಚಿತ್ರಕ್ಕಾಗಿ ಸಾವಿರಾರು ಮಕ್ಕಳನ್ನು ಆಡಿಷನ್ ಮಾಡಿ ಈ ಪುಟ್ಟ ಪೋರನನ್ನು ಸೆಲೆಕ್ಟ್ ಮಾಡಿದರು. ಚಿತ್ರದಲ್ಲಿ ಮಾಸ್ಟರ್ ರೋಹಿತ್ ನಿರ್ದೇಶಕರ ಆ ಕನಸಿನ ಪಾತ್ರಕ್ಕೆ ಜೀವ ತುಂಬಿದ್ದ, ಈ ಪುಟ್ಟ ಪೋರನಿಗೆ ಸಿನಿಮಾ ಕ್ಷೇತ್ರದ ದೇಶದ ಅತ್ಯುನ್ನತ ಗೌರವ ಲಭಿಸಿದ್ದು. ರಾಷ್ಟ್ರಪ್ರಶಸ್ತಿ ಬಾಚಿಕೊಂಡ ಪುಟ್ಟ ಪೋರ ಮಾಸ್ಟರ್ ರೋಹಿತ್ ಈಟಿವಿ ಭಾರತ್ ಜೊತೆ ಸಂತಸ ಹಚಿಕೊಂಡಿದ್ದಾನೆ. ರಾಷ್ಟ್ರಪ್ರಶಸ್ತಿ ಬಂದಿರುವುದಕ್ಕೆ ತುಂಬಾ ಸಂತೋಷವನ್ನು ವ್ಯಕ್ತಪಡಿಸಿದ ಮಾಸ್ಟರ್ ರೋಹಿತ್, ಒಂದಲ್ಲ ಎರಡು ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ಮಾಡಿಕೊಟ್ಟ ನಿರ್ದೇಶಕರು ಹಾಗೂ ಆತನಿಗೆ ಬೆನ್ನೆಲುಬಾಗಿ ನಿಂತ ತಂದೆ-ತಾಯಿಗಳಿಗೆ ಕೃತಜ್ಞತೆಗಳನ್ನು ಅರ್ಪಿಸಿದ. ಅಲ್ಲದೆ ರಾಷ್ಟ್ರಪ್ರಶಸ್ತಿ ಬಂದ ವಿಷ್ಯ ಮಾಸ್ಟರ್ ರೋಹಿತ್ ಗೆ ಗೊತ್ತೆ ಇರಲಿಲ್ಲವಂತೆ.


Body:ಅವರ ಸಂಬಂಧಿಯೊಬ್ಬರು ಫೋನ್ ಮಾಡಿ ಹೇಳಿದಾಗ ಮೊದಲಿಗೆ ಅದನ್ನು ನಂಬೆ ಇರಲಿಲ್ಲವಂತೆ. ಇಂವ ರಾಷ್ಟ್ರಪ್ರಶಸ್ತಿ ಬಂದ ವಿಚಾರವನ್ನು ನಿರ್ದೇಶಕ ಸತ್ಯಪ್ರಕಾಶ್ ಅವರು ಅವರಿಗೆ ಕಾಲ್ ಮಾಡಿ ತಿಳಿಸಿದಾಗ ತುಂಬಾ ಸಂತಸವಾಯಿತು. ನನಗೆ ಈ ಚಿತ್ರದಲ್ಲಿ ನಡೆಸಿರುವುದಕ್ಕೆ ರಾಜ್ಯಪ್ರಶಸ್ತಿ ಕೂಡ ಬರುವುದಿಲ್ಲ ಅಂದುಕೊಂಡಿದ್ದೆ ಆದರೆ ನನಗೆ ಈಗ ರಾಷ್ಟ್ರ ಪ್ರಶಸ್ತಿ ಲಭಿಸಿದೆ ನನಗೆ ತುಂಬಾ ಖುಷಿಯಾಗಿದೆ ಎಂದು ಈಟಿವಿ ಭಾರತ್ ಗೆ ಹೇಳಿದಮಾಸ್ಟರ್ ಮಾಸ್ಟರ್ ರೋಹಿತ್ ತನಗೆ ಸದಾ ಬೆಂಬಲವಾಗಿ ನಿಂತಿದ್ದ ಅಕ್ಕ ಪ್ರಜ್ಞಾ ರಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ. ಅಲ್ಲದೆ ರಾಷ್ಟ್ರ ಪ್ರಶಸ್ತಿ ಬಂದ ನಂತರ ತನ್ನ ಸ್ನೇಹಿತರು ಹಾಗೂ ಶಾಲೆಯಲ್ಲಿ ಅವರ ಶಿಕ್ಷಕರು ಸಹ ವಿಶೇಷವಾಗಿ ವಿಶ್ ಮಾಡಿದ್ರು ಎಂದು ಮಾಸ್ಟರ್ ರೋಹಿತ್ ತನ್ನ ಸಂತಸವನ್ನು ಈಟಿವಿ ಭಾರತ ಅಂಚಿ ಕೊಂಡ.


ಸತೀಶ ಎಂಬಿ


Conclusion:
Last Updated : Aug 17, 2019, 10:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.