ETV Bharat / sitara

'ಅಮರ್​'ಗಾಗಿ 'ಅಂತ' ಮುಂದೂಡಿದ ಚಿತ್ರತಂಡ - undefined

80ರ ದಶಕದ ಸೂಪರ್‌ಹಿಟ್ ಸಿನಿಮಾ 'ಅಂತ' ಸಿನಿಮಾದಿಂದಲೇ ಅಂಬರೀಶ್ ಅವರಿಗೆ ರೆಬೆಲ್ ಸ್ಟಾರ್ ಪಟ್ಟ ಸಿಕ್ಕಿದ್ದು. ಇಂದು 'ಅಂತ' ರೀ ರಿಲೀಸ್ ಆಗಬೇಕಿತ್ತು. ಆದ್ರೆ, ಮೇ 31 ಕ್ಕೆ ಅಭಿಷೇಕ್‌ ಅಭಿನಯದ 'ಅಮರ್' ಚಿತ್ರ ರಿಲೀಸ್ ಆಗುತ್ತಿರುವುದರಿಂದ, ಅಪ್ಪ ಮಕ್ಕಳ ಸಿನಿಮಾ ಕ್ಲಾಶ್ ಆಗಬಾರದು ಅನ್ನೋ ಕಾರಣಕ್ಕೆ ಸಿನಿಮಾ ಬಿಡುಗಡೆ 10 ದಿನಗಳ ಕಾಲ ಮುಂದಕ್ಕೆ ಹೋಗಿದೆ.

ರಾಜೇಂದ್ರಸಿಂಗ್ ಬಾಬು
author img

By

Published : May 30, 2019, 8:19 AM IST

ಬೆಂಗಳೂರು : ರೆಬೆಲ್ ಸ್ಟಾರ್ ಅಂಬರೀಶ್ ಅವರ 67ನೇ ಹುಟ್ಟು ಹಬ್ಬದ ಸಂಭ್ರಮದ ವೇಳೆ ಅಭಿಮಾನಿಗಳಿಗೆ ನಿರಾಸೆಯಾಗದಿರಲಿ ಎಂದು ಅಂಬಿ ಅಭಿನಯದ ಎವರ್‌ಗ್ರೀನ್ 'ಅಂತ' ಚಿತ್ರ ರೀ ರಿಲೀಸ್ ಅಗುತ್ತೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬಂದಿತ್ತು. ಅದ್ರೆ, ಇಂದು 'ಅಂತ' ಸಿನಿಮಾ ರೀ ರಿಲೀಸ್ ಆಗದೆ ಅವರ ಅಭಿಮಾನಿಗಳಿಗೆ ಬೇಸರವಾಗಿದ್ದು,ಚಿತ್ರ ಬಿಡುಗಡೆಯಾಗದಿರುವುದಕ್ಕೆ ಕಾರಣ ನೀಡಲಾಗಿದೆ.

ನಿನ್ನೆ ಅಂಬಿ‌ ಹುಟ್ಟು ಹಬ್ಬದ ಪ್ರಯುಕ್ತ ಅಂಬಿ ಸಮಾಧಿ ಬಳಿ ಬಂದಿದ್ದ ರಾಜೇಂದ್ರಸಿಂಗ್ ಬಾಬು ಅವರು ಮಾಧ್ಯಮಗಳ ಜೊತೆ ಮಾತನಾಡಿ, ಅಂತ ಚಿತ್ರದ ಕೆಲವು ಅನುಭವಗಳ ಹಂಚಿಕೊಂಡ್ರು. 80ರ ದಶಕದ ಸೂಪರ್ ಹಿಟ್ ಸಿನಿಮಾ 'ಅಂತ' ಅಂಬರೀಶ್‌ಗೆ ರೆಬೆಲ್ ಸ್ಟಾರ್ ಪಟ್ಟ ಕೊಟ್ಟಿತ್ತು. ಇಂದು ಅಂತ ರೀ ರಿಲೀಸ್ ಆಗಬೇಕಿತ್ತು. ಆದ್ರೆ, ಮೇ 31 ಕ್ಕೆ ಅಭಿಷೇಕ್‌ ಅಭಿನಯದ ಅಮರ್ ಚಿತ್ರ ರಿಲೀಸ್ ಆಗುತ್ತಿರುವುದರಿಂದ ಅಪ್ಪ ಮಕ್ಕಳ ಸಿನಿಮಾ ಕ್ಲಾಶ್ ಆಗಬಾರದು ಎಂದು ಹತ್ತು ದಿನಗಳ ಕಾಲ ಮುಂದಕ್ಕೆ ಹೋಗಿದೆ ಅಷ್ಟೆ ಎಂದು ಹೇಳಿದರು.

ರಾಜೇಂದ್ರಸಿಂಗ್ ಬಾಬು

ಆ ಕಾಲದಲ್ಲಿ ಅಂತ ಸಿನಿಮಾ ರಿಲೀಸ್ ಆದಾಗ, ‌ಪಾರ್ಲಿಮೆಂಟ್‌ನಲ್ಲಿ ಸಿನಿಮಾದ ಕುರಿತು ಚರ್ಚೆಯಾಗಿತ್ತು. ಈ ಸಿನಿಮಾದ ನಂತರ ಅಂಬಿ ರೆಬೆಲ್ ಸ್ಟಾರ್ ಆಗಿ ಮಿಂಚಿದರು ಎಂದು ರಾಜೇಂದ್ರ ಸಿಂಗ್ ಬಾಬು ಹಳೆ ನೆನಪುಗಳನ್ನು ಮೆಲುಕುಹಾಕಿದ್ರು.

ಬೆಂಗಳೂರು : ರೆಬೆಲ್ ಸ್ಟಾರ್ ಅಂಬರೀಶ್ ಅವರ 67ನೇ ಹುಟ್ಟು ಹಬ್ಬದ ಸಂಭ್ರಮದ ವೇಳೆ ಅಭಿಮಾನಿಗಳಿಗೆ ನಿರಾಸೆಯಾಗದಿರಲಿ ಎಂದು ಅಂಬಿ ಅಭಿನಯದ ಎವರ್‌ಗ್ರೀನ್ 'ಅಂತ' ಚಿತ್ರ ರೀ ರಿಲೀಸ್ ಅಗುತ್ತೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬಂದಿತ್ತು. ಅದ್ರೆ, ಇಂದು 'ಅಂತ' ಸಿನಿಮಾ ರೀ ರಿಲೀಸ್ ಆಗದೆ ಅವರ ಅಭಿಮಾನಿಗಳಿಗೆ ಬೇಸರವಾಗಿದ್ದು,ಚಿತ್ರ ಬಿಡುಗಡೆಯಾಗದಿರುವುದಕ್ಕೆ ಕಾರಣ ನೀಡಲಾಗಿದೆ.

ನಿನ್ನೆ ಅಂಬಿ‌ ಹುಟ್ಟು ಹಬ್ಬದ ಪ್ರಯುಕ್ತ ಅಂಬಿ ಸಮಾಧಿ ಬಳಿ ಬಂದಿದ್ದ ರಾಜೇಂದ್ರಸಿಂಗ್ ಬಾಬು ಅವರು ಮಾಧ್ಯಮಗಳ ಜೊತೆ ಮಾತನಾಡಿ, ಅಂತ ಚಿತ್ರದ ಕೆಲವು ಅನುಭವಗಳ ಹಂಚಿಕೊಂಡ್ರು. 80ರ ದಶಕದ ಸೂಪರ್ ಹಿಟ್ ಸಿನಿಮಾ 'ಅಂತ' ಅಂಬರೀಶ್‌ಗೆ ರೆಬೆಲ್ ಸ್ಟಾರ್ ಪಟ್ಟ ಕೊಟ್ಟಿತ್ತು. ಇಂದು ಅಂತ ರೀ ರಿಲೀಸ್ ಆಗಬೇಕಿತ್ತು. ಆದ್ರೆ, ಮೇ 31 ಕ್ಕೆ ಅಭಿಷೇಕ್‌ ಅಭಿನಯದ ಅಮರ್ ಚಿತ್ರ ರಿಲೀಸ್ ಆಗುತ್ತಿರುವುದರಿಂದ ಅಪ್ಪ ಮಕ್ಕಳ ಸಿನಿಮಾ ಕ್ಲಾಶ್ ಆಗಬಾರದು ಎಂದು ಹತ್ತು ದಿನಗಳ ಕಾಲ ಮುಂದಕ್ಕೆ ಹೋಗಿದೆ ಅಷ್ಟೆ ಎಂದು ಹೇಳಿದರು.

ರಾಜೇಂದ್ರಸಿಂಗ್ ಬಾಬು

ಆ ಕಾಲದಲ್ಲಿ ಅಂತ ಸಿನಿಮಾ ರಿಲೀಸ್ ಆದಾಗ, ‌ಪಾರ್ಲಿಮೆಂಟ್‌ನಲ್ಲಿ ಸಿನಿಮಾದ ಕುರಿತು ಚರ್ಚೆಯಾಗಿತ್ತು. ಈ ಸಿನಿಮಾದ ನಂತರ ಅಂಬಿ ರೆಬೆಲ್ ಸ್ಟಾರ್ ಆಗಿ ಮಿಂಚಿದರು ಎಂದು ರಾಜೇಂದ್ರ ಸಿಂಗ್ ಬಾಬು ಹಳೆ ನೆನಪುಗಳನ್ನು ಮೆಲುಕುಹಾಕಿದ್ರು.

Intro:ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ ೬೭ ನೇ ಹುಟ್ಟು ಹಬ್ಬ.ಇನ್ನೂ ಜಲೀಲಾನಿಲ್ಲದ ಹುಟ್ಟು ಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಸಿರಾಶೆಯಾಗದಿರಲಿ ಎಂದು ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಎವರಗ್ರೀನ್ ಚಿತ್ರ ಅಂತ ಚಿತ್ರವನ್ನು ರೀ ರಿಲೀಸ್ ಅಗುತ್ತೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬಂದಿತ್ತು.ಅದ್ರೆ ಇಂದು ಅಂತ ಸಿನಿಮಾ ರೀ ರಿಲೀಸ್ ಆಗದೆ ಅವರ ಅಭಿಮಾನಿಗಳಿಗೆ ಬೇಸರವಾಗಿದೆ.ಅದರೆ ಅಂತ ಸಿನಿಮಾ ಇಂದು ಬಿಡುಗಡೆಯಾಗದಿರುವುದಕ್ಕೆ ಒಂದು ಕಾರಣವು ಇದೆ.ಇನ್ನೂ ಚಿತ್ರ ಬಿಡುಗಡೆ ಯಾಗದಿರುವುದಕ್ಕೆ ಕಾಣವನ್ನು ಅಂತ ಚಿತ್ರದ ನಿರ್ದೇಶರಾದ ಎಸ್ ವಿ ರಾಜೇಂದ್ರಸಿಂಗ್ ಬಾಬು ತಿಳಿಸಿದ್ದಾರೆ.


Body:ಇಂದು ಅಂಬಿ‌ಹುಟ್ಟು ಹಬ್ಬದ ಪ್ರಯುಕ್ತ ಅಂಬಿ ಸಮಾದಿ ಬಳಿ ಬಂದಿದ್ದ ರಾಜೇಂದ್ರಸಿಂಗ್ ಬಾಬು ಅವರು ಮಾಧ್ಯಮಗಳ ಜೊತೆ ಮಾತನಾಡಿ ಅಂತ ಚಿತ್ರದ ಕೆಲವು ಅನುಭವಗಳ ಹಂಚಿಕೊಂಡ್ರು. ಎಂಬತರ‌ ದಶಕದ ಸೂಪರ್ ಹಿಟ್ ಸಿನಿಮಾವಾದ ಅಂತ ಸಿನಿಮಾದಿಂದಲೇ ಅಂಬರೀಶ್ ಅವರಿಗೆ ರೆಬೆಲ್ ಸ್ಟಾರ್ ಪಟ್ಟ ಸಿಕ್ಕಿದ್ದು. ಇಂದು ಅಂತ ರೀ ರಿಲೀಸ್ ಅಗಬೇಕಿತ್ತತು ಅದ್ರೆ.ಮೇ ೩೧ ಕ್ಕೆ ಅಭಿ ಅಭಿನಯದ ಅಮರ್ ಚಿತ್ರ ರಿಲೀಸ್ ಅಗುತ್ತಿರುವುದರಿಂದ .ಅಪ್ಪ ಮಕ್ಕಳ ಸಿನಿಮಾ ಕ್ಲಾಶ್ ಆಗಬಾರದು ಎಂದು ಹತ್ತು ದಿನಗಳ ಕಾಲ ಮುಂದಕ್ಕೆ ಹೋಗಿದೆ ಅಷ್ಟೆ.ಅಂತ ಸಿನಿಮಾ ಇಂದು ಜನರೇಷನ್ ಗೆ ಮಿಸ್ಸಾಗಿತ್ತು ಈಗ‌ಅದನ್ನು ನೋಡುವ ಅವಕಾಶ ಸಿಕ್ಕಿದೆ.


Conclusion:ಅಂತ ಸಿನಿಮಾ ರಿಲೀಸ್ ಆದಾಗ ‌ಅಗಿನ ಕೇಂದ್ರಸರ್ಕಾರದ ಕದ ತಟ್ಟಿತ್ತು. ಅಲ್ಲದೆ ಪಾರ್ಲಿಮೆಂಟ್ ನಲ್ಲಿ ಅಂತ ಸಿನಿಮಾ ಕುರಿತು ಚರ್ಚೆಯಾಗಿತ್ತು.ಅಂತ ಸಿನಿಮಾದ ನಂತರ ಅಂಬರೀಶ್ ರೆಬೆಲ್ ಸ್ಟಾರ್ ಅಗಿ ಮಿಂಚಿದ್ರು.ಎಂದು ಹೇಳಿದ ರಾಜೇಂದ್ರ ಸಿಂಗ್ ಬಾಬು ಅವರು ಅಂಬಿ ಒಡನಾಟವನ್ನು ಮೆಲುಕುಹಾಕಿದ್ರು.೪೫ ವರ್ಷಗಳಿಂದ ಆಂಬರೀಶ್ ಹುಟ್ಟುಹಬ್ಬವನ್ನು ಆಚರಿಸುತಿದ್ವಿ.ಆದರೆ ಈ ವರ್ಷ ಅಂಬರೀಶ್ ಇಲ್ಲದೆ ದೀಪ ಇಲ್ಲದಂತಾಗಿದೆ. ಅಂಬಿ ಅಂದ್ರೆ ದೀಪವಿದಂತೆ.ಆಗಿದ್ದ ಗುಡುಗು ಸಿಡಿಲು ಈಗ ಇಲ್ಲ ಎಲ್ಲಾ ಸೈಲೆಂಟ್ ಆಗಿದೆ ಎಂದು ಬೆಸರದಿಂದಲೇ ಹೇಳಿದ ರಾಜೇಂದ್ರ ಸಿಂಗಬಾಬು ಅವರು. ಮುಂದಿನದಿನಗಳಲ್ಲಿ ಅಂಬಿ ಮಗ ಅಭಿಷೇಕ್ ಗೂ ಒಳ್ಳೆ ಕಥೆ ಸಿಕ್ಕರೆ ಖಂಡಿತಾ ಸಿನಿಮಾ ನಿರ್ದೇಶನ ಮಾಡುವುದಾಗಿ ತಿಳಿಸಿದ್ರು..

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.