ETV Bharat / sitara

ಅಂಬಿ ಜನುಮ ದಿನದಂದೇ ಬರುವನು 'ಅಮರ್'.. ಅಪ್ಪ ಹುಟ್ಟಿದ ದಿನ ಪುತ್ರನಿಗೆ ತರವುದೇ ಅದೃಷ್ಟ.. - undefined

ಅಂಬರೀಶ್ ಅವರ ಜನುಮ ದಿನವಾದ ಮೇ. 29 ರಂದು ಅಭಿಶೇಕ್​​ ಅಂಬರೀಶ್​​ ಅವರ ಮೊದಲ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ಸಂದೇಶ್​ ನಾಗರಾಜ್‌ ನಿರ್ಧರಿಸಿದ್ಧಾರೆ.

ಅಂಬಿ ಜನುಮ ದಿನದಂದು ಅಮರ್ ಬಿಡುಗಡೆ
author img

By

Published : May 8, 2019, 12:02 PM IST

ಅಭಿಶೇಕ್​​​ ಅಂಬರೀಶ್ ಅಭಿನಯದ ಪ್ರಥಮ ಸಿನಿಮಾ ‘ಅಮರ್’ ಡಾ. ಅಂಬರೀಶ್ ಅವರ ಜನುಮ ದಿನವಾದ ಮೇ. 29 ರಂದು ಬಿಡುಗಡೆ ಮಾಡಲು ನಿರ್ಮಾಪಕ ಸಂದೇಶ್ ನಾಗರಾಜ್‌ ನಿರ್ಧರಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ರಿಲೀಸ್ ಡೇಟ್​ ಅನೌನ್ಸ್​​ ಮಾಡಲು ಚಿತ್ರತಂಡ ರೆಡಿಯಾಗಿತ್ತು. ಆದರೆ, ಸಂದೇಶ್ ನಾಗರಾಜ್ ಅವರ ಅನುಪಸ್ಥಿತಿ ಕಾರಣ ‘ಅಮರ್’ ಚಿತ್ರದ ಸುದ್ದಿಗೋಷ್ಠಿಯನ್ನು ಮುಂದೂಡಲಾಗಿದೆ. ಮೈಸೂರಿನಲ್ಲಿ ಒಂದು ಜಾತ್ರೆ ನಡೆಯುತ್ತಿದೆ. ಅದರಲ್ಲಿ ನಮ್ಮ ಕುಟುಂಬದವರೆಲ್ಲ ಇರಬೇಕು. ಅದು ಮನೆ ದೇವರ ಜಾತ್ರೆಯಾಗಿದೆ. ಹಾಗಾಗಿ ಇಂದು ಸುದ್ದಿಗೋಷ್ಠಿ ಬೇಡ ಎಂದು ಸಂದೇಶ್ ನಾಗರಾಜ್ ಹೇಳಿದ್ದಾರೆ.

ಅಪ್ಪನ ಹುಟ್ಟು ಹಬ್ಬದಂದೇ ಮಗನ ಸಿನಿಮಾ ರಿಲೀಸ್ ಆಗುತ್ತಿರುವುದು ಸಂತೋಷದ ವಿಷಯ. ಆದರೆ, ಅಂಬರೀಶ್ ಅವರು ಮಗನ ಸಿನಿಮಾ ಬಿಡುಗಡೆ ಮುಂಚೆಯೇ ಈ ಲೋಕವನ್ನು ತ್ಯಜಿಸಿರುವುದು ಬೇಸರ ತರಿಸಿದೆ. ರಫ್ ಕಟ್ ಸಿನಿಮಾವನ್ನು ಡಾ. ಅಂಬಿ ಅವರು ನೋಡಿದ್ದು, ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವರ್ಷದ ಮೇ ತಿಂಗಳು ಸುಮಲತಾ ಅಂಬರೀಶ್ ಅವರಿಗೆ ಬಹಳ ಮಹತ್ತರವಾದ ತಿಂಗಳಾಗಿದೆ. ಕಾರಣ ಮೇ. 23 ರಂದು ಅವರ ಮಂಡ್ಯ ಲೋಕಸಭಾ ಚುನಾವಣೆ ಫಲಿತಾಂಶ ಬರಲಿದೆ. ಮೇ. 24 ಅವರ ಅಭಿನಯದ ‘ಡಾಟರ್ ಆಫ್ ಪಾರ್ವತಮ್ಮ’ ಸಿನಿಮಾ ಬಿಡುಗಡೆ ಆಗಲಿದೆ, ಇನ್ನೂ ಮೇ. 29 ರಂದು ಮಗನ ಮೊದಲ ಸಿನಿಮಾ ‘ಅಮರ್’ ಬಿಡುಗಡೆ ಆಗುತ್ತಿದೆ.

'ಅಮರ್​​​​' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಅಭಿನಯಿಸಿದ್ದು, ತಾನ್ಯ ಹೋಪ್ ಚಿತ್ರದ ಕಥಾನಾಯಕಿ ಆಗಿದ್ದಾರೆ. ಕನ್ನಡದ ಹ್ಯಾಟ್ರಿಕ್ ನಿರ್ದೇಶಕ ಎಂದು ಗುರುತಿಸಿಕೊಂಡಿರುವ ನಾಗಶೇಖರ್ ‘ಅಮರ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಪೋಷಕ ಪಾತ್ರಗಳಲ್ಲಿ ಸುಧಾರಾಣಿ, ದೇವರಾಜ್, ದೀಪಕ್ ಶೆಟ್ಟಿ, ಅರುಣ್ ಸಾಗರ್, ಚಿಕ್ಕಣ್ಣ, ಸಾಧು ಕೋಕಿಲ, ನಿರೂಪ್ ಭಂಡಾರಿ ಸಹ ಇದ್ದಾರೆ.

ಅಭಿಶೇಕ್​​​ ಅಂಬರೀಶ್ ಅಭಿನಯದ ಪ್ರಥಮ ಸಿನಿಮಾ ‘ಅಮರ್’ ಡಾ. ಅಂಬರೀಶ್ ಅವರ ಜನುಮ ದಿನವಾದ ಮೇ. 29 ರಂದು ಬಿಡುಗಡೆ ಮಾಡಲು ನಿರ್ಮಾಪಕ ಸಂದೇಶ್ ನಾಗರಾಜ್‌ ನಿರ್ಧರಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ರಿಲೀಸ್ ಡೇಟ್​ ಅನೌನ್ಸ್​​ ಮಾಡಲು ಚಿತ್ರತಂಡ ರೆಡಿಯಾಗಿತ್ತು. ಆದರೆ, ಸಂದೇಶ್ ನಾಗರಾಜ್ ಅವರ ಅನುಪಸ್ಥಿತಿ ಕಾರಣ ‘ಅಮರ್’ ಚಿತ್ರದ ಸುದ್ದಿಗೋಷ್ಠಿಯನ್ನು ಮುಂದೂಡಲಾಗಿದೆ. ಮೈಸೂರಿನಲ್ಲಿ ಒಂದು ಜಾತ್ರೆ ನಡೆಯುತ್ತಿದೆ. ಅದರಲ್ಲಿ ನಮ್ಮ ಕುಟುಂಬದವರೆಲ್ಲ ಇರಬೇಕು. ಅದು ಮನೆ ದೇವರ ಜಾತ್ರೆಯಾಗಿದೆ. ಹಾಗಾಗಿ ಇಂದು ಸುದ್ದಿಗೋಷ್ಠಿ ಬೇಡ ಎಂದು ಸಂದೇಶ್ ನಾಗರಾಜ್ ಹೇಳಿದ್ದಾರೆ.

ಅಪ್ಪನ ಹುಟ್ಟು ಹಬ್ಬದಂದೇ ಮಗನ ಸಿನಿಮಾ ರಿಲೀಸ್ ಆಗುತ್ತಿರುವುದು ಸಂತೋಷದ ವಿಷಯ. ಆದರೆ, ಅಂಬರೀಶ್ ಅವರು ಮಗನ ಸಿನಿಮಾ ಬಿಡುಗಡೆ ಮುಂಚೆಯೇ ಈ ಲೋಕವನ್ನು ತ್ಯಜಿಸಿರುವುದು ಬೇಸರ ತರಿಸಿದೆ. ರಫ್ ಕಟ್ ಸಿನಿಮಾವನ್ನು ಡಾ. ಅಂಬಿ ಅವರು ನೋಡಿದ್ದು, ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವರ್ಷದ ಮೇ ತಿಂಗಳು ಸುಮಲತಾ ಅಂಬರೀಶ್ ಅವರಿಗೆ ಬಹಳ ಮಹತ್ತರವಾದ ತಿಂಗಳಾಗಿದೆ. ಕಾರಣ ಮೇ. 23 ರಂದು ಅವರ ಮಂಡ್ಯ ಲೋಕಸಭಾ ಚುನಾವಣೆ ಫಲಿತಾಂಶ ಬರಲಿದೆ. ಮೇ. 24 ಅವರ ಅಭಿನಯದ ‘ಡಾಟರ್ ಆಫ್ ಪಾರ್ವತಮ್ಮ’ ಸಿನಿಮಾ ಬಿಡುಗಡೆ ಆಗಲಿದೆ, ಇನ್ನೂ ಮೇ. 29 ರಂದು ಮಗನ ಮೊದಲ ಸಿನಿಮಾ ‘ಅಮರ್’ ಬಿಡುಗಡೆ ಆಗುತ್ತಿದೆ.

'ಅಮರ್​​​​' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಅಭಿನಯಿಸಿದ್ದು, ತಾನ್ಯ ಹೋಪ್ ಚಿತ್ರದ ಕಥಾನಾಯಕಿ ಆಗಿದ್ದಾರೆ. ಕನ್ನಡದ ಹ್ಯಾಟ್ರಿಕ್ ನಿರ್ದೇಶಕ ಎಂದು ಗುರುತಿಸಿಕೊಂಡಿರುವ ನಾಗಶೇಖರ್ ‘ಅಮರ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಪೋಷಕ ಪಾತ್ರಗಳಲ್ಲಿ ಸುಧಾರಾಣಿ, ದೇವರಾಜ್, ದೀಪಕ್ ಶೆಟ್ಟಿ, ಅರುಣ್ ಸಾಗರ್, ಚಿಕ್ಕಣ್ಣ, ಸಾಧು ಕೋಕಿಲ, ನಿರೂಪ್ ಭಂಡಾರಿ ಸಹ ಇದ್ದಾರೆ.

 

ಅಮರ್ ಅಂಬಿ ಜನುಮ ದಿನ ಬಿಡುಗಡೆ

ಅಭಿಷೇಖ್ ಅಂಬರೀಶ್ ಪ್ರಥಮ ಸಿನಿಮಾ ಅಮರ್ ಡಾ ಅಂಬರೀಶ್ ಅವರ ಜನುಮ ದಿನ – ಮೇ 29 ರಂದೇ ಬಿಡುಗಡೆ ಆಗಲಿದೆ ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ತೀರ್ಮಾನ ಮಾಡಿದ್ದಾರೆ.

ಇಂದು ಅವರ ಹೊಟೇಲ್ ಸಂದೇಶ್ ಗಾಂಧಿನಗರ, ಬೆಂಗಳೂರು ಅಲ್ಲಿ ಮಾಧ್ಯಮ ಘೋಷ್ಟಿಯಲ್ಲಿ ಬಿಡುಗಡೆ ದಿನಾಂಕವನ್ನು ತಿಳಿಸಬೇಕು ಎಂದು ನಿಶ್ಚಯ ಮಾಡಲಾಗಿತ್ತು. ಆದರೆ ಸಂದೇಶ್ ನಾಗರಾಜ್ ಅವರ ಅನುಪಸ್ಥಿತಿ ಕಾರಣ ಅಮರ್ ಚಿತ್ರದ ಪತ್ರಿಕಾ ಘೋಷ್ಟಿಯನ್ನು ಮುಂದೂಡಲಾಗಿದೆ. ಆದರೆ ಹೇಳಬೇಕಾದ ವಿಚಾರ – ಅಮರ್ ಬಿಡುಗಡೆ ಮೇ 29 ಎಂದು.

ಮೈಸೂರಿನಲ್ಲಿ ಒಂದು ಜಾತ್ರೆ ನಡೆಯುತ್ತಿದೆ. ಅದರಲ್ಲಿ ನಮ್ಮ ಕುಟುಂಬದವರೆಲ್ಲ ಇರಬೇಕು. ಅದು ಮನೆ ದೇವರ ಜಾತ್ರೆ ಹಾಗಾಗಿ ಇಂದು ಪತ್ರಿಕಾ ಘೋಷ್ಟಿ ಬೇಡ ಎಂದು ಸಂದೇಶ್ ನಾಗರಾಜ್ ತಿಳಿಸಿದ್ದಾರೆ.

ಅಪ್ಪನ ಹುಟ್ಟು ಹಬ್ಬದಂದೆ ಮಗನ ಸಿನಿಮಾ ರಿಲೀಸ್ ಆಗುತ್ತಿರುವುದು ಸಂತೋಷದ ಜೊತೆ ವಿರಹ ಸಹ. ಕಾರಣ ಡಾ ಅಂಬರೀಶ್ ಅವರ ಸಿನಿಮಾ ಬಿಡುಗಡೆ ಮುಂಚೆ ಈ ಲೋಕದಿಂದ ನಿರ್ಗಮನ ಆಗಿರುವುದು. ಆದರೆ ರಫ್ ಕಟ್ ಸಿನಿಮಾವನ್ನು ಡಾ ಅಂಬರೀಶ್ ಅವರು ನೋಡಿದ್ದು ಮಗನ ಬಗ್ಗೆ ಮೆಚ್ಚುಗೆ ವ್ಯಕ್ತ ಮಾಡಿದ್ದರು.

ಈ ವರ್ಷದ ಮೇ ತಿಂಗಳು ಶ್ರೀಮತಿ ಸುಮಲತಾ ಅಂಬರೀಶ್ ಅವರಿಗೆ ಬಹಳ ಮಹತ್ತರವಾದ ತಿಂಗಳು. ಮೇ 23 ಅವರ ಮಂಡ್ಯ ಲೋಕಸಭಾ ಚುನಾವಣೆ ಫಲಿತಾಂಶ ಬರಲಿದೆ, ಮೇ 24 ಅವರ ಅಭಿನಯದ ದಾಟರ್ ಆಫ್ ಪಾರ್ವತಮ್ಮ ಸಿನಿಮಾ ಬಿಡುಗಡೆ ಆಗಲಿದೆ, 29 ರಂದು ಮಗನ ಮೊದಲ ಸಿನಿಮಾ ಅಮರ್ ಬಿಡುಗಡೆ ಆಗುತ್ತಿದೆ. ಅಂದೆ ಅವರು ಅವರ ಪತಿ ಅಂಬರೀಶ್ ಅವರ ಜನುಮ ದಿನ ಮೊಟ್ಟ ಮೊದಲ ವರ್ಷ ಅವರಿಲ್ಲದೆ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿದೆ.

ಸುಮಲತಾ ಅಂಬರೀಶ್ ಅವರ ಮನಸ್ಥಿತಿ ಆಧಾರ ಆಗುವುದು ಅವರ ಚುನಾವಣೆ ಫಲಿತಾಂಶದ ಆಧಾರ ಮೇಲೆ ಎಂಬುದಕ್ಕೆ ಡೌಟೆ ಇಲ್ಲ.

ಛಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಅಮರ್ ಚಿತ್ರದಲ್ಲಿ ಪಾತ್ರ ಮಾಡಿದ್ದಾರೆ. ತಾನ್ಯ ಹೊಪ್ ಚಿತ್ರದ ಕಥಾ ನಾಯಕಿ, ಕನ್ನಡದಲ್ಲಿ ಹ್ಯಾಟ್ ಟ್ರಿಕ್ ನಿರ್ದೇಶಕ ಎಂದು ಗುರುತಿಸಿಕೊಂಡಿರುವ ನಾಗಶೇಖರ್ ಅಮರ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸತ್ಯ ಹೆಗ್ಡೆ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಪೋಷಕ ಪಾತ್ರಗಳಲ್ಲಿ ಸುಧಾರಾಣಿ, ದೇವರಾಜ್, ದೀಪಕ್ ಶೆಟ್ಟಿ, ಅರುಣ್ ಸಾಗರ್, ಚಿಕ್ಕಣ್ಣ, ಸಾಧು ಕೋಕಿಲ, ನೀರುಪ್ ಭಂಡಾರಿ ಸಹ ಇದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.