ETV Bharat / sitara

ನನ್ನ ಮಗನನ್ನು ಇವತ್ತೇ ಹೀರೋ ಅನ್ನಲ್ಲ: ನಟ ರವಿಚಂದ್ರನ್​​

ಈ ಹಿಂದೆ ನಿರ್ದೇಶಕ ನಾಗಶೇಖರ್ ಅವರ 'ನವಂಬರ್​​ನಲ್ಲಿ ನಾನು ಮತ್ತು ಅವಳು' ಚಿತ್ರದ ಮೂಲಕ ವಿಕ್ರಂ ಸ್ಯಾಂಡಲ್​​​ವುಡ್​​ಗೆ ಎಂಟ್ರಿ ಕೊಡಲು ರೆಡಿಯಾಗಿದ್ದರು. ಈ ಚಿತ್ರದ ಟೈಟಲ್ ಪೋಸ್ಟರ್ ಸಹ ಲಾಂಚ್ ಆಗಿತ್ತು. ಅದ್ರೆ ಕಾರಣಾಂತರಗಳಿಂದ ಈ ಚಿತ್ರ ಸೆಟ್ಟೇರಲಿಲ್ಲ.

author img

By

Published : Aug 8, 2019, 1:49 PM IST

ನಟ ರವಿಚಂದ್ರನ್

ಕ್ರೇಜಿ ಸ್ಟಾರ್ ರವಿಚಂದ್ರನ್‌ ದ್ವಿತೀಯ ಪುತ್ರ ವಿಕ್ರಂ 'ತ್ರಿವಿಕ್ರಮ' ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಿನ್ನೆಯಷ್ಟೆ ರವಿಚಂದ್ರನ್ ತ್ರಿವಿಕ್ರಮ ಚಿತ್ರದ ಟೈಟಲ್ ಪೋಸ್ಟರ್ ಲಾಂಚ್ ಮಾಡಿದ್ರು.

ನಾಳೆ ನಾಗರಬಾವಿಯ ಮಲೆಮಹಾದೇಶ್ವರ ದೇವಾಲಯದಲ್ಲಿ ನಡೆಯಲಿರುವ ಮುಹೂರ್ತ ಕಾರ್ಯಕ್ರಮಕ್ಕೆ ನಟ ಪುನೀತ್ ರಾಜ್​ಕುಮಾರ್ ಅತಿಥಿಯಾಗಿ ಬರಲಿದ್ದಾರೆ. ಇವರು ಕ್ಯಾಮರಾಗೆ ಚಾಲನೆ ನೀಡುವ ಮೂಲಕ ಕ್ರೇಜಿ ಸ್ಟಾರ್ ಪುತ್ರನ ಚಿತ್ರಕ್ಕೆ ಶುಭ ಹಾರೈಸಲಿದ್ದಾರೆ. ಮಗನ ಚೊಚ್ಚಲ ಚಿತ್ರದ ಮೊದಲ ದೃಶ್ಯಕ್ಕೆ ಕ್ರೇಜಿ ಸ್ಟಾರ್ ಕ್ಲಾಪ್ ಮಾಡಲಿದ್ದಾರೆ.

ನನ್ನ ಮಗನನ್ನು ಇವತ್ತೇ ಹೀರೋ ಅನ್ನಲ್ಲ: ರವಿಚಂದ್ರನ್​​

ರೋಜ್ ಹಾಗೂ ಮಾಸ್ ಲೀಡರ್ ಚಿತ್ರಗಳ ನಿರ್ದೇಶಕ ಸಹನಾ ಮೂರ್ತಿ ತ್ರಿವಿಕ್ರಮ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ವಿಕ್ರಮ್ ಜೊತೆ ರೊಮ್ಯಾನ್ಸ್ ಮಾಡಲು ಬಾಲಿವುಡ್​ ನಟಿ ಆಕಾಂಕ್ಷ ಶರ್ಮಾ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಇದೊಂದು ಪಕ್ಕಾ ಲವ್-ರೊಮ್ಯಾಂಟಿಕ್ ಚಿತ್ರವಾಗಿದ್ದು, ಬೆಂಗಳೂರು, ರಾಜಸ್ತಾನ, ದಾಂಡೇಲಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಶೂಟಿಂಗ್ ನಡೆಸೋ ಪ್ಲಾನ್ ಚಿತ್ರತಂಡಕ್ಕಿದೆ. ಈ ಚಿತ್ರದ ಮತ್ತೊಂದು ವಿಶೇಷ ಏನಂದರೆ ಡ್ಯಾನ್ಸ್ ಕಿಂಗ್ ಪ್ರಭುದೇವ ಕೊರಿಯೋಗ್ರಾಫರ್​ ಆಗಿ ವರ್ಕ್ ಮಾಡಲಿದ್ದಾರೆ.

actor ravichadran
ಮುಹೂರ್ತ ಕಾರ್ಯಕ್ರಮದ ಆಹ್ವಾನ ಪತ್ರಿಕೆ

ಇನ್ನು ಮಗನ ಸಿನಿ ಎಂಟ್ರಿ ಬಗ್ಗೆ ಮಾತಾಡಿರುವ ರವಿಮಾಮ, 'ನನ್ನ ಮಗ ತ್ರಿವಿಕ್ರಮ ಚಿತ್ರದ ಮೂಲಕ ಚಿತ್ರರಂಗಕ್ಕೆ ಬರ್ತಿದ್ದಾನೆ. ಅವನ‌ನ್ನು ನಾಯಕನಾಗಿ ಮಾಡುವ ಜವಾಬ್ದಾರಿ ನಿರ್ದೇಶಕ ಸಹನಾ ಮೂರ್ತಿ ಹೊತ್ತುಕೊಂಡಿದ್ದಾರೆ. ಅಲ್ಲದೆ ನನ್ನನ್ನು ಬೆಳೆಸಿದಂತೆ ನನ್ನ ಮಗನಿಗೂ ಹಾರೈಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

actor ravichadran
ಮುಹೂರ್ತ ಕಾರ್ಯಕ್ರಮದ ಆಹ್ವಾನ ಪತ್ರಿಕೆ

ಕ್ರೇಜಿ ಸ್ಟಾರ್ ರವಿಚಂದ್ರನ್‌ ದ್ವಿತೀಯ ಪುತ್ರ ವಿಕ್ರಂ 'ತ್ರಿವಿಕ್ರಮ' ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ನಿನ್ನೆಯಷ್ಟೆ ರವಿಚಂದ್ರನ್ ತ್ರಿವಿಕ್ರಮ ಚಿತ್ರದ ಟೈಟಲ್ ಪೋಸ್ಟರ್ ಲಾಂಚ್ ಮಾಡಿದ್ರು.

ನಾಳೆ ನಾಗರಬಾವಿಯ ಮಲೆಮಹಾದೇಶ್ವರ ದೇವಾಲಯದಲ್ಲಿ ನಡೆಯಲಿರುವ ಮುಹೂರ್ತ ಕಾರ್ಯಕ್ರಮಕ್ಕೆ ನಟ ಪುನೀತ್ ರಾಜ್​ಕುಮಾರ್ ಅತಿಥಿಯಾಗಿ ಬರಲಿದ್ದಾರೆ. ಇವರು ಕ್ಯಾಮರಾಗೆ ಚಾಲನೆ ನೀಡುವ ಮೂಲಕ ಕ್ರೇಜಿ ಸ್ಟಾರ್ ಪುತ್ರನ ಚಿತ್ರಕ್ಕೆ ಶುಭ ಹಾರೈಸಲಿದ್ದಾರೆ. ಮಗನ ಚೊಚ್ಚಲ ಚಿತ್ರದ ಮೊದಲ ದೃಶ್ಯಕ್ಕೆ ಕ್ರೇಜಿ ಸ್ಟಾರ್ ಕ್ಲಾಪ್ ಮಾಡಲಿದ್ದಾರೆ.

ನನ್ನ ಮಗನನ್ನು ಇವತ್ತೇ ಹೀರೋ ಅನ್ನಲ್ಲ: ರವಿಚಂದ್ರನ್​​

ರೋಜ್ ಹಾಗೂ ಮಾಸ್ ಲೀಡರ್ ಚಿತ್ರಗಳ ನಿರ್ದೇಶಕ ಸಹನಾ ಮೂರ್ತಿ ತ್ರಿವಿಕ್ರಮ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ವಿಕ್ರಮ್ ಜೊತೆ ರೊಮ್ಯಾನ್ಸ್ ಮಾಡಲು ಬಾಲಿವುಡ್​ ನಟಿ ಆಕಾಂಕ್ಷ ಶರ್ಮಾ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಇದೊಂದು ಪಕ್ಕಾ ಲವ್-ರೊಮ್ಯಾಂಟಿಕ್ ಚಿತ್ರವಾಗಿದ್ದು, ಬೆಂಗಳೂರು, ರಾಜಸ್ತಾನ, ದಾಂಡೇಲಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಶೂಟಿಂಗ್ ನಡೆಸೋ ಪ್ಲಾನ್ ಚಿತ್ರತಂಡಕ್ಕಿದೆ. ಈ ಚಿತ್ರದ ಮತ್ತೊಂದು ವಿಶೇಷ ಏನಂದರೆ ಡ್ಯಾನ್ಸ್ ಕಿಂಗ್ ಪ್ರಭುದೇವ ಕೊರಿಯೋಗ್ರಾಫರ್​ ಆಗಿ ವರ್ಕ್ ಮಾಡಲಿದ್ದಾರೆ.

actor ravichadran
ಮುಹೂರ್ತ ಕಾರ್ಯಕ್ರಮದ ಆಹ್ವಾನ ಪತ್ರಿಕೆ

ಇನ್ನು ಮಗನ ಸಿನಿ ಎಂಟ್ರಿ ಬಗ್ಗೆ ಮಾತಾಡಿರುವ ರವಿಮಾಮ, 'ನನ್ನ ಮಗ ತ್ರಿವಿಕ್ರಮ ಚಿತ್ರದ ಮೂಲಕ ಚಿತ್ರರಂಗಕ್ಕೆ ಬರ್ತಿದ್ದಾನೆ. ಅವನ‌ನ್ನು ನಾಯಕನಾಗಿ ಮಾಡುವ ಜವಾಬ್ದಾರಿ ನಿರ್ದೇಶಕ ಸಹನಾ ಮೂರ್ತಿ ಹೊತ್ತುಕೊಂಡಿದ್ದಾರೆ. ಅಲ್ಲದೆ ನನ್ನನ್ನು ಬೆಳೆಸಿದಂತೆ ನನ್ನ ಮಗನಿಗೂ ಹಾರೈಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

actor ravichadran
ಮುಹೂರ್ತ ಕಾರ್ಯಕ್ರಮದ ಆಹ್ವಾನ ಪತ್ರಿಕೆ
Intro:ನನ್ನ ಮಗ "ತ್ರಿವಿಕ್ರಮ"ನಾಗಿ ನಿಮ್ಮ ಮುಂದೆ ಬರ್ತಿದ್ದಾರೆ ಅವನನ್ನು ಬೆಳೆಸಿ ಹಾರೈಸಿ ಅಭಿಮಾನಿಗಳಿಗೆ "ಮಲ್ಲ"ನ ಮನವಿ...

ಸ್ಯಾಂಡಲ್ ವುಡ್ ನ ರಸಿಕ ಕ್ರೇಜಿಸ್ಟಾರ್ ರವಿಚಂದ್ರನ್‌ ಎರಡನೇ ಪುತ್ರ ವಿಕ್ರಂ ರವಿಚಂದ್ರನ್ "ತ್ರಿವಿಕ್ರಮ"ನಾಗಿ ಚಂದನವನಕ್ಜೆ ಎಂಟ್ರಿಕೊಡೊಕೆ ಈಗಾಗಲೇ ವೇಧಿಕೆ ಸಿದ್ದವಾಗಿದೆ.ಅಲ್ಲದೆ ನಿನ್ನೆಯಷ್ಟೆ ಕ್ರೇಜಿಸ್ಟಾರ್ ರವಿಚಂದ್ರನ್ ತ್ರಿವಿಕ್ರಮ ಚಿತ್ರದ ಟೈಟಲ್ ಪೋಸ್ಟರ್ ಗಳನ್ನು ಲಾಂಚ್ ಮಾಡಿದ್ರು.ಇನ್ನೂ ಈ ಚಿತ್ರ ನಾಳೆ ಸೆಟ್ಟೇರಲಿದೆ.ನಾಗರಭಾವಿಯ ಮಲೈಮಹೇದೆಶ್ವರ ದೇವಾಲಯದಲ್ಲಿ ಮುಹೂರ್ತ ಕಾರ್ಯಕ್ರಮವಿದೆ.
ಅಲ್ಲದೆ ಕಾರ್ಯಕ್ರಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿಗಳಾಗಿ ಬರಲಿದ್ದು.ಕ್ಯಾಮರ ಚಾಲನೆ ಮಾಡುವ ಮೂಲಕ ತ್ರಿವಿಕ್ರಮ ಚಿತ್ರಕ್ಕೆ ಚಾಲನೆ ಕೊಡಲಿದ್ರೆ.ಕ್ರೇಜಿಸ್ಟಾರ್ ಕ್ಲಾಪ್ ಮಾಡಿ ಮಗನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡಲಿದ್ದಾರೆ.Body:.ಇನ್ನೂ ಚಿತ್ರಕ್ಕೆ ಲುಕ್
ರೋಜ್ ಹಾಗೂ ಮಾಸ್ ಲೀಡರ್ ಚಿತ್ರಗಳ ನಿರ್ದೇಶಕ ಸಹನಾ ಮೂರ್ತಿ ತ್ರಿವಿಕ್ರಮ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅಲ್ಲದೆ ವಿಕ್ರಮ್ ಜೊತೆ ನಾಯಕಿಯಾಗಿ ರೊಮ್ಯಾನ್ಸ್ ಮಾಡಲು ಬಾಲಿವುಡ್​ ನಟಿ ಆಕಾಂಕ್ಷ ಶರ್ಮಾ ಚಂದನವನಕ್ಕೆ ಕಾಲಿಟ್ಟಿದ್ದಾರೆ.ಇನ್ನೂ ತ್ರಿವಿಕ್ರಮ ಪಕ್ಕಾ ಲವ್-ರೊಮ್ಯಾಂಟಿಕ್ ಸಿನಿಮಾವಗಿದ್ದು.
ಚಿತ್ರವನ್ನು ಕಲರ್ವಪುಲ್ ಆಗಿ ತೆರೆ ಮೇಲೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.ಅದಕ್ಕಾಗಿಯೇ ನಿರ್ದೇಶಕ ಸಹನಾ ಮೂರ್ತಿ ಒಳ್ಳೆ ಟೀಂ ಕಟ್ಟಿದು ಚಿತ್ರಕ್ಕೆ ಸಂತೋಷ್ ರೈ ಪತಾಜೆ ಕ್ಯಾಮರ ವರ್ಕ್ ಇದ್ರೆ.ಮ್ಯಾಜಿಕ್ ಕಂಪೋಸರ್ ಅರ್ಜುನ್ ಜನ್ಯ ಈ ಚಿತ್ರಕ್ಕೆ ಟ್ಯೂನ್ ಕಂಪೋಸ್ ಮಾಡಲಿದ್ದಾರೆ.ಅಲ್ಲದೆ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಈ ಚಿತ್ರಕ್ಕೆ ಇಂಡಿಯನ್ ಮೈಕಲ್ ಜಾಕ್ಸನ್ ಕನ್ನಡಿಗ ಪ್ರಭಯದೇವ್ ತ್ರಿವಿಕ್ರಮನಿಗೆ ಸ್ಟೆಪ್ ಕಂಪೋಸ್ ಮಾಡಲಿದ್ಧಾರೆ.ಗೌರಿ ಎಂಟರ್ಟೈನರ್ ಬ್ಯಾನರಡಿ ಸೋಮಣ್ಣ‌ ಎಂಬುವರು ಈ ಚಿತ್ರವನ್ನು ನಿರ್ಮಾಣಮಾಡಲಿದ್ದು ಬೆಂಗಳೂರು, ರಾಜಸ್ತಾನ, ದಾಂಡೇಲಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಶೂಟಿಂಗ್ ನಡೆಸೋ ಪ್ಲಾನ್ ಚಿತ್ರತಂಡಕ್ಕಿದೆ.ಅದೇ ಇರಲಿ ವಿಕ್ರಮ್ ಈ ಹಿಂದೆ ನಿರ್ದೇಶಕ ನಾಗಶೇಖರ್ "ನವಂಬರ್ ನಲ್ಲಿ ನಾನು ಮತ್ತು ಅವಳು "ಚಿತ್ರದಮೂಲಕ ವಿಕ್ರಮ್ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡಿಸಲು ರೆಡಿಯಾಗಿ
ಟೈಟಲ್ ಪೋಸ್ಟರ್ ಗಳನ್ನು ಸಹ ಲಾಂಚ್ ಮಾಡಿದ್ರು.
ಅದ್ರೆ ಕಾರಣಾಂತರಗಳಿಂದ ಈ ಚಿತ್ರ ಸೆಟ್ಟೇರಲೇ ಇಲ್ಲ.ಅದ್ರೆ ಈಗ ವಿಕ್ರಮ್ ಈ ಚಿತ್ರದ ಮೂಲಕ ತ್ರಿಮಿಕ್ರಮನಾಗಿ ಮೆರೆಯಲಿ ಎಂಬುದು ಮಲ್ಲನ ಅಭಿಮಾನಿಗಳ ಆಶಯವಾಗಿದೆ.ಅಲ್ಲದೆ ನನ್ನ ಮಗ ತ್ರಿವಿಕ್ರ ಚಿತ್ರದ ಮೂಲಕ ಚಿತ್ರರಂಗಕ್ಕೆ ಬರರ್ತಿದ್ದಾನೆ. ಅವನ‌ ನಾಯಕನಾಗಿ ಮಾಡುವ ಜವಾಬ್ದಾರಿ ನಿರ್ದೇಶಕ ಸಹನಾ ಮೂರ್ತಿ ಹೊತ್ತುಕೊಂಡಿದ್ದಾರೆ.ಅಲ್ಲದೆ ಇಷ್ಟು ದಿನ ನನ್ನನ್ನು ಬೆಳಸಿ ಹಾರೈಸಿದ ರೀತಿ ನನ್ನ ಮಗನಿಗೂ ಹಾರೈಸಿ ಎಂದು ಮಲ್ಲ‌ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.