ETV Bharat / sitara

ಥಿಯೇಟರ್​ಗಳಲ್ಲಿ ಶೇ.50ರಷ್ಟು ಸೀಟು ಭರ್ತಿ ಆದೇಶ: ಸಿಎಂ ಭೇಟಿಯಾಗಿ ಮನವಿ ಸಲ್ಲಿಸಿದ ಪುನೀತ್

author img

By

Published : Apr 3, 2021, 8:10 PM IST

ಯುವರತ್ನ ಸಿನಿಮಾಗೆ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡುವಂತೆ ಪುನೀತ್​ ರಾಜ್​ಕುಮಾರ್​ ಇಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ರು.

puneeth rajkumar meet CM
puneeth rajkumar meet CM

ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಆಸನ ಭರ್ತಿ ಮಾಡಬೇಕೆಂಬ ಸರ್ಕಾರದ ಆದೇಶದಿಂದ ಆಘಾತಕ್ಕೊಳಗಾಗಿರುವ ನಟ ಪುನೀತ್​ ರಾಜ್​ಕುಮಾರ್​ ಇಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಭರ್ತಿಗೆ ಅವಕಾಶ ನೀಡುವಂತೆ ಸ್ಯಾಂಡಲ್​ವುಡ್​ ಪವರ್​ ಸ್ಟಾರ್​ ಮನವಿ ಮಾಡಿದ್ದಾರೆ.

puneeth rajkumar meet CM
ಸಿಎಂಗೆ ಮನವಿ ಸಲ್ಲಿಸಿದ ಯುವರತ್ನ ತಂಡ

ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಅಪ್ಪು, ಶೇ. 50ರ ಮಿತಿಯಿಂದ ಚಿತ್ರರಂಗಕ್ಕೆ ಸಾಕಷ್ಟು ನಷ್ಟ ಆಗಲಿದೆ. ಹೀಗಾಗಿ 100% ಆಸನಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದರು. ಪುನೀತ್​​ ಭೇಟಿ ವೇಳೆ ಗೃಹ ಸಚಿವರಾದ ಸಚಿವ ಬಸವರಾಜ್ ಬೊಮ್ಮಾಯಿ, ಡಿಸಿಎಂ ಲಕ್ಷ್ಮಣ್ ಸವದಿ, ಸಚಿವ ನಾರಾಯಣ ಗೌಡ ಉಪಸ್ಥಿತರಿದ್ದರು. ಪುನೀತ್ ರಾಜ್‍ಕುಮಾರ್ ಜೊತೆ ನಿರ್ದೇಶಕ ಸಂತೋಷ ಆನಂದ್ ರಾಮ್, ಹೊಂಬಾಳೆ ಫಿಲ್ಮ್ಸ್​​ನ ವಿಜಯ್ ಕಿರಂಗದೂರ್, ಕಾರ್ತಿಕ್ ಗೌಡ ಸಹ ಉಪಸ್ಥಿತರಿದ್ದರು. ನಟ ಪುನೀತ್​ ರಾಜ್ ಕುಮಾರ್​ ಮನವಿ ಸ್ವೀಕರಿಸಿರುವ ಸಿಎಂ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದು, ತಜ್ಞರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

puneeth rajkumar meet CM
ಸಿಎಂ ಜೊತೆ ಸಮಾಲೋಚನೆ ನಡೆಸಿದ ಪುನೀತ್​​

ಇದನ್ನೂ ಓದಿ: ಯುವರತ್ನ ನೋಡಲು ಫ್ಯಾಮಿಲಿಗಳು ಬರ್ತಿವೆ, ಈ ರೀತಿಯಾದ್ರೆ ಚಿತ್ರರಂಗ ಉಳಿಯೋದ್ಹೇಗೆ?.. ನಟ ದುನಿಯಾ ವಿಜಿ

ನಟ ಪುನೀತ್​ ರಾಜ್​ಕುಮಾರ್ ನಟನೆಯ ಬಹುನಿರೀಕ್ಷಿತ ಯುವರತ್ನ ಚಿತ್ರ ರಾಜ್ಯಾದ್ಯಂತ ಏಪ್ರಿಲ್​ 1ರಂದು ರಿಲೀಸ್​ ಆಗಿದ್ದು, ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಇದರ ಮಧ್ಯೆ ಶುಕ್ರವಾರ ರಾಜ್ಯ ಸರ್ಕಾರ ಸಿನಿಮಾ ಮಂದಿರಗಳಲ್ಲಿ ಶೇ.50ರಷ್ಟು ಆಸನಗಳಿಗೆ ಮಾತ್ರ ಅವಕಾಶ ನೀಡಿ ಆದೇಶ ಹೊರಡಿಸಿದೆ. ಇದು ಚಿತ್ರರಂಗದವರದ ಆತಂಕಕ್ಕೆ ಕಾರಣವಾಗಿದ್ದು, ಆಕ್ಷೇಪಗಳು ವ್ಯಕ್ತವಾಗಿವೆ.

ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಆಸನ ಭರ್ತಿ ಮಾಡಬೇಕೆಂಬ ಸರ್ಕಾರದ ಆದೇಶದಿಂದ ಆಘಾತಕ್ಕೊಳಗಾಗಿರುವ ನಟ ಪುನೀತ್​ ರಾಜ್​ಕುಮಾರ್​ ಇಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಭರ್ತಿಗೆ ಅವಕಾಶ ನೀಡುವಂತೆ ಸ್ಯಾಂಡಲ್​ವುಡ್​ ಪವರ್​ ಸ್ಟಾರ್​ ಮನವಿ ಮಾಡಿದ್ದಾರೆ.

puneeth rajkumar meet CM
ಸಿಎಂಗೆ ಮನವಿ ಸಲ್ಲಿಸಿದ ಯುವರತ್ನ ತಂಡ

ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಅಪ್ಪು, ಶೇ. 50ರ ಮಿತಿಯಿಂದ ಚಿತ್ರರಂಗಕ್ಕೆ ಸಾಕಷ್ಟು ನಷ್ಟ ಆಗಲಿದೆ. ಹೀಗಾಗಿ 100% ಆಸನಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದರು. ಪುನೀತ್​​ ಭೇಟಿ ವೇಳೆ ಗೃಹ ಸಚಿವರಾದ ಸಚಿವ ಬಸವರಾಜ್ ಬೊಮ್ಮಾಯಿ, ಡಿಸಿಎಂ ಲಕ್ಷ್ಮಣ್ ಸವದಿ, ಸಚಿವ ನಾರಾಯಣ ಗೌಡ ಉಪಸ್ಥಿತರಿದ್ದರು. ಪುನೀತ್ ರಾಜ್‍ಕುಮಾರ್ ಜೊತೆ ನಿರ್ದೇಶಕ ಸಂತೋಷ ಆನಂದ್ ರಾಮ್, ಹೊಂಬಾಳೆ ಫಿಲ್ಮ್ಸ್​​ನ ವಿಜಯ್ ಕಿರಂಗದೂರ್, ಕಾರ್ತಿಕ್ ಗೌಡ ಸಹ ಉಪಸ್ಥಿತರಿದ್ದರು. ನಟ ಪುನೀತ್​ ರಾಜ್ ಕುಮಾರ್​ ಮನವಿ ಸ್ವೀಕರಿಸಿರುವ ಸಿಎಂ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದು, ತಜ್ಞರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

puneeth rajkumar meet CM
ಸಿಎಂ ಜೊತೆ ಸಮಾಲೋಚನೆ ನಡೆಸಿದ ಪುನೀತ್​​

ಇದನ್ನೂ ಓದಿ: ಯುವರತ್ನ ನೋಡಲು ಫ್ಯಾಮಿಲಿಗಳು ಬರ್ತಿವೆ, ಈ ರೀತಿಯಾದ್ರೆ ಚಿತ್ರರಂಗ ಉಳಿಯೋದ್ಹೇಗೆ?.. ನಟ ದುನಿಯಾ ವಿಜಿ

ನಟ ಪುನೀತ್​ ರಾಜ್​ಕುಮಾರ್ ನಟನೆಯ ಬಹುನಿರೀಕ್ಷಿತ ಯುವರತ್ನ ಚಿತ್ರ ರಾಜ್ಯಾದ್ಯಂತ ಏಪ್ರಿಲ್​ 1ರಂದು ರಿಲೀಸ್​ ಆಗಿದ್ದು, ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಇದರ ಮಧ್ಯೆ ಶುಕ್ರವಾರ ರಾಜ್ಯ ಸರ್ಕಾರ ಸಿನಿಮಾ ಮಂದಿರಗಳಲ್ಲಿ ಶೇ.50ರಷ್ಟು ಆಸನಗಳಿಗೆ ಮಾತ್ರ ಅವಕಾಶ ನೀಡಿ ಆದೇಶ ಹೊರಡಿಸಿದೆ. ಇದು ಚಿತ್ರರಂಗದವರದ ಆತಂಕಕ್ಕೆ ಕಾರಣವಾಗಿದ್ದು, ಆಕ್ಷೇಪಗಳು ವ್ಯಕ್ತವಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.