ETV Bharat / sitara

ಕಿಲಾಡಿ ಪೊಲೀಸಾಗಿ ಬಂದ್ರು 'ಹೋಗ್ಲಿ ಬಿಡಿ ಸಾರ್'​ ಹರೀಶ್ ರಾಜ್

author img

By

Published : May 28, 2019, 12:33 PM IST

ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ನಟಿಸಿರುವ ನಟ ಹರೀಶ್​ ರಾಜ್​ ಈಗ ಮತ್ತೆ ಕಿಲಾಡಿ ಪೊಲೀಸ್​ ಆಗಿ ಚಂದನವನಕ್ಕೆ ಬಂದಿದ್ದಾರೆ.

ಹರೀಶ್ ರಾಜ್

ಕನ್ನಡದ ಕೆಲವು ಹ್ಯಾಂಡ್ಸಮ್‌ ನಟರುಗಳ ಪೈಕಿ ಹರೀಶ್ ರಾಜ್ ಸಹ ಒಬ್ಬರು. ಕಿರುತೆರೆ, ಸಿನಿಮಾ, ರಂಗಭೂಮಿ, ಜಾಹೀರಾತು, ಸಾಕ್ಷ್ಯ ಚಿತ್ರ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಇವರು ಕಲಾಕೃಷಿ ಮಾಡಿದ್ದಾರೆ. ಕಿರುತೆರೆಯಲ್ಲಿ ಫೇಮಸ್ ಆಗಿದ್ದ 'ಹೋಗ್ಲಿ ಬಿಡಿ ಸಾರ್' ಧಾರವಾಹಿಯಲ್ಲಿ ಇವರು ನಟಿಸಿದ್ದರು. ‘ಗನ್’ ಸಿನಿಮಾ ಮೂಲಕ ನಿರ್ದೇಶಕ ಸಹ ಆದವರು. ಇವರು 16 ಪಾತ್ರಗಳಲ್ಲಿ ಅಭಿನಯಿಸಿದ್ದ ‘ಶ್ರೀ ಸತ್ಯನಾರಾಯಣ’ ಸಿನಿಮಾ ಲಿಮ್ಕಾ ದಾಖಲೆ ಪುಸ್ತಕ ಸೇರಿತ್ತು. ಮಲಯಾಳಂನ ಮೋಹನ್ ಲಾಲ್ ಪುತ್ರ ನಾಯಕನಾಗಿರುವ ಸಿನಿಮಾದಲ್ಲಿಯೂ ಇವರು ಅಭಿನಯಿಸಿದ್ದರು. ಈಗ ‘ಕಿಲಾಡಿ ಪೊಲೀಸ್’ ಆಗಿ ನಗೆ ನಟ ಗಿರೀಶ್​​ ಜೊತೆ ಅಭಿನಯಿಸಿದ್ದಾರೆ. ಇವರೇ ಈ ಚಿತ್ರದ ನಿರ್ದೇಶಕರೂ ಸಹ.

kiladi police
ಗಿರೀಶ್​​ ಜೊತೆ ಹರೀಶ್ ರಾಜ್

ಎಚ್.ಆರ್.ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರಕ್ಕೆ, ಬೆಂಗಳೂರು ಸುತ್ತಮುತ್ತ 40 ದಿವಸಗಳ ಚಿತ್ರೀಕರಣ ಆಗಿದೆ. ಅಪ್ಪ ಮಗನ ಬಾಂಧವ್ಯ, ಹಾಸ್ಯ, ಸುಮಧುರ ಹಾಡುಗಳು, ಸಾಹಸ ಸಹ ‘ಕಿಲಾಡಿ ಪೊಲೀಸ್’ ಅಳವಡಿಸಿದೆ.

ಎಲ್ವಿನ್ ಜೋಶ್​ ಸಂಗೀತ, ದೀಪಕ್ ಕುಮಾರ್ ಛಾಯಾಗ್ರಹಣ, ಸುರೇಶ್-ಜೀವನ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ, ಮುರಳಿ ನೃತ್ಯ ನಿರ್ದೇಶನವಿದೆ. ವಿ ಮನೋಹರ್, ಸಂತೋಷ್ ನಾಯಕ್ ಹಾಗೂ ಹರೀಶ್ ರಾಜ್ ಹಾಡುಗಳನ್ನು ರಚಿಸಿದ್ದಾರೆ.

kiladi police
'ಕಿಲಾಡಿ ಪೊಲೀಸ್' ಸಿನಿಮಾದ ಪೋಸ್ಟರ್‌

ಸಂವಿ ಪೊನ್ನಮ್ಮ ನಾಯಕಿ, ಶ್ರೀನಿವಾಸಮೂರ್ತಿ, ಪದ್ಮಾ ವಾಸಂತಿ, ಸುಚೀಂದ್ರ ಪ್ರಸಾದ್, ಶೋಭರಾಜ್, ಗಿರಿ, ಮುನಿ, ಮೋಹನ್ ಜುನೇಜ, ರಮೇಶ್ ಪಂಡಿತ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ಕನ್ನಡದ ಕೆಲವು ಹ್ಯಾಂಡ್ಸಮ್‌ ನಟರುಗಳ ಪೈಕಿ ಹರೀಶ್ ರಾಜ್ ಸಹ ಒಬ್ಬರು. ಕಿರುತೆರೆ, ಸಿನಿಮಾ, ರಂಗಭೂಮಿ, ಜಾಹೀರಾತು, ಸಾಕ್ಷ್ಯ ಚಿತ್ರ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಇವರು ಕಲಾಕೃಷಿ ಮಾಡಿದ್ದಾರೆ. ಕಿರುತೆರೆಯಲ್ಲಿ ಫೇಮಸ್ ಆಗಿದ್ದ 'ಹೋಗ್ಲಿ ಬಿಡಿ ಸಾರ್' ಧಾರವಾಹಿಯಲ್ಲಿ ಇವರು ನಟಿಸಿದ್ದರು. ‘ಗನ್’ ಸಿನಿಮಾ ಮೂಲಕ ನಿರ್ದೇಶಕ ಸಹ ಆದವರು. ಇವರು 16 ಪಾತ್ರಗಳಲ್ಲಿ ಅಭಿನಯಿಸಿದ್ದ ‘ಶ್ರೀ ಸತ್ಯನಾರಾಯಣ’ ಸಿನಿಮಾ ಲಿಮ್ಕಾ ದಾಖಲೆ ಪುಸ್ತಕ ಸೇರಿತ್ತು. ಮಲಯಾಳಂನ ಮೋಹನ್ ಲಾಲ್ ಪುತ್ರ ನಾಯಕನಾಗಿರುವ ಸಿನಿಮಾದಲ್ಲಿಯೂ ಇವರು ಅಭಿನಯಿಸಿದ್ದರು. ಈಗ ‘ಕಿಲಾಡಿ ಪೊಲೀಸ್’ ಆಗಿ ನಗೆ ನಟ ಗಿರೀಶ್​​ ಜೊತೆ ಅಭಿನಯಿಸಿದ್ದಾರೆ. ಇವರೇ ಈ ಚಿತ್ರದ ನಿರ್ದೇಶಕರೂ ಸಹ.

kiladi police
ಗಿರೀಶ್​​ ಜೊತೆ ಹರೀಶ್ ರಾಜ್

ಎಚ್.ಆರ್.ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರಕ್ಕೆ, ಬೆಂಗಳೂರು ಸುತ್ತಮುತ್ತ 40 ದಿವಸಗಳ ಚಿತ್ರೀಕರಣ ಆಗಿದೆ. ಅಪ್ಪ ಮಗನ ಬಾಂಧವ್ಯ, ಹಾಸ್ಯ, ಸುಮಧುರ ಹಾಡುಗಳು, ಸಾಹಸ ಸಹ ‘ಕಿಲಾಡಿ ಪೊಲೀಸ್’ ಅಳವಡಿಸಿದೆ.

ಎಲ್ವಿನ್ ಜೋಶ್​ ಸಂಗೀತ, ದೀಪಕ್ ಕುಮಾರ್ ಛಾಯಾಗ್ರಹಣ, ಸುರೇಶ್-ಜೀವನ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ, ಮುರಳಿ ನೃತ್ಯ ನಿರ್ದೇಶನವಿದೆ. ವಿ ಮನೋಹರ್, ಸಂತೋಷ್ ನಾಯಕ್ ಹಾಗೂ ಹರೀಶ್ ರಾಜ್ ಹಾಡುಗಳನ್ನು ರಚಿಸಿದ್ದಾರೆ.

kiladi police
'ಕಿಲಾಡಿ ಪೊಲೀಸ್' ಸಿನಿಮಾದ ಪೋಸ್ಟರ್‌

ಸಂವಿ ಪೊನ್ನಮ್ಮ ನಾಯಕಿ, ಶ್ರೀನಿವಾಸಮೂರ್ತಿ, ಪದ್ಮಾ ವಾಸಂತಿ, ಸುಚೀಂದ್ರ ಪ್ರಸಾದ್, ಶೋಭರಾಜ್, ಗಿರಿ, ಮುನಿ, ಮೋಹನ್ ಜುನೇಜ, ರಮೇಶ್ ಪಂಡಿತ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

ಕಿಲಾಡಿ ಪೊಲೀಸ್ ಆಗಿದ್ದಾರೆ ಹರೀಶ್ ರಾಜ್

ಕನ್ನಡದ ಕೆಲವು ಸುಂದರ ನಟರುಗಳ ಪೈಕಿ ಹರೀಶ್ ರಾಜ್ ಸಹ ಒಬ್ಬರು. ಕಿರು ತೆರೆ, ಸಿನಿಮಾ, ರಂಗಭೂಮಿ, ಜಾಹೀರಾತು, ಸಾಕ್ಷ್ಯ ಚಿತ್ರ ಹೀಗೆ ಹರೀಶ್ ರಾಜ್ ಎಲ್ಲ ಕಡೆಯಲ್ಲಿ ಪಸರಿಸಿದ್ದಾರೆ. ಗನ್ ಸಿನಿಮಾ ಮೂಲಕ ನಿರ್ದೇಶಕ ಸಹ ಆದವರು. ಇವರ 16 ಪಾತ್ರಗಳು ಒಂದೇ ಸಿನಿಮಾದಲ್ಲಿ ಶ್ರೀ ಸತ್ಯನಾರಾಯಣ ಲಿಮ್ಕಾ ಧಾಖಲೆ ಸಹ ಸೇರಿತ್ತು. ಹಿಂದಿ ಹಾಗೂ ಮಲಯಾಳಂ ಸಿನಿಮಾಗಲ್ಲು ಹರೀಶ್ ರಾಜ್ ಛಾಪು ಒತ್ತಿ ಬಂದವರು. ಮೋಹನ್ ಲಾಲ್ ಪುತ್ರ ನಾಯಕ ಆಗಿರುವ ಸಿನಿಮಾದಲ್ಲಿ ಸಹ ಇವರು ಅಭಿನಯಿಸಿದ್ದರು.

ಈಗ ಹರೀಶ್ ರಾಜ್ ಕಿಲಾಡಿ ಪೊಲೀಸ್ ಆಗಿ ನಗೆ ನಟ ಗಿರೀಷ್ ಜೊತೆ ಅಭಿನಯಿಸಿದ್ದಾರೆ. ಅವರೇ ಈ ಚಿತ್ರದ ನಿರ್ದೇಶಕರೂ ಸಹ.

ಎಚ್ ಆರ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಚಿತ್ರ ಬೆಂಗಳೂರು ಸುತ್ತ ಮುತ್ತ 40 ದಿವಸಗಳ ಚಿತ್ರೀಕರಣ ಆಗಿದೆ. ಅಪ್ಪ ಮಗನ ಭಾಂಡವ್ಯ, ಹಾಸ್ಯ, ಸುಮಧುರ ಹಾಡುಗಳು, ಸಾಹಸ ಸಹ ಕಿಲಾಡಿ ಪೊಲೀಸ್ ಅಳವಡಿಸಿದೆ.

ಎಲ್ವಿನ್ ಜೋಷುವ ಸಂಗೀತ, ದೀಪಕ್ ಕುಮಾರ್ ಛಾಯಾಗ್ರಹಣ, ಸುರೇಶ್-ಜೀವನ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ, ಮುರಳಿ ನೃತ್ಯ ನಿರ್ದೇಶವಿದೆ. ವಿ ಮನೋಹರ್, ಸಂತೋಷ್ ನಾಯಕ್ ಹಾಗೂ ಹರೀಶ್ ರಾಜ್ ಹಾಡುಗಳನ್ನು ರಚಿಸಿದ್ದಾರೆ.

ಸಂವಿ ಪೊನ್ನಮ್ಮ ನಾಯಕಿ, ಶ್ರೀನಿವಾಸಮೂರ್ತಿ, ಪದ್ಮ ವಾಸಂತಿ, ಸುಚಿಂದ್ರ ಪ್ರಸಾದ್, ಶೋಭರಾಜ್, ಗಿರಿ, ಮುನಿ, ಮೋಹನ್ ಜುನೇಜ, ರಮೇಶ್ ಪಂಡಿತ್ ಹಾಗೂ ಇತರರು ಇದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.