ETV Bharat / sitara

'ಒಂದು ಹೆಡ್ ಫೋನ್ ಕೊಳ್ಳಲೂ ಹಣ ಇರಲಿಲ್ಲ'​.. ಕಷ್ಟದ ದಿನ ನೆನೆದ ಸಂಗೀತ ಮಾಂತ್ರಿಕ

ಖ್ಯಾತ ಸಂಗೀತ ನಿರ್ದೇಶಕ ಎ.ಆರ್​​. ರೆಹಮಾನ್​ಗೆ ಈಗ 'ಜೆಎಲ್​​​ಬಿ' ಹರ್ಮನ್ ಕಂಪನಿಯ ಭಾರತದ ರಾಯಭಾರಿ. ಆದರೆ, ಹಿಂದೊಂದು ದಿನ ಜೆಎಲ್​​​ಬಿ ಹೆಡ್​ಪೋನ್​ ಖರೀದಿಸಲೂ ಇವರ ಬಳಿ ಹಣವಿರಲಿಲ್ಲ.

author img

By

Published : Apr 27, 2019, 1:53 PM IST

ಎ.ಆರ್​​. ರೆಹಮಾನ್

ಆಸ್ಕರ್​ ಅವಾರ್ಡ್​ ಪುರಸ್ಕೃತ ಎ.ಆರ್​​.ರೆಹಮಾನ್​ ವೃತ್ತಿ ಆರಂಭಿಸಿದ್ದು ಬೆಂಗಳೂರಿನಲ್ಲಿ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅವರು ಅನೇಕ ಬಾರಿ ಬೆಂಗಳೂರಿಗೆ ಬಂದಿದ್ದಾರೆ. ಮೊನ್ನೆಯಷ್ಟೇ ನವೀಕರಣಗೊಂಡ ಶಂಕರ್​ ನಾಗ್​ ಚಿತ್ರಮಂದಿರದ ಉದ್ಘಾಟನೆಗೆ ರೆಹಮಾನ್ ಆಗಮಿಸಿದ್ದರು.

ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 'ಶಂಕರ್ ನಾಗ್' ಚಿತ್ರಮಂದಿರಕ್ಕೆ ಹೆಸರಾಂತ ಹರ್ಮನ್ ಕಂಪನಿಯ 'ಜೆಎಲ್​​ಬಿ' ಸೌಂಡ್ ಸ್ಪೀಕರ್ ಅಳವಡಿಸಿದೆ. ಇದನ್ನು ನೋಡಿದ ರೆಹಮಾನ್ ತಮ್ಮ ಜೀವನದ ಕಷ್ಟದ ದಿನಗಳನ್ನು ನೆನೆದರು.

ಒಂದು ಕಾಲದಲ್ಲಿ ಜೆಎಲ್​​ಬಿ ಸ್ಪೀಕರ್, ಹೆಡ್ ಫೋನ್ ಇವರಿಗೆ ಹುಚ್ಚು ಹಿಡಿಸಿದನ್ನು ಹೇಳಿಕೊಂಡ ಸಂಗೀತ ಮಾಂತ್ರಿಕ, ಅದನ್ನು ಕೊಳ್ಳಲು ನನ್ನ ಜೇಬಿನಲ್ಲಿ ಹಣ ಇರಲಿಲ್ಲ. ಐದು ತಿಂಗಳು ಹಣ ಕೂಡಿಹಾಕಿ ಆ ಸ್ಪೀಕರ್​​ ಖರೀದಿಸಿದ್ದೆ ಎಂದರು.

ಅಂದು ಒಂದು ಇಯರ್​ಪೋನ್​ ಕೊಂಡುಕೊಳ್ಳಲು ಪರದಾಡಿದ್ದ ರೆಹಮಾನ್​​, ಇಂದು ಅದೇ 'ಜೆಎಲ್​​​ಬಿ' ಹರ್ಮನ್ ಕಂಪನಿಯ ಭಾರತದ ರಾಯಭಾರಿ ಆಗಿದ್ದಾರೆ. ಅದಕ್ಕೇ ಹೇಳೋದು ಕಾಲಾಯ ತಸ್ಮೈ ನಮಃ!

ಎ.ಆರ್​​.ರೆಹಮಾನ್ ಅವರ ಬೆಳವಣಿಗೆ ಇಡೀ ವಿಶ್ವವೆ ಇಂದು ಮೆಚ್ಚುವಂತಹುದು. ಇವರು ಆಸ್ಕರ್ ಪ್ರಶಸ್ತಿ ವಿಜೇತ, ಭಾರತೀಯ ಚಿತ್ರ ರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಸಂಗೀತ ನಿರ್ದೇಶಕ ಎಂಬ ಖ್ಯಾತಿಯಿದೆ.

ಆಸ್ಕರ್​ ಅವಾರ್ಡ್​ ಪುರಸ್ಕೃತ ಎ.ಆರ್​​.ರೆಹಮಾನ್​ ವೃತ್ತಿ ಆರಂಭಿಸಿದ್ದು ಬೆಂಗಳೂರಿನಲ್ಲಿ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅವರು ಅನೇಕ ಬಾರಿ ಬೆಂಗಳೂರಿಗೆ ಬಂದಿದ್ದಾರೆ. ಮೊನ್ನೆಯಷ್ಟೇ ನವೀಕರಣಗೊಂಡ ಶಂಕರ್​ ನಾಗ್​ ಚಿತ್ರಮಂದಿರದ ಉದ್ಘಾಟನೆಗೆ ರೆಹಮಾನ್ ಆಗಮಿಸಿದ್ದರು.

ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 'ಶಂಕರ್ ನಾಗ್' ಚಿತ್ರಮಂದಿರಕ್ಕೆ ಹೆಸರಾಂತ ಹರ್ಮನ್ ಕಂಪನಿಯ 'ಜೆಎಲ್​​ಬಿ' ಸೌಂಡ್ ಸ್ಪೀಕರ್ ಅಳವಡಿಸಿದೆ. ಇದನ್ನು ನೋಡಿದ ರೆಹಮಾನ್ ತಮ್ಮ ಜೀವನದ ಕಷ್ಟದ ದಿನಗಳನ್ನು ನೆನೆದರು.

ಒಂದು ಕಾಲದಲ್ಲಿ ಜೆಎಲ್​​ಬಿ ಸ್ಪೀಕರ್, ಹೆಡ್ ಫೋನ್ ಇವರಿಗೆ ಹುಚ್ಚು ಹಿಡಿಸಿದನ್ನು ಹೇಳಿಕೊಂಡ ಸಂಗೀತ ಮಾಂತ್ರಿಕ, ಅದನ್ನು ಕೊಳ್ಳಲು ನನ್ನ ಜೇಬಿನಲ್ಲಿ ಹಣ ಇರಲಿಲ್ಲ. ಐದು ತಿಂಗಳು ಹಣ ಕೂಡಿಹಾಕಿ ಆ ಸ್ಪೀಕರ್​​ ಖರೀದಿಸಿದ್ದೆ ಎಂದರು.

ಅಂದು ಒಂದು ಇಯರ್​ಪೋನ್​ ಕೊಂಡುಕೊಳ್ಳಲು ಪರದಾಡಿದ್ದ ರೆಹಮಾನ್​​, ಇಂದು ಅದೇ 'ಜೆಎಲ್​​​ಬಿ' ಹರ್ಮನ್ ಕಂಪನಿಯ ಭಾರತದ ರಾಯಭಾರಿ ಆಗಿದ್ದಾರೆ. ಅದಕ್ಕೇ ಹೇಳೋದು ಕಾಲಾಯ ತಸ್ಮೈ ನಮಃ!

ಎ.ಆರ್​​.ರೆಹಮಾನ್ ಅವರ ಬೆಳವಣಿಗೆ ಇಡೀ ವಿಶ್ವವೆ ಇಂದು ಮೆಚ್ಚುವಂತಹುದು. ಇವರು ಆಸ್ಕರ್ ಪ್ರಶಸ್ತಿ ವಿಜೇತ, ಭಾರತೀಯ ಚಿತ್ರ ರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಸಂಗೀತ ನಿರ್ದೇಶಕ ಎಂಬ ಖ್ಯಾತಿಯಿದೆ.

ಎ ಆರ್ ರೆಹಮಾನ್ ನೆನಪಿಸಿಕೊಂಡ ಆ ದಿನಗಳು

ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಅವರು ವೃತ್ತಿ ಆರಂಬಿಸಿದ್ದು ಬೆಂಗಳೂರಿನಲ್ಲಿ ಎಂಬುದು ತಿಳಿದ ವಿಷಯ. ಅನೇಕ ಭಾರಿ ಬೆಂಗಳೂರಿಗೆ ಅವರು ಬಂದಿದ್ದಾರೆ. ಆದರೆ ಕಳೆದ ಗುರುವಾರ ಶಂಕರ್ ನಾಗ್ ಚಿತ್ರಮಂದಿರ ಸ್ವಾಗತ್ ಒನಿಕ್ಸ್ ಎಂದು ಮರು ನಾಮಕರಣ ಆಗಿರುವುದರಿಂದ ಚಿತ್ರಮಂದಿರದ ನವೀಕರಣ ಸಮಯಕ್ಕೆ ಉದ್ಘಾಟನೆ ಮಾಡಲು ರೆಹಮಾನ್ ಬಂದಿದ್ದರು.

ಅತ್ಯಾಧುನಿಕ ತಂತ್ರಜ್ಞಾನದ ಹೊದಿರುವ ಶಂಕರ್ ನಾಗ್ ಸ್ವಾಗತ್ ಒನಿಕ್ಸ್ ಚಿತ್ರಮಂದಿರ ಹೆಸರಾಂತ ಹರ್ಮನ್ ಕಂಪನಿಯ ಜೆ ಎಲ್ ಬಿ ಸೌಂಡ್ ಸ್ಪೀಕರ್ ಅಳವಡಿಸಿದೆ. ಇದನ್ನು ಅರಿತ ಎ ಆರ್ ರೆಹಮಾನ್ ಒಂದು ಕಾಲದಲ್ಲಿ ಗುಣ ಮಟ್ಟದ ಜೆ ಎಲ್ ಬಿ ಸ್ಪೀಕರ್, ಹೆಡ್ ಫೋನ್ ಇವರಿಗೆ ಹುಚ್ಚು ಹಿಡಿಸಿದನ್ನು ಹೇಳಿಕೊಂಡು ಅದನ್ನು ಕೊಳ್ಳಲು ಜೇಬಿನಲ್ಲಿ ಹಣ ಇಲ್ಲದಾಗ ಐದು ತಿಂಗಳು ಹಣ ಕೂಡಿಹಾಕಿ ಆ ಸ್ಪೀಕರ್ ಅನ್ನು ಎ ಆರ್ ರೆಹಮಾನ್ ಖರೀದಿ ಮಾಡಿದ್ದರಂತೆ.

ಆದರೆ ಇಂದು ಅದೇ ಜೆ ಎಲ್ ಬಿ ಹರ್ಮನ್ ಕಂಪನಿಯ ಭಾರತದ ರಾಯಭಾರಿ ಆಗಿ ಎ ಆರ್ ರೆಹಮಾನ್ ಬೆಳದು ನಿಂತಿದ್ದಾರೆ. ಕಾಲಾಯ ತಸ್ಮೈ ನಮಹ!

ಎ ಆರ್ ರೆಹಮಾನ್ ಅವರ ಬೆಳವಣಿಗೆ ಇಡೀ ವಿಶ್ವವೆ ಇಂದು ಮೆಚ್ಚುವಂತಹುದು, ಆಸ್ಕರ್ ಪ್ರಶಸ್ತಿ ವಿಜೇತ, ಭಾರತೀಯ ಚಿತ್ರ ರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಂಗೀತ ನಿರ್ದೇಶಕ ಸಹ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.