ETV Bharat / sitara

ನೋಡುಗರನ್ನು ನಿಗೂಢ ಲೋಕಕ್ಕೆ ಕೊಂಡೊಯ್ಯುವ ಆ ದೃಶ್ಯ: ಡಬಲ್​​​​​ ಶೇಡ್​​ನಲ್ಲಿ 'ರವಿಮಾಮ' - ಆ ದೃಶ್ಯ ಕನ್ನಡ ಸಿನಿಮಾ

ರವಿಚಂದ್ರನ್​​ ನಟನೆಯ ಆ ದೃಶ್ಯ ಸಿನಿಮಾ ತಮಿಳಿನ ದೃವಂಗಳ್ ಪತಿನಾರು’ ಸಿನಿಮಾದ ರೀಮೇಕ್​. ಸಿನಿಮಾದಲ್ಲಿ ರವಿಚಂದ್ರನ್​​ ಡಬಲ್​ ಶೇಡ್​ನಲ್ಲಿ ಕಾಣಿಸಿಕೊಂಡಿದ್ದು, ಪೊಲೀಸ್​​ ಪಾತ್ರ ಮಾಡಿದ್ದಾರೆ. ​

ರವಿಚಂದ್ರನ್
author img

By

Published : Nov 9, 2019, 10:48 AM IST

ಅಂದು ‘ದೃಶ್ಯ’ ಸಿನಿಮಾದಲ್ಲಿ ಕ್ರೇಜಿ ಸ್ಟಾರ್​ ವಿಚಂದ್ರನ್ ಮನೆಯ ಮಗಳ ರಕ್ಷಣೆಗೆ ಪಣ ತೊಟ್ಟರು. ಇಂದು ‘ಆ ದೃಶ್ಯ’ ಸಿನಿಮಾದಲ್ಲಿ ಹೆತ್ತ ಮಗನ ರಕ್ಷಣೆಗೆ ಶ್ರಮಿಸಿದ್ದಾರೆ. ಇನ್ನು ಈ ಹಿಂದೆ ತೆರೆ ಕಂಡಿದ್ದ ಕನ್ನಡದ ‘ದೃಶ್ಯ’ ಮಲಯಾಳಂ ಭಾಷೆಯ ‘ದೃಶ್ಯಮ್’ ರೀಮೇಕ್ ಆಗಿತ್ತು. ಇಂದು ‘ಆ ದೃಶ್ಯ’ ತಮಿಳಿನ ‘ದೃವಂಗಳ್ ಪತಿನಾರು’ ರೀಮೇಕ್.

ಈ ಚಿತ್ರದ ಅಂತ್ಯದಲ್ಲಿ ರಾಮಾಯಣವನ್ನು ರಾವಣನ ಮುಖಾಂತರ ಹೇಳಿದರೆ ಹೇಗೋ ಹಾಗಿದೆ ಈ ಚಿತ್ರದ ನಿರೂಪಣೆ ಎಂದು ನಾಯಕ ಹೇಳುತ್ತಾರೆ. ನಿರ್ದೇಶಕ ಶಿವ ಗಣೇಶ್ ರೀಮೇಕ್ ಮಾಡುವಾಗ ಯಥಾವತ್ ಮಾಡದೆ ಕೆಲವು ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ ಪೊಲೀಸ್ ಇಲಾಖೆಯಲ್ಲೇ ಇದ್ದುಕೊಂಡು ಉನ್ನತ ಅಧಿಕಾರಿ ತಪ್ಪು ಮಾಡಿದಾಗ ಮಗನ ಸಂರಕ್ಷಣೆ ಮಾಡುವುದು ಚಿತ್ರದ ಅಂತ್ಯದಲ್ಲಿ ಕಂಡುಬರುತ್ತದೆ.

ಇನ್ನು ಈ ಪಾತ್ರ ವಿ.ರವಿಚಂದ್ರನ್​ಗೆ ಸರಿಯಾಗಿ ಹೊಂದಿಕೊಂಡು ಲೀಲಾಜಾಲವಾಗಿ ಅಭಿನಯಿಸಿರುವುದು ಚಿತ್ರದ ಮೊದಲ ಶಕ್ತಿ. ಮೂಲ ಸಿನಿಮಾವನ್ನು ನೋಡದೆ ಇರುವವರಿಗೆ ‘ಆ ದೃಶ್ಯ’ ಕುತೂಹಲ ಕೆರಳಿಸಿ ನೋಡಿಸಿಕೊಂಡು ಹೋಗುವ ಸಿನಿಮಾ. ವಿ.ರವಿಚಂದ್ರನ್, ಅಚ್ಯುತ್ ಕುಮಾರ್ ಬಿಟ್ಟರೆ ಮಿಕ್ಕವರನ್ನು ಹೊಸದಾಗಿ ಆಯ್ಕೆ ಮಾಡಿಕೊಂಡಿರುವುದು ಚಿತ್ರದ ಅಂತ್ಯದವೆರೆಗೂ ಗುಟ್ಟು ಬಯಲಾಗುವುದಿಲ್ಲ.

  • " class="align-text-top noRightClick twitterSection" data="">

ಸಿನಿಮಾದಲ್ಲಿ ರವಿಚಂದ್ರನ್ ಎರಡು ಶೇಡ್​​ನಲ್ಲಿ ಅಭಿನಯಿಸಿದ್ದಾರೆ. ಒಂದು ಯುವಕನಾಗಿ, ಮತ್ತೊಂದು ವಯಸ್ಸಾದ ಪಾತ್ರ. ಈ ಎರಡು ಪಾತ್ರಗಳಲ್ಲಿ ಅವರು ಸಲೀಸಾಗಿ ಅಭಿನಯಿಸಿದ್ದಾರೆ. ಅಚ್ಯುತ್ ಕುಮಾರ್, ಚೈತ್ರ ಆಚಾರ್, ನಿಸರ್ಗ, ವಿ.ರವಿಚಂದ್ರ ಸಹಾಯಕನ ಪಾತ್ರ, ಯಶ್​ ಶೆಟ್ಟಿ, ಅಜಿತ್ ಜಯರಾಜ್ ಪಾತ್ರಗಳಿಗೆ ಸರಿಯಾಗಿ ಹೊಂದಾಣಿಕೆ ಆಗಿದ್ದಾರೆ.

ಚಿತ್ರದಲ್ಲಿ ಹಿನ್ನೆಲೆ ಸಂಗೀತವನ್ನು ಗೌತಮ್ ಶ್ರೀವಾತ್ಸವ್ ಅಚ್ಚುಕಟ್ಟಾಗಿ ಮಾಡಿದ್ದಾರೆ. ಛಾಯಾಗ್ರಹಣದ ಬೆಂಬಲ ಸಹ ಈ ಚಿತ್ರಕ್ಕೆ ಸೊಗಸಾಗಿದೆ. ಕಡಿಮೆ ಅವಧಿಯಲ್ಲಿ ಒಂದು ಕುತೂಹಲ ತುಂಬಿದ ಸಿನಿಮಾವನ್ನು ಶಿವ ಗಣೇಶ್ ನಿರ್ದೇಶನ ಮಾಡಿದ್ದು, ನೋಡುಗರಿಗೆ ಕುತೂಹಲ ಹುಟ್ಟಿಸುತ್ತದೆ.

ಚಿತ್ರ: ಆ ದೃಶ್ಯ, ನಿರ್ಮಾಪಕ : ಕೆ.ಮಂಜು,

ನಿರ್ದೇಶನ : ಶಿವ ಗಣೇಶ್

, ಸಂಗೀತ : ಗೌತಮ್ ಶ್ರೀವತ್ಸವ್

ಅಂದು ‘ದೃಶ್ಯ’ ಸಿನಿಮಾದಲ್ಲಿ ಕ್ರೇಜಿ ಸ್ಟಾರ್​ ವಿಚಂದ್ರನ್ ಮನೆಯ ಮಗಳ ರಕ್ಷಣೆಗೆ ಪಣ ತೊಟ್ಟರು. ಇಂದು ‘ಆ ದೃಶ್ಯ’ ಸಿನಿಮಾದಲ್ಲಿ ಹೆತ್ತ ಮಗನ ರಕ್ಷಣೆಗೆ ಶ್ರಮಿಸಿದ್ದಾರೆ. ಇನ್ನು ಈ ಹಿಂದೆ ತೆರೆ ಕಂಡಿದ್ದ ಕನ್ನಡದ ‘ದೃಶ್ಯ’ ಮಲಯಾಳಂ ಭಾಷೆಯ ‘ದೃಶ್ಯಮ್’ ರೀಮೇಕ್ ಆಗಿತ್ತು. ಇಂದು ‘ಆ ದೃಶ್ಯ’ ತಮಿಳಿನ ‘ದೃವಂಗಳ್ ಪತಿನಾರು’ ರೀಮೇಕ್.

ಈ ಚಿತ್ರದ ಅಂತ್ಯದಲ್ಲಿ ರಾಮಾಯಣವನ್ನು ರಾವಣನ ಮುಖಾಂತರ ಹೇಳಿದರೆ ಹೇಗೋ ಹಾಗಿದೆ ಈ ಚಿತ್ರದ ನಿರೂಪಣೆ ಎಂದು ನಾಯಕ ಹೇಳುತ್ತಾರೆ. ನಿರ್ದೇಶಕ ಶಿವ ಗಣೇಶ್ ರೀಮೇಕ್ ಮಾಡುವಾಗ ಯಥಾವತ್ ಮಾಡದೆ ಕೆಲವು ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ ಪೊಲೀಸ್ ಇಲಾಖೆಯಲ್ಲೇ ಇದ್ದುಕೊಂಡು ಉನ್ನತ ಅಧಿಕಾರಿ ತಪ್ಪು ಮಾಡಿದಾಗ ಮಗನ ಸಂರಕ್ಷಣೆ ಮಾಡುವುದು ಚಿತ್ರದ ಅಂತ್ಯದಲ್ಲಿ ಕಂಡುಬರುತ್ತದೆ.

ಇನ್ನು ಈ ಪಾತ್ರ ವಿ.ರವಿಚಂದ್ರನ್​ಗೆ ಸರಿಯಾಗಿ ಹೊಂದಿಕೊಂಡು ಲೀಲಾಜಾಲವಾಗಿ ಅಭಿನಯಿಸಿರುವುದು ಚಿತ್ರದ ಮೊದಲ ಶಕ್ತಿ. ಮೂಲ ಸಿನಿಮಾವನ್ನು ನೋಡದೆ ಇರುವವರಿಗೆ ‘ಆ ದೃಶ್ಯ’ ಕುತೂಹಲ ಕೆರಳಿಸಿ ನೋಡಿಸಿಕೊಂಡು ಹೋಗುವ ಸಿನಿಮಾ. ವಿ.ರವಿಚಂದ್ರನ್, ಅಚ್ಯುತ್ ಕುಮಾರ್ ಬಿಟ್ಟರೆ ಮಿಕ್ಕವರನ್ನು ಹೊಸದಾಗಿ ಆಯ್ಕೆ ಮಾಡಿಕೊಂಡಿರುವುದು ಚಿತ್ರದ ಅಂತ್ಯದವೆರೆಗೂ ಗುಟ್ಟು ಬಯಲಾಗುವುದಿಲ್ಲ.

  • " class="align-text-top noRightClick twitterSection" data="">

ಸಿನಿಮಾದಲ್ಲಿ ರವಿಚಂದ್ರನ್ ಎರಡು ಶೇಡ್​​ನಲ್ಲಿ ಅಭಿನಯಿಸಿದ್ದಾರೆ. ಒಂದು ಯುವಕನಾಗಿ, ಮತ್ತೊಂದು ವಯಸ್ಸಾದ ಪಾತ್ರ. ಈ ಎರಡು ಪಾತ್ರಗಳಲ್ಲಿ ಅವರು ಸಲೀಸಾಗಿ ಅಭಿನಯಿಸಿದ್ದಾರೆ. ಅಚ್ಯುತ್ ಕುಮಾರ್, ಚೈತ್ರ ಆಚಾರ್, ನಿಸರ್ಗ, ವಿ.ರವಿಚಂದ್ರ ಸಹಾಯಕನ ಪಾತ್ರ, ಯಶ್​ ಶೆಟ್ಟಿ, ಅಜಿತ್ ಜಯರಾಜ್ ಪಾತ್ರಗಳಿಗೆ ಸರಿಯಾಗಿ ಹೊಂದಾಣಿಕೆ ಆಗಿದ್ದಾರೆ.

ಚಿತ್ರದಲ್ಲಿ ಹಿನ್ನೆಲೆ ಸಂಗೀತವನ್ನು ಗೌತಮ್ ಶ್ರೀವಾತ್ಸವ್ ಅಚ್ಚುಕಟ್ಟಾಗಿ ಮಾಡಿದ್ದಾರೆ. ಛಾಯಾಗ್ರಹಣದ ಬೆಂಬಲ ಸಹ ಈ ಚಿತ್ರಕ್ಕೆ ಸೊಗಸಾಗಿದೆ. ಕಡಿಮೆ ಅವಧಿಯಲ್ಲಿ ಒಂದು ಕುತೂಹಲ ತುಂಬಿದ ಸಿನಿಮಾವನ್ನು ಶಿವ ಗಣೇಶ್ ನಿರ್ದೇಶನ ಮಾಡಿದ್ದು, ನೋಡುಗರಿಗೆ ಕುತೂಹಲ ಹುಟ್ಟಿಸುತ್ತದೆ.

ಚಿತ್ರ: ಆ ದೃಶ್ಯ, ನಿರ್ಮಾಪಕ : ಕೆ.ಮಂಜು,

ನಿರ್ದೇಶನ : ಶಿವ ಗಣೇಶ್

, ಸಂಗೀತ : ಗೌತಮ್ ಶ್ರೀವತ್ಸವ್

ಆ ದೃಶ್ಯ ರಾಮಾಯಣ ರಾವಣನ ನೋಟದಲ್ಲಿ!

ಅವದಿ -107 ನಿಮಿಷ, ಕ್ಯಾಟಗರಿ – ಥ್ರಿಲ್ಲರ್, ರೇಟಿಂಗ್ – 3/5

ಚಿತ್ರ – ಆ ದೃಶ್ಯ, ನಿರ್ಮಾಪಕ – ಕೆ ಮಂಜು, ನಿರ್ದೇಶನ – ಶಿವ ಗಣೇಶ್, ಸಂಗೀತ – ಗೌತಮ್ ಶ್ರೀವತ್ಸವ್, ಛಾಯಾಗ್ರಹಣ – ವಿನೋದ್ ಭಾರತಿ, ತಾರಾಗಣ – ವಿ ರವಿಚಂದ್ರನ್, ಅಚ್ಯುತ್ ಕುಮಾರ್, ಯಷ್ ಶೆಟ್ಟಿ, ಅಜಿತ್ ಜಯರಾಜ್, ಚೈತ್ರ ಆಚಾರ್, ನಿಸರ್ಗ ಹಾಗೂ ಇತರರು.

ಅಂದು ದೃಶ್ಯ ಸಿನಿಮಾ ಇಂದ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಮನೆಯ ಮಗಳ ರಕ್ಷಣೆಗೆ ಪಣ ತೊಟ್ಟರು. ಇಂದು ಆ ದೃಶ್ಯ ಸಿನಿಮಾದಲ್ಲಿ ಹೆತ್ತ ಮಗನ ರಕ್ಷಣೆ ಶ್ರಮಿಸಿದ್ದಾರೆ ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡು. ಅಂದು ಪೊಲೀಸ್ ಅಧಿಕಾರಿ ಆಗಿ ಅಲ್ಲ. ಕನ್ನಡದ ದೃಶ್ಯ ಮಲಯಾಳಂ ಭಾಷೆಯ ದೃಶ್ಯಮ್ ರೀಮೇಕ್ ಆಗಿತ್ತು.

ಇಂದು ಆ ದೃಶ್ಯ ತಮಿಳಿನ ದೃವಂಗಳ್ ಪತಿನಾರು ರೀಮೇಕ್. ಈ ಚಿತ್ರದ ಅಂತ್ಯದಲ್ಲಿ ನಾಯಕ ಹೇಳುವುದು ರಾಮಯಣವನ್ನು ರಾವಣನ ಮುಖಾಂತರ ಹೇಳಿದರೆ ಹೇಗೋ ಹಾಗಿದೆ ಈ ಚಿತ್ರದ ನಿರೂಪಣೆ.

ನಿರ್ದೇಶಕ ಶಿವ ಗಣೇಶ್ ರೀಮೇಕ್ ಮಾಡುವಾಗ ಯಥಾವತ್ ಹಾಗೆ ಮಾಡದೆ ಕೆಲವು ಬದಲಾವಣೆ ಮಾಡಿಕೊಂಡಿದ್ದಾರೆ. ಆದರೆ ಪೊಲೀಸ್ ಇಲಾಖೆಯಲ್ಲೇ ಇದ್ದುಕೊಂಡು ಉನ್ನತ ಅಧಿಕಾರಿ ತಪ್ಪು ಮಾಡಿದ ಮಗನ ಸಂರಕ್ಷಣೆ ಮಾಡುವುದು ಚಿತ್ರದ ಅಂತ್ಯದಲ್ಲಿ ಕಂಡುಬಂದರು ಅಲ್ಲಿಯವರೆಗೂ ಆ ದೃಶ್ಯ ಅಲ್ಲಲ್ಲಿ ದೃಶ್ಯ ಕಾವ್ಯವೇ ಸರಿ.

ಈ ಪಾತ್ರ ವಿ ರವಿಚಂದ್ರನ್ ಅವರಿಗೆ ಸರಿಯಾಗಿ ಹೊಂದಿಕೊಂಡು ಅವರು ಲೀಲಾಜಾಲವಾಗಿ ಅಭಿನಯಿಸಿರುವುದು ಚಿತ್ರದ ಮೊದಲ ಶಕ್ತಿ.

ಮೂಲ ಸಿನಿಮಾವನ್ನು ನೋಡದೆ ಇರುವವರಿಗೆ ಆ ದೃಶ್ಯ ಕುತೂಹಲ ಕೆರಳಿಸಿ ನೋಡಿಸಿಕೊಂಡು ಹೋಗುವ ಸಿನಿಮಾ. ನಿರ್ದೇಶಕ ಶಿವ ಗಣೇಶ್ ಚಿತ್ರದ ಕಥಾ ನಾಯಕ ವಿ ರವಿಚಂದ್ರನ್, ಅಚ್ಯುತ್ ಕುಮಾರ್ ಬಿಟ್ಟರೆ ಮಿಕ್ಕವರನ್ನು ಹೊಸದಾಗಿ ಆಯ್ಕೆ ಮಾಡಿಕೊಂಡಿರುವುದು ಚಿತ್ರದ ಅಂತ್ಯದವೆರೆವಿಗೂ ಗುಟ್ಟು ಬಯಲಾಗುವುದಿಲ್ಲ.

ಒಂದು ಕತ್ತಲ ರಾತ್ರಿ ಜೊತೆಗೆ ಮಳೆ. ಒಂದು ಕೊಲೆ ಮತ್ತೊಂದು ಕಡೆ ವೇಗವಾಗಿ ಚಲಿಸುವ ಕಾರಿನಿಂದ ಅಪಘಾತದಲ್ಲಿ ಮತ್ತೊಬ್ಬ ಸತ್ತಿದ್ದಾನೆ. ಒಂದು ಕೊಲೆಗೆ ಕಾರಣ ಅತ್ಯಾಚಾರ ಕಾರಣವಾಗುತ್ತದೆ. ಮತ್ತೊಂದು ರಸ್ತೆ ಅಪಘಾತದಲ್ಲಿ ರಸ್ತೆಯಲ್ಲಿ ಸಾಯುವುದು ಈ ಅತ್ಯಾಚಾರವನ್ನು ಮೊಬೈಲ್ ಅಲ್ಲಿ ಸೆರೆ ಹಿಡಿದ ವ್ಯಕ್ತಿ.

ಈ ಎರಡು ವಿಷಯ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದೆ. ಆದರೆ ಯಾರು ಯಾರನ್ನು ಕೊಲೆ ಮಾಡಿದರು ಎಂಬುದು ಕಗ್ಗಂಟು. ಆದರೆ ಇದನ್ನು ಬೇದಿಸಲು ಬರುವ ಪೊಲೀಸ್ ಅಧಿಕಾರಿ ಸೂರ್ಯ ತೇಜ (ವಿ ರವಿಚಂದ್ರನ್) ತನ್ನ ಸಹಾಯಕರೊಂದಿಗೆ ಬಹಳ ವೇಗವಾಗಿ ಷಡ್ಯಂತ್ರವನ್ನು ಬೇದಿಸಲು ಶಕ್ತನಾಗುತ್ತಾನೆ. ಆದರೆ ಆಮೇಲೆ ನಿಶ್ಯಕ್ತನಾಗುವುದಕ್ಕೆ ಬೇರೆಯದೇ ಕಾರಣವಿದೆ. ಹಾಗಾದರೆ ಇವರು ಸಹ ಎರಡು ಕೊಲೆಗಳಿಗೆ ಕಣೆಕ್ಟ್ ಆಗಿದ್ದಾರೆ.....ಅದನ್ನು ತಿಳಿಯುವುದಕ್ಕೆ ನೀವು ಚಿತ್ರಮಂದಿರಕ್ಕೆ ಹೋಗಬೇಕು.

ವಿ ರವಿಚಂದ್ರನ್ ಎರಡು ಶೆಡ್ ಅಲ್ಲಿ ಅಭಿನಯಿಸಿದ್ದಾರೆ. ಯುವಕನಾಗಿ ಮತ್ತೊಂದು ವಯಸ್ಸಾದ ಪಾತ್ರ. ಈ ಎರಡು ಪಾತ್ರಗಳಲ್ಲಿ ಅವರು ಸಲೀಸಾಗಿ ಅಭಿನಯಿಸಿದ್ದಾರೆ.

ಅಚ್ಯುತ್ ಕುಮಾರ್, ಚೈತ್ರ ಆಚಾರ್, ನಿಸರ್ಗ, ವಿ ರವಿಚಂದ್ರ ಸಹಾಯಕನ ಪಾತ್ರ, ಯಷ್ ಶೆಟ್ಟಿ, ಅಜಿತ್ ಜಯರಾಜ್ ಪಾತ್ರಗಳಿಗೆ ಸರಿಯಾಗಿ ಹೊಂದಾಣಿಕೆ ಆಗಿದ್ದಾರೆ.

ಚಿತ್ರದಲ್ಲಿ ಒಂದು ಹಾಗೂ ಹಾಗೂ ಹಿನ್ನಲೆ ಸಂಗೀತವನ್ನು ನುರಿತ ವ್ಯಕ್ತಿ ಗೌತಮ್ ಶ್ರೀವತ್ಸವ್ ಅಚ್ಚುಕಟ್ಟಾಗಿ ಮಾಡಿದ್ದಾರೆ. ಛಾಯಾಗ್ರಹಣದ ಬೆಂಬಲ ಸಹ ಈ ಚಿತ್ರಕ್ಕೆ ಸೊಗಸಾಗಿದೆ.

ಕಡಿಮೆ ಆವದಿಯಲ್ಲಿ ಒಂದು ಕುತೂಹಲ ತುಂಬಿದ ಸಿನಿಮಾವನ್ನು ಶಿವ ಗಣೇಶ್ ನಿರ್ದೇಶನದಲ್ಲಿ ಕಟ್ಟಿ ಕೊಟ್ಟಿದ್ದಾರೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.