ETV Bharat / sitara

ತಮ್ಮ ವಿರುದ್ಧದ ಎಫ್​ಐಆರ್​ ರದ್ದುಪಡಿಸಿ: ಹೈಕೋರ್ಟ್​ ಮೆಟ್ಟಿಲೇರಿದ ಸುಶಾಂತ್ ಸಿಂಗ್​ ಸಿಸ್ಟರ್ಸ್​​

author img

By

Published : Oct 6, 2020, 3:54 PM IST

ನಕಲಿ ವೈದ್ಯಕೀಯ ದಾಖಲೆ ಸೃಷ್ಟಿಸಿದ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾದ ಎಫ್​ಐಆರ್ ರದ್ದುಪಡಿಸುವಂತೆ ನಟ ಸುಶಾಂತ್​ ಸಿಂಗ್ ರಜಪೂತ್​ ಸಹೋದರಿಯರು ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

sushant sisters move bombay hc
ಸುಶಾಂತ್ ಸಿಂಗ್ ಸಹೋದರಿಯರ ವಿರುದ್ಧ ಎಫ್​ಐಆರ್

ಮುಂಬೈ : ತಮ್ಮ ಸಹೋದರನ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಕಲಿ ವೈದ್ಯಕೀಯ ದಾಖಲೆ ಸೃಷ್ಟಿಸಿದ ಆರೋಪದಲ್ಲಿ ಮುಂಬೈ ಪೊಲೀಸರು ದಾಖಲಿಸಿದ ಎಫ್​ಐಆರ್​ ರದ್ದುಗೊಳಿಸುವಂತೆ ಕೋರಿ ನಟ ಸುಶಾಂತ್​ ಸಿಂಗ್ ಸಹೋದರಿಯರಾದ ಪ್ರಿಯಾಂಕ ಸಿಂಗ್ ಮತ್ತು ಮೀತು ಸಿಂಗ್ ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಸುಶಾಂತ್​ ಸಿಂಗ್ ಸಾವಿಗೆ ಸಂಬಂಧಪಟ್ಟಂತೆ ಡ್ರಗ್ ಜಾಲದ ನಂಟಿನ ಆರೋಪದಲ್ಲಿ ಜೈಲು ಸೇರಿರುವ ಸುಶಾಂತ್​ ಸಿಂಗ್ ಪ್ರಿಯತಮೆ ರೇಹಾ ಚಕ್ರವರ್ತಿ ನೀಡಿದ ದೂರಿನ ಮೇರೆಗೆ ಬಾಂದ್ರಾ ಪೊಲೀಸರು ಸೆ.7 ರಂದು ಪ್ರಿಯಾಂಕ ಮತ್ತು ಮೀತು ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ.

ದೆಹಲಿಯ ರಾಮ್​ ಮನೋಹರ್​ ಲೋಹಿಯಾ ಆಸ್ಪತ್ರೆಯ ವೈದ್ಯ ಡಾ. ತರುಣ್ ಕುಮಾರ್​ ಮತ್ತು ಸುಶಾಂತ್ ಸಿಂಗ್ ಸಹೋದರಿಯರು ಸೇರಿ ನಕಲಿ ವೈದ್ಯಕೀಯ ದಾಖಲೆ ಸೃಷ್ಟಿಸಿದ್ದಾರೆ. ಇದು ನಾಕೋಟಿಕ್ ಡ್ರಗ್ ಆ್ಯಂಡ್​ ಸೈಕೋಟ್ರಾಪಿಕ್ ಸಬ್​ಸ್ಟ್ಯಾನ್ಸಸ್​ ( ಎನ್​ಡಿಪಿಎಸ್​) ಕಾಯ್ದೆ 1985 ರ ಉಲ್ಲಂಘನೆಯಾಗಿದೆ ಎಂದು ರೇಹಾ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

ನ್ಯಾಯಮೂರ್ತಿಗಳಾದ ಎಸ್​.ಎಸ್ ಶಿಂಧೆ ಮತ್ತುಎಂ. ಎಸ್ ಕಾರ್ನಿಕ್ ಅವರನ್ನೊಳಗೊಂಡ ವಿಭಾಗೀಯ ಪೀಠ ಮಂಗಳವಾರ ಈ ಅರ್ಜಿಯನ್ನು ಕೈಗೆತ್ತಿಕೊಂಡಿತ್ತು ಮತ್ತು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ಮುಂದೂಡಿದೆ.

ಮುಂಬೈ : ತಮ್ಮ ಸಹೋದರನ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಕಲಿ ವೈದ್ಯಕೀಯ ದಾಖಲೆ ಸೃಷ್ಟಿಸಿದ ಆರೋಪದಲ್ಲಿ ಮುಂಬೈ ಪೊಲೀಸರು ದಾಖಲಿಸಿದ ಎಫ್​ಐಆರ್​ ರದ್ದುಗೊಳಿಸುವಂತೆ ಕೋರಿ ನಟ ಸುಶಾಂತ್​ ಸಿಂಗ್ ಸಹೋದರಿಯರಾದ ಪ್ರಿಯಾಂಕ ಸಿಂಗ್ ಮತ್ತು ಮೀತು ಸಿಂಗ್ ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಸುಶಾಂತ್​ ಸಿಂಗ್ ಸಾವಿಗೆ ಸಂಬಂಧಪಟ್ಟಂತೆ ಡ್ರಗ್ ಜಾಲದ ನಂಟಿನ ಆರೋಪದಲ್ಲಿ ಜೈಲು ಸೇರಿರುವ ಸುಶಾಂತ್​ ಸಿಂಗ್ ಪ್ರಿಯತಮೆ ರೇಹಾ ಚಕ್ರವರ್ತಿ ನೀಡಿದ ದೂರಿನ ಮೇರೆಗೆ ಬಾಂದ್ರಾ ಪೊಲೀಸರು ಸೆ.7 ರಂದು ಪ್ರಿಯಾಂಕ ಮತ್ತು ಮೀತು ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ.

ದೆಹಲಿಯ ರಾಮ್​ ಮನೋಹರ್​ ಲೋಹಿಯಾ ಆಸ್ಪತ್ರೆಯ ವೈದ್ಯ ಡಾ. ತರುಣ್ ಕುಮಾರ್​ ಮತ್ತು ಸುಶಾಂತ್ ಸಿಂಗ್ ಸಹೋದರಿಯರು ಸೇರಿ ನಕಲಿ ವೈದ್ಯಕೀಯ ದಾಖಲೆ ಸೃಷ್ಟಿಸಿದ್ದಾರೆ. ಇದು ನಾಕೋಟಿಕ್ ಡ್ರಗ್ ಆ್ಯಂಡ್​ ಸೈಕೋಟ್ರಾಪಿಕ್ ಸಬ್​ಸ್ಟ್ಯಾನ್ಸಸ್​ ( ಎನ್​ಡಿಪಿಎಸ್​) ಕಾಯ್ದೆ 1985 ರ ಉಲ್ಲಂಘನೆಯಾಗಿದೆ ಎಂದು ರೇಹಾ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

ನ್ಯಾಯಮೂರ್ತಿಗಳಾದ ಎಸ್​.ಎಸ್ ಶಿಂಧೆ ಮತ್ತುಎಂ. ಎಸ್ ಕಾರ್ನಿಕ್ ಅವರನ್ನೊಳಗೊಂಡ ವಿಭಾಗೀಯ ಪೀಠ ಮಂಗಳವಾರ ಈ ಅರ್ಜಿಯನ್ನು ಕೈಗೆತ್ತಿಕೊಂಡಿತ್ತು ಮತ್ತು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ಮುಂದೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.