ETV Bharat / sitara

ಸುಶಾಂತ್​ ಸಿಂಗ್ ಸಾವಿನ ಪ್ರಕರಣ: ಎನ್​ಸಿಬಿ ವಿಚಾರಣೆಗೆ ಹಾಜರಾದ ರಿಯಾ ಚಕ್ರವರ್ತಿ

author img

By

Published : Sep 6, 2020, 1:46 PM IST

Updated : Sep 6, 2020, 2:00 PM IST

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ವಿಚಾರಣೆಗಾಗಿ ನಟಿ ರಿಯಾ ಚಕ್ರವರ್ತಿಯನ್ನು ಎನ್​ಸಿಬಿ ಕಚೇರಿಗೆ ಕರೆಸಿಕೊಳ್ಳಲಾಗಿದೆ.

rhea chakraborty in ncb office
ಎನ್​ಸಿಬಿ ಮುಂದೆ ವಿಚಾರಣೆಗೆ ಹಾಜರಾದ ರಿಯಾ ಚಕ್ರವರ್ತಿ

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​ ಅಸಹಜ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಲಿಂಕ್​ ಇದೆಯಾ ಎಂಬುದನ್ನು ತನಿಖೆ ನಡೆಸಲು ನಟಿ ರಿಯಾ ಚಕ್ರವರ್ತಿಯನ್ನು ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್​ಸಿಬಿ) ತನ್ನ ಕಚೇರಿಗೆ ಕರೆಸಿಕೊಂಡಿದೆ.

ರಿಯಾ ಚಕ್ರವರ್ತಿಯನ್ನು ಕರೆತರಲು ಎನ್​ಸಿಬಿ ತಂಡ ಆಕೆಯ ಮನೆಗೆ ತೆರಳಿತ್ತು. ಆದರೆ, ಅವರೊಂದಿಗೆ ಬರಲು ರಿಯಾ ನಿರಾಕರಿಸಿದ್ದು, ಪ್ರತ್ಯೇಕವಾಗಿ ಎನ್​ಸಿಬಿ ಕಚೇರಿಗೆ ಆಗಮಿಸಿದ್ದಾರೆ. ಮುಂಬೈ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು, ರಿಯಾ ಚಕ್ರವರ್ತಿ ಸಹೋದರ ಶೋಯಿಕ್ ಚಕ್ರವರ್ತಿ ಮತ್ತು ಸುಶಾಂತ್ ಅವರ ಹೋಂ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಅವರನ್ನು ಸೆಪ್ಟೆಂಬರ್ 9 ರವರೆಗೆ 4 ದಿನಗಳ ಕಾಲ ಎನ್‌ಸಿಬಿ ಕಸ್ಟಡಿಗೆ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ.

ರಿಯಾ ಸಹೋದರ ಮತ್ತು ಸೆ.5 ರಂದು ಬಂಧಿತನಾಗಿದ್ದ ಇನ್ನೋರ್ವ ವ್ಯಕ್ತಿ ದೀಪೇಶ್​ ಸಾವಂತ್​ ಜೊತೆ ರಿಯಾಳನ್ನು ಕೂರಿಸಿ ವಿಚಾರಣೆ ನಡೆಸಲು ಆಕೆಯನ್ನು ಕಚೇರಿಗೆ ಕರೆಸಿಕೊಳ್ಳುವುದಾಗಿ ಎನ್​ಸಿಬಿ ನ್ಯಾಯಾಲಯಕ್ಕೆ ತಿಳಿಸಿತ್ತು. ಅದರಂತೆ ಇಂದು ಕಚೇರಿಗೆ ಕರೆಸಿಕೊಂಡಿದೆ.

ತನ್ನ ಪುತ್ರಿಯನ್ನು ಎನ್​ಸಿಬಿ ಕರೆಸಿಕೊಂಡಿರುವುದನ್ನು ಬಗ್ಗೆ ರಿಯಾ ತಂದೆ ಲೆಫ್ಟಿನೆಂಟ್ ಕರ್ನಲ್ (ನಿವೃತ್ತ) ಇಂದ್ರಜಿತ್ ಚಕ್ರವರ್ತಿ ಖಂಡಿಸಿದ್ದು, "ಅಭಿನಂದನೆಗಳು ಭಾರತ, ನೀವು ನನ್ನ ಮಗನನ್ನು ಬಂಧಿಸಿದ್ದೀರಿ. ಮುಂದಿನ ಸಾಲಿನಲ್ಲಿ ನನ್ನ ಮಗಳು ಎಂದು ನನಗೆ ಖಾತ್ರಿಯಿದೆ ಮತ್ತು ಅದರ ನಂತರ ಯಾರು ಎಂದು ನನಗೆ ತಿಳಿದಿಲ್ಲ. ನೀವು ಮಧ್ಯಮ ವರ್ಗದ ಕುಟುಂಬವನ್ನು ಪ್ರಕರಣದಲ್ಲಿ ಸಿಲುಕಿಸಿದ್ದೀರಿ. ಆದರೆ, ನ್ಯಾಯದ ದೃಷ್ಟಿಯಿಂದ ಎಲ್ಲವೂ ಸಮರ್ಥನೀಯವಾಗಿದೆ. ಜೈ ಹಿಂದ್" ಎಂದಿದ್ದಾರೆ.

ರಿಯಾ ಪರ ವಕೀಲ ಸತೀಶ್​ ಮಾನೆ ಶಿಂಧೆ ಪ್ರತಿಕ್ರಿಯಿಸಿ, ಇದೊಂದು ಮೋಸದ ಬೇಟೆಯಾಗಿರುವುದರಿಂದ ರಿಯಾ ಬಂಧನಕ್ಕೊಳಗಾಗಲು ಸಿದ್ಧರಿದ್ದಾರೆ. ಒಬ್ಬ ನಿರಪರಾಧಿಯಾಗಿ ಯಾರಾದರೊಬ್ಬರನ್ನು ಪ್ರೀತಿಸುವುದು ಅಪರಾಧವಾದರೆ, ಅದರ ಪರಿಣಾಮಗಳನ್ನು ಅವರು ಎದುರಿಸಬೇಕಾಗುತ್ತದೆ. ಬಿಹಾರ ಪೊಲೀಸರು, ಸಿಬಿಐ, ಇಡಿ ಮತ್ತು ಈಗ ಎನ್​ಸಿಬಿ ಯಾವುದೆಲ್ಲ ಪ್ರಕರಣಗಳನ್ನು ರಿಯಾ ಮೇಲೆ ಹೊರಿಸಿದೆಯೋ ಅದ್ಯಾವುದಕ್ಕೂ ನಿರೀಕ್ಷಣ ಜಾಮೀನು ಪಡೆಯಲು ನಾವು ಯಾವುದೇ ನ್ಯಾಯಾಲಯಕ್ಕೆ ಹೋಗಿಲ್ಲ ಎಂದಿದ್ದಾರೆ.

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​ ಅಸಹಜ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಲಿಂಕ್​ ಇದೆಯಾ ಎಂಬುದನ್ನು ತನಿಖೆ ನಡೆಸಲು ನಟಿ ರಿಯಾ ಚಕ್ರವರ್ತಿಯನ್ನು ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್​ಸಿಬಿ) ತನ್ನ ಕಚೇರಿಗೆ ಕರೆಸಿಕೊಂಡಿದೆ.

ರಿಯಾ ಚಕ್ರವರ್ತಿಯನ್ನು ಕರೆತರಲು ಎನ್​ಸಿಬಿ ತಂಡ ಆಕೆಯ ಮನೆಗೆ ತೆರಳಿತ್ತು. ಆದರೆ, ಅವರೊಂದಿಗೆ ಬರಲು ರಿಯಾ ನಿರಾಕರಿಸಿದ್ದು, ಪ್ರತ್ಯೇಕವಾಗಿ ಎನ್​ಸಿಬಿ ಕಚೇರಿಗೆ ಆಗಮಿಸಿದ್ದಾರೆ. ಮುಂಬೈ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು, ರಿಯಾ ಚಕ್ರವರ್ತಿ ಸಹೋದರ ಶೋಯಿಕ್ ಚಕ್ರವರ್ತಿ ಮತ್ತು ಸುಶಾಂತ್ ಅವರ ಹೋಂ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಅವರನ್ನು ಸೆಪ್ಟೆಂಬರ್ 9 ರವರೆಗೆ 4 ದಿನಗಳ ಕಾಲ ಎನ್‌ಸಿಬಿ ಕಸ್ಟಡಿಗೆ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ.

ರಿಯಾ ಸಹೋದರ ಮತ್ತು ಸೆ.5 ರಂದು ಬಂಧಿತನಾಗಿದ್ದ ಇನ್ನೋರ್ವ ವ್ಯಕ್ತಿ ದೀಪೇಶ್​ ಸಾವಂತ್​ ಜೊತೆ ರಿಯಾಳನ್ನು ಕೂರಿಸಿ ವಿಚಾರಣೆ ನಡೆಸಲು ಆಕೆಯನ್ನು ಕಚೇರಿಗೆ ಕರೆಸಿಕೊಳ್ಳುವುದಾಗಿ ಎನ್​ಸಿಬಿ ನ್ಯಾಯಾಲಯಕ್ಕೆ ತಿಳಿಸಿತ್ತು. ಅದರಂತೆ ಇಂದು ಕಚೇರಿಗೆ ಕರೆಸಿಕೊಂಡಿದೆ.

ತನ್ನ ಪುತ್ರಿಯನ್ನು ಎನ್​ಸಿಬಿ ಕರೆಸಿಕೊಂಡಿರುವುದನ್ನು ಬಗ್ಗೆ ರಿಯಾ ತಂದೆ ಲೆಫ್ಟಿನೆಂಟ್ ಕರ್ನಲ್ (ನಿವೃತ್ತ) ಇಂದ್ರಜಿತ್ ಚಕ್ರವರ್ತಿ ಖಂಡಿಸಿದ್ದು, "ಅಭಿನಂದನೆಗಳು ಭಾರತ, ನೀವು ನನ್ನ ಮಗನನ್ನು ಬಂಧಿಸಿದ್ದೀರಿ. ಮುಂದಿನ ಸಾಲಿನಲ್ಲಿ ನನ್ನ ಮಗಳು ಎಂದು ನನಗೆ ಖಾತ್ರಿಯಿದೆ ಮತ್ತು ಅದರ ನಂತರ ಯಾರು ಎಂದು ನನಗೆ ತಿಳಿದಿಲ್ಲ. ನೀವು ಮಧ್ಯಮ ವರ್ಗದ ಕುಟುಂಬವನ್ನು ಪ್ರಕರಣದಲ್ಲಿ ಸಿಲುಕಿಸಿದ್ದೀರಿ. ಆದರೆ, ನ್ಯಾಯದ ದೃಷ್ಟಿಯಿಂದ ಎಲ್ಲವೂ ಸಮರ್ಥನೀಯವಾಗಿದೆ. ಜೈ ಹಿಂದ್" ಎಂದಿದ್ದಾರೆ.

ರಿಯಾ ಪರ ವಕೀಲ ಸತೀಶ್​ ಮಾನೆ ಶಿಂಧೆ ಪ್ರತಿಕ್ರಿಯಿಸಿ, ಇದೊಂದು ಮೋಸದ ಬೇಟೆಯಾಗಿರುವುದರಿಂದ ರಿಯಾ ಬಂಧನಕ್ಕೊಳಗಾಗಲು ಸಿದ್ಧರಿದ್ದಾರೆ. ಒಬ್ಬ ನಿರಪರಾಧಿಯಾಗಿ ಯಾರಾದರೊಬ್ಬರನ್ನು ಪ್ರೀತಿಸುವುದು ಅಪರಾಧವಾದರೆ, ಅದರ ಪರಿಣಾಮಗಳನ್ನು ಅವರು ಎದುರಿಸಬೇಕಾಗುತ್ತದೆ. ಬಿಹಾರ ಪೊಲೀಸರು, ಸಿಬಿಐ, ಇಡಿ ಮತ್ತು ಈಗ ಎನ್​ಸಿಬಿ ಯಾವುದೆಲ್ಲ ಪ್ರಕರಣಗಳನ್ನು ರಿಯಾ ಮೇಲೆ ಹೊರಿಸಿದೆಯೋ ಅದ್ಯಾವುದಕ್ಕೂ ನಿರೀಕ್ಷಣ ಜಾಮೀನು ಪಡೆಯಲು ನಾವು ಯಾವುದೇ ನ್ಯಾಯಾಲಯಕ್ಕೆ ಹೋಗಿಲ್ಲ ಎಂದಿದ್ದಾರೆ.

Last Updated : Sep 6, 2020, 2:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.