ETV Bharat / sitara

ಬಿಟೌನ್​​ಗೆ ಹಾರಿದ ನಾಗಶೇಖರ್​... ಕನ್ನಡ ನಿರ್ದೇಶಕನ ಹೆಗಲಿಗೆ ಬಿತ್ತು ದೊಡ್ಡ​ ಜವಾಬ್ದಾರಿ

ಯಶಸ್ವಿ ನಿರ್ದೇಶಕ ನಾಗಶೇಖರ್ ಬಾಲಿವುಡ್​ಗೆ ಹಾರುತ್ತಿದ್ದಾರೆ. ಪ್ರಸಿದ್ಧ ನಿರ್ಮಾಪಕನ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸಲು ಬಿಟೌನ್ ಬಸ್​ ಏರಿದ್ದಾರೆ.

author img

By

Published : Jun 24, 2019, 9:58 AM IST

ನಾಗಶೇಖರ್

ಅಮರ್ ಚಿತ್ರದ ಮೂಲಕ ಅಂಬರೀಶ್ ಪುತ್ರ ಅಭಿಷೇಕ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿರುವ ನಿರ್ದೇಶಕ ನಾಗಶೇಖರ್ ಲಕ್ ಬದಲಾಗಿದೆ. ಕನ್ನಡದ ಈ ನಿರ್ದೇಶಕನನ್ನು ಬಾಲಿವುಡ್​ ಮಂದಿ ಬಿಗಿದಪ್ಪಿಕೊಂಡಿದ್ದಾರೆ.

ಹೌದು, 'ಮೈನಾ', 'ಅರಮನೆ',' ಸಂಜು ವೆಡ್ಸ್​ ಗೀತಾಗಳಂತಹ ಬ್ಲಾಕ್​ಬಸ್ಟರ್​ ಸಿನಿಮಾಗಳಿಗೆ ಆ್ಯಕ್ಷನ್​ ಕಟ್ ಹೇಳಿರುವ ನಾಗಶೇಖರ್ ಈಗ ಬಾಲಿವುಡ್​​ಗೆ ಪಾದಾರ್ಪಣೆ ಮಾಡಿದ್ದಾರೆ. ಇತ್ತೀಚಿಗಷ್ಟೇ ತೆರೆಕಂಡಿದ್ದ 'ಅಮರ್' ಚಿತ್ರದಿಂದ ಪ್ರಭಾವಿತಗೊಂಡಿರುವ ಬಿಟೌನ್​ ನಿರ್ಮಾಪಕ ಜೋಗಿಂದರ್ ಸಿಂಗ್​, ತಮ್ಮ ಮಗನನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿಯನ್ನು ಕನ್ನಡದ ಈ ನಿರ್ದೇಶಕನ ಹೆಗಲಿಗೆ ಹಾಕಿದ್ದಾರೆ. ನಿನ್ನೆಯಷ್ಟೇ ಈ ಚಿತ್ರದ ಮಾತುಕಥೆ ನಡೆದಿದ್ದು, ತಮ್ಮ ಬಿಟೌನ್ ಚೊಚ್ಚಲ ಚಿತ್ರಕ್ಕೆ ನಾಗ್​ಶೇಖರ್​ ಸೈನ್ ಮಾಡಿ ಬಂದಿದ್ದಾರೆ.

ಮೊದಲೇ ಹೇಳಿದಂತೆ ಅಮರ್ ಚಿತ್ರವನ್ನು ಮೆಚ್ಚಿಕೊಂಡಿರುವ ಜೋಗಿಂದರ್​​, ಈ ಚಿತ್ರವನ್ನೇ ಬಾಲಿವುಡ್​​​ಗೆ ರಿಮೇಕ್​ ಮಾಡುವ ಆಯ್ಕೆ ನೀಡಿದ್ದರಂತೆ. ಆದರೆ, ನಾಗ್​ಶೇಖರ್ ಮಾತ್ರ ತಮ್ಮದೇ ನಿರ್ದೇಶನದ ಮೈನಾ ಚಿತ್ರದ ಕಥೆ ಹೇಳಿದ್ದಾರೆ. ನೈಜ ಘಟನೆಯಾಧಾರಿತ ಈ ಕಥೆ ಕೇಳಿದ ಅವರು ಈ ಸಿನಿಮಾಗೇ ಒಪ್ಪಿಗೆ ನೀಡಿದರಂತೆ. ಈ ಮೂಲಕ ಕನ್ನಡದ ಸೂಪರ್ ಹಿಟ್ ಸಿನಿಮಾ 'ಮೈನಾ' ಈಗ ಬಾಲಿವುಡ್​ಗೆ ರಿಮೇಕ್ ಆಗುತ್ತಿದೆ.

ಮತ್ತೊಂದೆಡೆ ಹಿಂದಿಯ ತಮ್ಮ ಚೊಚ್ಚಲ ಚಿತ್ರಕ್ಕೆ ತಾನ್ಯಾ ಹೋಪ್​ ಅವರನ್ನು ನಾಯಕಿ ಮಾಡುವ ಯೋಚನೆ ನಾಗಶೇಖರ್​ ಮೈಂಡ್​ನಲ್ಲಿದೆಯಂತೆ. ಇದರೊಂದಿಗೆ ಪ್ರಸಿದ್ಧ ಛಾಯಾಗ್ರಾಹಕ ಸತ್ಯಾ ಹೆಗಡೆ ಅವರನ್ನು ತಮ್ಮ ಜತೆ ಬಾಲಿವುಡ್​ಗೆ ಕರೆದೊಯ್ಯಲಿದ್ದಾರಂತೆ. ಈ ಎಲ್ಲ ವಿಚಾರಗಳನ್ನು ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಅಮರ್ ಚಿತ್ರದ ಮೂಲಕ ಅಂಬರೀಶ್ ಪುತ್ರ ಅಭಿಷೇಕ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿರುವ ನಿರ್ದೇಶಕ ನಾಗಶೇಖರ್ ಲಕ್ ಬದಲಾಗಿದೆ. ಕನ್ನಡದ ಈ ನಿರ್ದೇಶಕನನ್ನು ಬಾಲಿವುಡ್​ ಮಂದಿ ಬಿಗಿದಪ್ಪಿಕೊಂಡಿದ್ದಾರೆ.

ಹೌದು, 'ಮೈನಾ', 'ಅರಮನೆ',' ಸಂಜು ವೆಡ್ಸ್​ ಗೀತಾಗಳಂತಹ ಬ್ಲಾಕ್​ಬಸ್ಟರ್​ ಸಿನಿಮಾಗಳಿಗೆ ಆ್ಯಕ್ಷನ್​ ಕಟ್ ಹೇಳಿರುವ ನಾಗಶೇಖರ್ ಈಗ ಬಾಲಿವುಡ್​​ಗೆ ಪಾದಾರ್ಪಣೆ ಮಾಡಿದ್ದಾರೆ. ಇತ್ತೀಚಿಗಷ್ಟೇ ತೆರೆಕಂಡಿದ್ದ 'ಅಮರ್' ಚಿತ್ರದಿಂದ ಪ್ರಭಾವಿತಗೊಂಡಿರುವ ಬಿಟೌನ್​ ನಿರ್ಮಾಪಕ ಜೋಗಿಂದರ್ ಸಿಂಗ್​, ತಮ್ಮ ಮಗನನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿಯನ್ನು ಕನ್ನಡದ ಈ ನಿರ್ದೇಶಕನ ಹೆಗಲಿಗೆ ಹಾಕಿದ್ದಾರೆ. ನಿನ್ನೆಯಷ್ಟೇ ಈ ಚಿತ್ರದ ಮಾತುಕಥೆ ನಡೆದಿದ್ದು, ತಮ್ಮ ಬಿಟೌನ್ ಚೊಚ್ಚಲ ಚಿತ್ರಕ್ಕೆ ನಾಗ್​ಶೇಖರ್​ ಸೈನ್ ಮಾಡಿ ಬಂದಿದ್ದಾರೆ.

ಮೊದಲೇ ಹೇಳಿದಂತೆ ಅಮರ್ ಚಿತ್ರವನ್ನು ಮೆಚ್ಚಿಕೊಂಡಿರುವ ಜೋಗಿಂದರ್​​, ಈ ಚಿತ್ರವನ್ನೇ ಬಾಲಿವುಡ್​​​ಗೆ ರಿಮೇಕ್​ ಮಾಡುವ ಆಯ್ಕೆ ನೀಡಿದ್ದರಂತೆ. ಆದರೆ, ನಾಗ್​ಶೇಖರ್ ಮಾತ್ರ ತಮ್ಮದೇ ನಿರ್ದೇಶನದ ಮೈನಾ ಚಿತ್ರದ ಕಥೆ ಹೇಳಿದ್ದಾರೆ. ನೈಜ ಘಟನೆಯಾಧಾರಿತ ಈ ಕಥೆ ಕೇಳಿದ ಅವರು ಈ ಸಿನಿಮಾಗೇ ಒಪ್ಪಿಗೆ ನೀಡಿದರಂತೆ. ಈ ಮೂಲಕ ಕನ್ನಡದ ಸೂಪರ್ ಹಿಟ್ ಸಿನಿಮಾ 'ಮೈನಾ' ಈಗ ಬಾಲಿವುಡ್​ಗೆ ರಿಮೇಕ್ ಆಗುತ್ತಿದೆ.

ಮತ್ತೊಂದೆಡೆ ಹಿಂದಿಯ ತಮ್ಮ ಚೊಚ್ಚಲ ಚಿತ್ರಕ್ಕೆ ತಾನ್ಯಾ ಹೋಪ್​ ಅವರನ್ನು ನಾಯಕಿ ಮಾಡುವ ಯೋಚನೆ ನಾಗಶೇಖರ್​ ಮೈಂಡ್​ನಲ್ಲಿದೆಯಂತೆ. ಇದರೊಂದಿಗೆ ಪ್ರಸಿದ್ಧ ಛಾಯಾಗ್ರಾಹಕ ಸತ್ಯಾ ಹೆಗಡೆ ಅವರನ್ನು ತಮ್ಮ ಜತೆ ಬಾಲಿವುಡ್​ಗೆ ಕರೆದೊಯ್ಯಲಿದ್ದಾರಂತೆ. ಈ ಎಲ್ಲ ವಿಚಾರಗಳನ್ನು ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.