ಅಮರ್ ಚಿತ್ರದ ಮೂಲಕ ಅಂಬರೀಶ್ ಪುತ್ರ ಅಭಿಷೇಕ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿರುವ ನಿರ್ದೇಶಕ ನಾಗಶೇಖರ್ ಲಕ್ ಬದಲಾಗಿದೆ. ಕನ್ನಡದ ಈ ನಿರ್ದೇಶಕನನ್ನು ಬಾಲಿವುಡ್ ಮಂದಿ ಬಿಗಿದಪ್ಪಿಕೊಂಡಿದ್ದಾರೆ.
ಹೌದು, 'ಮೈನಾ', 'ಅರಮನೆ',' ಸಂಜು ವೆಡ್ಸ್ ಗೀತಾಗಳಂತಹ ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ನಾಗಶೇಖರ್ ಈಗ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ಇತ್ತೀಚಿಗಷ್ಟೇ ತೆರೆಕಂಡಿದ್ದ 'ಅಮರ್' ಚಿತ್ರದಿಂದ ಪ್ರಭಾವಿತಗೊಂಡಿರುವ ಬಿಟೌನ್ ನಿರ್ಮಾಪಕ ಜೋಗಿಂದರ್ ಸಿಂಗ್, ತಮ್ಮ ಮಗನನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿಯನ್ನು ಕನ್ನಡದ ಈ ನಿರ್ದೇಶಕನ ಹೆಗಲಿಗೆ ಹಾಕಿದ್ದಾರೆ. ನಿನ್ನೆಯಷ್ಟೇ ಈ ಚಿತ್ರದ ಮಾತುಕಥೆ ನಡೆದಿದ್ದು, ತಮ್ಮ ಬಿಟೌನ್ ಚೊಚ್ಚಲ ಚಿತ್ರಕ್ಕೆ ನಾಗ್ಶೇಖರ್ ಸೈನ್ ಮಾಡಿ ಬಂದಿದ್ದಾರೆ.
- " class="align-text-top noRightClick twitterSection" data="
">
ಮೊದಲೇ ಹೇಳಿದಂತೆ ಅಮರ್ ಚಿತ್ರವನ್ನು ಮೆಚ್ಚಿಕೊಂಡಿರುವ ಜೋಗಿಂದರ್, ಈ ಚಿತ್ರವನ್ನೇ ಬಾಲಿವುಡ್ಗೆ ರಿಮೇಕ್ ಮಾಡುವ ಆಯ್ಕೆ ನೀಡಿದ್ದರಂತೆ. ಆದರೆ, ನಾಗ್ಶೇಖರ್ ಮಾತ್ರ ತಮ್ಮದೇ ನಿರ್ದೇಶನದ ಮೈನಾ ಚಿತ್ರದ ಕಥೆ ಹೇಳಿದ್ದಾರೆ. ನೈಜ ಘಟನೆಯಾಧಾರಿತ ಈ ಕಥೆ ಕೇಳಿದ ಅವರು ಈ ಸಿನಿಮಾಗೇ ಒಪ್ಪಿಗೆ ನೀಡಿದರಂತೆ. ಈ ಮೂಲಕ ಕನ್ನಡದ ಸೂಪರ್ ಹಿಟ್ ಸಿನಿಮಾ 'ಮೈನಾ' ಈಗ ಬಾಲಿವುಡ್ಗೆ ರಿಮೇಕ್ ಆಗುತ್ತಿದೆ.
ಮತ್ತೊಂದೆಡೆ ಹಿಂದಿಯ ತಮ್ಮ ಚೊಚ್ಚಲ ಚಿತ್ರಕ್ಕೆ ತಾನ್ಯಾ ಹೋಪ್ ಅವರನ್ನು ನಾಯಕಿ ಮಾಡುವ ಯೋಚನೆ ನಾಗಶೇಖರ್ ಮೈಂಡ್ನಲ್ಲಿದೆಯಂತೆ. ಇದರೊಂದಿಗೆ ಪ್ರಸಿದ್ಧ ಛಾಯಾಗ್ರಾಹಕ ಸತ್ಯಾ ಹೆಗಡೆ ಅವರನ್ನು ತಮ್ಮ ಜತೆ ಬಾಲಿವುಡ್ಗೆ ಕರೆದೊಯ್ಯಲಿದ್ದಾರಂತೆ. ಈ ಎಲ್ಲ ವಿಚಾರಗಳನ್ನು ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.