ETV Bharat / sitara

ಲೈಟ್ಸ್​, ಕ್ಯಾಮರಾ, ಆಕ್ಷನ್​ಗೆ ಯಾರು ರೆಡಿ: ಬಿಟೌನ್​ ಮಂದಿ ಏನಂತಾರೆ..! - ಬಾಲಿವುಡ್‌ನ ಚಲನಚಿತ್ರ ನಿರ್ಮಾಪಕರು

"ಒಬ್ಬ ನಟನಿಗೆ ಬೇರೆ ಆಯ್ಕೆಗಳಿಲ್ಲ. ನೀವು ಮಾಡಬೇಕಾದುದನ್ನು ನೀವೇ ಮಾಡಬೇಕಾಗಿದೆ. ಅದು ಡಬ್ಬಿಂಗ್ ಅಥವಾ ಶೂಟಿಂಗ್ ಆಗಿರಲಿ, ನಾವು ನಿಮ್ಮನ್ನು ರಂಜಿಸಲು ಅಪಾಯಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಅದನ್ನು ನಾವು ಮುಂದುವರಿಸುತ್ತೇವೆ.

Actors
ಬಿಟೌನ್​ ಮಂದಿ
author img

By

Published : Jun 20, 2020, 2:50 PM IST

ಮುಂಬೈ: ಮಹಾರಾಷ್ಟ್ರ ಸರ್ಕಾರ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಿರುವುದರಿಂದ ಬಾಲಿವುಡ್‌ನ ಚಲನಚಿತ್ರ ನಿರ್ಮಾಪಕರು ಚಿತ್ರೀಕರಣ ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಆದರೆ, ಅನೇಕ ಸೆಲೆಬ್ರಿಟಿಗಳು ಕೋವಿಡ್​ ವಾತಾವರಣದಿಂದ ಇನ್ನೂ ಹೊರಬರಲು ಭಯಭೀತರಾಗಿದ್ದು, ಸೆಟ್​ಗಳಲ್ಲಿ ಕೆಲಸವನ್ನು ಪ್ರಾರಂಭ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಸೂಪರ್ 30 ಖ್ಯಾತಿಯ ನಟಿ ಮೃನಾಲ್ ಠಾಕೂರ್ ಅವರಲ್ಲಿ ಒಬ್ಬರು. ಆಕೆ ಪಾಲಿಗೆ ಆರೋಗ್ಯ ಮೊದಲ ಪಾತ್ರ ವಹಿಸುತ್ತದಂತೆ, 'ಚಿತ್ರೀಕರಣಕ್ಕೆ ನಾನಿನ್ನೂ ಸಿದ್ಧವಾಗಿಲ್ಲ, ನಾನು ಶೂಟಿಂಗ್​ಗೆ ಸಿದ್ಧ ಎಂದರೆ, ನಾನು ಹಲವು ಜನರನ್ನು ಕೊರೊನಾಕೂಪಕ್ಕೆ ತಳ್ಳಿದಂತೆ ಆಗುತ್ತದೆ. ನಿಜವಾಗಿಯೂ ಇದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ' ಎಂದು ಹೇಳಿದ್ದಾರೆ.

ನಟ ತನುಜ್ ವಿರ್ವಾನಿ ಚಿತ್ರೀಕರಣಕ್ಕೆ ಒಪ್ಪುತ್ತಾರೆ. ನಾನು ಸೆಟ್​ನಲ್ಲಿ ಇರುವುದನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಶೀಘ್ರದಲ್ಲೇ ಶೂಟಿಂಗ್ ಅನ್ನು ಪುನರಾರಂಭಿಸುವ ಬಗ್ಗೆ ಯೋಚಿಸುವುದು ಅತ್ಯಂತ ದೂರದೃಷ್ಟಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಅದಕ್ಕೆ ಸರಳ ಕಾರಣವೆಂದರೆ ನಾನು ಪ್ರಸ್ತುತ ಚಿತ್ರೀಕರಣ ಮಾಡುತ್ತಿರುವ ಯೋಜನೆಗೆ ಸಾಕಷ್ಟು ಪಾತ್ರವರ್ಗ ಮತ್ತು ಸಿಬ್ಬಂದಿ ಅಗತ್ಯವಿದೆ. ಕಡಿಮೆ ಜನ ಇದ್ದಾಗ ತಮ್ಮ ಸೆಟ್‌ಗಳನ್ನು ಹೇಗೆ ನಿರ್ವಹಿಸುತ್ತಾರೆ ಮತ್ತು ನಿಯಂತ್ರಿಸುತ್ತಾರೆ ಎಂಬುದರ ಆಧಾರದ ಮೇಲೆ, ಇತರರು ಆತ್ಮವಿಶ್ವಾಸ ಮತ್ತು ಒಳನೋಟವನ್ನು ಪಡೆಯುತ್ತಾರೆ.

ನಟ ವರುಣ್ ಶರ್ಮಾ ಅವರು ಕ್ಯಾಮೆರಾವನ್ನು ಎದುರಿಸಲು ಕುತೂಹಲದಿಂದ ಕಾಯುತ್ತಿದ್ದಾರಂತೆ. ಆದರೆ ಶೂಟ್ ಮಾಡುವುದು ಎಷ್ಟು ಸುರಕ್ಷಿತ ಎಂದು ನೋಡಿದ ನಂತರವೇ ಗೊತ್ತಾಗಲಿದೆ. ನಾವೆಲ್ಲರೂ ನಮ್ಮ ವೈಯಕ್ತಿಕ ವೃತ್ತಿಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಕಾರ್ಯನಿರತವಾಗಲು ಕಾಯುತ್ತಿದ್ದೇವೆ. ಹೌದು, ನಾನೂ ಕ್ಯಾಮೆರಾವನ್ನು ಎದುರಿಸಲು ಉತ್ಸುಕನಾಗಿದ್ದೇನೆ. ಆದರೂ, ಶೂಟ್ ಮಾಡುವುದು ಸುರಕ್ಷಿತವಾಗಿದ್ದರೆ ಮಾತ್ರ ನಾನು ಅದನ್ನು ಆರಿಸಿಕೊಳ್ಳುತ್ತೇನೆ ಎಂದು ವರುಣ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ನಟ- ಗಾಯಕ ಅಪರ್ಶಕ್ತಿ ಖುರಾನಾ ಅವರಿಗೆ ಪರಿಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ಖಚಿತವಿಲ್ಲವಂತೆ. ಎಷ್ಟು ನಟರು ಮತ್ತು ನಿರ್ದೇಶಕರು ಹೊರಗೆ ಹೋಗಿ ಚಿತ್ರೀಕರಣಕ್ಕೆ ಸಿದ್ಧರಾಗಿದ್ದಾರೆ ಎಂದು ನನಗೆ ತಿಳಿದಿಲ್ಲ, ಆದರೆ ಯಾರು ಆಲೋಚಿಸುತ್ತಾರೋ ಅವರು ಒಂದೆರಡು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಎರಡನೆಯದಾಗಿ, ಸೆಟ್‌ಗಳಲ್ಲಿರುವ ಜನರ ಸಂಖ್ಯೆ, ಮತ್ತು ದಿನದ ಕೊನೆಯಲ್ಲಿ ಆರೋಗ್ಯ ಮತ್ತು ಕೆಲಸ ಎಂಬ ಎರಡು ವಿಷಯಗಳು ಮಾತ್ರ ಮುಖ್ಯವಾಗುತ್ತವೆ. ಇವೆರಡೂ ಕೈಜೋಡಿಸಬೇಕಾಗಿದೆ, ಎಂದು ಅಪರ್ಶಕ್ತಿ ಒತ್ತಿ ಹೇಳಿದರು.

ಶೂಟಿಂಗ್ ಪುನಾರಂಭಿಸಲು ಉತ್ಸುಕರಾಗಿರುವ ನಿರ್ದೇಶಕರ ಕುರಿತು ಮಾತನಾಡುತ್ತಾ, ಲಾಕ್​ಡೌನ್ ನಂತರ ನಿರ್ಮಾಣ ಪುನರಾರಂಭವನ್ನು ಘೋಷಿಸಿದ ಬಳಿಕ ಮೊದಲ ಚಿತ್ರ ಸಂಜಯ್ ಗುಪ್ತಾ ಅವರ ಮುಂಬೈ ಸಾಗಾ ಕೂಡ ಒಂದು. ಮುಂದಿನ ತಿಂಗಳು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ತಮ್ಮ ಮಲ್ಟಿಸ್ಟಾರರ್‌ನ ಉಳಿದ ಭಾಗದ ಚಿತ್ರೀಕರಣವನ್ನು ಪ್ರಾರಂಭಿಸುವುದಾಗಿ ಗುಪ್ತಾ ಹೇಳಿದ್ದಾರೆ. ಇನ್ನು ಸೆಟ್​ನಲ್ಲಿ ಸೀಮಿತ ಸಂಖ್ಯೆಯ ಜನರು ಇರುತ್ತಾರೆ ಇದು ಶೇಕಡಾ 100 ರಷ್ಟು ಖಚಿತವಾಗಿದೆ ಎಂದರು.

ಕೊರೊನಾ ಸಾಂಕ್ರಾಮಿಕದ ಮಧ್ಯೆ ನಟಿ ಹಿನಾ ಖಾನ್ ಈಗಾಗಲೇ ಹೊರಾಂಗಣದಲ್ಲಿ ಕೆಲಸ ಮಾಡಿದ ಅನುಭವ ಹೇಳಿಕೊಂಡಿದ್ದು, ಮುಂಬರುವ ವೆಬ್ ಪ್ರದರ್ಶನದ ಡಬ್ಬಿಂಗ್ ಸೆಷನ್​ಗಾಗಿ ಅವರು ಇತ್ತೀಚೆಗೆ ಸ್ಟುಡಿಯೋಗೆ ತೆರಳಿದ್ದರು. ಇದು ಅಷ್ಟು ಸುರಕ್ಷಿತ ಅಲ್ಲ ಎಂಬುದು ಅವರ ಭಾವನೆಯಾಗಿದೆ.

ಮುಂಬೈ: ಮಹಾರಾಷ್ಟ್ರ ಸರ್ಕಾರ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಿರುವುದರಿಂದ ಬಾಲಿವುಡ್‌ನ ಚಲನಚಿತ್ರ ನಿರ್ಮಾಪಕರು ಚಿತ್ರೀಕರಣ ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಆದರೆ, ಅನೇಕ ಸೆಲೆಬ್ರಿಟಿಗಳು ಕೋವಿಡ್​ ವಾತಾವರಣದಿಂದ ಇನ್ನೂ ಹೊರಬರಲು ಭಯಭೀತರಾಗಿದ್ದು, ಸೆಟ್​ಗಳಲ್ಲಿ ಕೆಲಸವನ್ನು ಪ್ರಾರಂಭ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಸೂಪರ್ 30 ಖ್ಯಾತಿಯ ನಟಿ ಮೃನಾಲ್ ಠಾಕೂರ್ ಅವರಲ್ಲಿ ಒಬ್ಬರು. ಆಕೆ ಪಾಲಿಗೆ ಆರೋಗ್ಯ ಮೊದಲ ಪಾತ್ರ ವಹಿಸುತ್ತದಂತೆ, 'ಚಿತ್ರೀಕರಣಕ್ಕೆ ನಾನಿನ್ನೂ ಸಿದ್ಧವಾಗಿಲ್ಲ, ನಾನು ಶೂಟಿಂಗ್​ಗೆ ಸಿದ್ಧ ಎಂದರೆ, ನಾನು ಹಲವು ಜನರನ್ನು ಕೊರೊನಾಕೂಪಕ್ಕೆ ತಳ್ಳಿದಂತೆ ಆಗುತ್ತದೆ. ನಿಜವಾಗಿಯೂ ಇದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ' ಎಂದು ಹೇಳಿದ್ದಾರೆ.

ನಟ ತನುಜ್ ವಿರ್ವಾನಿ ಚಿತ್ರೀಕರಣಕ್ಕೆ ಒಪ್ಪುತ್ತಾರೆ. ನಾನು ಸೆಟ್​ನಲ್ಲಿ ಇರುವುದನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಶೀಘ್ರದಲ್ಲೇ ಶೂಟಿಂಗ್ ಅನ್ನು ಪುನರಾರಂಭಿಸುವ ಬಗ್ಗೆ ಯೋಚಿಸುವುದು ಅತ್ಯಂತ ದೂರದೃಷ್ಟಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಅದಕ್ಕೆ ಸರಳ ಕಾರಣವೆಂದರೆ ನಾನು ಪ್ರಸ್ತುತ ಚಿತ್ರೀಕರಣ ಮಾಡುತ್ತಿರುವ ಯೋಜನೆಗೆ ಸಾಕಷ್ಟು ಪಾತ್ರವರ್ಗ ಮತ್ತು ಸಿಬ್ಬಂದಿ ಅಗತ್ಯವಿದೆ. ಕಡಿಮೆ ಜನ ಇದ್ದಾಗ ತಮ್ಮ ಸೆಟ್‌ಗಳನ್ನು ಹೇಗೆ ನಿರ್ವಹಿಸುತ್ತಾರೆ ಮತ್ತು ನಿಯಂತ್ರಿಸುತ್ತಾರೆ ಎಂಬುದರ ಆಧಾರದ ಮೇಲೆ, ಇತರರು ಆತ್ಮವಿಶ್ವಾಸ ಮತ್ತು ಒಳನೋಟವನ್ನು ಪಡೆಯುತ್ತಾರೆ.

ನಟ ವರುಣ್ ಶರ್ಮಾ ಅವರು ಕ್ಯಾಮೆರಾವನ್ನು ಎದುರಿಸಲು ಕುತೂಹಲದಿಂದ ಕಾಯುತ್ತಿದ್ದಾರಂತೆ. ಆದರೆ ಶೂಟ್ ಮಾಡುವುದು ಎಷ್ಟು ಸುರಕ್ಷಿತ ಎಂದು ನೋಡಿದ ನಂತರವೇ ಗೊತ್ತಾಗಲಿದೆ. ನಾವೆಲ್ಲರೂ ನಮ್ಮ ವೈಯಕ್ತಿಕ ವೃತ್ತಿಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಕಾರ್ಯನಿರತವಾಗಲು ಕಾಯುತ್ತಿದ್ದೇವೆ. ಹೌದು, ನಾನೂ ಕ್ಯಾಮೆರಾವನ್ನು ಎದುರಿಸಲು ಉತ್ಸುಕನಾಗಿದ್ದೇನೆ. ಆದರೂ, ಶೂಟ್ ಮಾಡುವುದು ಸುರಕ್ಷಿತವಾಗಿದ್ದರೆ ಮಾತ್ರ ನಾನು ಅದನ್ನು ಆರಿಸಿಕೊಳ್ಳುತ್ತೇನೆ ಎಂದು ವರುಣ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ನಟ- ಗಾಯಕ ಅಪರ್ಶಕ್ತಿ ಖುರಾನಾ ಅವರಿಗೆ ಪರಿಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ಖಚಿತವಿಲ್ಲವಂತೆ. ಎಷ್ಟು ನಟರು ಮತ್ತು ನಿರ್ದೇಶಕರು ಹೊರಗೆ ಹೋಗಿ ಚಿತ್ರೀಕರಣಕ್ಕೆ ಸಿದ್ಧರಾಗಿದ್ದಾರೆ ಎಂದು ನನಗೆ ತಿಳಿದಿಲ್ಲ, ಆದರೆ ಯಾರು ಆಲೋಚಿಸುತ್ತಾರೋ ಅವರು ಒಂದೆರಡು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಎರಡನೆಯದಾಗಿ, ಸೆಟ್‌ಗಳಲ್ಲಿರುವ ಜನರ ಸಂಖ್ಯೆ, ಮತ್ತು ದಿನದ ಕೊನೆಯಲ್ಲಿ ಆರೋಗ್ಯ ಮತ್ತು ಕೆಲಸ ಎಂಬ ಎರಡು ವಿಷಯಗಳು ಮಾತ್ರ ಮುಖ್ಯವಾಗುತ್ತವೆ. ಇವೆರಡೂ ಕೈಜೋಡಿಸಬೇಕಾಗಿದೆ, ಎಂದು ಅಪರ್ಶಕ್ತಿ ಒತ್ತಿ ಹೇಳಿದರು.

ಶೂಟಿಂಗ್ ಪುನಾರಂಭಿಸಲು ಉತ್ಸುಕರಾಗಿರುವ ನಿರ್ದೇಶಕರ ಕುರಿತು ಮಾತನಾಡುತ್ತಾ, ಲಾಕ್​ಡೌನ್ ನಂತರ ನಿರ್ಮಾಣ ಪುನರಾರಂಭವನ್ನು ಘೋಷಿಸಿದ ಬಳಿಕ ಮೊದಲ ಚಿತ್ರ ಸಂಜಯ್ ಗುಪ್ತಾ ಅವರ ಮುಂಬೈ ಸಾಗಾ ಕೂಡ ಒಂದು. ಮುಂದಿನ ತಿಂಗಳು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ತಮ್ಮ ಮಲ್ಟಿಸ್ಟಾರರ್‌ನ ಉಳಿದ ಭಾಗದ ಚಿತ್ರೀಕರಣವನ್ನು ಪ್ರಾರಂಭಿಸುವುದಾಗಿ ಗುಪ್ತಾ ಹೇಳಿದ್ದಾರೆ. ಇನ್ನು ಸೆಟ್​ನಲ್ಲಿ ಸೀಮಿತ ಸಂಖ್ಯೆಯ ಜನರು ಇರುತ್ತಾರೆ ಇದು ಶೇಕಡಾ 100 ರಷ್ಟು ಖಚಿತವಾಗಿದೆ ಎಂದರು.

ಕೊರೊನಾ ಸಾಂಕ್ರಾಮಿಕದ ಮಧ್ಯೆ ನಟಿ ಹಿನಾ ಖಾನ್ ಈಗಾಗಲೇ ಹೊರಾಂಗಣದಲ್ಲಿ ಕೆಲಸ ಮಾಡಿದ ಅನುಭವ ಹೇಳಿಕೊಂಡಿದ್ದು, ಮುಂಬರುವ ವೆಬ್ ಪ್ರದರ್ಶನದ ಡಬ್ಬಿಂಗ್ ಸೆಷನ್​ಗಾಗಿ ಅವರು ಇತ್ತೀಚೆಗೆ ಸ್ಟುಡಿಯೋಗೆ ತೆರಳಿದ್ದರು. ಇದು ಅಷ್ಟು ಸುರಕ್ಷಿತ ಅಲ್ಲ ಎಂಬುದು ಅವರ ಭಾವನೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.