ETV Bharat / sitara

ಧಾರ್ಮಿಕ ಪುಸ್ತಕ ನೀಡುವಂತೆ ಜೈಲಾಧಿಕಾರಿಗಳಿಗೆ ನಟ ಶಾರುಕ್‌ ಪುತ್ರ ಆರ್ಯನ್‌ ಖಾನ್‌ ಒತ್ತಾಯ

author img

By

Published : Oct 23, 2021, 1:54 PM IST

ಡ್ರಗ್ಸ್‌ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಓದಲು ತಮಗೆ ಧಾರ್ಮಿಕ ಪುಸ್ತಕಗಳನ್ನು ನೀಡುವಂತೆ ಜೈಲು ಅಧಿಕಾರಿಗಳ ಮುಂದೆ ಬೇಡಿಕೆ ಇಟ್ಟಿದ್ದಾರೆ. ಅಧಿಕಾರಿಗಳು ಈಗಾಗಲೇ ಒಂದು ಪುಸ್ತಕ ನೀಡಿದ್ದಾರೆ ಎಂದು ಹೇಳಲಾಗ್ತಿದೆ.

Demand for religious book from Aryan Khan to prison administration
ಧಾರ್ಮಿಕ ಪುಸ್ತಕಗಳು ನೀಡುವಂತೆ ಜೈಲಾಧಿಕಾರಿಗಳಿಗೆ ನಟ ಶಾರುಕ್‌ ಪುತ್ರ ಆರ್ಯನ್‌ ಖಾನ್‌ ಒತ್ತಾಯ!

ಮುಂಬೈ: ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ 19 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಳಗಾಗಿ ಆರ್ಥರ್‌ ಜೈಲಿನಲ್ಲಿರುವ ಬಾಲಿವುಡ್ ಸೂಪರ್‌ ಸ್ಟಾರ್‌ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಇದೀಗ ಧಾರ್ಮಿಕ ಪುಸ್ತಕಗಳನ್ನು ಓದಲು ಮುಂದಾಗಿದ್ದಾರೆ. ತಮಗೆ ಧಾರ್ಮಿಕ ಪುಸ್ತಕಗಳನ್ನು ನೀಡುವಂತೆ ಜೈಲು ಆಧಿಕಾರಿಗಳಿಗೆ ಅವರು ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೈಲಿನಲ್ಲಿರುವ ಆರ್ಯನ್ ಖಾನ್‌ ಆರಂಭದಲ್ಲಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಆದರೆ ಈಗ ಅವರು ಇತರ ಕೆಲವು ಕೈದಿಗಳೊಂದಿಗೆ ಮಾತನಾಡುತ್ತಿದ್ದಾರೆ. ತಮ್ಮ ಬ್ಯಾರಕ್‌ನಲ್ಲಿ ನಿರ್ಮಿಸಲಾಗಿರುವ ದೇವಸ್ಥಾನದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಆರತಿ ನಡೆಯುತ್ತದೆ. ಆರತಿ ಮುಗಿಯುವವರೆಗೂ ಅವರು ಅಲ್ಲಿಯೇ ಇರುತ್ತಾರೆ ಎಂದು ಜೈಲಿನ ಆಡಳಿತದ ಮೂಲಗಳು ತಿಳಿಸಿವೆ.

ಆರ್ಯನ್‌ ಖಾನ್‌ ಜೈಲಿಗೆ ಹೋದಾಗಿನಿಂದ ಆಹಾರ ಸೇವಿಸುತ್ತಿಲ್ಲ. ಕೇವಲ ಬಿಸ್ಕತ್ತುಗಳನ್ನು ಮಾತ್ರ ತಿನ್ನುತ್ತಿದ್ದಾನೆ. ಇವರ ಆರೋಗ್ಯದ ಬಗ್ಗೆ ಜೈಲು ಅಧಿಕಾರಿಗಳಿಗೆ ತಲೆನೋವು ಶುರುವಾಗಿದೆ.

ಕೆಲವು ಧಾರ್ಮಿಕ ಪುಸ್ತಕಗಳನ್ನು ನೀಡುವಂತೆ ಆರ್ಯನ್‌ ಜೈಲಿನ ಆಡಳಿತ ಅಧಿಕಾರಿಗಳಿಗೆ ಕೇಳಿದ್ದಾನೆ. ಆರೋಪಿ ಖಾನ್‌ ಬೇಡಿಕೆಯ ಮೇರೆಗೆ ಓದಲು ಒಂದು ಪುಸ್ತಕ ನೀಡಲಾಗಿದೆ. ಇತರ ಕೆಲವು ಪುಸ್ತಕಗಳನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಅಕ್ಟೋಬರ್ 26 ರಂದು ಹೈಕೋರ್ಟ್‌ನಲ್ಲಿ ಆರ್ಯನ್‌ ಖಾನ್‌ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಮುಂಬೈ: ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ 19 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಳಗಾಗಿ ಆರ್ಥರ್‌ ಜೈಲಿನಲ್ಲಿರುವ ಬಾಲಿವುಡ್ ಸೂಪರ್‌ ಸ್ಟಾರ್‌ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಇದೀಗ ಧಾರ್ಮಿಕ ಪುಸ್ತಕಗಳನ್ನು ಓದಲು ಮುಂದಾಗಿದ್ದಾರೆ. ತಮಗೆ ಧಾರ್ಮಿಕ ಪುಸ್ತಕಗಳನ್ನು ನೀಡುವಂತೆ ಜೈಲು ಆಧಿಕಾರಿಗಳಿಗೆ ಅವರು ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೈಲಿನಲ್ಲಿರುವ ಆರ್ಯನ್ ಖಾನ್‌ ಆರಂಭದಲ್ಲಿ ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಆದರೆ ಈಗ ಅವರು ಇತರ ಕೆಲವು ಕೈದಿಗಳೊಂದಿಗೆ ಮಾತನಾಡುತ್ತಿದ್ದಾರೆ. ತಮ್ಮ ಬ್ಯಾರಕ್‌ನಲ್ಲಿ ನಿರ್ಮಿಸಲಾಗಿರುವ ದೇವಸ್ಥಾನದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ಆರತಿ ನಡೆಯುತ್ತದೆ. ಆರತಿ ಮುಗಿಯುವವರೆಗೂ ಅವರು ಅಲ್ಲಿಯೇ ಇರುತ್ತಾರೆ ಎಂದು ಜೈಲಿನ ಆಡಳಿತದ ಮೂಲಗಳು ತಿಳಿಸಿವೆ.

ಆರ್ಯನ್‌ ಖಾನ್‌ ಜೈಲಿಗೆ ಹೋದಾಗಿನಿಂದ ಆಹಾರ ಸೇವಿಸುತ್ತಿಲ್ಲ. ಕೇವಲ ಬಿಸ್ಕತ್ತುಗಳನ್ನು ಮಾತ್ರ ತಿನ್ನುತ್ತಿದ್ದಾನೆ. ಇವರ ಆರೋಗ್ಯದ ಬಗ್ಗೆ ಜೈಲು ಅಧಿಕಾರಿಗಳಿಗೆ ತಲೆನೋವು ಶುರುವಾಗಿದೆ.

ಕೆಲವು ಧಾರ್ಮಿಕ ಪುಸ್ತಕಗಳನ್ನು ನೀಡುವಂತೆ ಆರ್ಯನ್‌ ಜೈಲಿನ ಆಡಳಿತ ಅಧಿಕಾರಿಗಳಿಗೆ ಕೇಳಿದ್ದಾನೆ. ಆರೋಪಿ ಖಾನ್‌ ಬೇಡಿಕೆಯ ಮೇರೆಗೆ ಓದಲು ಒಂದು ಪುಸ್ತಕ ನೀಡಲಾಗಿದೆ. ಇತರ ಕೆಲವು ಪುಸ್ತಕಗಳನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಅಕ್ಟೋಬರ್ 26 ರಂದು ಹೈಕೋರ್ಟ್‌ನಲ್ಲಿ ಆರ್ಯನ್‌ ಖಾನ್‌ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.