ETV Bharat / jagte-raho

ಪ್ರೀತಿಸಿ ಮದುವೆಯಾಗಿ 2 ತಿಂಗಳಲ್ಲೇ ಪತ್ನಿಯ ಉಸಿರು ನಿಲ್ಲಿಸಿದ ಕಿರಾತಕ: ಕಾರಣ?!

author img

By

Published : Dec 20, 2019, 9:04 PM IST

Updated : Dec 20, 2019, 11:12 PM IST

ತನ್ನ ಕುಟುಂಬವನ್ನೇ ಎದುರು ಹಾಕಿಕೊಂಡು ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿವೋರ್ವ ಹೆಂಡತಿಯನ್ನು ಕೊಂದು ಇದೀಗ ಜೈಲು ಕಂಬಿ ಎಣಿಸುವಂತಾಗಿರುವ ಪ್ರಕರಣ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರಲ್ಲಿ ನಡೆದಿದೆ.

wife was allegedly murdered by husband
ಪ್ರೀತಿಸಿದವಳ ಕೊಲೆಗೈದ ಪತಿ

ದಾವಣಗೆರೆ: ಒಬ್ಬರನ್ನೊಬ್ಬರನ್ನು ಬಿಟ್ಟಿರಲಾರದಷ್ಟು ಪ್ರೀತಿಸಿದವರು. ಎಲ್ಲರನ್ನು ಎದುರು ಹಾಕಿಕೊಂಡು ಮದುವೆಯಾದ್ರು. ಆದ್ರೆ ಊರಿಗೆ ಬಂದ ಕೆಲ ದಿನಗಳಲ್ಲೇ ಈ ಇಬ್ಬರ ಮಧ್ಯೆ ಗಲಾಟೆ ಶುರುವಾಯಿತು. ಈಗ ಕೈಹಿಡಿದ ಪತ್ನಿಯನ್ನೇ ಆತ ಹೆಣವಾಗಿಸಿದ್ದಾನೆ.

ಹರಿಹರ ತಾಲೂಕಿನ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂಡಸಘಟ್ಟ ಗ್ರಾಮದ ತಾಂಡ ನಿವಾಸಿ ನಾಗರಾಜ ನಾಯ್ಕ ಇದೇ ಗ್ರಾಮದ 21 ವರ್ಷದ ರಂಜಿತಾ ಬಾಯಿಯನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ. 2 ತಿಂಗಳ ಹಿಂದೆಯಷ್ಟೇ ಇವರಿಬ್ಬರು ಪ್ರೇಮ ವಿವಾಹವಾಗಿದ್ದರು. ಕುಟುಂಬದವರ ಆಕ್ಷೇಪದಿಂದಾಗಿ ಓಡಿ ಹೋಗಿ ಮದುವೆ ಆಗಿದ್ದರು.

ಮನೆಯಿಂದ ಓಡಿಹೋದ ಜೋಡಿ ಕೆಲ ದಿನಗಳ ಹಿಂದೆಯಷ್ಟೇ ಗ್ರಾಮಕ್ಕೆ ವಾಪಸಾಗಿದ್ದರು. ಪ್ರೀತಿಸಿ ಮದುವೆಯಾದ ಮೇಲೆ ಆದರ್ಶ ದಂಪತಿಯಂತೆ ಬದುಕಬೇಕೆಂಬ ಕನಸು ಕಟ್ಟಿಕೊಂಡು ಗ್ರಾಮಕ್ಕೆ ಬಂದರು. ಆದ್ರೆ, ಅಷ್ಟರೊಳಗೆ ಈ ನವಜೋಡಿ ನಡುವೆ ನಡೆಯಬಾರದು ನಡೆದು ಹೋಯಿತು. ಸಣ್ಣ ವಿಷಯಕ್ಕೆ ಪತ್ನಿ ರಂಜಿತಾಳನ್ನೇ ನಾಗರಾಜ್​ ನಾಯ್ಕ ಕೊಂದು ಹಾಕಿದ್ದಾನೆ.

ಮೃತಳ ತಾಯಿ ರೋಧನ

ನಾಗರಾಜ್​ ನಾಯ್ಕನ ಅಣ್ಣನ ಮಗನಿಗೆ ನೀರು ಕೊಡುವ ವಿಚಾರದಲ್ಲಿ ಇಬ್ಬರ ನಡುವೆ ಸಣ್ಣದಾದ ಗಲಾಟೆ ಜಗಳ ಶುರುವಾಗಿತ್ತು. ಗಲಾಟೆ ನಡೆದ ಸಂದರ್ಭದಲ್ಲಿ ನಾಗರಾಜನ ಅಣ್ಣ ಮತ್ತು ಅತ್ತಿಗೆ ಬಂದು ಬಿಡಿಸಿದರು. ಆದ್ರೆ, ಮಾರನೇ ದಿನ ಬೆಳಗ್ಗೆ ನಡೆದದ್ದೇ ಬೇರೆ. ಸುಗಂಧರಾಜ ಹೂವಿನ ತೋಟಕ್ಕೆ ರಂಜಿತಾ ಬಾಯಿಯನ್ನು ನಾಗರಾಜ ನಾಯ್ಕ ಕರೆದೊಯ್ದಿದ್ದ.

ಬೆಳಗ್ಗೆ ಆರು ಗಂಟೆಗೆ ಬೈಕ್ ನಲ್ಲಿ ಇಬ್ಬರು ತೋಟಕ್ಕೆ ಹೋದ ವೇಳೆ ಮತ್ತೆ ರಾತ್ರಿ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ನಾಗರಾಜ, ಅಲ್ಲೇ ಒಂದು ಏಟು ಹೊಡೆದಿದ್ದ. ಕೈಯಿಂದ ಕತ್ತನ್ನು ಉಸಿರು ಗಟ್ಟಿಸಿ ಕೊಂದಿದ್ದಾನೆ ಎನ್ನಲಾಗ್ತಿದೆ. ಕೂಡಲೇ ಆಕೆಯನ್ನು ಮಲೇಬೆನ್ನೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಆದರೆ, ಅಷ್ಟರಲ್ಲಾಗಲೇ ರಂಜಿತಾಬಾಯಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು.

ರಂಜಿತಾಳ ತಾಯಿ ಮೋತಿಬಾಯಿ ಈ ಕುರಿತು ದೂರು ನೀಡಿದ್ದು, ಆರೋಪಿಯನ್ನ ಮಲೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ. ಒಟ್ಟಿನಲ್ಲಿ ಎರಡೇ ತಿಂಗಳಿಗೆ ಇಂಥದ್ದೊಂದು ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.

ದಾವಣಗೆರೆ: ಒಬ್ಬರನ್ನೊಬ್ಬರನ್ನು ಬಿಟ್ಟಿರಲಾರದಷ್ಟು ಪ್ರೀತಿಸಿದವರು. ಎಲ್ಲರನ್ನು ಎದುರು ಹಾಕಿಕೊಂಡು ಮದುವೆಯಾದ್ರು. ಆದ್ರೆ ಊರಿಗೆ ಬಂದ ಕೆಲ ದಿನಗಳಲ್ಲೇ ಈ ಇಬ್ಬರ ಮಧ್ಯೆ ಗಲಾಟೆ ಶುರುವಾಯಿತು. ಈಗ ಕೈಹಿಡಿದ ಪತ್ನಿಯನ್ನೇ ಆತ ಹೆಣವಾಗಿಸಿದ್ದಾನೆ.

ಹರಿಹರ ತಾಲೂಕಿನ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂಡಸಘಟ್ಟ ಗ್ರಾಮದ ತಾಂಡ ನಿವಾಸಿ ನಾಗರಾಜ ನಾಯ್ಕ ಇದೇ ಗ್ರಾಮದ 21 ವರ್ಷದ ರಂಜಿತಾ ಬಾಯಿಯನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ. 2 ತಿಂಗಳ ಹಿಂದೆಯಷ್ಟೇ ಇವರಿಬ್ಬರು ಪ್ರೇಮ ವಿವಾಹವಾಗಿದ್ದರು. ಕುಟುಂಬದವರ ಆಕ್ಷೇಪದಿಂದಾಗಿ ಓಡಿ ಹೋಗಿ ಮದುವೆ ಆಗಿದ್ದರು.

ಮನೆಯಿಂದ ಓಡಿಹೋದ ಜೋಡಿ ಕೆಲ ದಿನಗಳ ಹಿಂದೆಯಷ್ಟೇ ಗ್ರಾಮಕ್ಕೆ ವಾಪಸಾಗಿದ್ದರು. ಪ್ರೀತಿಸಿ ಮದುವೆಯಾದ ಮೇಲೆ ಆದರ್ಶ ದಂಪತಿಯಂತೆ ಬದುಕಬೇಕೆಂಬ ಕನಸು ಕಟ್ಟಿಕೊಂಡು ಗ್ರಾಮಕ್ಕೆ ಬಂದರು. ಆದ್ರೆ, ಅಷ್ಟರೊಳಗೆ ಈ ನವಜೋಡಿ ನಡುವೆ ನಡೆಯಬಾರದು ನಡೆದು ಹೋಯಿತು. ಸಣ್ಣ ವಿಷಯಕ್ಕೆ ಪತ್ನಿ ರಂಜಿತಾಳನ್ನೇ ನಾಗರಾಜ್​ ನಾಯ್ಕ ಕೊಂದು ಹಾಕಿದ್ದಾನೆ.

ಮೃತಳ ತಾಯಿ ರೋಧನ

ನಾಗರಾಜ್​ ನಾಯ್ಕನ ಅಣ್ಣನ ಮಗನಿಗೆ ನೀರು ಕೊಡುವ ವಿಚಾರದಲ್ಲಿ ಇಬ್ಬರ ನಡುವೆ ಸಣ್ಣದಾದ ಗಲಾಟೆ ಜಗಳ ಶುರುವಾಗಿತ್ತು. ಗಲಾಟೆ ನಡೆದ ಸಂದರ್ಭದಲ್ಲಿ ನಾಗರಾಜನ ಅಣ್ಣ ಮತ್ತು ಅತ್ತಿಗೆ ಬಂದು ಬಿಡಿಸಿದರು. ಆದ್ರೆ, ಮಾರನೇ ದಿನ ಬೆಳಗ್ಗೆ ನಡೆದದ್ದೇ ಬೇರೆ. ಸುಗಂಧರಾಜ ಹೂವಿನ ತೋಟಕ್ಕೆ ರಂಜಿತಾ ಬಾಯಿಯನ್ನು ನಾಗರಾಜ ನಾಯ್ಕ ಕರೆದೊಯ್ದಿದ್ದ.

ಬೆಳಗ್ಗೆ ಆರು ಗಂಟೆಗೆ ಬೈಕ್ ನಲ್ಲಿ ಇಬ್ಬರು ತೋಟಕ್ಕೆ ಹೋದ ವೇಳೆ ಮತ್ತೆ ರಾತ್ರಿ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ನಾಗರಾಜ, ಅಲ್ಲೇ ಒಂದು ಏಟು ಹೊಡೆದಿದ್ದ. ಕೈಯಿಂದ ಕತ್ತನ್ನು ಉಸಿರು ಗಟ್ಟಿಸಿ ಕೊಂದಿದ್ದಾನೆ ಎನ್ನಲಾಗ್ತಿದೆ. ಕೂಡಲೇ ಆಕೆಯನ್ನು ಮಲೇಬೆನ್ನೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಆದರೆ, ಅಷ್ಟರಲ್ಲಾಗಲೇ ರಂಜಿತಾಬಾಯಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು.

ರಂಜಿತಾಳ ತಾಯಿ ಮೋತಿಬಾಯಿ ಈ ಕುರಿತು ದೂರು ನೀಡಿದ್ದು, ಆರೋಪಿಯನ್ನ ಮಲೇಬೆನ್ನೂರು ಪೊಲೀಸರು ಬಂಧಿಸಿದ್ದಾರೆ. ಒಟ್ಟಿನಲ್ಲಿ ಎರಡೇ ತಿಂಗಳಿಗೆ ಇಂಥದ್ದೊಂದು ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.

Intro:KN_DVG_03_20_LOVE_MURDER_SCRIPT_7203307

REPORTER : YOGARAJA G. H.

ಸುಗಂಧ ರಾಜನ ಹೂವಿನ ತೋಟದಲ್ಲಿ ನಡೆದದ್ದೇನು...? ಪ್ರೀತಿಸಿ ಮದುವೆಯಾದಾಕೆಯ ಪ್ರಾಣ ಎರಡು ತಿಂಗಳಲ್ಲೇ ನಿಲ್ಲಿಸಿದ್ದು ಯಾಕೆ ಗೊತ್ತಾ...?

ದಾವಣಗೆರೆ : ಒಬ್ಬರನ್ನೊಬ್ಬರನ್ನು ಬಿಟ್ಟಿರಲಾರದಷ್ಟು ಪ್ರೀತಿಸಿದವರು. ಅವರಿಬ್ಬರು ಎಲ್ಲರನ್ನು ಎದುರು ಹಾಕಿಕೊಂಡು ಓಡಿ ಹೋಗಿ ಮದುವೆಯಾದ ಜೋಡಿ. ಊರಿಗೆ ಬಂದ ಕೆಲ ದಿನಗಳಲ್ಲೇ
ಇಬ್ಬರ ನಡುವೆ ಗಲಾಟೆ ನಡೆದಿದ್ದು, ಕೈಯಿಡಿದ ಪತ್ನಿಯನ್ನು ಆಕೆ ಪತಿ ಕೊಂದಿದ್ದು ಯಾಕೆ ಅಂದರೆ ಅದು ಚಿಕ್ಕ ವಿಷಯಕ್ಕೆ. ಹಾಗಾದರೆ ಏನದು ಇಲ್ಲಿ ತೋರಿಸ್ತೀವಿ ನೋಡಿ.

ಹರಿಹರ ತಾಲೂಕಿನ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂಡಸಘಟ್ಟ ಗ್ರಾಮದ ತಾಂಡ ನಿವಾಸಿ ನಾಗರಾಜ ನಾಯ್ಕ ಇದೇ ಗ್ರಾಮದ 21 ವರ್ಷದ ರಂಜಿತಾ ಬಾಯಿಯನ್ನು ಕಳೆದ
ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ. ಕೆಲ ವರ್ಷಗಳ ಹಿಂದೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇದಕ್ಕೆ ಎರಡೂ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ ಕಾರಣಕ್ಕೆ ಓಡಿ ಹೋಗಿ
ಮದುವೆ ಆಗಿದ್ದರು.

ಎಲ್ಲಾ ಕಡೆ ಸುತ್ತಾಡಿಕೊಂಡು ಕೊನೆಗೆ ಕೆಲ ದಿನಗಳ ಹಿಂದೆ ಹಿಂಡಸಘಟ್ಟ ಗ್ರಾಮಕ್ಕೆ ವಾಪಸ್ ಬಂದಿದ್ದರು. ಪ್ರೀತಿ ಮಾಡಿ ಮದುವೆಯಾದ ಮೇಲೆ ಎಲ್ಲರೂ ನಮ್ಮನ್ನು ನೋಡಿ ಹಾರೈಸುವ
ರೀತಿಯಲ್ಲಿ ಬದುಕಬೇಕು ಎಂಬ ಕನಸು ಕಟ್ಟಿಕೊಂಡು ಬಂದಿದ್ದರು. ಆದ್ರೆ, ಈ ನವಜೋಡಿ ನಡುವೆ ನಡೆಯಬಾರದು ನಡೆದು ಹೋಗಿದೆ. ಅದೂ ಸಣ್ಣ ವಿಷಯಕ್ಕೆ ತನ್ನ ಪತ್ನಿ ರಂಜಿತಾಳನ್ನೇ
ನಾಗರಾಜ ನಾಯ್ಕ ಕೊಂದು ಹಾಕಿದ್ದಾನೆ.

ರಂಜಿತಾ ಬಾಯಿ ಮತ್ತು ನಾಗರಾಜ ನಾಯ್ಕ ನಡುವೆ ಗಲಾಟೆ ನಡೆದಿದೆ. ನಾಗರಾಜ ನಾಯ್ಕನ ಅಣ್ಣನ ಮಗನಿಗೆ ನೀರು ಕೊಡುವ ವಿಚಾರದಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಆಗ ನಾಯ್ಕನ
ಅಣ್ಣ ಮತ್ತು ಅತ್ತಿಗೆ ಬಂದು ಜಗಳ ಬಿಡಿಸಿರುತ್ತಾರೆ. ಆದ್ರೆ, ಮಾರನೇ ದಿನ ಬೆಳಿಗ್ಗೆ ನಡೆದದ್ದೇ ಬೇರೆ. ಸುಗಂಧರಾಜ ಹೂವಿನ ತೋಟಕ್ಕೆ ರಂಜಿತಾ ಬಾಯಿಯನ್ನು ನಾಗರಾಜ ನಾಯ್ಕ ಕರೆದುಕೊಂಡು
ಹೋಗಿದ್ದಾನೆ.

ಬೆಳಿಗ್ಗೆ ಆರು ಗಂಟೆಗೆ ಬೈಕ್ ನಲ್ಲಿ ಇಬ್ಬರು ತೋಟಕ್ಕೆ ಹೋದ ವೇಳೆ ಮತ್ತೆ ರಾತ್ರಿ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನಾಗರಾಜ ನಾಯ್ಕ, ಅಲ್ಲೇ
ಒಂದು ಏಟು ಹೊಡೆಯುತ್ತಾನೆ. ಕೈಯಿಂದ ಕತ್ತನ್ನು ಉಸಿರು ಗಟ್ಟಿಸಿ ಕೊಂದಿದ್ದಾನೆ. ಕೂಡಲೇ ಆಕೆಯನ್ನು ಮಲೇಬೆನ್ನೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಷ್ಟರಲ್ಲೇ ರಂಜಿತಾ
ಬಾಯಿ ಪ್ರಾಣ ಪಕ್ಷಿ ಹಾರಿ ಹೋಗಿದೆ. ರಂಜಿತಾಳ ತಾಯಿ ಮೋತಿ ಬಾಯಿ ದೂರು ನೀಡಿದ್ದು, ಆರೋಪಿಯನ್ನ ಮಲೇಬೆನ್ನೂರು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಒಟ್ಟಿನಲ್ಲಿ
ಎರಡೇ ತಿಂಗಳಿಗೆ ಇಂಥದ್ದೊಂದು ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ದುರಂತವೇ ಸರಿ.

ಬೈಟ್- 01

ಮೋತಿ ಬಾಯಿ, ರಂಜಿತಾಳ ತಾಯಿ

ಬೈಟ್-02

ಹನುಮಂತರಾಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ




Body:KN_DVG_03_20_LOVE_MURDER_SCRIPT_7203307

REPORTER : YOGARAJA G. H.

ಸುಗಂಧ ರಾಜನ ಹೂವಿನ ತೋಟದಲ್ಲಿ ನಡೆದದ್ದೇನು...? ಪ್ರೀತಿಸಿ ಮದುವೆಯಾದಾಕೆಯ ಪ್ರಾಣ ಎರಡು ತಿಂಗಳಲ್ಲೇ ನಿಲ್ಲಿಸಿದ್ದು ಯಾಕೆ ಗೊತ್ತಾ...?

ದಾವಣಗೆರೆ : ಒಬ್ಬರನ್ನೊಬ್ಬರನ್ನು ಬಿಟ್ಟಿರಲಾರದಷ್ಟು ಪ್ರೀತಿಸಿದವರು. ಅವರಿಬ್ಬರು ಎಲ್ಲರನ್ನು ಎದುರು ಹಾಕಿಕೊಂಡು ಓಡಿ ಹೋಗಿ ಮದುವೆಯಾದ ಜೋಡಿ. ಊರಿಗೆ ಬಂದ ಕೆಲ ದಿನಗಳಲ್ಲೇ
ಇಬ್ಬರ ನಡುವೆ ಗಲಾಟೆ ನಡೆದಿದ್ದು, ಕೈಯಿಡಿದ ಪತ್ನಿಯನ್ನು ಆಕೆ ಪತಿ ಕೊಂದಿದ್ದು ಯಾಕೆ ಅಂದರೆ ಅದು ಚಿಕ್ಕ ವಿಷಯಕ್ಕೆ. ಹಾಗಾದರೆ ಏನದು ಇಲ್ಲಿ ತೋರಿಸ್ತೀವಿ ನೋಡಿ.

ಹರಿಹರ ತಾಲೂಕಿನ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂಡಸಘಟ್ಟ ಗ್ರಾಮದ ತಾಂಡ ನಿವಾಸಿ ನಾಗರಾಜ ನಾಯ್ಕ ಇದೇ ಗ್ರಾಮದ 21 ವರ್ಷದ ರಂಜಿತಾ ಬಾಯಿಯನ್ನು ಕಳೆದ
ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ. ಕೆಲ ವರ್ಷಗಳ ಹಿಂದೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇದಕ್ಕೆ ಎರಡೂ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ ಕಾರಣಕ್ಕೆ ಓಡಿ ಹೋಗಿ
ಮದುವೆ ಆಗಿದ್ದರು.

ಎಲ್ಲಾ ಕಡೆ ಸುತ್ತಾಡಿಕೊಂಡು ಕೊನೆಗೆ ಕೆಲ ದಿನಗಳ ಹಿಂದೆ ಹಿಂಡಸಘಟ್ಟ ಗ್ರಾಮಕ್ಕೆ ವಾಪಸ್ ಬಂದಿದ್ದರು. ಪ್ರೀತಿ ಮಾಡಿ ಮದುವೆಯಾದ ಮೇಲೆ ಎಲ್ಲರೂ ನಮ್ಮನ್ನು ನೋಡಿ ಹಾರೈಸುವ
ರೀತಿಯಲ್ಲಿ ಬದುಕಬೇಕು ಎಂಬ ಕನಸು ಕಟ್ಟಿಕೊಂಡು ಬಂದಿದ್ದರು. ಆದ್ರೆ, ಈ ನವಜೋಡಿ ನಡುವೆ ನಡೆಯಬಾರದು ನಡೆದು ಹೋಗಿದೆ. ಅದೂ ಸಣ್ಣ ವಿಷಯಕ್ಕೆ ತನ್ನ ಪತ್ನಿ ರಂಜಿತಾಳನ್ನೇ
ನಾಗರಾಜ ನಾಯ್ಕ ಕೊಂದು ಹಾಕಿದ್ದಾನೆ.

ರಂಜಿತಾ ಬಾಯಿ ಮತ್ತು ನಾಗರಾಜ ನಾಯ್ಕ ನಡುವೆ ಗಲಾಟೆ ನಡೆದಿದೆ. ನಾಗರಾಜ ನಾಯ್ಕನ ಅಣ್ಣನ ಮಗನಿಗೆ ನೀರು ಕೊಡುವ ವಿಚಾರದಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಆಗ ನಾಯ್ಕನ
ಅಣ್ಣ ಮತ್ತು ಅತ್ತಿಗೆ ಬಂದು ಜಗಳ ಬಿಡಿಸಿರುತ್ತಾರೆ. ಆದ್ರೆ, ಮಾರನೇ ದಿನ ಬೆಳಿಗ್ಗೆ ನಡೆದದ್ದೇ ಬೇರೆ. ಸುಗಂಧರಾಜ ಹೂವಿನ ತೋಟಕ್ಕೆ ರಂಜಿತಾ ಬಾಯಿಯನ್ನು ನಾಗರಾಜ ನಾಯ್ಕ ಕರೆದುಕೊಂಡು
ಹೋಗಿದ್ದಾನೆ.

ಬೆಳಿಗ್ಗೆ ಆರು ಗಂಟೆಗೆ ಬೈಕ್ ನಲ್ಲಿ ಇಬ್ಬರು ತೋಟಕ್ಕೆ ಹೋದ ವೇಳೆ ಮತ್ತೆ ರಾತ್ರಿ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನಾಗರಾಜ ನಾಯ್ಕ, ಅಲ್ಲೇ
ಒಂದು ಏಟು ಹೊಡೆಯುತ್ತಾನೆ. ಕೈಯಿಂದ ಕತ್ತನ್ನು ಉಸಿರು ಗಟ್ಟಿಸಿ ಕೊಂದಿದ್ದಾನೆ. ಕೂಡಲೇ ಆಕೆಯನ್ನು ಮಲೇಬೆನ್ನೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಷ್ಟರಲ್ಲೇ ರಂಜಿತಾ
ಬಾಯಿ ಪ್ರಾಣ ಪಕ್ಷಿ ಹಾರಿ ಹೋಗಿದೆ. ರಂಜಿತಾಳ ತಾಯಿ ಮೋತಿ ಬಾಯಿ ದೂರು ನೀಡಿದ್ದು, ಆರೋಪಿಯನ್ನ ಮಲೇಬೆನ್ನೂರು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಒಟ್ಟಿನಲ್ಲಿ
ಎರಡೇ ತಿಂಗಳಿಗೆ ಇಂಥದ್ದೊಂದು ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ದುರಂತವೇ ಸರಿ.

ಬೈಟ್- 01

ಮೋತಿ ಬಾಯಿ, ರಂಜಿತಾಳ ತಾಯಿ

ಬೈಟ್-02

ಹನುಮಂತರಾಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ




Conclusion:
Last Updated : Dec 20, 2019, 11:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.