ETV Bharat / jagte-raho

ಹಣಕ್ಕೆ ಬೇಡಿಕೆ ಇಟ್ಟ ಕಿಡ್ನ್ಯಾಪರ್ಸ್​ ಮೇಲೆ ಗುಂಡಿನ ದಾಳಿ ನಡೆಸಿದ ಪೊಲೀಸರು

author img

By

Published : Apr 29, 2019, 2:31 PM IST

ಕಟ್ಟಡವೊಂದರಲ್ಲಿ ಅವಿತು ಕುಳಿತಿದ್ದ ಕಿಡ್ನಾಪರ್​ ಹಾಗೂ ಆತನ ಗ್ಯಾಂಗ್​ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇದಕ್ಕೂ ಮುನ್ನ ಕಿಡ್ನ್ಯಾಪರ್ಸ್​ಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದರು.

ಆರೋಪಿ ಮನ್ಸೂರ್ ಖಾನ್​

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ರಾಜಧಾನಿಯಲ್ಲಿ ಗುಂಡಿನ ಮೊರೆತ ಕೇಳಿಬಂದಿದೆ. ಕಾಟನ್​ ಪೇಟೆ ಬಳಿ ಹಳೆ ಕಟ್ಟಡವೊಂದರಲ್ಲಿ ಅವಿತು ಕುಳಿತಿದ್ದ ಕಿಡ್ನ್ಯಾಪ್​​ ಪ್ರಕರಣದ ಆರೋಪಿ ಮನ್ಸೂರ್ ಖಾನ್​ ಎಂಬುವನ ಕಾಲಿಗೆ ಪಶ್ಚಿಮ ವಿಭಾಗದ ಪೊಲೀಸರು ಗುಂಡು ಹಾರಿಸಿದ್ದಾರೆ.

ರಾಕೇಶ್ ಶರ್ಮಾ ಹಾಗೂ ಗೋಪಾಲ್ ಸಿಂಗ್ ಎಂಬುವರನ್ನು ಕಿಡ್ನ್ಯಾಪ್​ ಮಾಡಿದ್ದ ಮನ್ಸೂರ್,​ 5 ಲಕ್ಷ ರೂ. ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದನಂತೆ. ಈ ಬಗ್ಗೆ ಸುದ್ದಿ ತಿಳಿದು ಬಂಧಿಸಲು ತೆರಳಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಜಯಚಂದ್ರ ಹಾಗೂ ಪಿಎಸ್​ಐ ರಾಜೇಂದ್ರ ಮೇಲೆ ಹಲ್ಲೆಗೆ ಮುಂದಾಗಿದ್ದ ಎನ್ನಲಾಗುತ್ತಿದೆ. ಈ ವೇಳೆ ಆತ್ಮರಕ್ಷಣೆಗಾಗಿ ಆರೋಪಿಯ ಮೇಲೆ ಗುಂಡು ಹಾರಿಸುವ ಮೂಲಕ 8ಕ್ಕೂ ಅಧಿಕ ಹಳೆ ರಾಬರಿ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಮನ್ಸೂರ್​ನನ್ನ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚನ್ನಣ್ಣನವರ್

ನೇಪಾಳ ಮೂಲದ ರಾಕೇಶ್ ಶರ್ಮಾ ಹಾಗೂ ಆತನ ಸ್ನೇಹಿತ ರಾಜಸ್ಥಾನ ಮೂಲದ ಗೋಪಾಲ್ ಸಿಂಗ್​ನನ್ನ ಅಪಹರಿಸಿದ್ದ ಆರೋಪಿ ಮನ್ಸೂರ್​​ ಆ್ಯಂಡ್ ಗ್ಯಾಂಗ್,​​​ ನೇಪಾಳದಲ್ಲಿದ್ದ ರಾಕೇಶ್ ಸಹೋದರನಿಗೆ ಕರೆ ಮಾಡಿಸಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರಂತೆ. ತಕ್ಷಣ ರಾಕೇಶ್ ಸಹೋದರ ಬೆಂಗಳೂರಿನಲ್ಲೇ ವಾಸವಿದ್ದ ಸ್ನೇಹಿತ ಥಾಗ್ ಬಹದ್ದೂರ್ ಥಾಪಾಗೆ ಕರೆ ಮಾಡಿ ವಿಷಯ ತಿಳಿಸಿದ್ದಿಂದ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇನ್ನು ಕೃತ್ಯದಲ್ಲಿ ಏಳು ಜನ ಭಾಗಿಯಾಗಿರುವ ಶಂಕೆ ಇದ್ದು ಸದ್ಯ ಮನ್ಸೂರ್​ ಖಾನ್ ಹಾಗೂ ಆತನ ಇನ್ನೊಬ್ಬ ಸಹಚರ ಅಬ್ದುಲ್ ಮಜೀದ್​ನನ್ನ ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ರಾಜಧಾನಿಯಲ್ಲಿ ಗುಂಡಿನ ಮೊರೆತ ಕೇಳಿಬಂದಿದೆ. ಕಾಟನ್​ ಪೇಟೆ ಬಳಿ ಹಳೆ ಕಟ್ಟಡವೊಂದರಲ್ಲಿ ಅವಿತು ಕುಳಿತಿದ್ದ ಕಿಡ್ನ್ಯಾಪ್​​ ಪ್ರಕರಣದ ಆರೋಪಿ ಮನ್ಸೂರ್ ಖಾನ್​ ಎಂಬುವನ ಕಾಲಿಗೆ ಪಶ್ಚಿಮ ವಿಭಾಗದ ಪೊಲೀಸರು ಗುಂಡು ಹಾರಿಸಿದ್ದಾರೆ.

ರಾಕೇಶ್ ಶರ್ಮಾ ಹಾಗೂ ಗೋಪಾಲ್ ಸಿಂಗ್ ಎಂಬುವರನ್ನು ಕಿಡ್ನ್ಯಾಪ್​ ಮಾಡಿದ್ದ ಮನ್ಸೂರ್,​ 5 ಲಕ್ಷ ರೂ. ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದನಂತೆ. ಈ ಬಗ್ಗೆ ಸುದ್ದಿ ತಿಳಿದು ಬಂಧಿಸಲು ತೆರಳಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಜಯಚಂದ್ರ ಹಾಗೂ ಪಿಎಸ್​ಐ ರಾಜೇಂದ್ರ ಮೇಲೆ ಹಲ್ಲೆಗೆ ಮುಂದಾಗಿದ್ದ ಎನ್ನಲಾಗುತ್ತಿದೆ. ಈ ವೇಳೆ ಆತ್ಮರಕ್ಷಣೆಗಾಗಿ ಆರೋಪಿಯ ಮೇಲೆ ಗುಂಡು ಹಾರಿಸುವ ಮೂಲಕ 8ಕ್ಕೂ ಅಧಿಕ ಹಳೆ ರಾಬರಿ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಮನ್ಸೂರ್​ನನ್ನ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚನ್ನಣ್ಣನವರ್

ನೇಪಾಳ ಮೂಲದ ರಾಕೇಶ್ ಶರ್ಮಾ ಹಾಗೂ ಆತನ ಸ್ನೇಹಿತ ರಾಜಸ್ಥಾನ ಮೂಲದ ಗೋಪಾಲ್ ಸಿಂಗ್​ನನ್ನ ಅಪಹರಿಸಿದ್ದ ಆರೋಪಿ ಮನ್ಸೂರ್​​ ಆ್ಯಂಡ್ ಗ್ಯಾಂಗ್,​​​ ನೇಪಾಳದಲ್ಲಿದ್ದ ರಾಕೇಶ್ ಸಹೋದರನಿಗೆ ಕರೆ ಮಾಡಿಸಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರಂತೆ. ತಕ್ಷಣ ರಾಕೇಶ್ ಸಹೋದರ ಬೆಂಗಳೂರಿನಲ್ಲೇ ವಾಸವಿದ್ದ ಸ್ನೇಹಿತ ಥಾಗ್ ಬಹದ್ದೂರ್ ಥಾಪಾಗೆ ಕರೆ ಮಾಡಿ ವಿಷಯ ತಿಳಿಸಿದ್ದಿಂದ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇನ್ನು ಕೃತ್ಯದಲ್ಲಿ ಏಳು ಜನ ಭಾಗಿಯಾಗಿರುವ ಶಂಕೆ ಇದ್ದು ಸದ್ಯ ಮನ್ಸೂರ್​ ಖಾನ್ ಹಾಗೂ ಆತನ ಇನ್ನೊಬ್ಬ ಸಹಚರ ಅಬ್ದುಲ್ ಮಜೀದ್​ನನ್ನ ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್ ಮಾಹಿತಿ ನೀಡಿದ್ದಾರೆ.

Intro:ಬೆಳ್ಳಂಬೆಳಿಗ್ಗೆ ಕಾಟನ್ ಪೇಟೆ ವ್ಯಾಪ್ತಿಯಲ್ಲಿ ಶೂಟೌಟ್.
ಕಿಡ್ನ್ಯಾಪ್ ಗ್ಯಾಂಗ್ ನ ಪ್ರಮುಖ ಆರೋಪಿ ಕಾಲಿಗೆ ಗುಂಡು.

ಭವ್ಯ

ಇವತ್ತು ಬೆಳ್ಳಂಬೆಳಿಗ್ಗೆ ಪ.ವಿಭಾಗದ ಪೋಲಿಸರು ಕಾಟನ್ ಪೇಟೆ ಬಳಿ ಹಳೇ ಕಟ್ಟಡವೊಂದ್ರಲ್ಲಿ ಅವಿತಿದ್ದ ಕಿಡ್ನ್ಯಾಪ್ ಪ್ರಕರಣದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಜೈಲಿಗೆ ಹೋಗಿ ಹೊರಬಂದು ಸೈಲೆಂಟಾಗಿದ್ದವನನ್ನೇ ಕಿಡ್ನ್ಯಾಪ್ ಮಾಡಿ ಆತನ ಸಹೋದರನಿಂದ ೫ ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಗ್ಯಾಂಗ್ ಲೀಡರ್ ಮನ್ಸೂರ್ ಖಾನ್ ನನ್ನ ಬಂಧಿಸಲು ತೆರಳಿದ್ದ ವೇಳೆ ಪೋಲಿಸ್ ಕಾನ್ಸ್ ಟೇಬಲ್ ಜಯಚಂದ್ರ ಮೇಲೆ ಡ್ಯಾಗರ್ ನಿಂದ ಹಲ್ಲೆ ಮಾಡಿದ್ದಲ್ಲದೆ ಪಿ ಎಸ್ ಐ ರಾಜೇಂದ್ರ ಮೇಲೂ ಹಲ್ಲೆಗೆ ಮುಂದಾದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸುವ ಮೂಲಕ ಎಂಟಕ್ಕೂ ಅಧಿಕ ಹಳೆ ರಾಬರಿ ಪ್ರಕರಣಗಳಲ್ಲೂ ಭಾಗಿಯಾಗಿದ್ದ ಆರೋಪಿಯನ್ನ ಬಂಧಿಸಿ ಖೆಡ್ಡಾಕ್ಕೆ ಕೆಡವಿದ್ದಾರೆ.

ಇದೇ ತಿಂಗಳ 24 ರಂದು ರಾತ್ರಿ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ .. ನಂತ್ರ ನೇಪಾಳ ಮೂಲದ ರಾಕೇಶ್ ಶರ್ಮಾ ಹಾಗೂ ಆತನ ಸ್ನೇಹಿತ ರಾಜಸ್ತಾನ ಮೂಲದ ಗೋಪಾಲ್ ಸಿಂಗ್​ನನ್ನ ಅಪಹರಿಸಿದ್ದ ಆರೋಪಿ ಮನ್ಸೂರ್ ಆ್ಯಂಡ್ ಗ್ಯಾಂಗ್. ನೇಪಾಳದಲ್ಲಿದ್ದ ರಾಕೇಶ್ ಸಹೋದರನಿಗೆ ಕರೆ ಮಾಡಿಸಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ತಕ್ಷಣ ರಾಕೇಶ್ ಸಹೋದರ ಬೆಂಗಳೂರಿನಲ್ಲೇ ವಾಸವಿದ್ದ ಸ್ನೇಹಿತ ಥಾಗ್ ಬಹದ್ದೂರ್ ಥಾಪಾಗೆ ಕರೆ ಮಾಡಿ ವಿಷಯ ತಿಳಿಸಿದ್ದಿಂದ ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ರು. ಮಾರನೆ ದಿನ ಅಪಹರಣಾಕಾರರಿಂದ ತೀವ್ರ ಹಲ್ಲೆಗೊಳಗಾಗಿದ್ದ ರಾಕೇಶ್​ನನ್ನ ರಕ್ಷಿಸಿದ್ದ ಪೋಲಿಸರು ಆತನನ್ನ ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು. ಅದೇ ದಿನ ಆರೋಪಿಗಳಿಂದ ತಪ್ಪಿಸಿಕೊಂಡು ನೇರವಾಗಿ ಠಾಣೆಗೆ ಹಾಜರಾಗಿದ್ದ ಗೋಪಾಲ್ ಸಿಂಗ್​ ಹೇಳಿಕೆ ಪಡೆದು ಕಾರ್ಯ ಪ್ರವೃತ್ತರಾಗಿ ಇವತ್ತು ಬಂಧಿಸಲು ತೆರಳಿದ್ದ ವೇಳೆ ಎಸ್ಕೇಪ್ ಆಗಲು ಯತ್ನಿಸಿದ್ದರಿಂದ ಮನ್ಸೂರ್ ಕಾಲಿಗೆ ಗುಂಡು ಹಾರಿಸಿ ದ್ದಾರೆ.

ಇನ್ನು ಕೃತ್ಯದಲ್ಲಿ ಏಳು ಜನ ಭಾಗಿಯಾಗಿರುವ ಶಂಕೆ ಇದ್ದು ಸದ್ಯ ಮನ್ಸೂರ್ ಖಾನ್ ಹಾಗೂ ಆತನ ಇನ್ನೊಬ್ಬ ಸಹಚರ ಅಬ್ಧುಲ್ ಮಜೀದ್ ನನ್ನ ಪೋಲಿಸರು ಬಂಧಿಸಿದ್ದಾರೆ. ಇನ್ನು ಪಶ್ಚಿಮ ವಿಭಾಗ ಡಿಸಿಪಿ ರವಿಡಿ ಚೆನ್ನಣವರು ಮಾತಾಡಿ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ರಾಕೇಶ್ ಶರ್ಮಾ ಸ್ನೇಹಿತ ಥಾಗ್ ಬಹದ್ದೂರ್ ಥಾಪಾ ಹಾಗಾಗಿ ಅಪಹರಣಾಕಾರರಿಂದ ಹಲ್ಲೆಗೊಳಗಾಗಿದ್ದ ರಾಕೇಶ್​ನನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ರು ಉಪ್ಪಾರಪೇಟೆ ಠಾಣಾ ಪೋಲಿಸರು ನಂತ್ರ ತಕ್ಷಣ ಪ್ರತ್ಯೇಕ ತಂಡ ರಚಿಸಿ ಕಾರ್ಯ ಪ್ರವೃತ್ತರಾಗಿದ್ದ ಪೋಲಿಸರು ಇವತ್ತು ಬಂಧಿಸಿದ್ದಾರೆ Body:KN_BNG_0529419-SHOUTOUT_7204498-BHAVYAConclusion:KN_BNG_0529419-SHOUTOUT_7204498-BHAVYA
ETV Bharat Logo

Copyright © 2024 Ushodaya Enterprises Pvt. Ltd., All Rights Reserved.