ETV Bharat / jagte-raho

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಹೆಡೆಮುರಿ ಕಟ್ಟಿದ ಹಾಸನ ಪೊಲೀಸ್ರು

author img

By

Published : Oct 20, 2019, 1:56 PM IST

ದರೋಡೆ, ಸರಗಳ್ಳತನ, ಖೋಟಾ ನೋಟು ಚಲಾವಣೆ, ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಹಾಸನ ಜಿಲ್ಲಾ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಿವಾಸ್ ಸಪೆಟ್, ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ.

ರಾಮನಿವಾಸ್ ಸಪೆಟ್ ಸುದ್ದಿಗೋಷ್ಟಿ

ಹಾಸನ: ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಎಸ್​ಪಿ ರಾಮನಿವಾಸ್ ಸಪೆಟ್ ಅವರು, ಕಳೆದ ತಿಂಗಳ 24ರಂದು ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಸತೀಶ್ ಎಂಬಾತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ಹೊಳೆನರಸೀಪುರ ಹಾಗೂ ಚನ್ನರಾಯಪಟ್ಟಣದಲ್ಲಿ 8 ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತರಿಂದ 184ಗ್ರಾಂ ಚಿನ್ನಾಭರಣ ಹಾಗೂ 2 ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು 8,74,000 ರೂ. ಎಂದು ಹೇಳಿದ್ದಾರೆ.

ಎಸ್​ಪಿ ರಾಮನಿವಾಸ್ ಸಪೆಟ್ ಸುದ್ದಿಗೋಷ್ಟಿ

ಇನ್ನೊಂದೆಡೆ ಖೋಟಾ ನೋಟು ಚಲಾವಣೆ ಮಾಡುವ ಗ್ಯಾಂಗ್​ವೊಂದನ್ನು ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಪುತ್ತೂರು ತಾಲೂಕಿನ ಇಲಿಯಾಜ್ ಹಾಗೂ ಸುಲೈಮಾನ್, ಮೈಸೂರು ಜಿಲ್ಲೆ ಕೆ. ಆರ್. ನಗರ ತಾಲೂಕಿನ ಕಿರಣ್, ಹೊಳೆನರಸೀಪುರದ ಸಂತೋಷ್ ಬಂಧಿತ ಆರೋಪಿಗಳು.

ಮಾರನಹಳ್ಳಿಯ ಹೋಟೆಲ್ ಸೇರಿದಂತೆ ವಿವಿಧೆಡೆ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದರೆಂದು ತಿಳಿದು ಬಂದಿದೆ. ಗ್ರಾಮಾಂತರ ಠಾಣೆ ಪಿಎಸ್‌ಐ ಬ್ಯಾಟರಾಯನ ಗೌಡ ನೇತೃತ್ವದಲ್ಲಿ ಪ್ರಕರಣದ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್​ಪಿ ಮಾಹಿತಿ ನೀಡಿದರು.

ಹಾಸನ: ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಎಸ್​ಪಿ ರಾಮನಿವಾಸ್ ಸಪೆಟ್ ಅವರು, ಕಳೆದ ತಿಂಗಳ 24ರಂದು ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಸತೀಶ್ ಎಂಬಾತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ಹೊಳೆನರಸೀಪುರ ಹಾಗೂ ಚನ್ನರಾಯಪಟ್ಟಣದಲ್ಲಿ 8 ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತರಿಂದ 184ಗ್ರಾಂ ಚಿನ್ನಾಭರಣ ಹಾಗೂ 2 ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು 8,74,000 ರೂ. ಎಂದು ಹೇಳಿದ್ದಾರೆ.

ಎಸ್​ಪಿ ರಾಮನಿವಾಸ್ ಸಪೆಟ್ ಸುದ್ದಿಗೋಷ್ಟಿ

ಇನ್ನೊಂದೆಡೆ ಖೋಟಾ ನೋಟು ಚಲಾವಣೆ ಮಾಡುವ ಗ್ಯಾಂಗ್​ವೊಂದನ್ನು ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಪುತ್ತೂರು ತಾಲೂಕಿನ ಇಲಿಯಾಜ್ ಹಾಗೂ ಸುಲೈಮಾನ್, ಮೈಸೂರು ಜಿಲ್ಲೆ ಕೆ. ಆರ್. ನಗರ ತಾಲೂಕಿನ ಕಿರಣ್, ಹೊಳೆನರಸೀಪುರದ ಸಂತೋಷ್ ಬಂಧಿತ ಆರೋಪಿಗಳು.

ಮಾರನಹಳ್ಳಿಯ ಹೋಟೆಲ್ ಸೇರಿದಂತೆ ವಿವಿಧೆಡೆ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದರೆಂದು ತಿಳಿದು ಬಂದಿದೆ. ಗ್ರಾಮಾಂತರ ಠಾಣೆ ಪಿಎಸ್‌ಐ ಬ್ಯಾಟರಾಯನ ಗೌಡ ನೇತೃತ್ವದಲ್ಲಿ ಪ್ರಕರಣದ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್​ಪಿ ಮಾಹಿತಿ ನೀಡಿದರು.

Intro:ಹಾಸನ: ದರೋಡೆ, ಖೋಟಾ ನೋಟ್, ಸರಗಳ್ಳತನ, ಕೊಲೆ ಹಾಗೂ ವಿವಿಧ ಪ್ರಕರಣಗಳ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಿವಾಸ್ ಸಪೆಟ್ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾತನಾಡಿ, ಕಳೆದ ತಿಂಗಳ ೨೪ರಂದು ಹೊಳೆನರಸೀಪುರ ಪಟ್ಟಣದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಲಕ್ಷ್ಮಣ್ ಗೌಡ ಅವರ ನೇತೃತ್ವದ ತಂಡ ಆರೋಪಿ ಸತೀಶ್ ಎಂಬಾತನ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ವಿಚಾರಣೆ ವೇಳೆ ಆರೋಪಿ ಇನ್ನೂ ಹೊಳೆನರಸೀಪುರ ಹಾಗೂ ಚನ್ನರಾಯಪಟ್ಟಣದಲ್ಲಿ ೮ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತರಿಂದ ೧೮೪ಗ್ರಾಂ ಚಿನ್ನ ಹಾಗೂ ೨ ಕೆಜಿ ಬೆಳ್ಳಿಯನ್ನ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು ೮ಲಕ್ಷದ ೭೪ ಸಾವಿರರೂಗಳಾದಾಗಿದೆ ಎಂದು ಹೇಳಿದರು.
ಖೋಟಾ ನೋಟು ಚಲಾವಣೆ ಮಾಡುವ ಗ್ಯಾಂಗ್‌ವೊಂದನ್ನು ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪುತ್ತೂರು ತಾಲೂಕು ನೆಲ್ಯಾಡಿ ಸಮೀಪದ ಪಡುಬೆಟ್ಟು ಗ್ರಾಮದ ಇಲಿಯಾಜ್, ಪುತ್ತೂರು ತಾಲೂಕು ನೆಲ್ಯಾಡಿ ಸಮೀಪದ ಹೊಸಮಜಲು ಗ್ರಾಮದ ಸುಲೈಮಾನ್, ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನ ಹೊಸ ಅಗ್ರಹಾರದ ಕಿರಣ್, ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಹೋಬಳಿಯ ನಗರನಹಳ್ಳಿ ಗ್ರಾಮದ ಸಂತೋಷ್ ಬಂಧಿತ ಆರೋಪಿಗಳಾಗಿದ್ದಾರೆ.
ಅ. ೧೬ ರಂದು ಗ್ರಾಮಾಂತರ ಠಾಣೆಯ ಪೊಲೀಸರು ಮಾರನಹಳ್ಳಿ ಉಪಠಾಣೆಯ ಮುಂದೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ಸ್ಥಳ ದಂಡ ವಿಧಿಸುತ್ತಿರುವಾಗ ಸಂಜೆ ೫ ರ ಸಮಯದಲ್ಲಿ ಮಂಗಳೂರು ಕಡೆಯಿಂದ ಬಂದ ಸ್ವಿಪ್ಟ್ ಡಿಸೈರ್ ಚಾಲಕನ ಡ್ರೈವಿಂಗ್ ಲೈಸನ್ಸ್ ಹಾಗೂ ವಾಹನದ ದಾಖಲಾತಿ ಹಾಜರು ಪಡಿಸುವಂತೆ ತಿಳಿಸಿದಾಗ ಕಾರಿನ ಚಾಲಕನು ಗಾಬರಿಗೊಂಡು ಓಡಲು ಯತ್ನಿಸಿದಾಗ ಆತನನ್ನು ಹಿಡಿದು ಕಾರನ್ನು ಪರಿಶಿಲಿಸಿದಾಗ ಖೋಟು ನೋಟುಗಳು ದೊರಕಿದೆ.
೫೦೦ರೂ ಮುಖಬೆಲೆಯ ೩ ನೋಟುಗಳು, ೨೦೦೦ ರೂ ಮುಖ ಬೆಲೆಯ ೫ ನಕಲಿ ನೋಟುಗಳು, ೧೦೦ರೂ ಮುಖಬೆಲೆಯ ೧೫ ನೋಟುಗಳು ಸೇರಿದಂತೆ ಒಟ್ಟು ೨೧,೦೦೦ ಮೌಲ್ಯದ ನೋಟುಗಳು ಪೊಲೀಸರಿಗೆ ದೊರಕಿದೆ.
ಪೊಲೀಸರು ಹೆಚ್ಚಿನ ತನಿಖೆ ಮಾಡಿದ್ದು, ಆರೋಪಿ ಕಿರಣ್ ಹಾಗೂ ಇಲಿಯಾಜ್ ಮನೆಯಲ್ಲಿರುವ ಕಲರ್ ಪ್ರಿಂಟರ್ ಮುಖಾಂತರ ಖೋಟು ನೋಟು ಮಾಡುತ್ತಿದ್ದರೆಂದು ತಿಳಿದು ಬಂದಿದೆ.
ಮಾರನಹಳ್ಳಿಯ ಹೋಟೆಲ್ ಸೇರಿದಂತೆ ವಿವಿಧೆಡೆ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದರೆಂದು ತಿಳಿದು ಬಂದಿದ್ದು, ಗ್ರಾಮಾಂತರ ಠಾಣೆ ಪಿಎಸ್‌ಐ ಬ್ಯಾಟರಾಯನ ಗೌಡ ನೇತೃತ್ವದಲ್ಲಿ ಪ್ರಕರಣದ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.
ಹಾಸನ ತಾಲೂಕಿನ ನಿಟ್ಟೂರು ಗ್ರಾಮದ ಮಹಾಲಕ್ಷ್ಮಿ ವೈನ್ಸ್‌ನಲ್ಲಿ ಐದಳ್ಳಿ ಗ್ರಾಮದ ನಾನ್ಯಾ ನಾಯಕರವರ ಪುತ್ರ ವೆಂಕಟೇಶ್ ನಾಯ್ಡ್ ಸಪ್ಲೆಯರಾಗಿ ಕೆಲಸ ಮಾಡಿಕೊಂಡು ಇದ್ದು, ಅ. ೧೪ ರ ರಾತ್ರಿ ೮ ರಲ್ಲಿ ಆರೋಪಿ ನಾಗೇನಹಳ್ಳಿ ತಾಂಡ್ಯದ ರಮೇಶ್ ನಾಯ್ಡ್ ಕುಡಿಯಲು ಬಂದಿದ್ದು, ಹಳೇ ದ್ವೇಷದಲ್ಲಿ ಗಲಾಟೆ ಮಾಡಿ ನವೀನ್ ನಾಯಕನನ್ನು ಹೊಡೆಯುತ್ತಿದಾಗ ಬಿಡಿಸಲು ಬಂದ ವೆಂಕಟೇಶ್‌ಗೆ ಅವಾಚ್ಯ ಪದಗಳಿಂದ ನಿಂಧಿಸಿ ಕೈಯಿಂದ ಹೊಡೆದು ಬಾಯಿಯಲ್ಲಿ ರಕ್ತ ಬಂದು ಪರಿಣಾಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದರಿಂದ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ರಮೇಶ್ ನಾಯ್ಕ್ (೨೩) ವರ್ಷ ಎಂಬುವತನನ್ನು ಬಂಧಿಸಿರುವುದಾಗಿ ಹೇಳಿದರು.

ಬೈಟ್ ೧ : ರಾಮನಿವಾಸ್ ಸಪೆಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾಸನ.

ಈಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿ ನಂದಿನಿ, ಡಿವೈಎಸ್ಪಿ ಪುಟ್ಟಸ್ವಾಮಿಗೌಡ ಇತರರು ಉಪಸ್ಥಿತರಿದ್ದರು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.