ETV Bharat / jagte-raho

ಆಸ್ತಿ ಇಬ್ಭಾಗವಾಗುತ್ತೆಂದು ಸಾಕಿ ಸಲುಹಿದ ತಂದೆಯನ್ನೇ ಹತ್ಯೆ ಮಾಡಿಸಿದ ಮಗ!

author img

By

Published : Aug 9, 2020, 5:33 AM IST

ರಿಯಲ್ ಎಸ್ಟೇಟ್ ಉದ್ಯಮಿ ಪನ್ನೀರ್ ಸೆಲ್ವಂ ಅನುಮಾನಾಸ್ಪದ ಸಾವಿನ ಕೇಸ್ ಬೆನ್ನು ಹತ್ತಿದ ರಾಮಮೂರ್ತಿನಗರ ಪೊಲೀಸರು ಶವ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನ ಭೇದಿಸಿದ್ದಾರೆ. ಅಪ್ಪನನ್ನ ಕೊಲೆ ಮಾಡುವಂತೆ ಮಗ ರಾಜೇಶ್ 10 ಲಕ್ಷ ರೂ.ಗೆ ಸುಪಾರಿ ಕೊಟ್ಟಿದ್ದ. ದೂರು ದಾಖಲಾದ 5 ಗಂಟೆಯಲ್ಲಿ ಪೊಲೀಸರು ಆರೋಪಿ ಮಗ ರಾಜೇಶ್ ಹಾಗೂ ಸ್ನೇಹಿತರನ್ನು ಬಂಧಿಸಿದ್ದಾರೆ.

Murder
ಹತ್ಯೆ

ಬೆಂಗಳೂರು: ಅಪ್ಪನ ಅನೈತಿಕ ಸಂಬಂಧದಿಂದ ಆಸ್ತಿ ಎರಡು ಭಾಗವಾಗುತ್ತೆ ಅಂತಾ ಸುಪಾರಿ ಕೊಟ್ಟು ಹೆತ್ತ ತಂದೆಯನ್ನ ಅಮಾನುಷವಾಗಿ ಕೊಲೆ ಮಾಡಿಸಿದ ಪ್ರಕರಣ ನಗರದ ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಪನ್ನೀರ್ ಸೆಲ್ವಂ ಅನುಮಾನಾಸ್ಪದ ಸಾವಿನ ಕೇಸ್ ಬೆನ್ನು ಹತ್ತಿದ ರಾಮಮೂರ್ತಿನಗರ ಪೊಲೀಸರು ಶವ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನ ಭೇದಿಸಿದ್ದಾರೆ.

ಅಪ್ಪನನ್ನ ಕೊಲೆ ಮಾಡುವಂತೆ ಮಗ ರಾಜೇಶ್ 10 ಲಕ್ಷ ರೂ.ಗೆ ಸುಪಾರಿ ಕೊಟ್ಟಿದ್ದ. ಸ್ನೇಹಿತರಾದ ಪಾರ್ಥಿ ಬನ್, ಸ್ಟಾನ್ಲಿ, ಆನಂದ್ ಅನ್ನೋರಿಗೆ ಕೊಲೆಗಡುಕ ಆರೋಪಿ ರಾಜೇಶ್ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ.

ಪನ್ನೀರ್ ಸೆಲ್ವಂ, ನಿನ್ನೆ ಬೆಳಗ್ಗೆ ದೇವಸ್ಥಾನಕ್ಕೆ ಹೊಗುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ಅವರನ್ನ ತಡೆದ ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ದೇಹಕ್ಕೆ ವಿಷಯುಕ್ತ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಇತ್ತ ಅಪ್ಪನನ್ನ ಇಂಜೆಕ್ಷನ್ ನೀಡಿ ಕೊಲೆ ಮಾಡುತ್ತಿದ್ದಂತೆ ಪಾಪಿ ರಾಜೇಶ್ ನಾಟಕ ಮಾಡಿದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದ. ನನ್ನ ತಂದೆಯನ್ನ ಕಿಡ್ನಾಪ್ ಮಾಡಿದ್ದಾರೆ, ದಯಮಾಡಿ ಹುಡುಕಿ ಕೊಡಿ ಅಂತಾ ಬೆಳಗ್ಗೆ 11 ಗಂಟೆಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಲ್ಲಾ ಮಾರ್ಗಗಳಿಂದಲೂ ತನಿಖೆಯನ್ನ ನಡೆಸಿದ್ದಾರೆ.

ಈ ವೇಳೆ ಕೌಟುಂಬಿಕ ವಿಚಾರಗಳ ತನಿಖೆ ನಡೆಸಿದಾಗ ಮಗ ರಾಜೇಶನ ಮೇಲೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ದೂರು ದಾಖಲಾದ 5 ಗಂಟೆಯಲ್ಲಿ ಆರೋಪಿ ಮಗ ರಾಜೇಶ್ ಹಾಗೂ ಸ್ನೇಹಿತರನ್ನು ಬಂಧಿಸಿದ್ದಾರೆ. ಈ ವೇಳೆ ವಿಚಾರಣೆ ಮಾಡಿದಾಗ ತಂದೆಯ ಅಕ್ರಮ ಸಂಬಂಧದಿಂದ ಆಸ್ತಿಯಲ್ಲಿ ಎರಡು ಪಾಲು ಆಗುತ್ತೆ ಅಂತಾ ಹೀಗೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಬೆಂಗಳೂರು: ಅಪ್ಪನ ಅನೈತಿಕ ಸಂಬಂಧದಿಂದ ಆಸ್ತಿ ಎರಡು ಭಾಗವಾಗುತ್ತೆ ಅಂತಾ ಸುಪಾರಿ ಕೊಟ್ಟು ಹೆತ್ತ ತಂದೆಯನ್ನ ಅಮಾನುಷವಾಗಿ ಕೊಲೆ ಮಾಡಿಸಿದ ಪ್ರಕರಣ ನಗರದ ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಿಯಲ್ ಎಸ್ಟೇಟ್ ಉದ್ಯಮಿ ಪನ್ನೀರ್ ಸೆಲ್ವಂ ಅನುಮಾನಾಸ್ಪದ ಸಾವಿನ ಕೇಸ್ ಬೆನ್ನು ಹತ್ತಿದ ರಾಮಮೂರ್ತಿನಗರ ಪೊಲೀಸರು ಶವ ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನ ಭೇದಿಸಿದ್ದಾರೆ.

ಅಪ್ಪನನ್ನ ಕೊಲೆ ಮಾಡುವಂತೆ ಮಗ ರಾಜೇಶ್ 10 ಲಕ್ಷ ರೂ.ಗೆ ಸುಪಾರಿ ಕೊಟ್ಟಿದ್ದ. ಸ್ನೇಹಿತರಾದ ಪಾರ್ಥಿ ಬನ್, ಸ್ಟಾನ್ಲಿ, ಆನಂದ್ ಅನ್ನೋರಿಗೆ ಕೊಲೆಗಡುಕ ಆರೋಪಿ ರಾಜೇಶ್ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆ.

ಪನ್ನೀರ್ ಸೆಲ್ವಂ, ನಿನ್ನೆ ಬೆಳಗ್ಗೆ ದೇವಸ್ಥಾನಕ್ಕೆ ಹೊಗುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ಅವರನ್ನ ತಡೆದ ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ದೇಹಕ್ಕೆ ವಿಷಯುಕ್ತ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಇತ್ತ ಅಪ್ಪನನ್ನ ಇಂಜೆಕ್ಷನ್ ನೀಡಿ ಕೊಲೆ ಮಾಡುತ್ತಿದ್ದಂತೆ ಪಾಪಿ ರಾಜೇಶ್ ನಾಟಕ ಮಾಡಿದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದ. ನನ್ನ ತಂದೆಯನ್ನ ಕಿಡ್ನಾಪ್ ಮಾಡಿದ್ದಾರೆ, ದಯಮಾಡಿ ಹುಡುಕಿ ಕೊಡಿ ಅಂತಾ ಬೆಳಗ್ಗೆ 11 ಗಂಟೆಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಲ್ಲಾ ಮಾರ್ಗಗಳಿಂದಲೂ ತನಿಖೆಯನ್ನ ನಡೆಸಿದ್ದಾರೆ.

ಈ ವೇಳೆ ಕೌಟುಂಬಿಕ ವಿಚಾರಗಳ ತನಿಖೆ ನಡೆಸಿದಾಗ ಮಗ ರಾಜೇಶನ ಮೇಲೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ದೂರು ದಾಖಲಾದ 5 ಗಂಟೆಯಲ್ಲಿ ಆರೋಪಿ ಮಗ ರಾಜೇಶ್ ಹಾಗೂ ಸ್ನೇಹಿತರನ್ನು ಬಂಧಿಸಿದ್ದಾರೆ. ಈ ವೇಳೆ ವಿಚಾರಣೆ ಮಾಡಿದಾಗ ತಂದೆಯ ಅಕ್ರಮ ಸಂಬಂಧದಿಂದ ಆಸ್ತಿಯಲ್ಲಿ ಎರಡು ಪಾಲು ಆಗುತ್ತೆ ಅಂತಾ ಹೀಗೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.