ETV Bharat / jagte-raho

ಅಮ್ಮ-ಅಣ್ಣನನ್ನು ನೆನೆದು ಅಳುತ್ತಿದ್ದ ಕಂದನನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ!

author img

By

Published : Oct 30, 2020, 5:35 PM IST

ಮಗುವೊಂದು ತನ್ನ ಅಮ್ಮ-ಅಣ್ಣ ಬೇಕೆಂದು ಅತ್ತಿದ್ದೇ ತಪ್ಪಾಗಿದೆ. ಮಗಳ ಹಠದಿಂದ ಕೋಪಗೊಂಡ ಅಪ್ಪ ಆಕೆಯನ್ನ ಕೊಲೆ ಮಾಡಿ ಕೈತೊಳೆದುಕೊಂಡಿದ್ದಾನೆ. ಈ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

father kills his own 4 year  old daughter in Ghaziabad
ಕಂದಮ್ಮನನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ

ಗಾಜಿಯಾಬಾದ್‌ (ಉತ್ತರ ಪ್ರದೇಶ): ಅಮ್ಮ-ಅಣ್ಣ ಬೇಕೆಂದು ಯಾವಾಗಲೂ ಅಳುತ್ತಿದ್ದ ನಾಲ್ಕು ವರ್ಷದ ಮಗಳನ್ನು ತಂದೆಯೇ ಕತ್ತು ಹಿಸುಕಿ ಕೊಂದಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಗಾಜಿಯಾಬಾದ್‌ನ ಖೋಡಾ ಕಾಲೋನಿಯಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದ್ದು, ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನ ಮೃತದೇಹವನನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಘಟನೆ ಹಿನ್ನೆಲೆ:

ಆರೋಪಿ ವಾಸುದೇವ್ ಗುಪ್ತಾ ಖೋಡಾ ಕಾಲೋನಿಯಲ್ಲಿ ತನ್ನ ಪತ್ನಿ, ಮಗಳು-ಮಗನೊಂದಿಗೆ ವಾಸವಾಗಿದ್ದ. ಗಂಡ-ಹೆಂಡತಿ ನಡುವೆ ಕಲಹ ಉಂಟಾಗಿದ್ದು, 25 ದಿನಗಳ ಹಿಂದೆ ಮಗನನ್ನು ತನ್ನೊಂದಿಗೆ ಕರೆದುಕೊಂಡು ಪತ್ನಿ ತವರು ಮನೆಗೆ ಹೋಗಿದ್ದಾಳೆ.

ಕೂಲಿ ಕೆಲಸ ಮಾಡುವ ವಾಸುದೇವ್, ಮನೆಯಲ್ಲಿ ಯಾರೂ ಇಲ್ಲದ ಕಾರಣ ಮಗಳನ್ನು ಕೆಲಸ ಮಾಡುವ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿರುತ್ತಾನೆ. ಆದರೆ ಆ ಮಗು ಅಮ್ಮ-ಅಣ್ಣನನ್ನು ನೆನೆದು ಯಾವಾಗಲೂ ಅಳುತ್ತಿತ್ತು. ಇದು ವಾಸುದೇವ್​ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಿನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದ ಮೇಲೂ ಸಹ ಆ ಕಂದಮ್ಮ ಅಮ್ಮ-ಅಣ್ಣ ಬೇಕು ಎಂದು ಹಠ ಮಾಡಿ, ಅಳತೊಡಗಿದೆ. ಕೋಪಗೊಂಡ ವಾಸುದೇವ್​ ಮಗಳನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ ಎಂದು ತಿಳಿದುಬಂದಿದೆ.

ಗಾಜಿಯಾಬಾದ್‌ (ಉತ್ತರ ಪ್ರದೇಶ): ಅಮ್ಮ-ಅಣ್ಣ ಬೇಕೆಂದು ಯಾವಾಗಲೂ ಅಳುತ್ತಿದ್ದ ನಾಲ್ಕು ವರ್ಷದ ಮಗಳನ್ನು ತಂದೆಯೇ ಕತ್ತು ಹಿಸುಕಿ ಕೊಂದಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಗಾಜಿಯಾಬಾದ್‌ನ ಖೋಡಾ ಕಾಲೋನಿಯಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದ್ದು, ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನ ಮೃತದೇಹವನನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಘಟನೆ ಹಿನ್ನೆಲೆ:

ಆರೋಪಿ ವಾಸುದೇವ್ ಗುಪ್ತಾ ಖೋಡಾ ಕಾಲೋನಿಯಲ್ಲಿ ತನ್ನ ಪತ್ನಿ, ಮಗಳು-ಮಗನೊಂದಿಗೆ ವಾಸವಾಗಿದ್ದ. ಗಂಡ-ಹೆಂಡತಿ ನಡುವೆ ಕಲಹ ಉಂಟಾಗಿದ್ದು, 25 ದಿನಗಳ ಹಿಂದೆ ಮಗನನ್ನು ತನ್ನೊಂದಿಗೆ ಕರೆದುಕೊಂಡು ಪತ್ನಿ ತವರು ಮನೆಗೆ ಹೋಗಿದ್ದಾಳೆ.

ಕೂಲಿ ಕೆಲಸ ಮಾಡುವ ವಾಸುದೇವ್, ಮನೆಯಲ್ಲಿ ಯಾರೂ ಇಲ್ಲದ ಕಾರಣ ಮಗಳನ್ನು ಕೆಲಸ ಮಾಡುವ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿರುತ್ತಾನೆ. ಆದರೆ ಆ ಮಗು ಅಮ್ಮ-ಅಣ್ಣನನ್ನು ನೆನೆದು ಯಾವಾಗಲೂ ಅಳುತ್ತಿತ್ತು. ಇದು ವಾಸುದೇವ್​ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಿನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದ ಮೇಲೂ ಸಹ ಆ ಕಂದಮ್ಮ ಅಮ್ಮ-ಅಣ್ಣ ಬೇಕು ಎಂದು ಹಠ ಮಾಡಿ, ಅಳತೊಡಗಿದೆ. ಕೋಪಗೊಂಡ ವಾಸುದೇವ್​ ಮಗಳನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.