ETV Bharat / international

ಉಕ್ರೇನ್​​ನಲ್ಲಿ ಶಾಂತಿ ಸ್ಥಾಪನೆ, ತಕ್ಷಣ ರಷ್ಯಾ ಸೇನೆ ವಾಪಸ್​ ಪಡೆಯುವಂತೆ ನಿರ್ಣಯ: ಮತದಾನದಿಂದ ದೂರ ಉಳಿದ ಭಾರತ

author img

By

Published : Feb 24, 2023, 7:17 AM IST

ಭಾರತವು ಉಕ್ರೇನ್‌ ಬಗ್ಗೆ ವಿಶ್ವಸಂಸ್ಥೆ ತೆಗೆದುಕೊಂಡ ಎಲ್ಲ ನಿರ್ಣಯಗಳಿಂದ ದೂರವಿದೆ ಮತ್ತು ವಿಶ್ವಸಂಸ್ಥೆ ಚಾರ್ಟರ್ ಅಂತಾರಾಷ್ಟ್ರೀಯ ಕಾನೂನು ಮತ್ತು ರಾಜ್ಯಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಅಗತ್ಯವನ್ನು ಒತ್ತಿಹೇಳಿದೆ.

UNGA adopts resolution
ವಿಶ್ವಸಂಸ್ಥೆಯ ಸಾಮಾನ್ಯ ಸಭೆ

ನ್ಯೂಯಾರ್ಕ್: ಉಕ್ರೇನ್‌ನಲ್ಲಿ ರಷ್ಯಾ ಆಕ್ರಮಣದ ಮೊದಲ ವಾರ್ಷಿಕೋತ್ಸವದ ಮುನ್ನಾದಿನದಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಉಕ್ರೇನ್‌ನಲ್ಲಿನ ಯುದ್ಧವನ್ನು ಕೊನೆಗೊಳಿಸಲು ಮತ್ತು ತಕ್ಷಣ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ರಷ್ಯಾವನ್ನು ಒತ್ತಾಯಿಸುವ ನಿರ್ಣಯಕ್ಕೆ ಸಂಬಂಧಿಸಿದಂತೆ ಮತ ಚಲಾಯಿಸಿತು.

ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಕುರಿತಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ನಿರ್ಣಯದ ಮೇಲೆ ಭಾರತ ಮತದಾನದಿಂದ ದೂರ ಉಳಿದಿದೆ. ಯುಎನ್‌ಜಿಎಯಲ್ಲಿ ಗುರುವಾರ ನಡೆದ 'ಐತಿಹಾಸಿಕ ಮತದಾನ'ದಲ್ಲಿ, ಉಕ್ರೇನ್‌ನ ಮೇಲಿನ ಆಕ್ರಮಣಕ್ಕಾಗಿ ರಷ್ಯಾವನ್ನು ಬಹುತೇಕ ದೇಶಗಳು ಖಂಡಿಸಿದವು. ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿಯನ್ನು ಸ್ಥಾಪಿಸುವ ಮನವಿಯೊಂದಿಗೆ ತಕ್ಷಣ ಕೀವ್​​ನಿಂದ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಸಭೆಯಲ್ಲಿ ರಷ್ಯಾವನ್ನು ಒತ್ತಾಯಿಸಿತು.

UNGA adopts resolution
ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಣಯ

ಮಾತುಕತೆ ಮತ್ತು ರಾಜತಾಂತ್ರಿಕತೆ ಏಕೈಕ ಮಾರ್ಗ: ಅಸೆಂಬ್ಲಿಯಲ್ಲಿ 193-ಸದಸ್ಯ ರಾಷ್ಟ್ರಗಳಲ್ಲಿ ನಿರ್ಣಯದ ಪರವಾಗಿ 141 ರಾಷ್ಟ್ರಗಳು ಮತ ಚಲಾಯಿಸಿದವು. ಚೀನಾ ಮತ್ತು ಭಾರತ ಸೇರಿದಂತೆ 32 ದೇಶಗಳು ಮತದಾನಕ್ಕೆ ಗೈರು ಹಾಜರಾಗಿದ್ದವು. ಮತ್ತು ಏಳು ರಾಷ್ಟ್ರಗಳು ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಿದವು. ವಿಶ್ವಸಂಸ್ಥೆ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತದ ನಿರ್ಣಯವನ್ನು ಪುನರುಚ್ಚರಿಸಿದರು ಮತ್ತು ಮಾತುಕತೆ ಮತ್ತು ರಾಜತಾಂತ್ರಿಕತೆ ಏಕೈಕ ಕಾರ್ಯ ಸಾಧ್ಯವಾದ ಮಾರ್ಗವಾಗಿದೆ ಎಂದು ಅವರು ಹೇಳಿದರು.

ರಾಜತಾಂತ್ರಿಕ ಪ್ರಯತ್ನಗಳಿಗೆ ಬೆಂಬಲ ನೀಡುವಂತೆ ಕರೆ: ಚಾರ್ಟರ್‌ಗೆ ಅನುಗುಣವಾಗಿ ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿ ಮರು ಸ್ಥಾಪಿಸಲು ರಾಜತಾಂತ್ರಿಕ ಪ್ರಯತ್ನಗಳಿಗೆ ಬೆಂಬಲ ನೀಡುವಂತೆ ಸದಸ್ಯ ರಾಷ್ಟ್ರಗಳು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ನಿರ್ಣಯವು ಕರೆ ನೀಡಿದೆ. ಇದು ಉಕ್ರೇನ್‌ನ ಸಾರ್ವಭೌಮತ್ವ, ಸ್ವಾತಂತ್ರ್ಯ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು. ರಷ್ಯಾವು ತನ್ನ ಎಲ್ಲಾ ಮಿಲಿಟರಿ ಪಡೆಗಳನ್ನು ತಕ್ಷಣವೇ, ಸಂಪೂರ್ಣವಾಗಿ ಮತ್ತು ಬೇಷರತ್ತಾಗಿ ಉಕ್ರೇನ್ ಪ್ರದೇಶದಿಂದ ಹಿಂತೆಗೆದುಕೊಳ್ಳುವ ತನ್ನ ಬೇಡಿಕೆಯಿಟ್ಟಿದೆ.

ಫೆಬ್ರವರಿ 24, 2022 ರಂದು ಉಕ್ರೇನ್ ಆಕ್ರಮಣದ ನಂತರದ ವರ್ಷದಲ್ಲಿ ಹಲವಾರು ವಿಶ್ವಸಂಸ್ಥೆಯ​​ ನಿರ್ಣಯಗಳು, ಜನರಲ್ ಅಸೆಂಬ್ಲಿ, ಭದ್ರತಾ ಮಂಡಳಿ ಮತ್ತು ಮಾನವ ಹಕ್ಕುಗಳ ಮಂಡಳಿಯಲ್ಲಿ ಆಕ್ರಮಣವನ್ನು ಖಂಡಿಸಿವೆ ಮತ್ತು ಉಕ್ರೇನ್‌ನ ಸಾರ್ವಭೌಮತ್ವ, ಸ್ವಾತಂತ್ರ್ಯ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಬದ್ಧತೆಯನ್ನು ಒತ್ತಿಹೇಳಿವೆ. ಭಾರತವು ಉಕ್ರೇನ್‌ನಲ್ಲಿನ ಯುಎನ್ ನಿರ್ಣಯಗಳಿಗೆ ದೂರವಿದೆ ಮತ್ತು ಯುಎನ್ ಚಾರ್ಟರ್, ಅಂತಾರಾಷ್ಟ್ರೀಯ ಕಾನೂನು ಮತ್ತು ರಾಜ್ಯಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಅಗತ್ಯವನ್ನು ಸತತವಾಗಿ ಒತ್ತಿ ಹೇಳಿದೆ. ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕು. ಸಂವಾದ ಮತ್ತು ರಾಜತಾಂತ್ರಿಕತೆಯ ಹಾದಿಗೆ ತುರ್ತು ಮರಳಲು ಎಲ್ಲ ಪ್ರಯತ್ನಗಳನ್ನು ಮಾಡಬೇಕೆಂದು ಒತ್ತಾಯಿಸಿದೆ.

ಭಾರತವು ಶಾಂತಿಯ ಪರವಾಗಿದೆ: ಕಳೆದ ಸೆಪ್ಟೆಂಬರ್‌ನಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಉನ್ನತ ಮಟ್ಟದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ತಮ್ಮ ಭಾಷಣದಲ್ಲಿ ಈ ಸಂಘರ್ಷದಲ್ಲಿ ಭಾರತ ಶಾಂತಿ ಮತ್ತು ಸಂವಾದ ಮತ್ತು ರಾಜತಾಂತ್ರಿಕತೆಯ ಪರವಾಗಿದೆ ಎಂದು ಹೇಳಿದ್ದರು. ಉಕ್ರೇನ್ ಸಂಘರ್ಷದಲ್ಲಿ ನಾವು ಯಾರ ಪರ ಇದ್ದೇವೆ ಎಂದು ನಮ್ಮನ್ನು ಆಗಾಗ ಕೇಳಲಾಗುತ್ತದೆ. ನಮ್ಮ ಉತ್ತರವು ಪ್ರತಿ ಬಾರಿಯೂ ನೇರ ಮತ್ತು ಪ್ರಾಮಾಣಿಕವಾಗಿರುತ್ತದೆ. ಭಾರತವು ಶಾಂತಿಯ ಪರವಾಗಿದೆ. ನಾವು ವಿಶ್ವಸಂಸ್ಥೆ ಚಾರ್ಟರ್ ಮತ್ತು ಅದರ ಸಂಸ್ಥಾಪಕ ತತ್ವಗಳನ್ನು ಗೌರವಿಸುತ್ತೇವೆ. ಈ ಸಂಘರ್ಷಕ್ಕೆ ಶೀಘ್ರ ಪರಿಹಾರವನ್ನು ಕಂಡುಕೊಳ್ಳುವಲ್ಲಿ ವಿಶ್ವಸಂಸ್ಥೆಯ ಒಳಗೆ ಮತ್ತು ಹೊರಗೆ ರಚನಾತ್ಮಕವಾಗಿ ಕೆಲಸ ಮಾಡುವುದು ಸಾಮೂಹಿಕ ಹಿತಾಸಕ್ತಿಯಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಭಾರತವು ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸಂಘರ್ಷವು ಅಪಾರ ಜೀವಹಾನಿ ಮತ್ತು ದುಃಖಕ್ಕೆ ಕಾರಣವಾಯಿತು. ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು, ಲಕ್ಷಾಂತರ ಜನರು ನಿರಾಶ್ರಿತರಾಗಿ ನೆರೆಯ ದೇಶಗಳಲ್ಲಿ ಆಶ್ರಯ ಪಡೆಯಬೇಕಾಯಿತು. ಸಂಘರ್ಷದಿಂದ ಅಭಿವೃದ್ಧಿಶೀಲ ರಾಷ್ಟ್ರಗಳು ಆಹಾರ, ಇಂಧನ ಮತ್ತು ರಸಗೊಬ್ಬರ ಪೂರೈಕೆಯ ಕೊರತೆ ಎದುರಿಸುತ್ತಿವೆ.

ಜೀವನೋಪಾಯಕ್ಕಾಗಿ ಹೆಣಗಾಡುತ್ತಿರುವವರ ಪರವಾಗಿ ಭಾರತವಿದೆ. ಯುಎನ್‌ಜಿಎ ನಿರ್ಣಯವು ಉಕ್ರೇನ್‌ನ ನಿರ್ಣಾಯಕ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ತಕ್ಷಣವೇ ನಿಲ್ಲಿಸಲು ಮತ್ತು ನಿವಾಸಗಳು, ಶಾಲೆಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ನಾಗರಿಕ ವಸ್ತುಗಳ ಮೇಲೆ ಯಾವುದೇ ಉದ್ದೇಶಪೂರ್ವಕ ದಾಳಿಗಳನ್ನು ನಿಲ್ಲಿಸಲು ಕರೆ ನೀಡಿತು. ಆಹಾರ ಭದ್ರತೆ, ಇಂಧನ, ಹಣಕಾಸು, ಪರಿಸರ ಮತ್ತು ಪರಮಾಣು ಭದ್ರತೆ ಮತ್ತು ಸುರಕ್ಷತೆಯ ಮೇಲೆ ಯುದ್ಧದ ಜಾಗತಿಕ ಪರಿಣಾಮಗಳನ್ನು ಪರಿಹರಿಸಲು ಸಹಕರಿಸಲು ಎಲ್ಲಾ ಸದಸ್ಯ ರಾಷ್ಟ್ರಗಳನ್ನು ಭಾರತ ಒತ್ತಾಯಿಸಿತು.

ಕಠೋರ ಮೈಲಿಗಲ್ಲು: ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಬುಧವಾರ ಪುನರಾರಂಭಗೊಂಡ ಸಾಮಾನ್ಯ ಸಭೆಯ ತುರ್ತು ವಿಶೇಷ ಅಧಿವೇಶನದಲ್ಲಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ನಮ್ಮ ಸಾಮೂಹಿಕ ಆತ್ಮಸಾಕ್ಷಿಗೆ ಅಪಮಾನವಾಗಿದೆ ಮತ್ತು ಅದರಿಂದ ಹಿಂದೆ ಸರಿಯಲು ಇದು ಸುಸಮಯವಾಗಿದೆ ಎಂದು ಹೇಳಿದರು. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಒಂದು ವರ್ಷದ ಗುರುತು ಉಕ್ರೇನ್‌ನ ಜನರಿಗೆ ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಒಂದು ಕಠೋರ ಮೈಲಿಗಲ್ಲು. ಆ ಆಕ್ರಮಣವು ನಮ್ಮ ಸಾಮೂಹಿಕ ಆತ್ಮಸಾಕ್ಷಿಗೆ ಅಪಮಾನವಾಗಿದೆ. ಇದು ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ. ಆಕ್ರಮಣವು ನಾಟಕೀಯ ಮಾನವೀಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಗುಟೆರಸ್ ಹೇಳಿದರು.

ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಉಲ್ಲೇಖಿಸಿದ ಭಾರತದ ರಾಯಭಾರಿ: "ಮಾನವ ಜೀವಗಳ ಬಲಿಗೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ನಾವು ಸತತವಾಗಿ ಪ್ರತಿಪಾದಿಸಿದ್ದೇವೆ. ಈ ಸಂದರ್ಭದಲ್ಲಿ, ಇದು ಯುದ್ಧದ ಯುಗವಾಗಲಾರದು ಎಂಬ ನಮ್ಮ ಪ್ರಧಾನಿಯವರ ಹೇಳಿಕೆಯನ್ನು ನಾನು ಇಲ್ಲಿ ಪುನರುಚ್ಚರಿತ್ತೇನೆ. ಯುದ್ಧದ ಉಲ್ಬಣವು ಮತ್ತು ಹಿಂಸಾಚಾರವು ಯಾವುದಕ್ಕೂ ಪರಿಹಾರವಲ್ಲ. ಬದಲಾಗಿ, ಸಂವಾದ ಮತ್ತು ರಾಜತಾಂತ್ರಿಕತೆಯ ಹಾದಿ ಮೂಲಕ ಪರಿಹಾರ ಕಂಡುಕೊಳ್ಳುವುದು ಈಗಿನ ತುರ್ತು ಅಗತ್ಯವಾಗಿದೆ ಭಾರತದ ರಾಯಭಾರಿ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್​ ಬಿಕ್ಕಟ್ಟು: ಕದನ ವಿರಾಮ ಘೋಷಿಸಲು ಜಿ 20 ಶೃಂಗಸಭೆಯಲ್ಲಿ ಮೋದಿ ಕರೆ

ನ್ಯೂಯಾರ್ಕ್: ಉಕ್ರೇನ್‌ನಲ್ಲಿ ರಷ್ಯಾ ಆಕ್ರಮಣದ ಮೊದಲ ವಾರ್ಷಿಕೋತ್ಸವದ ಮುನ್ನಾದಿನದಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಉಕ್ರೇನ್‌ನಲ್ಲಿನ ಯುದ್ಧವನ್ನು ಕೊನೆಗೊಳಿಸಲು ಮತ್ತು ತಕ್ಷಣ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ರಷ್ಯಾವನ್ನು ಒತ್ತಾಯಿಸುವ ನಿರ್ಣಯಕ್ಕೆ ಸಂಬಂಧಿಸಿದಂತೆ ಮತ ಚಲಾಯಿಸಿತು.

ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಕುರಿತಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ನಿರ್ಣಯದ ಮೇಲೆ ಭಾರತ ಮತದಾನದಿಂದ ದೂರ ಉಳಿದಿದೆ. ಯುಎನ್‌ಜಿಎಯಲ್ಲಿ ಗುರುವಾರ ನಡೆದ 'ಐತಿಹಾಸಿಕ ಮತದಾನ'ದಲ್ಲಿ, ಉಕ್ರೇನ್‌ನ ಮೇಲಿನ ಆಕ್ರಮಣಕ್ಕಾಗಿ ರಷ್ಯಾವನ್ನು ಬಹುತೇಕ ದೇಶಗಳು ಖಂಡಿಸಿದವು. ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿಯನ್ನು ಸ್ಥಾಪಿಸುವ ಮನವಿಯೊಂದಿಗೆ ತಕ್ಷಣ ಕೀವ್​​ನಿಂದ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಸಭೆಯಲ್ಲಿ ರಷ್ಯಾವನ್ನು ಒತ್ತಾಯಿಸಿತು.

UNGA adopts resolution
ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಣಯ

ಮಾತುಕತೆ ಮತ್ತು ರಾಜತಾಂತ್ರಿಕತೆ ಏಕೈಕ ಮಾರ್ಗ: ಅಸೆಂಬ್ಲಿಯಲ್ಲಿ 193-ಸದಸ್ಯ ರಾಷ್ಟ್ರಗಳಲ್ಲಿ ನಿರ್ಣಯದ ಪರವಾಗಿ 141 ರಾಷ್ಟ್ರಗಳು ಮತ ಚಲಾಯಿಸಿದವು. ಚೀನಾ ಮತ್ತು ಭಾರತ ಸೇರಿದಂತೆ 32 ದೇಶಗಳು ಮತದಾನಕ್ಕೆ ಗೈರು ಹಾಜರಾಗಿದ್ದವು. ಮತ್ತು ಏಳು ರಾಷ್ಟ್ರಗಳು ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಿದವು. ವಿಶ್ವಸಂಸ್ಥೆ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತದ ನಿರ್ಣಯವನ್ನು ಪುನರುಚ್ಚರಿಸಿದರು ಮತ್ತು ಮಾತುಕತೆ ಮತ್ತು ರಾಜತಾಂತ್ರಿಕತೆ ಏಕೈಕ ಕಾರ್ಯ ಸಾಧ್ಯವಾದ ಮಾರ್ಗವಾಗಿದೆ ಎಂದು ಅವರು ಹೇಳಿದರು.

ರಾಜತಾಂತ್ರಿಕ ಪ್ರಯತ್ನಗಳಿಗೆ ಬೆಂಬಲ ನೀಡುವಂತೆ ಕರೆ: ಚಾರ್ಟರ್‌ಗೆ ಅನುಗುಣವಾಗಿ ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿ ಮರು ಸ್ಥಾಪಿಸಲು ರಾಜತಾಂತ್ರಿಕ ಪ್ರಯತ್ನಗಳಿಗೆ ಬೆಂಬಲ ನೀಡುವಂತೆ ಸದಸ್ಯ ರಾಷ್ಟ್ರಗಳು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ನಿರ್ಣಯವು ಕರೆ ನೀಡಿದೆ. ಇದು ಉಕ್ರೇನ್‌ನ ಸಾರ್ವಭೌಮತ್ವ, ಸ್ವಾತಂತ್ರ್ಯ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು. ರಷ್ಯಾವು ತನ್ನ ಎಲ್ಲಾ ಮಿಲಿಟರಿ ಪಡೆಗಳನ್ನು ತಕ್ಷಣವೇ, ಸಂಪೂರ್ಣವಾಗಿ ಮತ್ತು ಬೇಷರತ್ತಾಗಿ ಉಕ್ರೇನ್ ಪ್ರದೇಶದಿಂದ ಹಿಂತೆಗೆದುಕೊಳ್ಳುವ ತನ್ನ ಬೇಡಿಕೆಯಿಟ್ಟಿದೆ.

ಫೆಬ್ರವರಿ 24, 2022 ರಂದು ಉಕ್ರೇನ್ ಆಕ್ರಮಣದ ನಂತರದ ವರ್ಷದಲ್ಲಿ ಹಲವಾರು ವಿಶ್ವಸಂಸ್ಥೆಯ​​ ನಿರ್ಣಯಗಳು, ಜನರಲ್ ಅಸೆಂಬ್ಲಿ, ಭದ್ರತಾ ಮಂಡಳಿ ಮತ್ತು ಮಾನವ ಹಕ್ಕುಗಳ ಮಂಡಳಿಯಲ್ಲಿ ಆಕ್ರಮಣವನ್ನು ಖಂಡಿಸಿವೆ ಮತ್ತು ಉಕ್ರೇನ್‌ನ ಸಾರ್ವಭೌಮತ್ವ, ಸ್ವಾತಂತ್ರ್ಯ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಬದ್ಧತೆಯನ್ನು ಒತ್ತಿಹೇಳಿವೆ. ಭಾರತವು ಉಕ್ರೇನ್‌ನಲ್ಲಿನ ಯುಎನ್ ನಿರ್ಣಯಗಳಿಗೆ ದೂರವಿದೆ ಮತ್ತು ಯುಎನ್ ಚಾರ್ಟರ್, ಅಂತಾರಾಷ್ಟ್ರೀಯ ಕಾನೂನು ಮತ್ತು ರಾಜ್ಯಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಅಗತ್ಯವನ್ನು ಸತತವಾಗಿ ಒತ್ತಿ ಹೇಳಿದೆ. ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕು. ಸಂವಾದ ಮತ್ತು ರಾಜತಾಂತ್ರಿಕತೆಯ ಹಾದಿಗೆ ತುರ್ತು ಮರಳಲು ಎಲ್ಲ ಪ್ರಯತ್ನಗಳನ್ನು ಮಾಡಬೇಕೆಂದು ಒತ್ತಾಯಿಸಿದೆ.

ಭಾರತವು ಶಾಂತಿಯ ಪರವಾಗಿದೆ: ಕಳೆದ ಸೆಪ್ಟೆಂಬರ್‌ನಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಉನ್ನತ ಮಟ್ಟದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ತಮ್ಮ ಭಾಷಣದಲ್ಲಿ ಈ ಸಂಘರ್ಷದಲ್ಲಿ ಭಾರತ ಶಾಂತಿ ಮತ್ತು ಸಂವಾದ ಮತ್ತು ರಾಜತಾಂತ್ರಿಕತೆಯ ಪರವಾಗಿದೆ ಎಂದು ಹೇಳಿದ್ದರು. ಉಕ್ರೇನ್ ಸಂಘರ್ಷದಲ್ಲಿ ನಾವು ಯಾರ ಪರ ಇದ್ದೇವೆ ಎಂದು ನಮ್ಮನ್ನು ಆಗಾಗ ಕೇಳಲಾಗುತ್ತದೆ. ನಮ್ಮ ಉತ್ತರವು ಪ್ರತಿ ಬಾರಿಯೂ ನೇರ ಮತ್ತು ಪ್ರಾಮಾಣಿಕವಾಗಿರುತ್ತದೆ. ಭಾರತವು ಶಾಂತಿಯ ಪರವಾಗಿದೆ. ನಾವು ವಿಶ್ವಸಂಸ್ಥೆ ಚಾರ್ಟರ್ ಮತ್ತು ಅದರ ಸಂಸ್ಥಾಪಕ ತತ್ವಗಳನ್ನು ಗೌರವಿಸುತ್ತೇವೆ. ಈ ಸಂಘರ್ಷಕ್ಕೆ ಶೀಘ್ರ ಪರಿಹಾರವನ್ನು ಕಂಡುಕೊಳ್ಳುವಲ್ಲಿ ವಿಶ್ವಸಂಸ್ಥೆಯ ಒಳಗೆ ಮತ್ತು ಹೊರಗೆ ರಚನಾತ್ಮಕವಾಗಿ ಕೆಲಸ ಮಾಡುವುದು ಸಾಮೂಹಿಕ ಹಿತಾಸಕ್ತಿಯಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಭಾರತವು ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸಂಘರ್ಷವು ಅಪಾರ ಜೀವಹಾನಿ ಮತ್ತು ದುಃಖಕ್ಕೆ ಕಾರಣವಾಯಿತು. ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು, ಲಕ್ಷಾಂತರ ಜನರು ನಿರಾಶ್ರಿತರಾಗಿ ನೆರೆಯ ದೇಶಗಳಲ್ಲಿ ಆಶ್ರಯ ಪಡೆಯಬೇಕಾಯಿತು. ಸಂಘರ್ಷದಿಂದ ಅಭಿವೃದ್ಧಿಶೀಲ ರಾಷ್ಟ್ರಗಳು ಆಹಾರ, ಇಂಧನ ಮತ್ತು ರಸಗೊಬ್ಬರ ಪೂರೈಕೆಯ ಕೊರತೆ ಎದುರಿಸುತ್ತಿವೆ.

ಜೀವನೋಪಾಯಕ್ಕಾಗಿ ಹೆಣಗಾಡುತ್ತಿರುವವರ ಪರವಾಗಿ ಭಾರತವಿದೆ. ಯುಎನ್‌ಜಿಎ ನಿರ್ಣಯವು ಉಕ್ರೇನ್‌ನ ನಿರ್ಣಾಯಕ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ತಕ್ಷಣವೇ ನಿಲ್ಲಿಸಲು ಮತ್ತು ನಿವಾಸಗಳು, ಶಾಲೆಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ನಾಗರಿಕ ವಸ್ತುಗಳ ಮೇಲೆ ಯಾವುದೇ ಉದ್ದೇಶಪೂರ್ವಕ ದಾಳಿಗಳನ್ನು ನಿಲ್ಲಿಸಲು ಕರೆ ನೀಡಿತು. ಆಹಾರ ಭದ್ರತೆ, ಇಂಧನ, ಹಣಕಾಸು, ಪರಿಸರ ಮತ್ತು ಪರಮಾಣು ಭದ್ರತೆ ಮತ್ತು ಸುರಕ್ಷತೆಯ ಮೇಲೆ ಯುದ್ಧದ ಜಾಗತಿಕ ಪರಿಣಾಮಗಳನ್ನು ಪರಿಹರಿಸಲು ಸಹಕರಿಸಲು ಎಲ್ಲಾ ಸದಸ್ಯ ರಾಷ್ಟ್ರಗಳನ್ನು ಭಾರತ ಒತ್ತಾಯಿಸಿತು.

ಕಠೋರ ಮೈಲಿಗಲ್ಲು: ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಬುಧವಾರ ಪುನರಾರಂಭಗೊಂಡ ಸಾಮಾನ್ಯ ಸಭೆಯ ತುರ್ತು ವಿಶೇಷ ಅಧಿವೇಶನದಲ್ಲಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ನಮ್ಮ ಸಾಮೂಹಿಕ ಆತ್ಮಸಾಕ್ಷಿಗೆ ಅಪಮಾನವಾಗಿದೆ ಮತ್ತು ಅದರಿಂದ ಹಿಂದೆ ಸರಿಯಲು ಇದು ಸುಸಮಯವಾಗಿದೆ ಎಂದು ಹೇಳಿದರು. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಒಂದು ವರ್ಷದ ಗುರುತು ಉಕ್ರೇನ್‌ನ ಜನರಿಗೆ ಮತ್ತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಒಂದು ಕಠೋರ ಮೈಲಿಗಲ್ಲು. ಆ ಆಕ್ರಮಣವು ನಮ್ಮ ಸಾಮೂಹಿಕ ಆತ್ಮಸಾಕ್ಷಿಗೆ ಅಪಮಾನವಾಗಿದೆ. ಇದು ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ. ಆಕ್ರಮಣವು ನಾಟಕೀಯ ಮಾನವೀಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಗುಟೆರಸ್ ಹೇಳಿದರು.

ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಉಲ್ಲೇಖಿಸಿದ ಭಾರತದ ರಾಯಭಾರಿ: "ಮಾನವ ಜೀವಗಳ ಬಲಿಗೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ನಾವು ಸತತವಾಗಿ ಪ್ರತಿಪಾದಿಸಿದ್ದೇವೆ. ಈ ಸಂದರ್ಭದಲ್ಲಿ, ಇದು ಯುದ್ಧದ ಯುಗವಾಗಲಾರದು ಎಂಬ ನಮ್ಮ ಪ್ರಧಾನಿಯವರ ಹೇಳಿಕೆಯನ್ನು ನಾನು ಇಲ್ಲಿ ಪುನರುಚ್ಚರಿತ್ತೇನೆ. ಯುದ್ಧದ ಉಲ್ಬಣವು ಮತ್ತು ಹಿಂಸಾಚಾರವು ಯಾವುದಕ್ಕೂ ಪರಿಹಾರವಲ್ಲ. ಬದಲಾಗಿ, ಸಂವಾದ ಮತ್ತು ರಾಜತಾಂತ್ರಿಕತೆಯ ಹಾದಿ ಮೂಲಕ ಪರಿಹಾರ ಕಂಡುಕೊಳ್ಳುವುದು ಈಗಿನ ತುರ್ತು ಅಗತ್ಯವಾಗಿದೆ ಭಾರತದ ರಾಯಭಾರಿ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್​ ಬಿಕ್ಕಟ್ಟು: ಕದನ ವಿರಾಮ ಘೋಷಿಸಲು ಜಿ 20 ಶೃಂಗಸಭೆಯಲ್ಲಿ ಮೋದಿ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.