ETV Bharat / international

G -7 ಹಣಕಾಸು ನಾಯಕರ ಗಮನ ಸೆಳೆದ ರಷ್ಯಾ - ಉಕ್ರೇನ್ ಯುದ್ಧದ ಪ್ರಭಾವ

author img

By

Published : May 19, 2022, 6:07 PM IST

ಜರ್ಮನಿಯ ಕೊಯೆನಿಗ್ಸ್‌ವಿಂಟರ್‌ನಲ್ಲಿ ಜಿ-7 ಹಣಕಾಸು ಮಂತ್ರಿಗಳ ಸಭೆಗೆ ಮುಂಚಿತವಾಗಿ ಲಿಂಡ್ನರ್ ಸುದ್ದಿಗಾರರ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಉಕ್ರೇನ್‌ಗೆ ಹೆಚ್ಚಿನ ಹಣಕಾಸಿನ ಸಹಾಯ ಬೇಕಾಗಬಹುದು ಎಂದಿದ್ದಾರೆ.

G7 ಹಣಕಾಸು ನಾಯಕರ ಗಮನ ಸೆಳೆದ ರಷ್ಯಾ-ಉಕ್ರೇನ್ ಯುದ್ಧದ ಪ್ರಭಾವ
G7 ಹಣಕಾಸು ನಾಯಕರ ಗಮನ ಸೆಳೆದ ರಷ್ಯಾ-ಉಕ್ರೇನ್ ಯುದ್ಧದ ಪ್ರಭಾವ

ಜರ್ಮನಿ : G-7 ನ ಹಣಕಾಸು ಮಂತ್ರಿಗಳು ಉಕ್ರೇನ್‌ - ರಷ್ಯಾ ಯುದ್ಧ ಮತ್ತು ಕೊರೊನಾ ಪರಿಣಾಮಗಳನ್ನು ಎದುರಿಸುತ್ತಿದ್ದು, ಜಾಗತಿಕ ಆರ್ಥಿಕತೆ ಸುಧಾರಿಸಲು ಪ್ರಮುಖ ಯೋಜನೆಗಳ ಜಾರಿಗೆ ತರಲು ಮುಂದಾಗಿದ್ದಾರೆ.

ನಿರಾಶ್ರಿತರ ಬಿಕ್ಕಟ್ಟು, ಹೆಚ್ಚಿನ ಹಣದುಬ್ಬರ, ಯುದ್ಧ ಮತ್ತು ಹವಾಮಾನ ಬದಲಾವಣೆಯಿಂದ ಉಲ್ಬಣಗೊಂಡ ಆಹಾರ ಅಭದ್ರತೆ ಮತ್ತು ಬಹುವರ್ಷದ ಸಾಂಕ್ರಾಮಿಕವು ಈ ನಾಯಕರ ಗಮನ ಸೆಳೆದಿದೆ. ಜರ್ಮನಿಯ ಹಣಕಾಸು ಸಚಿವ ಕ್ರಿಶ್ಚಿಯನ್ ಲಿಂಡ್ನರ್ನ ಸಭೆಯ ಆತಿಥ್ಯ ವಹಿಸಿದ್ದು, ರಷ್ಯಾದ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಉಕ್ರೇನ್‌ಗೆ ಹೆಚ್ಚಿನ ಹಣವನ್ನು ನೀಡಲು ವಿಶ್ವದ ಪ್ರಮುಖ ಪ್ರಜಾಪ್ರಭುತ್ವಗಳು ಒಪ್ಪಿಕೊಳ್ಳಬಹುದು ಎಂದು ಆಶಿಸಿದ್ದಾರೆ.

ಜರ್ಮನಿಯ ಕೊಯೆನಿಗ್ಸ್‌ವಿಂಟರ್‌ನಲ್ಲಿ ಜಿ-7 ಹಣಕಾಸು ಮಂತ್ರಿಗಳ ಸಭೆಗೆ ಮುಂಚಿತವಾಗಿ ಲಿಂಡ್ನರ್ ಸುದ್ದಿಗಾರರ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಉಕ್ರೇನ್‌ಗೆ ಹೆಚ್ಚಿನ ಹಣಕಾಸಿನ ಸಹಾಯ ಬೇಕಾಗಬಹುದು ಎಂದಿದ್ದಾರೆ.

ಈ G-7 ಸಭೆಯಲ್ಲಿ ನಿಧಿಯನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ನಂಬಿದ್ದೇನೆ. ಪರಿಣಾಮ ಮುಂದಿನ ದಿನಗಳಲ್ಲಿ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ಆಹಾರ ಅಭದ್ರತೆ ಬಗ್ಗೆ ಪ್ರಮುಖ ಚರ್ಚೆ: ಈ ಸಭೆ ಆರಂಭವಾಗುವ ಮುನ್ನವೇ ಆಹಾರದ ಅಭದ್ರತೆ ಪ್ರಮುಖ ಚರ್ಚೆಯಾಗಿದೆ. ಬುಧವಾರ ಯುಎಸ್ ಮತ್ತು ಇತರ ಅಧಿಕಾರಿಗಳು ಹೆಚ್ಚುತ್ತಿರುವ ದುರ್ಬಲವಾದ ವಿಶ್ವ ಆರ್ಥಿಕತೆಯನ್ನು ಎದುರಿಸುತ್ತಿರುವ ಅಪಾಯವನ್ನು ಪರಿಹರಿಸಲು ಬಹು-ಶತಕೋಟಿ ಡಾಲರ್ ಯೋಜನೆಯನ್ನು ಪ್ರಸ್ತಾಪ ಮಾಡಿದ್ದರು. ಇದಕ್ಕೆ ಜಾಗತಿಕ ಅಭಿವೃದ್ಧಿ ಬ್ಯಾಂಕ್‌ಗಳು ಮತ್ತು ಇತರ ಗುಂಪುಗಳು ಈ ಪ್ರಯತ್ನದಲ್ಲಿ ಸಹಕರಿಸಿವೆ.

ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವು ಆಹಾರ ಮತ್ತು ಇತರೆ ಬೆಲೆಗಳಲ್ಲಿ ತೀವ್ರ ಹೆಚ್ಚಳವನ್ನು ಉಂಟುಮಾಡಿದ್ದು, ಹಣದುಬ್ಬರ ಮತ್ತು ನಿರುದ್ಯೋಗ ಹೆಚ್ಚಿರುವಾಗ ಮತ್ತು ಆರ್ಥಿಕ ಉತ್ಪಾದನೆಯು ಕಡಿಮೆ ಇರುವಾಗ ಜಾಗತಿಕ ನಿಶ್ಚಲತೆಗೆ ಬೆದರಿಕೆ ಹಾಕುತ್ತದೆ ಎಂದು ಚರ್ಚಿಸಲಾಗಿದೆ.

ಎರಡು ದೇಶಗಳು ಗೋಧಿ, ಬಾರ್ಲಿ ಮತ್ತು ಸೂರ್ಯಕಾಂತಿ ಎಣ್ಣೆಯ ಬೃಹತ್ ರಫ್ತುದಾರರಾಗಿದ್ದು, ಈಗಾಗಲೇ ಇವುಗಳಿಗೆ ಬೆಲೆ ಏರಿಕೆ ಮಾಡಲಾಗಿದೆ. ಆಫ್ರಿಕ, ಮಧ್ಯಪ್ರಾಚ್ಯ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಆಹಾರ ಅಭದ್ರತೆಗೆ ಈ ಮೂಲಕ ಬೆದರಿಕೆ ಉಂಟಾಗಿದೆ.

ಆರ್ಥಿಕ ಅನಿಶ್ಚಿತತೆ: ಜಾಗತಿಕವಾಗಿ ಆರ್ಥಿಕ ದೃಷ್ಟಿಕೋನವು ಸವಾಲಿನ ಮತ್ತು ಅನಿಶ್ಚಿತವಾಗಿದೆ. ಹೆಚ್ಚಿನ ಆಹಾರ ಮತ್ತು ಶಕ್ತಿಮೂಲದ ಬೆಲೆಗಳು ಸ್ಥಿರವಾದ ಪರಿಣಾಮಗಳನ್ನು ಬೀರುತ್ತಿವೆ. ಉತ್ಪಾದನೆ ಮತ್ತು ಖರ್ಚು ಪ್ರಪಂಚದಾದ್ಯಂತ ಹಣದುಬ್ಬರವನ್ನು ಹೆಚ್ಚಿಸುತ್ತಿದೆ ಎಂದು ಅಮೆರಿಕ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಬುಧವಾರ ಹೇಳಿದ್ದಾರೆ.

ವರ್ಷದ ಅಂತ್ಯದ ವೇಳೆಗೆ ಸುಮಾರು 40 ಮಿಲಿಯನ್ ಜನರು ಬಡತನ ಮತ್ತು ಆಹಾರ ಅಭದ್ರತೆಗೆ ಒಳಗಾಗುತ್ತಾರೆ ಎಂದು ರಾಜ್ಯ ಇಲಾಖೆ ಹೇಳುತ್ತಿದೆ, ಇದಕ್ಕೆ ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡಲು ಯುಎಸ್ ಬದ್ಧವಾಗಿದೆ ಎಂದ ಯೆಲೆನ್, ಕಳೆದ ಅಕ್ಟೋಬರ್‌ನಲ್ಲಿ 130 ಕ್ಕೂ ಹೆಚ್ಚು ದೇಶಗಳು ಸಹಿ ಮಾಡಿದ ಅಂತಾರಾಷ್ಟ್ರೀಯ ತೆರಿಗೆ ಯೋಜನೆಯನ್ನು ಜಾರಿಗೆ ತರಲು ಕರೆ ನೀಡಿದ್ದಾರೆ.

ಇದನ್ನೂ ಓದಿ: ಎಸ್ಎಸ್ಎಲ್​ಸಿ ಫಲಿತಾಂಶ ಹೊರಬಿದ್ದ ದಿನವೇ ಪೂರಕ ಪರೀಕ್ಷೆಯ ವೇಳಾಪಟ್ಟಿ‌ ಪ್ರಕಟ

ಜರ್ಮನಿ : G-7 ನ ಹಣಕಾಸು ಮಂತ್ರಿಗಳು ಉಕ್ರೇನ್‌ - ರಷ್ಯಾ ಯುದ್ಧ ಮತ್ತು ಕೊರೊನಾ ಪರಿಣಾಮಗಳನ್ನು ಎದುರಿಸುತ್ತಿದ್ದು, ಜಾಗತಿಕ ಆರ್ಥಿಕತೆ ಸುಧಾರಿಸಲು ಪ್ರಮುಖ ಯೋಜನೆಗಳ ಜಾರಿಗೆ ತರಲು ಮುಂದಾಗಿದ್ದಾರೆ.

ನಿರಾಶ್ರಿತರ ಬಿಕ್ಕಟ್ಟು, ಹೆಚ್ಚಿನ ಹಣದುಬ್ಬರ, ಯುದ್ಧ ಮತ್ತು ಹವಾಮಾನ ಬದಲಾವಣೆಯಿಂದ ಉಲ್ಬಣಗೊಂಡ ಆಹಾರ ಅಭದ್ರತೆ ಮತ್ತು ಬಹುವರ್ಷದ ಸಾಂಕ್ರಾಮಿಕವು ಈ ನಾಯಕರ ಗಮನ ಸೆಳೆದಿದೆ. ಜರ್ಮನಿಯ ಹಣಕಾಸು ಸಚಿವ ಕ್ರಿಶ್ಚಿಯನ್ ಲಿಂಡ್ನರ್ನ ಸಭೆಯ ಆತಿಥ್ಯ ವಹಿಸಿದ್ದು, ರಷ್ಯಾದ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಉಕ್ರೇನ್‌ಗೆ ಹೆಚ್ಚಿನ ಹಣವನ್ನು ನೀಡಲು ವಿಶ್ವದ ಪ್ರಮುಖ ಪ್ರಜಾಪ್ರಭುತ್ವಗಳು ಒಪ್ಪಿಕೊಳ್ಳಬಹುದು ಎಂದು ಆಶಿಸಿದ್ದಾರೆ.

ಜರ್ಮನಿಯ ಕೊಯೆನಿಗ್ಸ್‌ವಿಂಟರ್‌ನಲ್ಲಿ ಜಿ-7 ಹಣಕಾಸು ಮಂತ್ರಿಗಳ ಸಭೆಗೆ ಮುಂಚಿತವಾಗಿ ಲಿಂಡ್ನರ್ ಸುದ್ದಿಗಾರರ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಉಕ್ರೇನ್‌ಗೆ ಹೆಚ್ಚಿನ ಹಣಕಾಸಿನ ಸಹಾಯ ಬೇಕಾಗಬಹುದು ಎಂದಿದ್ದಾರೆ.

ಈ G-7 ಸಭೆಯಲ್ಲಿ ನಿಧಿಯನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ನಂಬಿದ್ದೇನೆ. ಪರಿಣಾಮ ಮುಂದಿನ ದಿನಗಳಲ್ಲಿ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ಆಹಾರ ಅಭದ್ರತೆ ಬಗ್ಗೆ ಪ್ರಮುಖ ಚರ್ಚೆ: ಈ ಸಭೆ ಆರಂಭವಾಗುವ ಮುನ್ನವೇ ಆಹಾರದ ಅಭದ್ರತೆ ಪ್ರಮುಖ ಚರ್ಚೆಯಾಗಿದೆ. ಬುಧವಾರ ಯುಎಸ್ ಮತ್ತು ಇತರ ಅಧಿಕಾರಿಗಳು ಹೆಚ್ಚುತ್ತಿರುವ ದುರ್ಬಲವಾದ ವಿಶ್ವ ಆರ್ಥಿಕತೆಯನ್ನು ಎದುರಿಸುತ್ತಿರುವ ಅಪಾಯವನ್ನು ಪರಿಹರಿಸಲು ಬಹು-ಶತಕೋಟಿ ಡಾಲರ್ ಯೋಜನೆಯನ್ನು ಪ್ರಸ್ತಾಪ ಮಾಡಿದ್ದರು. ಇದಕ್ಕೆ ಜಾಗತಿಕ ಅಭಿವೃದ್ಧಿ ಬ್ಯಾಂಕ್‌ಗಳು ಮತ್ತು ಇತರ ಗುಂಪುಗಳು ಈ ಪ್ರಯತ್ನದಲ್ಲಿ ಸಹಕರಿಸಿವೆ.

ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವು ಆಹಾರ ಮತ್ತು ಇತರೆ ಬೆಲೆಗಳಲ್ಲಿ ತೀವ್ರ ಹೆಚ್ಚಳವನ್ನು ಉಂಟುಮಾಡಿದ್ದು, ಹಣದುಬ್ಬರ ಮತ್ತು ನಿರುದ್ಯೋಗ ಹೆಚ್ಚಿರುವಾಗ ಮತ್ತು ಆರ್ಥಿಕ ಉತ್ಪಾದನೆಯು ಕಡಿಮೆ ಇರುವಾಗ ಜಾಗತಿಕ ನಿಶ್ಚಲತೆಗೆ ಬೆದರಿಕೆ ಹಾಕುತ್ತದೆ ಎಂದು ಚರ್ಚಿಸಲಾಗಿದೆ.

ಎರಡು ದೇಶಗಳು ಗೋಧಿ, ಬಾರ್ಲಿ ಮತ್ತು ಸೂರ್ಯಕಾಂತಿ ಎಣ್ಣೆಯ ಬೃಹತ್ ರಫ್ತುದಾರರಾಗಿದ್ದು, ಈಗಾಗಲೇ ಇವುಗಳಿಗೆ ಬೆಲೆ ಏರಿಕೆ ಮಾಡಲಾಗಿದೆ. ಆಫ್ರಿಕ, ಮಧ್ಯಪ್ರಾಚ್ಯ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿ ಆಹಾರ ಅಭದ್ರತೆಗೆ ಈ ಮೂಲಕ ಬೆದರಿಕೆ ಉಂಟಾಗಿದೆ.

ಆರ್ಥಿಕ ಅನಿಶ್ಚಿತತೆ: ಜಾಗತಿಕವಾಗಿ ಆರ್ಥಿಕ ದೃಷ್ಟಿಕೋನವು ಸವಾಲಿನ ಮತ್ತು ಅನಿಶ್ಚಿತವಾಗಿದೆ. ಹೆಚ್ಚಿನ ಆಹಾರ ಮತ್ತು ಶಕ್ತಿಮೂಲದ ಬೆಲೆಗಳು ಸ್ಥಿರವಾದ ಪರಿಣಾಮಗಳನ್ನು ಬೀರುತ್ತಿವೆ. ಉತ್ಪಾದನೆ ಮತ್ತು ಖರ್ಚು ಪ್ರಪಂಚದಾದ್ಯಂತ ಹಣದುಬ್ಬರವನ್ನು ಹೆಚ್ಚಿಸುತ್ತಿದೆ ಎಂದು ಅಮೆರಿಕ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಬುಧವಾರ ಹೇಳಿದ್ದಾರೆ.

ವರ್ಷದ ಅಂತ್ಯದ ವೇಳೆಗೆ ಸುಮಾರು 40 ಮಿಲಿಯನ್ ಜನರು ಬಡತನ ಮತ್ತು ಆಹಾರ ಅಭದ್ರತೆಗೆ ಒಳಗಾಗುತ್ತಾರೆ ಎಂದು ರಾಜ್ಯ ಇಲಾಖೆ ಹೇಳುತ್ತಿದೆ, ಇದಕ್ಕೆ ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡಲು ಯುಎಸ್ ಬದ್ಧವಾಗಿದೆ ಎಂದ ಯೆಲೆನ್, ಕಳೆದ ಅಕ್ಟೋಬರ್‌ನಲ್ಲಿ 130 ಕ್ಕೂ ಹೆಚ್ಚು ದೇಶಗಳು ಸಹಿ ಮಾಡಿದ ಅಂತಾರಾಷ್ಟ್ರೀಯ ತೆರಿಗೆ ಯೋಜನೆಯನ್ನು ಜಾರಿಗೆ ತರಲು ಕರೆ ನೀಡಿದ್ದಾರೆ.

ಇದನ್ನೂ ಓದಿ: ಎಸ್ಎಸ್ಎಲ್​ಸಿ ಫಲಿತಾಂಶ ಹೊರಬಿದ್ದ ದಿನವೇ ಪೂರಕ ಪರೀಕ್ಷೆಯ ವೇಳಾಪಟ್ಟಿ‌ ಪ್ರಕಟ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.