ETV Bharat / international

ಪಾಕಿಸ್ತಾನದಲ್ಲಿ ಸಿಂಧಿಗಳ ಅಪಹರಣ, ಹತ್ಯೆ ತಡೆಗೆ ಮುಂದಾಗುವಂತೆ ಬ್ರಿಟನ್ ಪ್ರಧಾನಿ ಸುನಕ್​ಗೆ ಒತ್ತಾಯ

author img

By

Published : Feb 22, 2023, 4:06 PM IST

ಪಾಕಿಸ್ತಾನದಲ್ಲಿ ಸಿಂಧಿಗಳನ್ನು ಬಲವಂತವಾಗಿ ಅಪಹರಿಸಿ ಹತ್ಯೆ ಮಾಡುತ್ತಿರುವ ಪಾಕಿಸ್ತಾನ ಸರ್ಕಾರದ ಕುಕೃತ್ಯಗಳನ್ನು ತಡೆಗಟ್ಟಲು ಮುಂದಾಗಬೇಕೆಂದು ವಿಶ್ವ ಸಿಂಧಿ ಕಾಂಗ್ರೆಸ್ ಬ್ರಿಟನ್ ಪ್ರಧಾನಿ ಸುನಕ್ ಅವರಿಗೆ ಒತ್ತಾಯಿಸಿದೆ.

Sindhis knock at Rishi Sunak's door,
Sindhis knock at Rishi Sunak's door,

ನವದೆಹಲಿ: ಪಾಕಿಸ್ತಾನದಲ್ಲಿ ಸಿಂಧಿ ಸಮುದಾಯದವರನ್ನು ಸರ್ಕಾರಿ ಬೆಂಬಲಿತ ಏಜೆನ್ಸಿಗಳ ಸಿಬ್ಬಂದಿಗಳು ಅಪಹರಿಸಿ ಕಣ್ಮರೆಗೊಳಿಸುವ ವಿದ್ಯಮಾನಗಳನ್ನು ತಡೆಗಟ್ಟುವಂತೆ ಮತ್ತು ಕಣ್ಮರೆಯಾದವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸ್ವತಂತ್ರ ಸಿಂಧು ದೇಶ್ ಬೇಡುತ್ತಿರುವ ವಿಶ್ವ ಸಿಂಧಿ ಕಾಂಗ್ರೆಸ್ ಸಂಘಟನೆಯು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ಮನವಿ ಸಲ್ಲಿಸಿದೆ.

ಸರ್ಕಾರಿ ಪ್ರಾಯೋಜಿತ ಕೃತ್ಯದ ನಿಮಿತ್ತ ಪಾಕಿಸ್ತಾನದ ಭದ್ರತಾ ಪಡೆಗಳು ಮತ್ತು ಬೇಹುಗಾರಿಕಾ ಸಂಸ್ಥೆಗಳ ಸಿಬ್ಬಂದಿಯು ಸಿಂಧಿ ಮತ್ತು ಬಲೂಚ್ ಜನರನ್ನು ಅಪಹರಣ ಮಾಡುತ್ತಿರುವ ವಿರುದ್ಧ ಸಿಂಧಿ ಮಾನವ ಹಕ್ಕುಗಳ ಪ್ರಚಾರಕರು ಲಂಡನ್‌ನಲ್ಲಿ ಪ್ರತಿಭಟನೆ ನಡೆಸಿದರು. ಪಾಕಿಸ್ತಾನದ ಭದ್ರತಾ ಪಡೆಗಳಿಂದ ಅಪಹರಣಕ್ಕೊಳಗಾಗಿ ಸಿಂಧ್‌ನಲ್ಲಿ ಕಾಣೆಯಾದ ನೂರಾರು ಜನರನ್ನು ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.

ಬಲೂಚ್​ ಸಹೋದರರಿಗೆ ಬೆಂಬಲದ ಅಗತ್ಯ ಇದೆ: ವಿವಿಧ ಸಮುದಾಯದ ಜನರನ್ನು ಬಲವಂತವಾಗಿ ನಾಪತ್ತೆಗೊಳಿಸುತ್ತಿರುವ ವಿಷಯದ ಬಗ್ಗೆ ಮಾತನಾಡಿದ ವಿಶ್ವ ಸಿಂಧಿ ಕಾಂಗ್ರೆಸ್ (ಡಬ್ಲ್ಯುಎಸ್‌ಸಿ) ಅಧ್ಯಕ್ಷೆ ರುಬಿನಾ ಶೇಖ್, ಈ ಗಂಭೀರ ವಿಚಾರದಲ್ಲಿ ನಾವು ನಮ್ಮ ಬಲೂಚ್ ಸಹೋದರರಿಗೆ ಬೆಂಬಲ ನೀಡಬೇಕಿದೆ. ಅಪಹರಣದ ವಿಷಯವು ಕೇವಲ ಮಾನವ ಹಕ್ಕುಗಳಿಗೆ ಸಂಬಂಧಿಸಿದ್ದಲ್ಲ. ಆದರೆ, ವಾಸ್ತವವಾಗಿ ಇದು ಪರಿಸರ ನ್ಯಾಯ ಮತ್ತು ಸಂಪನ್ಮೂಲಗಳಿಗೆ ಸಂಬಂಧಿಸಿದ್ದಾಗಿದೆ ಎಂದರು.

ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿದಾಗಿನಿಂದ ದೇಶದ ಬಲೂಚಿಸ್ತಾನ್ ಮತ್ತು ಸಿಂಧ್ ಹೀಗೆ ಎರಡೂ ಕಡೆಗಳಲ್ಲಿ ನೂರಾರು ಅಥವಾ ಸಾವಿರಾರು ಜನರು ಕಾಣೆಯಾಗಿದ್ದಾರೆ. ಆದರೆ ಈ ಎರಡೂ ಪ್ರಾಂತ್ಯಗಳು ಮುಂದೊಂದು ದಿನ ಸ್ವಾತಂತ್ರ್ಯ ಪಡೆಯಲಿವೆ ಎಂದು ಅವರು ಹೇಳಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿಶ್ವ ಸಿಂಧಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲಖು ಲುಹಾನೊ, ಸಿಂಧ್‌ನಲ್ಲಿ ಕಾಣೆಯಾದ ಜನರು ತಾವು ಏಕಾಂಗಿ ಎಂದು ಭಾವಿಸಬೇಕಿಲ್ಲ. ನಾವು ಅವರೊಂದಿಗೆ ಇದ್ದೇವೆ ಎಂದರು. ಪಾಕಿಸ್ತಾನವು ಜನರನ್ನು ಅಪಹರಿಸುವುದನ್ನು ತಡೆಯಬೇಕೆಂದು ಅವರು ಜಗತ್ತಿಗೆ ಮನವಿ ಮಾಡಿದರು.

ವಿಶ್ವದ ಗಮನಕ್ಕೆ ಬಂದಿದ್ದ ಸುದ್ದಿ: ಹದಿನೈದು ದಿನಗಳ ಹಿಂದೆ ಪಾಕಿಸ್ತಾನ ಸಿಂಧ್‌ನ ಕಂಡ್‌ಕೋಟ್‌ನಲ್ಲಿ ನಾಜಿಯಾ ಖೋಸೊ ಮತ್ತು ಅವರ ಮಗಳ ಬಲವಂತದ ಅಪಹರಣದ ಬಗ್ಗೆ ವಿಶ್ವ ಸಿಂಧಿ ಕಾಂಗ್ರೆಸ್ ಈ ಸಂದರ್ಭದಲ್ಲಿ ವಿಶ್ವದ ಗಮನಕ್ಕೆ ತಂದಿತು ಮತ್ತು ಇವರನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನಕ್ಕೆ ಒತ್ತಾಯಿಸಿತು. ಬಲೂಚಿಸ್ತಾನ್ ಪ್ರಾಂತ್ಯವು ಪಾಕಿಸ್ತಾನದ ಪಶ್ಚಿಮದಲ್ಲಿ ಅಫ್ಘಾನಿಸ್ತಾನ ಮತ್ತು ಇರಾನ್‌ನ ಗಡಿಯನ್ನು ಹಂಚಿಕೊಂಡಿದೆ.

ಹಾಗೆಯೇ ಸಿಂಧ್ ಪ್ರಾಂತ್ಯವು ಪೂರ್ವದಲ್ಲಿ ಭಾರತದ ಗಡಿಯಾಗಿದೆ. ಪಾಕಿಸ್ತಾನದ ಈ ಎರಡೂ ಪ್ರದೇಶಗಳು ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರವಾಗಲು ಹೋರಾಟ ನಡೆಸಿವೆ. ಎರಡೂ ಪ್ರಾಂತ್ಯಗಳಲ್ಲಿ ವಿಭಿನ್ನ ಜನಾಂಗೀಯ ಸಮುದಾಯಗಳ ಪ್ರಾಬಲ್ಯವಿದೆ. ಬಲೂಚ್ ಮತ್ತು ಸಿಂಧಿಗಳು ಪಾಕಿಸ್ತಾನದ ವಿರುದ್ಧ ಹೋರಾಡುವಲ್ಲಿ ಪರಸ್ಪರ ಸಹಕರಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಪಾಕಿಸ್ತಾನಿ ಮತ್ತು ಚೀನೀ ಯೋಜನೆಗಳ ಮೇಲೆ ದಾಳಿ ಮಾಡಲು ಬಂಡುಕೋರ ಗುಂಪುಗಳು ಕೈಜೋಡಿಸುತ್ತಿವೆ.

ವಿಶ್ವ ಸಿಂಧಿ ಕಾಂಗ್ರೆಸ್​ನ ಪ್ರತಿಭಟನೆಗೆ ಎರಡು ದಿನಗಳ ಮೊದಲು, ಬಲೂಚ್ ನ್ಯಾಷನಲ್ ಮೂವ್‌ಮೆಂಟ್ (BNM) ಸಂಘಟನೆಯು ಲಂಡನ್‌ನ ಹೃದಯಭಾಗದಲ್ಲಿರುವ 10 ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಸುನಕ್ ಅವರ ನಿವಾಸದ ಬಳಿ ಪ್ರತಿಭಟನೆ ನಡೆಸಿತ್ತು. ಬಲೂಚ್ ಯುವಕರು, ಮಹಿಳೆಯರು ಮತ್ತು ಮಕ್ಕಳ ಬಲವಂತದ ನಾಪತ್ತೆಗಳನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸಲಾಯಿತು. ಕಳೆದ ವರ್ಷ 629 ಜನರನ್ನು ಬಲವಂತವಾಗಿ ಕಣ್ಮರೆ ಮಾಡಲಾಗಿದೆ. 195 ಜನರನ್ನು ಕಾನೂನುಬಾಹಿರವಾಗಿ ಕೊಲ್ಲಲಾಗಿದೆ ಮತ್ತು 187 ಜನರನ್ನು ವಿವಿಧ ಪಾಕಿಸ್ತಾನಿ ಏಜೆನ್ಸಿಗಳ ಜನ ಚಿತ್ರಹಿಂಸೆಗೊಳಪಡಿಸಿದ್ದಾರೆ ಎಂದು ಬಿಎನ್​ಎಂ ಆರೋಪಿಸಿದೆ.

ಇದನ್ನೂ ಓದಿ: ಬಲೂಚಿಸ್ತಾನ ಪ್ರಾಂತ್ಯದಲ್ಲಿ 9 ಉಗ್ರರ ಹತ್ಯೆಗೈದ ಪಾಕಿಸ್ತಾನ ಸೇನೆ

ನವದೆಹಲಿ: ಪಾಕಿಸ್ತಾನದಲ್ಲಿ ಸಿಂಧಿ ಸಮುದಾಯದವರನ್ನು ಸರ್ಕಾರಿ ಬೆಂಬಲಿತ ಏಜೆನ್ಸಿಗಳ ಸಿಬ್ಬಂದಿಗಳು ಅಪಹರಿಸಿ ಕಣ್ಮರೆಗೊಳಿಸುವ ವಿದ್ಯಮಾನಗಳನ್ನು ತಡೆಗಟ್ಟುವಂತೆ ಮತ್ತು ಕಣ್ಮರೆಯಾದವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸ್ವತಂತ್ರ ಸಿಂಧು ದೇಶ್ ಬೇಡುತ್ತಿರುವ ವಿಶ್ವ ಸಿಂಧಿ ಕಾಂಗ್ರೆಸ್ ಸಂಘಟನೆಯು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ಮನವಿ ಸಲ್ಲಿಸಿದೆ.

ಸರ್ಕಾರಿ ಪ್ರಾಯೋಜಿತ ಕೃತ್ಯದ ನಿಮಿತ್ತ ಪಾಕಿಸ್ತಾನದ ಭದ್ರತಾ ಪಡೆಗಳು ಮತ್ತು ಬೇಹುಗಾರಿಕಾ ಸಂಸ್ಥೆಗಳ ಸಿಬ್ಬಂದಿಯು ಸಿಂಧಿ ಮತ್ತು ಬಲೂಚ್ ಜನರನ್ನು ಅಪಹರಣ ಮಾಡುತ್ತಿರುವ ವಿರುದ್ಧ ಸಿಂಧಿ ಮಾನವ ಹಕ್ಕುಗಳ ಪ್ರಚಾರಕರು ಲಂಡನ್‌ನಲ್ಲಿ ಪ್ರತಿಭಟನೆ ನಡೆಸಿದರು. ಪಾಕಿಸ್ತಾನದ ಭದ್ರತಾ ಪಡೆಗಳಿಂದ ಅಪಹರಣಕ್ಕೊಳಗಾಗಿ ಸಿಂಧ್‌ನಲ್ಲಿ ಕಾಣೆಯಾದ ನೂರಾರು ಜನರನ್ನು ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.

ಬಲೂಚ್​ ಸಹೋದರರಿಗೆ ಬೆಂಬಲದ ಅಗತ್ಯ ಇದೆ: ವಿವಿಧ ಸಮುದಾಯದ ಜನರನ್ನು ಬಲವಂತವಾಗಿ ನಾಪತ್ತೆಗೊಳಿಸುತ್ತಿರುವ ವಿಷಯದ ಬಗ್ಗೆ ಮಾತನಾಡಿದ ವಿಶ್ವ ಸಿಂಧಿ ಕಾಂಗ್ರೆಸ್ (ಡಬ್ಲ್ಯುಎಸ್‌ಸಿ) ಅಧ್ಯಕ್ಷೆ ರುಬಿನಾ ಶೇಖ್, ಈ ಗಂಭೀರ ವಿಚಾರದಲ್ಲಿ ನಾವು ನಮ್ಮ ಬಲೂಚ್ ಸಹೋದರರಿಗೆ ಬೆಂಬಲ ನೀಡಬೇಕಿದೆ. ಅಪಹರಣದ ವಿಷಯವು ಕೇವಲ ಮಾನವ ಹಕ್ಕುಗಳಿಗೆ ಸಂಬಂಧಿಸಿದ್ದಲ್ಲ. ಆದರೆ, ವಾಸ್ತವವಾಗಿ ಇದು ಪರಿಸರ ನ್ಯಾಯ ಮತ್ತು ಸಂಪನ್ಮೂಲಗಳಿಗೆ ಸಂಬಂಧಿಸಿದ್ದಾಗಿದೆ ಎಂದರು.

ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿದಾಗಿನಿಂದ ದೇಶದ ಬಲೂಚಿಸ್ತಾನ್ ಮತ್ತು ಸಿಂಧ್ ಹೀಗೆ ಎರಡೂ ಕಡೆಗಳಲ್ಲಿ ನೂರಾರು ಅಥವಾ ಸಾವಿರಾರು ಜನರು ಕಾಣೆಯಾಗಿದ್ದಾರೆ. ಆದರೆ ಈ ಎರಡೂ ಪ್ರಾಂತ್ಯಗಳು ಮುಂದೊಂದು ದಿನ ಸ್ವಾತಂತ್ರ್ಯ ಪಡೆಯಲಿವೆ ಎಂದು ಅವರು ಹೇಳಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿಶ್ವ ಸಿಂಧಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲಖು ಲುಹಾನೊ, ಸಿಂಧ್‌ನಲ್ಲಿ ಕಾಣೆಯಾದ ಜನರು ತಾವು ಏಕಾಂಗಿ ಎಂದು ಭಾವಿಸಬೇಕಿಲ್ಲ. ನಾವು ಅವರೊಂದಿಗೆ ಇದ್ದೇವೆ ಎಂದರು. ಪಾಕಿಸ್ತಾನವು ಜನರನ್ನು ಅಪಹರಿಸುವುದನ್ನು ತಡೆಯಬೇಕೆಂದು ಅವರು ಜಗತ್ತಿಗೆ ಮನವಿ ಮಾಡಿದರು.

ವಿಶ್ವದ ಗಮನಕ್ಕೆ ಬಂದಿದ್ದ ಸುದ್ದಿ: ಹದಿನೈದು ದಿನಗಳ ಹಿಂದೆ ಪಾಕಿಸ್ತಾನ ಸಿಂಧ್‌ನ ಕಂಡ್‌ಕೋಟ್‌ನಲ್ಲಿ ನಾಜಿಯಾ ಖೋಸೊ ಮತ್ತು ಅವರ ಮಗಳ ಬಲವಂತದ ಅಪಹರಣದ ಬಗ್ಗೆ ವಿಶ್ವ ಸಿಂಧಿ ಕಾಂಗ್ರೆಸ್ ಈ ಸಂದರ್ಭದಲ್ಲಿ ವಿಶ್ವದ ಗಮನಕ್ಕೆ ತಂದಿತು ಮತ್ತು ಇವರನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನಕ್ಕೆ ಒತ್ತಾಯಿಸಿತು. ಬಲೂಚಿಸ್ತಾನ್ ಪ್ರಾಂತ್ಯವು ಪಾಕಿಸ್ತಾನದ ಪಶ್ಚಿಮದಲ್ಲಿ ಅಫ್ಘಾನಿಸ್ತಾನ ಮತ್ತು ಇರಾನ್‌ನ ಗಡಿಯನ್ನು ಹಂಚಿಕೊಂಡಿದೆ.

ಹಾಗೆಯೇ ಸಿಂಧ್ ಪ್ರಾಂತ್ಯವು ಪೂರ್ವದಲ್ಲಿ ಭಾರತದ ಗಡಿಯಾಗಿದೆ. ಪಾಕಿಸ್ತಾನದ ಈ ಎರಡೂ ಪ್ರದೇಶಗಳು ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರವಾಗಲು ಹೋರಾಟ ನಡೆಸಿವೆ. ಎರಡೂ ಪ್ರಾಂತ್ಯಗಳಲ್ಲಿ ವಿಭಿನ್ನ ಜನಾಂಗೀಯ ಸಮುದಾಯಗಳ ಪ್ರಾಬಲ್ಯವಿದೆ. ಬಲೂಚ್ ಮತ್ತು ಸಿಂಧಿಗಳು ಪಾಕಿಸ್ತಾನದ ವಿರುದ್ಧ ಹೋರಾಡುವಲ್ಲಿ ಪರಸ್ಪರ ಸಹಕರಿಸುತ್ತಿದ್ದಾರೆ. ಈ ಪ್ರದೇಶಗಳಲ್ಲಿ ಪಾಕಿಸ್ತಾನಿ ಮತ್ತು ಚೀನೀ ಯೋಜನೆಗಳ ಮೇಲೆ ದಾಳಿ ಮಾಡಲು ಬಂಡುಕೋರ ಗುಂಪುಗಳು ಕೈಜೋಡಿಸುತ್ತಿವೆ.

ವಿಶ್ವ ಸಿಂಧಿ ಕಾಂಗ್ರೆಸ್​ನ ಪ್ರತಿಭಟನೆಗೆ ಎರಡು ದಿನಗಳ ಮೊದಲು, ಬಲೂಚ್ ನ್ಯಾಷನಲ್ ಮೂವ್‌ಮೆಂಟ್ (BNM) ಸಂಘಟನೆಯು ಲಂಡನ್‌ನ ಹೃದಯಭಾಗದಲ್ಲಿರುವ 10 ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಸುನಕ್ ಅವರ ನಿವಾಸದ ಬಳಿ ಪ್ರತಿಭಟನೆ ನಡೆಸಿತ್ತು. ಬಲೂಚ್ ಯುವಕರು, ಮಹಿಳೆಯರು ಮತ್ತು ಮಕ್ಕಳ ಬಲವಂತದ ನಾಪತ್ತೆಗಳನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸಲಾಯಿತು. ಕಳೆದ ವರ್ಷ 629 ಜನರನ್ನು ಬಲವಂತವಾಗಿ ಕಣ್ಮರೆ ಮಾಡಲಾಗಿದೆ. 195 ಜನರನ್ನು ಕಾನೂನುಬಾಹಿರವಾಗಿ ಕೊಲ್ಲಲಾಗಿದೆ ಮತ್ತು 187 ಜನರನ್ನು ವಿವಿಧ ಪಾಕಿಸ್ತಾನಿ ಏಜೆನ್ಸಿಗಳ ಜನ ಚಿತ್ರಹಿಂಸೆಗೊಳಪಡಿಸಿದ್ದಾರೆ ಎಂದು ಬಿಎನ್​ಎಂ ಆರೋಪಿಸಿದೆ.

ಇದನ್ನೂ ಓದಿ: ಬಲೂಚಿಸ್ತಾನ ಪ್ರಾಂತ್ಯದಲ್ಲಿ 9 ಉಗ್ರರ ಹತ್ಯೆಗೈದ ಪಾಕಿಸ್ತಾನ ಸೇನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.