ETV Bharat / international

ಉಕ್ರೇನ್​ನ ಮೆಟ್ರೋ ನಿಲ್ದಾಣ, ಬಂಕರ್​ಗಳಲ್ಲಿ ಭಾರತೀಯರು.. ವಿಡಿಯೋ ಮಾಡಿ ಪರಿಸ್ಥಿತಿ ಬಿಚ್ಚಿಟ್ಟ ವಿದ್ಯಾರ್ಥಿಗಳು

author img

By

Published : Feb 26, 2022, 1:11 PM IST

ಪ್ರಾಣರಕ್ಷಣೆಗಾಗಿ ಮೆಟ್ರೋ ನಿಲ್ದಾಣಗಳ ಸುರಂಗಗಳಲ್ಲಿ, ನೆಲಮಾಳಿಗೆ ಹಾಗೂ ಬಂಕರ್​ಗಳಲ್ಲಿ ಭಾರತೀಯರು ದಿನಗಳನ್ನು ಕಳೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ವಿಡಿಯೋ ಸಂದೇಶ ಕಳುಹಿಸುವ ಮೂಲಕ ಭಾರತ ಸರ್ಕಾರವನ್ನು ಮನವಿ ಮಾಡುತ್ತಿದ್ದಾರೆ..

ಉಕ್ರೇನ್​ನ ಮೆಟ್ರೋ ನಿಲ್ದಾಣ, ಬಂಕರ್​ಗಳಲ್ಲಿ ಭಾರತೀಯರು
ಉಕ್ರೇನ್​ನ ಮೆಟ್ರೋ ನಿಲ್ದಾಣ, ಬಂಕರ್​ಗಳಲ್ಲಿ ಭಾರತೀಯರು

ಕೈವ್(ಉಕ್ರೇನ್) : ರಷ್ಯಾದ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯುದ್ಧ ಆರಂಭವಾಗುತ್ತಿದ್ದಂತೆಯೇ ಉಕ್ರೇನ್​ನಲ್ಲಿ ಸಿಲುಕಿರುವ ಸುಮಾರು 20 ಸಾವಿರ ಮಂದಿ ಭಾರತೀಯರು ತಮ್ಮ ದೇಶಕ್ಕೆ ಮರಳಲಾಗದೆ, ಅಲ್ಲಿಯೂ ಇರಲಾಗದೆ ಒದ್ದಾಡುತ್ತಿದ್ದಾರೆ. ವಾಯು ಮಾರ್ಗಗಳು ಸ್ಥಗಿತಗೊಂಡಿರುವ ಕಾರಣ ಭಾರತ ಸರ್ಕಾರಕ್ಕೆ ಇವರನ್ನು ಕರೆತರುವುದು ಕಷ್ಟಸಾಧ್ಯವಾಗಿದೆ.

ಉಕ್ರೇನ್​ನ ಮೆಟ್ರೋ ನಿಲ್ದಾಣ, ಬಂಕರ್​ಗಳಲ್ಲಿ ಭಾರತೀಯರು..

ಅನ್ನ-ನೀರು ಇಲ್ಲದೇ ಪ್ರಾಣರಕ್ಷಣೆಗಾಗಿ ಮೆಟ್ರೋ ನಿಲ್ದಾಣಗಳ ಸುರಂಗಗಳಲ್ಲಿ, ನೆಲಮಾಳಿಗೆ ಹಾಗೂ ಬಂಕರ್​ಗಳಲ್ಲಿ ಭಾರತೀಯರು ದಿನಗಳನ್ನು ಕಳೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ವಿಡಿಯೋ ಸಂದೇಶ ಕಳುಹಿಸುವ ಮೂಲಕ ಭಾರತ ಸರ್ಕಾರವನ್ನು ಮನವಿ ಮಾಡುತ್ತಿದ್ದಾರೆ. 'ನಮ್ಮನ್ನು ರಕ್ಷಿಸಿ' ಎಂದು ಬೇಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್​ ಸಮರ: ಯುರೋಪಿಯನ್​ ರಾಷ್ಟ್ರಗಳ ಸಹಾಯಕ್ಕೆ ಮನವಿ ಮಾಡಿದ ಉಕ್ರೇನ್ ಅಧ್ಯಕ್ಷ

ರಾಯಭಾರ ಕಚೇರಿಯಿಂದ ಯಾವುದೇ ಸಹಾಯ ಸಿಗುತ್ತಿಲ್ಲ ಎಂದು ಕೂಡ ಆರೋಪಿಸುತ್ತಿದ್ದಾರೆ. ಯಾವ ಸಮಯದಲ್ಲಾದರೂ ಬಾಂಬ್​ ಸ್ಫೋಟಗೊಳ್ಳಬಹುದು, ಶೆಲ್ ದಾಳಿ ನಡೆಯಬಹುದು ಎಂಬ ಭಯದಲ್ಲಿದ್ದಾರೆ.

ಕೈವ್(ಉಕ್ರೇನ್) : ರಷ್ಯಾದ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯುದ್ಧ ಆರಂಭವಾಗುತ್ತಿದ್ದಂತೆಯೇ ಉಕ್ರೇನ್​ನಲ್ಲಿ ಸಿಲುಕಿರುವ ಸುಮಾರು 20 ಸಾವಿರ ಮಂದಿ ಭಾರತೀಯರು ತಮ್ಮ ದೇಶಕ್ಕೆ ಮರಳಲಾಗದೆ, ಅಲ್ಲಿಯೂ ಇರಲಾಗದೆ ಒದ್ದಾಡುತ್ತಿದ್ದಾರೆ. ವಾಯು ಮಾರ್ಗಗಳು ಸ್ಥಗಿತಗೊಂಡಿರುವ ಕಾರಣ ಭಾರತ ಸರ್ಕಾರಕ್ಕೆ ಇವರನ್ನು ಕರೆತರುವುದು ಕಷ್ಟಸಾಧ್ಯವಾಗಿದೆ.

ಉಕ್ರೇನ್​ನ ಮೆಟ್ರೋ ನಿಲ್ದಾಣ, ಬಂಕರ್​ಗಳಲ್ಲಿ ಭಾರತೀಯರು..

ಅನ್ನ-ನೀರು ಇಲ್ಲದೇ ಪ್ರಾಣರಕ್ಷಣೆಗಾಗಿ ಮೆಟ್ರೋ ನಿಲ್ದಾಣಗಳ ಸುರಂಗಗಳಲ್ಲಿ, ನೆಲಮಾಳಿಗೆ ಹಾಗೂ ಬಂಕರ್​ಗಳಲ್ಲಿ ಭಾರತೀಯರು ದಿನಗಳನ್ನು ಕಳೆಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ವಿಡಿಯೋ ಸಂದೇಶ ಕಳುಹಿಸುವ ಮೂಲಕ ಭಾರತ ಸರ್ಕಾರವನ್ನು ಮನವಿ ಮಾಡುತ್ತಿದ್ದಾರೆ. 'ನಮ್ಮನ್ನು ರಕ್ಷಿಸಿ' ಎಂದು ಬೇಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್​ ಸಮರ: ಯುರೋಪಿಯನ್​ ರಾಷ್ಟ್ರಗಳ ಸಹಾಯಕ್ಕೆ ಮನವಿ ಮಾಡಿದ ಉಕ್ರೇನ್ ಅಧ್ಯಕ್ಷ

ರಾಯಭಾರ ಕಚೇರಿಯಿಂದ ಯಾವುದೇ ಸಹಾಯ ಸಿಗುತ್ತಿಲ್ಲ ಎಂದು ಕೂಡ ಆರೋಪಿಸುತ್ತಿದ್ದಾರೆ. ಯಾವ ಸಮಯದಲ್ಲಾದರೂ ಬಾಂಬ್​ ಸ್ಫೋಟಗೊಳ್ಳಬಹುದು, ಶೆಲ್ ದಾಳಿ ನಡೆಯಬಹುದು ಎಂಬ ಭಯದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.