ETV Bharat / international

ಲಡಾಖ್​​ನಲ್ಲಿ ನಡೆದ ಚೀನಾದ ಮೈಕ್ರೊವೇವ್ ಶಸ್ತ್ರಾಸ್ತ್ರಗಳ ಬಳಕೆ ಶುದ್ಧ ಸುಳ್ಳು ; ಭಾರತೀಯ ಸೇನೆ ಸ್ಪಷ್ಟನೆ

author img

By

Published : Nov 18, 2020, 7:31 PM IST

ಆ. 29ರಂದು ಈ ದಾಳಿ ಕಳೆದ ನಡೆದಿತ್ತು ಎಂದು ಪ್ರಾಧ್ಯಾಪಕರೊಬ್ಬರು ಹೇಳಿರುವ ಹೇಳಿಕೆಯ ಬಗ್ಗೆ ವರದಿ ಬಿತ್ತರಗೊಂಡಿದ್ದು, ಭಾರತೀಯ ಅಧಿಕಾರಿಗಳು ಮಾತ್ರ ಅದನ್ನು ಅಲ್ಲಗಳೆದಿದ್ದಾರೆ..

India rejects Chinese professor's claim of China using 'microwave weapons' against Indian forces
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್/ದೆಹಲಿ : ವಿವಾದಿತ ಲಡಾಖ್ ಪ್ರದೇಶದಲ್ಲಿ ನಡೆದ ಗಡಿ ಘರ್ಷಣೆಯಲ್ಲಿ ಭಾರತೀಯ ಪಡೆಗಳನ್ನು ಸೋಲಿಸಲು ಚೀನಾ ಮೈಕ್ರೊವೇವ್ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ ಎಂದು ಚೀನಾ ಪ್ರಾಧ್ಯಾಪಕರೊಬ್ಬರು ನೀಡಿದ ಹೇಳಿಕೆಯನ್ನು ಭಾರತ ಮಂಗಳವಾರ ತಳ್ಳಿಹಾಕಿದೆ.

ಚೀನಾ ಮೈಕ್ರೊವೇವ್ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ಸುಳ್ಳು ಸುದ್ದಿ ಬಿತ್ತರಿಸುತ್ತಿದೆ. ಇದು ಚೀನಾದ ಕುತಂತ್ರ ಕೆಲಸ ಎಂದು ಭಾರತದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಲಡಾಖ್ ಪ್ರಾಂತ್ಯದಲ್ಲಿ ತಮ್ಮ ಸೇನೆ ಸದ್ಯ ಹಿಡಿತ ಹೊಂದಿದ್ದು, ಚೀನಾದ ಮಾಧ್ಯಮಗಳು ಮಾಡುತ್ತಿರುವ ಸುದ್ದಿಯು ನಕಲಿಯಾಗಿದೆ. ಲಡಾಖ್‌​​ನಲ್ಲಿ ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ.

ಚೀನಾದ ಬೀಜಿಂಗ್ ಮೂಲದ ಪ್ರಾಧ್ಯಾಪಕರೊಬ್ಬರು, ಚೀನಾದ ಸೇನಾಪಡೆಗಳು ಪರ್ವತದ ಅತಿ ಎತ್ತರ ಪ್ರದೇಶವನ್ನು ಮೈಕ್ರೊವೇವ್ ಒವನ್ ಆಗಿ ಬಳಸಿ ವಿವಾದಿತ ಗಡಿ ಪ್ರದೇಶದಲ್ಲಿ ಇತ್ತೀಚೆಗೆ ಭಾರತದೊಂದಿಗಿನ ಘರ್ಷಣೆಯ ಸಂದರ್ಭದಲ್ಲಿ ಎರಡು ಪ್ರಮುಖ ಪರ್ವತಪ್ರದೇಶಗಳನ್ನು ಪುನಃ ವಶಪಡಿಸಿಕೊಂಡಿದೆ ಎಂದು ಹೇಳಿದ್ದಾರೆ ಎಂದು ವಾಷಿಂಗ್ಟನ್ ಎಕ್ಸಾಮಿನರ್ ವರದಿ ಮಾಡಿತ್ತು.

ಇದು ಚೀನಾದಿಂದ ಬಂದ ಶುದ್ಧ ಸುಳ್ಳು ವರದಿ ಎಂದು ಭಾರತೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತೀಯ ಮಿಲಿಟರಿ ಪಡೆಯ ಅಧಿಕಾರಿಗಳು ಮಂಗಳವಾರ ಅವರ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ಈ ಮಾಧ್ಯಮದಲ್ಲಿ ಉಲ್ಲೇಖಿಸಿರುವ ವರದಿ ನಕಲಿ ಎಂದು ಸೇನೆ ಟ್ವೀಟ್ ಮಾಡಿದೆ. ಅಲ್ಲದೇ ಲಡಾಖ್​ನಲ್ಲಿ ಅಂತಹ ಯಾವುದೇ ಸಂಘರ್ಷನಾತ್ಮಕ ಘಟನೆಗಳು ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆ. 29ರಂದು ಈ ದಾಳಿ ಕಳೆದ ನಡೆದಿತ್ತು ಎಂದು ಪ್ರಾಧ್ಯಾಪಕರೊಬ್ಬರು ಹೇಳಿರುವ ಹೇಳಿಕೆಯ ಬಗ್ಗೆ ವರದಿ ಬಿತ್ತರಗೊಂಡಿದ್ದು, ಭಾರತೀಯ ಅಧಿಕಾರಿಗಳು ಮಾತ್ರ ಅದನ್ನು ಅಲ್ಲಗಳೆದಿದ್ದಾರೆ.

ಗಡಿಯಲ್ಲಿ ಅಂತಹ ಯಾವುದೇ ಕ್ಯಾತೆಗಳು ನಡೆದಿಲ್ಲ ಎಂದು ಹೇಳುತ್ತಿರುವ ಭಾರತೀಯ ಸೇನೆ, ಶಸ್ತ್ರಾಸ್ತ್ರಗಳನ್ನು ಬಳಸಕೂಡದು ಎಂಬ ಹಳೆಯದಾದ ಅಂತಾರಾಷ್ಟ್ರೀಯ ಗಡಿ ವಿವಾದದ ಒಪ್ಪಂದದ ಹೊರತಾಗಿಯೂ ಅವರ ಈ ಹೇಳಿಕೆಗೆ ಚೀನಾದ ಬುದ್ಧಿಹೀನತೆ ತೋರ್ಪಡಿಸುತ್ತದೆ ಎಂದಿದ್ದಾರೆ.

ಪರ್ವತ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದ್ದರೆ ಅಲ್ಲಿಂದ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಚೀನಾ ಏಕೆ ಕೇಳಬೇಕಾಗಿತ್ತು? ನಮ್ಮ ಸೈನಿಕರು, ಬೃಹತ್ ಟ್ಯಾಂಕರ್​ಗಳು, ಶಸ್ತ್ರಾಸ್ತ್ರಗಳು ಇನ್ನೂ ಆ ಪ್ರದೇಶದಲ್ಲಿಯೇ ನಿಯೋಜನೆಗೊಂಡಿವೆ. ಪರ್ವತ ಪ್ರದೇಶದಿಂದ ಇನ್ನೂ ನಮ್ಮ ಸೇನೆ ಹಿಂತೆಗೆದುಕೊಂಡಿಲ್ಲ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಹೇಳಿದ್ದಾರೆ.

15 ನಿಮಿಷಗಳಲ್ಲಿ ಚೀನಾ ಪಡೆ ಎರಡು ಬೆಟ್ಟದ ತುದಿಯನ್ನು ಆಕ್ರಮಿಸಿಕೊಂಡಿತು. ದಾಳಿಯಿಂದ ಅಲ್ಲಿದ್ದವರು ಎದ್ದು ನಿಲ್ಲಲು ಸಾಧ್ಯವಾಗದಷ್ಟು ಬಲಹೀನರಾದರು. ಬಳಿಕ ಅಲ್ಲಿದ್ದ ಭಾರತೀಯ ಸೇನೆ ಓಡಿ ಹೋಯಿತು. ಈ ಮೂಲಕ ನಾವು ಆ ನೆಲವನ್ನು ಪುನಃ ಪಡೆದುಕೊಂಡೆವು ಎಂದು ಸುದ್ದಿ ಪ್ರಕರಟಕೊಂಡಿದ್ದು, ಈ ಬಗ್ಗೆ ಭಾರತೀಯ ಸೇನೆಯ ಅಧಿಕಾರಿಗಳು ಮಂಗಳವಾರ ಹೇಳಿಕೆ ನೀಡಿದ್ದಾರೆ.

ಗಡಿ ಪ್ರದೇಶದಲ್ಲಿ ನಡೆಯುವ ಉದ್ವಿಗ್ನತೆಯನ್ನು ನಿಲ್ಲಿಸುತ್ತೇವೆ ಎಂಬ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ಅವರ ಶಾಂತಿ ಮಾತುಕತೆಯ ನಡುವೆಯೂ ಅಲ್ಲಿನ ಪ್ರಾಧ್ಯಾಪಕರು ಏಕೆ ಅಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.

ಇದು ಕೇವಲ ನಮ್ಮನ್ನು ಹೆದರಿಸುವ ತಂತ್ರಗಾರಿಕೆ. ಇದರಿಂದ ಭಾರತೀಯ ಸೇನೆ ತನ್ನ ಯಾವುದೇ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ನಮ್ಮ ಸೇನಾ ಪಡೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಿದೆ ಎಂದು ಎಚ್ಚರಿಕೆ ಸಹ ನೀಡಿದೆ.

ವಾಷಿಂಗ್ಟನ್/ದೆಹಲಿ : ವಿವಾದಿತ ಲಡಾಖ್ ಪ್ರದೇಶದಲ್ಲಿ ನಡೆದ ಗಡಿ ಘರ್ಷಣೆಯಲ್ಲಿ ಭಾರತೀಯ ಪಡೆಗಳನ್ನು ಸೋಲಿಸಲು ಚೀನಾ ಮೈಕ್ರೊವೇವ್ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ ಎಂದು ಚೀನಾ ಪ್ರಾಧ್ಯಾಪಕರೊಬ್ಬರು ನೀಡಿದ ಹೇಳಿಕೆಯನ್ನು ಭಾರತ ಮಂಗಳವಾರ ತಳ್ಳಿಹಾಕಿದೆ.

ಚೀನಾ ಮೈಕ್ರೊವೇವ್ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ಸುಳ್ಳು ಸುದ್ದಿ ಬಿತ್ತರಿಸುತ್ತಿದೆ. ಇದು ಚೀನಾದ ಕುತಂತ್ರ ಕೆಲಸ ಎಂದು ಭಾರತದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಲಡಾಖ್ ಪ್ರಾಂತ್ಯದಲ್ಲಿ ತಮ್ಮ ಸೇನೆ ಸದ್ಯ ಹಿಡಿತ ಹೊಂದಿದ್ದು, ಚೀನಾದ ಮಾಧ್ಯಮಗಳು ಮಾಡುತ್ತಿರುವ ಸುದ್ದಿಯು ನಕಲಿಯಾಗಿದೆ. ಲಡಾಖ್‌​​ನಲ್ಲಿ ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ.

ಚೀನಾದ ಬೀಜಿಂಗ್ ಮೂಲದ ಪ್ರಾಧ್ಯಾಪಕರೊಬ್ಬರು, ಚೀನಾದ ಸೇನಾಪಡೆಗಳು ಪರ್ವತದ ಅತಿ ಎತ್ತರ ಪ್ರದೇಶವನ್ನು ಮೈಕ್ರೊವೇವ್ ಒವನ್ ಆಗಿ ಬಳಸಿ ವಿವಾದಿತ ಗಡಿ ಪ್ರದೇಶದಲ್ಲಿ ಇತ್ತೀಚೆಗೆ ಭಾರತದೊಂದಿಗಿನ ಘರ್ಷಣೆಯ ಸಂದರ್ಭದಲ್ಲಿ ಎರಡು ಪ್ರಮುಖ ಪರ್ವತಪ್ರದೇಶಗಳನ್ನು ಪುನಃ ವಶಪಡಿಸಿಕೊಂಡಿದೆ ಎಂದು ಹೇಳಿದ್ದಾರೆ ಎಂದು ವಾಷಿಂಗ್ಟನ್ ಎಕ್ಸಾಮಿನರ್ ವರದಿ ಮಾಡಿತ್ತು.

ಇದು ಚೀನಾದಿಂದ ಬಂದ ಶುದ್ಧ ಸುಳ್ಳು ವರದಿ ಎಂದು ಭಾರತೀಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತೀಯ ಮಿಲಿಟರಿ ಪಡೆಯ ಅಧಿಕಾರಿಗಳು ಮಂಗಳವಾರ ಅವರ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ಈ ಮಾಧ್ಯಮದಲ್ಲಿ ಉಲ್ಲೇಖಿಸಿರುವ ವರದಿ ನಕಲಿ ಎಂದು ಸೇನೆ ಟ್ವೀಟ್ ಮಾಡಿದೆ. ಅಲ್ಲದೇ ಲಡಾಖ್​ನಲ್ಲಿ ಅಂತಹ ಯಾವುದೇ ಸಂಘರ್ಷನಾತ್ಮಕ ಘಟನೆಗಳು ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆ. 29ರಂದು ಈ ದಾಳಿ ಕಳೆದ ನಡೆದಿತ್ತು ಎಂದು ಪ್ರಾಧ್ಯಾಪಕರೊಬ್ಬರು ಹೇಳಿರುವ ಹೇಳಿಕೆಯ ಬಗ್ಗೆ ವರದಿ ಬಿತ್ತರಗೊಂಡಿದ್ದು, ಭಾರತೀಯ ಅಧಿಕಾರಿಗಳು ಮಾತ್ರ ಅದನ್ನು ಅಲ್ಲಗಳೆದಿದ್ದಾರೆ.

ಗಡಿಯಲ್ಲಿ ಅಂತಹ ಯಾವುದೇ ಕ್ಯಾತೆಗಳು ನಡೆದಿಲ್ಲ ಎಂದು ಹೇಳುತ್ತಿರುವ ಭಾರತೀಯ ಸೇನೆ, ಶಸ್ತ್ರಾಸ್ತ್ರಗಳನ್ನು ಬಳಸಕೂಡದು ಎಂಬ ಹಳೆಯದಾದ ಅಂತಾರಾಷ್ಟ್ರೀಯ ಗಡಿ ವಿವಾದದ ಒಪ್ಪಂದದ ಹೊರತಾಗಿಯೂ ಅವರ ಈ ಹೇಳಿಕೆಗೆ ಚೀನಾದ ಬುದ್ಧಿಹೀನತೆ ತೋರ್ಪಡಿಸುತ್ತದೆ ಎಂದಿದ್ದಾರೆ.

ಪರ್ವತ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದ್ದರೆ ಅಲ್ಲಿಂದ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಚೀನಾ ಏಕೆ ಕೇಳಬೇಕಾಗಿತ್ತು? ನಮ್ಮ ಸೈನಿಕರು, ಬೃಹತ್ ಟ್ಯಾಂಕರ್​ಗಳು, ಶಸ್ತ್ರಾಸ್ತ್ರಗಳು ಇನ್ನೂ ಆ ಪ್ರದೇಶದಲ್ಲಿಯೇ ನಿಯೋಜನೆಗೊಂಡಿವೆ. ಪರ್ವತ ಪ್ರದೇಶದಿಂದ ಇನ್ನೂ ನಮ್ಮ ಸೇನೆ ಹಿಂತೆಗೆದುಕೊಂಡಿಲ್ಲ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಹೇಳಿದ್ದಾರೆ.

15 ನಿಮಿಷಗಳಲ್ಲಿ ಚೀನಾ ಪಡೆ ಎರಡು ಬೆಟ್ಟದ ತುದಿಯನ್ನು ಆಕ್ರಮಿಸಿಕೊಂಡಿತು. ದಾಳಿಯಿಂದ ಅಲ್ಲಿದ್ದವರು ಎದ್ದು ನಿಲ್ಲಲು ಸಾಧ್ಯವಾಗದಷ್ಟು ಬಲಹೀನರಾದರು. ಬಳಿಕ ಅಲ್ಲಿದ್ದ ಭಾರತೀಯ ಸೇನೆ ಓಡಿ ಹೋಯಿತು. ಈ ಮೂಲಕ ನಾವು ಆ ನೆಲವನ್ನು ಪುನಃ ಪಡೆದುಕೊಂಡೆವು ಎಂದು ಸುದ್ದಿ ಪ್ರಕರಟಕೊಂಡಿದ್ದು, ಈ ಬಗ್ಗೆ ಭಾರತೀಯ ಸೇನೆಯ ಅಧಿಕಾರಿಗಳು ಮಂಗಳವಾರ ಹೇಳಿಕೆ ನೀಡಿದ್ದಾರೆ.

ಗಡಿ ಪ್ರದೇಶದಲ್ಲಿ ನಡೆಯುವ ಉದ್ವಿಗ್ನತೆಯನ್ನು ನಿಲ್ಲಿಸುತ್ತೇವೆ ಎಂಬ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ಅವರ ಶಾಂತಿ ಮಾತುಕತೆಯ ನಡುವೆಯೂ ಅಲ್ಲಿನ ಪ್ರಾಧ್ಯಾಪಕರು ಏಕೆ ಅಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.

ಇದು ಕೇವಲ ನಮ್ಮನ್ನು ಹೆದರಿಸುವ ತಂತ್ರಗಾರಿಕೆ. ಇದರಿಂದ ಭಾರತೀಯ ಸೇನೆ ತನ್ನ ಯಾವುದೇ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ನಮ್ಮ ಸೇನಾ ಪಡೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಿದೆ ಎಂದು ಎಚ್ಚರಿಕೆ ಸಹ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.