ETV Bharat / international

Afghan Crisis.. ಗುರುದ್ವಾರದಲ್ಲಿರುವ ಅಲ್ಪಸಂಖ್ಯಾತರಿಗೆ ತಾಲಿಬಾನಿಗಳಿಂದ ರಕ್ಷಣೆ ಭರವಸೆ : ಸಿರ್ಸಾ

author img

By

Published : Aug 17, 2021, 1:48 AM IST

ಆಫ್ಘನ್ ತಾಲಿಬಾನಿಗಳ ತೆಕ್ಕೆಗೆ ಜಾರಿದ ನಂತರ ಅಲ್ಲಿನ ಅಲ್ಪಸಂಖ್ಯಾತರೂ ಆತಂಕಕ್ಕೆ ಒಳಗಾಗಿದ್ದು, ಕೆಲವು ಮಂದಿ ಕಾಬೂಲ್​ನ ಗುರುದ್ವಾರವೊಂದರಲ್ಲಿ ಆಶ್ರಯ ಪಡೆದಿದ್ದಾರೆ.

Hindus, Sikhs have taken refuge in Kabul's Karte Parwan gurdwara: Sirsa
Afghan Crisis.. ಗುರುದ್ವಾರದಲ್ಲಿರುವ ಅಲ್ಪಸಂಖ್ಯಾತರಿಗೆ ತಾಲಿಬಾನಿಗಳಿಂದ ರಕ್ಷಣೆ ಭರವಸೆ : ಸಿರ್ಸಾ

ನವದೆಹಲಿ: ತಾಲಿಬಾನ್ ಆಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಅಲ್ಲಿನ ಜನ ದೇಶ ತೊರೆಯಲು ಮುಂದಾಗಿದ್ದಾರೆ. ಹಮೀದ್ ಕರ್ಜೈ ಇಂಟರ್​ನ್ಯಾಷನಲ್ ಏರ್​ಪೋರ್ಟ್ ಮೂಲಕ ಬೇರೆ ಬೇರೆ ದೇಶಗಳಿಗೆ ತೆರಳಲು ಹರಸಾಹಸ ನಡೆಸುತ್ತಿದ್ದಾರೆ.

ಈ ಬೆನ್ನಲ್ಲೇ ಆಫ್ಘಾನಿಸ್ತಾನದಲ್ಲಿ ನಿರಾಶ್ರಿತರಾಗಿರುವ ಅಲ್ಪಸಂಖ್ಯಾತರು ಅಂದರೆ ಹಿಂದೂಗಳು, ಸಿಖ್ಖರಿಗೆ ಕಾಬೂಲ್​ನಲ್ಲಿರುವ ಕರ್ತೆ ಪರ್ವಾನ್ ಗುರುದ್ವಾರದಲ್ಲಿ ಆಶ್ರಯ ನೀಡಲಾಗಿದೆ ಎಂದು ದೆಹಲಿ ಸಿಖ್ ಗುರುದ್ವಾರ ಮ್ಯಾನೇಜ್​ಮೆಂಟ್ ಕಮಿಟಿಯ ಮುಖ್ಯಸ್ಥ ಮಂಜಿಂದರ್ ಸಿಂಗ್ ಸಿರ್ಸಾ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮತ್ತಷ್ಟು ಮಾಹಿತಿ ನೀಡಿರುವ ಸಿರ್ಸಾ ಕಾಬೂಲ್​ನಲ್ಲಿರುವ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಲು ಕಾಬೂಲ್ ಗುರುದ್ವಾರ ಕಮಿಟಿಯೊಂದಿಗೆ ಸತತವಾಗಿ ಸಂಪರ್ಕದಲ್ಲಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಕಾಬೂಲ್​ನ ಗುರುದ್ವಾರ ಕಮಿಟಿಯೊಂದಿಗೆ ನಾನು ಸತತವಾಗಿ ಸಂಪರ್ಕದಲ್ಲಿದ್ದೇನೆ. ಈ ಗುರುದ್ವಾರದಲ್ಲಿ ಸದ್ಯಕ್ಕೆ 50 ಹಿಂದುಗಳು, 270 ಸಿಖ್ಖರು ಸೇರಿದಂತೆ 320 ಮಂದಿ ಅಲ್ಪಸಂಖ್ಯಾತರಿಗೆ ಕರ್ತೆ ಪರ್ವಾನ್ ಗುರುದ್ವಾರದಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದಿದ್ದಾರೆ.

ಇದರ ಜೊತೆಗೆ ತಾಲಿಬಾನ್ ನಾಯಕರೂ ಕೂಡಾ ಕರ್ತೆ ಪರ್ವಾನ್ ಗುರುದ್ವಾರಕ್ಕೆ ಭೇಟಿ ನೀಡಿದ್ದು, ಅಲ್ಲಿರುವ ಅಲ್ಪಸಂಖ್ಯಾತರಿಗೆ ಸುರಕ್ಷತೆಯ ಭರವಸೆ ನೀಡಿದ್ದಾರೆ. ರಾಜಕೀಯ ಮತ್ತು ಮಿಲಿಟರಿ ಸಂಘರ್ಷದ ಹೊರತಾಗಿಯೂ ಅಲ್ಪಸಂಖ್ಯಾತರು ಅಲ್ಲಿ ಸುರಕ್ಷಿತವಾಗಿ ನೆಲೆಸಬಹುದು ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಸಿರ್ಸಾ ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ: ತಾಲಿಬಾನ್ ಆಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಅಲ್ಲಿನ ಜನ ದೇಶ ತೊರೆಯಲು ಮುಂದಾಗಿದ್ದಾರೆ. ಹಮೀದ್ ಕರ್ಜೈ ಇಂಟರ್​ನ್ಯಾಷನಲ್ ಏರ್​ಪೋರ್ಟ್ ಮೂಲಕ ಬೇರೆ ಬೇರೆ ದೇಶಗಳಿಗೆ ತೆರಳಲು ಹರಸಾಹಸ ನಡೆಸುತ್ತಿದ್ದಾರೆ.

ಈ ಬೆನ್ನಲ್ಲೇ ಆಫ್ಘಾನಿಸ್ತಾನದಲ್ಲಿ ನಿರಾಶ್ರಿತರಾಗಿರುವ ಅಲ್ಪಸಂಖ್ಯಾತರು ಅಂದರೆ ಹಿಂದೂಗಳು, ಸಿಖ್ಖರಿಗೆ ಕಾಬೂಲ್​ನಲ್ಲಿರುವ ಕರ್ತೆ ಪರ್ವಾನ್ ಗುರುದ್ವಾರದಲ್ಲಿ ಆಶ್ರಯ ನೀಡಲಾಗಿದೆ ಎಂದು ದೆಹಲಿ ಸಿಖ್ ಗುರುದ್ವಾರ ಮ್ಯಾನೇಜ್​ಮೆಂಟ್ ಕಮಿಟಿಯ ಮುಖ್ಯಸ್ಥ ಮಂಜಿಂದರ್ ಸಿಂಗ್ ಸಿರ್ಸಾ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮತ್ತಷ್ಟು ಮಾಹಿತಿ ನೀಡಿರುವ ಸಿರ್ಸಾ ಕಾಬೂಲ್​ನಲ್ಲಿರುವ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಲು ಕಾಬೂಲ್ ಗುರುದ್ವಾರ ಕಮಿಟಿಯೊಂದಿಗೆ ಸತತವಾಗಿ ಸಂಪರ್ಕದಲ್ಲಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಕಾಬೂಲ್​ನ ಗುರುದ್ವಾರ ಕಮಿಟಿಯೊಂದಿಗೆ ನಾನು ಸತತವಾಗಿ ಸಂಪರ್ಕದಲ್ಲಿದ್ದೇನೆ. ಈ ಗುರುದ್ವಾರದಲ್ಲಿ ಸದ್ಯಕ್ಕೆ 50 ಹಿಂದುಗಳು, 270 ಸಿಖ್ಖರು ಸೇರಿದಂತೆ 320 ಮಂದಿ ಅಲ್ಪಸಂಖ್ಯಾತರಿಗೆ ಕರ್ತೆ ಪರ್ವಾನ್ ಗುರುದ್ವಾರದಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದಿದ್ದಾರೆ.

ಇದರ ಜೊತೆಗೆ ತಾಲಿಬಾನ್ ನಾಯಕರೂ ಕೂಡಾ ಕರ್ತೆ ಪರ್ವಾನ್ ಗುರುದ್ವಾರಕ್ಕೆ ಭೇಟಿ ನೀಡಿದ್ದು, ಅಲ್ಲಿರುವ ಅಲ್ಪಸಂಖ್ಯಾತರಿಗೆ ಸುರಕ್ಷತೆಯ ಭರವಸೆ ನೀಡಿದ್ದಾರೆ. ರಾಜಕೀಯ ಮತ್ತು ಮಿಲಿಟರಿ ಸಂಘರ್ಷದ ಹೊರತಾಗಿಯೂ ಅಲ್ಪಸಂಖ್ಯಾತರು ಅಲ್ಲಿ ಸುರಕ್ಷಿತವಾಗಿ ನೆಲೆಸಬಹುದು ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಸಿರ್ಸಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಆಫ್ಘನ್​ನಲ್ಲಿ ಜಾಗತಿಕ ಭಯೋತ್ಪಾದನೆ ನಿಗ್ರಹಕ್ಕೆ ಎಲ್ಲ ದೇಶಗಳು ಒಂದಾಗಬೇಕಿದೆ: ವಿಶ್ವಸಂಸ್ಥೆ ಕರೆ

ಇದನ್ನೂ ಓದಿ: ಆಫ್ಘನ್​​ನ ರಾಯಭಾರ ಕಚೇರಿಯಲ್ಲಿ 200 ಭಾರತೀಯರು... ರಕ್ಷಣೆಗೆ ಧಾವಿಸಿದ ಏರ್​​​ಫೋರ್ಸ್​ ವಿಮಾನ

ಇದನ್ನೂ ಓದಿ: ಭಾರತೀಯರ ಸ್ಥಳಾಂತರಕ್ಕಾಗಿ ಹಿಂದೂ, ಸಿಖ್ ಸಮುದಾಯದವರ ಸಂಪರ್ಕದಲ್ಲಿದ್ದೇವೆ: ಅರಿಂದಮ್ ಬಾಗ್ಚಿ

ಇದನ್ನೂ ಓದಿ: ಮಿಲಿಟರಿ, ಸರ್ಕಾರಿ ಸಂಸ್ಥೆಗಳನ್ನು ವಶಕ್ಕೆ ಪಡೆದುಕೊಂಡ ತಾಲಿಬಾನ್ ಉಗ್ರರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.