ETV Bharat / international

18 ವರ್ಷದ ಕರಾಳ ದಿನದ ನೆನಪಿನಂದೇ ಕಾಬುಲ್​ನಲ್ಲಿ​ ಅಮೇರಿಕಾ ರಾಯಬಾರ ಕಚೇರಿ ಬಳಿ ಸ್ಫೋಟ - 9/11 US World Trade Center attack

9/11 ರ ಅಮೇರಿಕಾ ವಿಶ್ವ ವಾಣಿಜ್ಯ ಕೇಂದ್ರ ದಾಳಿಯ 18​​ನೇ ವಾರ್ಷಿಕೋತ್ಸವದಂದೇ ಸ್ಫೋಟ ಸಂಭವಿಸಿದ್ದು, ಸ್ಪೋಟವು ರಾಕೆಟ್ ಸ್ಪೋಟವಾಗಿದೆ ಎಂದು ಸ್ಥಳೀಯ ಪತ್ರಕರ್ತ ಜವಾದ್ ಜಲಾಲಿ ಹೇಳಿಕೆಯನ್ನು ಉಲ್ಲೇಖಿಸಿ ಕ್ಸಿನ್ಹುವಾ ವರದಿ ಮಾಡಿದೆ.

ಕರಾಳ ದಿನದ ನೆನಪಿನಂದೇ ಯುಎಸ್ ರಾಯಭಾರ ಕಚೇರಿ ಬಳಿ ಸ್ಫೋಟ..!
author img

By

Published : Sep 11, 2019, 6:55 AM IST

ಕಾಬೂಲ್‌:ಅಫ್ಘಾನಿಸ್ತಾನದ ಯುಎಸ್ ರಾಯಭಾರ ಕಚೇರಿ ಬಳಿ ಪ್ರಬಲ ಸ್ಫೋಟ ಸಂಭವಿಸಿದ್ದು, ವಿವಿಧ ರಾಷ್ಟ್ರಗಳ ದೂತಾವಾಸ ಕಚೇರಿಗಳಿರುವ ಕಟ್ಟಡದ ಬಳಿ ಹೊಗೆ ಆವರಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

9/11 ರ ಅಮೇರಿಕಾ ವಿಶ್ವ ವಾಣಿಜ್ಯ ಕೇಂದ್ರ ದಾಳಿಯ 18​​ನೇ ವಾರ್ಷಿಕೋತ್ಸವದಂದೇ ಸ್ಫೋಟ ಸಂಭವಿಸಿದ್ದು, ರಾಕೆಟ್​ನಿಂದಾಗ ಸ್ಪೋಟವಾಗಿದೆ ಎಂದು ಸ್ಥಳೀಯ ಪತ್ರಕರ್ತ ಜವಾದ್ ಜಲಾಲಿ ಹೇಳಿಕೆಯನ್ನು ಉಲ್ಲೇಖಿಸಿ ಕ್ಸಿನ್ ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸ್ಪೋಟದಿಂದ ಯಾವುದೇ ಸಾವು ನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಮತ್ತು ಯಾವುದೇ ಗುಂಪು, ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಂತಿ ಮಾತುಕತೆಗಳನ್ನು ಕೊನೆಗೊಳಿಸಿದ ಬಳಿಕ ತಾಲಿಬಾನ್ ಪ್ರತೀಕಾರ ತೀರಿಸುವುದಾಗಿ ಪ್ರತಿಜ್ಞೆ ಮಾಡಿತ್ತು. ಇದಾದ ಒಂದು ದಿನದ ಅಂತರದಲ್ಲೇ ಸ್ಪೋಟ ಸಂಭವಿಸಿದ್ದು, ಕರಾಳ ದಿನದ ವರ್ಷಾಚರಣೆ ಸಂದರ್ಭದಲ್ಲೇ ಮತ್ತೊಂದು ಕರಾಳ ಕೃತ್ಯವನ್ನು ಉಗ್ರರು ನಡೆಸಿದ್ದಾರೆ.

ಕಾಬೂಲ್‌:ಅಫ್ಘಾನಿಸ್ತಾನದ ಯುಎಸ್ ರಾಯಭಾರ ಕಚೇರಿ ಬಳಿ ಪ್ರಬಲ ಸ್ಫೋಟ ಸಂಭವಿಸಿದ್ದು, ವಿವಿಧ ರಾಷ್ಟ್ರಗಳ ದೂತಾವಾಸ ಕಚೇರಿಗಳಿರುವ ಕಟ್ಟಡದ ಬಳಿ ಹೊಗೆ ಆವರಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

9/11 ರ ಅಮೇರಿಕಾ ವಿಶ್ವ ವಾಣಿಜ್ಯ ಕೇಂದ್ರ ದಾಳಿಯ 18​​ನೇ ವಾರ್ಷಿಕೋತ್ಸವದಂದೇ ಸ್ಫೋಟ ಸಂಭವಿಸಿದ್ದು, ರಾಕೆಟ್​ನಿಂದಾಗ ಸ್ಪೋಟವಾಗಿದೆ ಎಂದು ಸ್ಥಳೀಯ ಪತ್ರಕರ್ತ ಜವಾದ್ ಜಲಾಲಿ ಹೇಳಿಕೆಯನ್ನು ಉಲ್ಲೇಖಿಸಿ ಕ್ಸಿನ್ ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸ್ಪೋಟದಿಂದ ಯಾವುದೇ ಸಾವು ನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಮತ್ತು ಯಾವುದೇ ಗುಂಪು, ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಂತಿ ಮಾತುಕತೆಗಳನ್ನು ಕೊನೆಗೊಳಿಸಿದ ಬಳಿಕ ತಾಲಿಬಾನ್ ಪ್ರತೀಕಾರ ತೀರಿಸುವುದಾಗಿ ಪ್ರತಿಜ್ಞೆ ಮಾಡಿತ್ತು. ಇದಾದ ಒಂದು ದಿನದ ಅಂತರದಲ್ಲೇ ಸ್ಪೋಟ ಸಂಭವಿಸಿದ್ದು, ಕರಾಳ ದಿನದ ವರ್ಷಾಚರಣೆ ಸಂದರ್ಭದಲ್ಲೇ ಮತ್ತೊಂದು ಕರಾಳ ಕೃತ್ಯವನ್ನು ಉಗ್ರರು ನಡೆಸಿದ್ದಾರೆ.

Intro:news Body:ಮಾಜಿ ಸಚಿವರ ಬಂಧನದ ನಂತರ ಬಲಗೊಳ್ಳುತ್ತಿದೆ ಒಕ್ಕಲಿಗ ಸಮುದಾಯದ ದನಿ

ಮಾಜಿ ಸಚಿವ ಡಿಕೆ ಶಿವಕುಮಾರ್ ಜಾರಿ ನಿರ್ದೇಶನಾಲಯದ ಬಲೆಗೆ ಬಿದ್ದ ನಂತರದ ದಿನಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಕೂಗು ಸ್ವಲ್ಪ ದೊಡ್ಡ ಮಟ್ಟದಲ್ಲಿಯೇ ಕೇಳಿಬರುತ್ತಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸಮುದಾಯದ ನಾಯಕರು ಸಂಘ-ಸಂಸ್ಥೆಗಳು ಹಾಗೂ ಮಠಮಾನ್ಯಗಳು ಡಿಕೆಶಿ ಪರ ಒಕ್ಕೊರಲಿನ ಧ್ವನಿ ಎತ್ತಿವೆ. ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಒಕ್ಕಲಿಗ ಸಮುದಾಯದ ವಿವಿಧ ಸಂಘ-ಸಂಸ್ಥೆಗಳು ಮಠಾಧಿಪತಿಗಳು ಹಾಗೂ ನಾಯಕರನ್ನು ಒಳಗೊಂಡ ಬೃಹತ್ ಒಕ್ಕೂಟವನ್ನು ಡಿಕೆಶಿ ಪರ ಪ್ರತಿಭಟನೆಗೆ ನಿರ್ಧರಿಸಿದ್ದು ಮೆರವಣಿಗೆಯನ್ನು ಕೂಡ ಹಮ್ಮಿಕೊಂಡಿದೆ.Conclusion:package
ETV Bharat Logo

Copyright © 2025 Ushodaya Enterprises Pvt. Ltd., All Rights Reserved.