ನವದೆಹಲಿ : ಭೂಗತ ಪಾತಕಿ ಹಾಗೂ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ಕೆರಿಬಿಯನ್ ದ್ವೀಪದ ಪ್ರಜೆಯಲ್ಲ ಎಂದು ಡೊಮಿನಿಕಾ ಸರ್ಕಾರ ಸ್ಪಷ್ಟಪಡಿಸಿದೆ.
"ದಾವೂದ್ ಇಬ್ರಾಹಿಂ ಕಾಸ್ಕರ್ ಕಾಮನ್ವೆಲ್ತ್ ಆಫ್ ಡೊಮಿನಿಕಾದ ಪ್ರಜೆಯಲ್ಲ. ಆತ ನಮ್ಮ ಸಿಟಿಜನ್ಶಿಪ್ ಬೈ ಇನ್ವೆಸ್ಟ್ಮೆಂಟ್ ಕಾರ್ಯಕ್ರಮದ ಮೂಲಕ ಅಥವಾ ಇತರೆ ವಿಧಾನದ ಮೂಲಕವೂ ಪೌರತ್ವ ಪಡೆದಿಲ್ಲ. ಇದನ್ನು ಯಾವುದೋ ಮೀಡಿಯಾ ಪಬ್ಲಿಕೇಶನ್ ಅಥವಾ ಯಾರೋ ವ್ಯಕ್ತಿ ತಪ್ಪಾಗಿ ತಿಳಿಸಿದ್ದಾರೆ ಎಂದು ಡೊಮಿನಿಕನ್ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಸಿಟಿಜನ್ಶಿಪ್ ಬೈ ಇನ್ವೆಸ್ಟ್ಮೆಂಟ್ ಕಾರ್ಯಕ್ರಮವು ನಮ್ಮ ದೇಶದಿಂದ ಇತರೆ ದೇಶದವರಿಗೆ ಪೌರತ್ವ ನೀಡುವಂತಹ ಮಲ್ಟಿ ಟೈರ್ಡ್ ಕಾರ್ಯಕ್ರಮ. ಇದು ಕೆಲ ಆಯ್ದ ದೇಶದ ಗಣ್ಯ ವ್ಯಕ್ತಿಗಳಿಗೆ ನೀಡುವಂತಹ ಯೋಜನೆಯಾಗಿದೆ. ಅದೂ ಯುಕೆ ಹಾಗೂ ಯುಎಸ್ನ ನಿವಾಸಿಗಳಿಗಾಗಿ ಮಾಡಿರುವ ಕಾರ್ಯಕ್ರಮ ಎಂದು ತಿಳಿಸಿದೆ.