ETV Bharat / headlines

’ಹಲೋ ಕ್ಯಾನ್​ ಯು ಹಿಯರ್​​​ ಮೀ’.. ಅಲಾಟ್​​ ಮಾಡಿ ಕೊಟ್ರೆ ಇವತ್ತೇ ಹೋಗ್ತಿರಾ?...ಕರೆ ಸ್ವೀಕರಿಸಿ ಮಾತನಾಡಿದ ಸಿಎಂ - BS Yeddyurappa

ಇತ್ತೀಚೆಗೆ ಆರೋಗ್ಯಸೌಧಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಸಿಎಂ, ಇಂದು ದೊಮ್ಮಲೂರು ಸೇರಿದಂತೆ ಬೇರೆ ವಲಯದ ವಾರ್ ರೂಂಗಳಿಗೆ ಭೇಟಿ ನೀಡಿ. ವಾರ್ ರೂಂ ಯಾವ ರೀತಿ ಕಾರ್ಯನಿರ್ವಹಣೆ ಮಾಡಲಿದೆ, ಬೆಡ್ ಹಂಚಿಕೆ ಯಾವ ರೀತಿ ನಡೆಯಲಿದೆ. ಎಲ್ಲಿ ಲೋಪ -ದೋಷಗಳಾಗುತ್ತಿವೆ ಎಂದು ಪರಿಶೀಲನೆ ನಡೆಸಿದ್ದು, ಅಗತ್ಯ ಸಲಹೆ ಸೂಚನೆಯನ್ನೂ ನೀಡಿದ್ದಾರೆ..

 M BSY inspection the covid war room
M BSY inspection the covid war room
author img

By

Published : May 24, 2021, 5:30 PM IST

Updated : May 24, 2021, 7:08 PM IST

ಬೆಂಗಳೂರು: ಕೋವಿಡ್ ಸೋಂಕಿತರಿಗೆ ಬೆಡ್​​ಗಳ ಹಂಚಿಕೆಯಾಗುವ ಬಿಬಿಎಂಪಿ ವಾರ್ ರೂಂಗೆ ಇಂದು ಸಿಎಂ ಭೇಟಿ ನೀಡಿದರು. ಸ್ವತಃ ತಾವೇ ಕರೆ ಸ್ವೀಕರಿಸಿ ಮಾತನಾಡಿದರು. ಕೆಲ ಸಮಯ ಟೆಲಿಕಾಲರ್ ಆಗಿ ಕೆಲಸ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸೋಂಕಿತ ವ್ಯಕ್ತಿಯೊಬ್ಬರಿಗೆ ಐಸಿಯು ಬೆಡ್ ಹಂಚಿಕೆ ಮಾಡಿ ಗಮನ ಸೆಳೆದರು.

ದೊಮ್ಮಲೂರು ಕೋವಿಡ್ ವಾರ್ ರೂಂಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಪೈಸ್ ವಿಸಿಟ್ ನೀಡಿದರು. ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ವಾರ್ ರೂಂ ನಿರ್ವಹಣೆ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಸೋಂಕಿತರು ಹಾಗೂ ಸೋಂಕಿತರ ಪರ ಕುಟುಂಬ ಸದಸ್ಯರು ಬೆಡ್​​​ಗಾಗಿ ಕೋರಿಕೆ ಸಲ್ಲಿಸುವ ಸಹಾಯವಾಣಿ ಸ್ವೀಕೃತಿ ವಿಭಾಗಕ್ಕೆ ಭೇಟಿ ನೀಡಿದ ಸಿಎಂ ಸ್ವತಃ ಕುಳಿತು ದೂರವಾಣಿ ಕರೆ ಸ್ವೀಕರಿಸಿ ಸೋಂಕಿತರ ಸಂಬಂಧಿಕರ ಜೊತೆ ಮಾತನಾಡಿದರು.
ಹಲೋ ಹಲೋ ಯಾರ್ ಮಾತನಾಡುತ್ತಿದ್ದೀರಿ, ಹು ಈಸ್ ಸ್ಪೀಕಿಂಗ್...


‘‘ವ್ಯಕ್ತಿಯೊಬ್ಬರು ಮಾಡಿದ್ದ ಕರೆ ಸ್ವೀಕರಿಸಿದ ಸಿಎಂ ಹಲೋ ಹಲೋ ಯಾರ್ ಮಾತ್ನಾಡ್ತಿದ್ದೀರಾ.. ಹು ಈಸ್ ಸ್ಪೀಕಿಂಗ್, ಮೇ ಐ ನೋ ಯುವರ್ ನೇಮ್.. ಕ್ಯಾನ್​ ಯು ಹಿಯರ್​ ಮೀ’’ ಎನ್ನುತ್ತಾ ಕನ್ನಡ ಇಂಗ್ಲಿಷ್​ ಭಾಷೆಯಲ್ಲಿ ಮಾತನಾಡಿದರು.

ಆತಂಕದಲ್ಲಿ ಕರೆ ಮಾಡಿದ್ದ ವ್ಯಕ್ತಿಯನ್ನು ಸಮಾಧಾನಪಡಿಸಿ ಸಮಸ್ಯೆ ಆಲಿಸಿದರು. ಉಸಿರಾಟದ ತೊಂದರೆಯಾಗುತ್ತಿದೆ ಹಾಗಾಗಿ ಐಸಿಯು ಬೆಡ್ ಬೇಕು ಎನ್ನುವ ಕೋರಿಕೆಯನ್ನು ಮುಂದಿಟ್ಟ ವ್ಯಕ್ತಿಗೆ ನಾಳೆಯೇ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದ ಸಿಎಂ ನಂತರ ಈಗಲೇ ಐಸಿಯು ಬೆಡದ ವ್ಯವಸ್ಥೆ ಮಾಡುತ್ತೇನೆ, ಈಗಲೇ ನೀವು ನಿಮ್ಮ ಸಂಬಂಧಿಯನ್ನು ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಸೋಂಕಿತ ವ್ಯಕ್ತಿಯ ಬಿಯು ಸಂಖ್ಯೆ ಪಡೆದು ಐಸಿಯು ಬೆಡ್ ಅಲಾಟ್ ಮಾಡಿದರು. ನಂತರ ನಿಗದಿತ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಲಭ್ಯವಾದ ಮಾಹಿತಿಯನ್ನು ಸಹಾಯವಾಣಿ ಸಿಬ್ಬಂದಿ ಮೂಲಕ ರವಾನಿಸಿದರು

ಮಾಧ್ಯಮಗಳಿಗೆ ಪೊಲೀಸರ ನಿರ್ಬಂಧ : ಸಿಎಂ ಬಿಎಸ್​​ವೈರಿಂದ ವಾರ್ ರೂಮ್ ಭೇಟಿ ಹಿನ್ನೆಲೆ ಸಿಎಂ ವಾರ್ ರೂಮ್ ಭೇಟಿಯ ಮಾಧ್ಯಮ ವರದಿಗೆ ಪೊಲೀಸರಿಂದ ನಿರ್ಬಂಧ ಎದುರಾಗಿದೆ. ಮಾಧ್ಯಮ ವಾಹನಗಳನ್ನು ಅಡ್ಡಗಟ್ಟಿದ ಪೊಲೀಸರು ಮಾಧ್ಯಮಗಳ ನಿರ್ಬಂಧಕ್ಕೆ ಯತ್ನಿಸಿದ್ದಾರೆ

ಬೆಂಗಳೂರು: ಕೋವಿಡ್ ಸೋಂಕಿತರಿಗೆ ಬೆಡ್​​ಗಳ ಹಂಚಿಕೆಯಾಗುವ ಬಿಬಿಎಂಪಿ ವಾರ್ ರೂಂಗೆ ಇಂದು ಸಿಎಂ ಭೇಟಿ ನೀಡಿದರು. ಸ್ವತಃ ತಾವೇ ಕರೆ ಸ್ವೀಕರಿಸಿ ಮಾತನಾಡಿದರು. ಕೆಲ ಸಮಯ ಟೆಲಿಕಾಲರ್ ಆಗಿ ಕೆಲಸ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸೋಂಕಿತ ವ್ಯಕ್ತಿಯೊಬ್ಬರಿಗೆ ಐಸಿಯು ಬೆಡ್ ಹಂಚಿಕೆ ಮಾಡಿ ಗಮನ ಸೆಳೆದರು.

ದೊಮ್ಮಲೂರು ಕೋವಿಡ್ ವಾರ್ ರೂಂಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಪೈಸ್ ವಿಸಿಟ್ ನೀಡಿದರು. ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ವಾರ್ ರೂಂ ನಿರ್ವಹಣೆ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಸೋಂಕಿತರು ಹಾಗೂ ಸೋಂಕಿತರ ಪರ ಕುಟುಂಬ ಸದಸ್ಯರು ಬೆಡ್​​​ಗಾಗಿ ಕೋರಿಕೆ ಸಲ್ಲಿಸುವ ಸಹಾಯವಾಣಿ ಸ್ವೀಕೃತಿ ವಿಭಾಗಕ್ಕೆ ಭೇಟಿ ನೀಡಿದ ಸಿಎಂ ಸ್ವತಃ ಕುಳಿತು ದೂರವಾಣಿ ಕರೆ ಸ್ವೀಕರಿಸಿ ಸೋಂಕಿತರ ಸಂಬಂಧಿಕರ ಜೊತೆ ಮಾತನಾಡಿದರು.
ಹಲೋ ಹಲೋ ಯಾರ್ ಮಾತನಾಡುತ್ತಿದ್ದೀರಿ, ಹು ಈಸ್ ಸ್ಪೀಕಿಂಗ್...


‘‘ವ್ಯಕ್ತಿಯೊಬ್ಬರು ಮಾಡಿದ್ದ ಕರೆ ಸ್ವೀಕರಿಸಿದ ಸಿಎಂ ಹಲೋ ಹಲೋ ಯಾರ್ ಮಾತ್ನಾಡ್ತಿದ್ದೀರಾ.. ಹು ಈಸ್ ಸ್ಪೀಕಿಂಗ್, ಮೇ ಐ ನೋ ಯುವರ್ ನೇಮ್.. ಕ್ಯಾನ್​ ಯು ಹಿಯರ್​ ಮೀ’’ ಎನ್ನುತ್ತಾ ಕನ್ನಡ ಇಂಗ್ಲಿಷ್​ ಭಾಷೆಯಲ್ಲಿ ಮಾತನಾಡಿದರು.

ಆತಂಕದಲ್ಲಿ ಕರೆ ಮಾಡಿದ್ದ ವ್ಯಕ್ತಿಯನ್ನು ಸಮಾಧಾನಪಡಿಸಿ ಸಮಸ್ಯೆ ಆಲಿಸಿದರು. ಉಸಿರಾಟದ ತೊಂದರೆಯಾಗುತ್ತಿದೆ ಹಾಗಾಗಿ ಐಸಿಯು ಬೆಡ್ ಬೇಕು ಎನ್ನುವ ಕೋರಿಕೆಯನ್ನು ಮುಂದಿಟ್ಟ ವ್ಯಕ್ತಿಗೆ ನಾಳೆಯೇ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದ ಸಿಎಂ ನಂತರ ಈಗಲೇ ಐಸಿಯು ಬೆಡದ ವ್ಯವಸ್ಥೆ ಮಾಡುತ್ತೇನೆ, ಈಗಲೇ ನೀವು ನಿಮ್ಮ ಸಂಬಂಧಿಯನ್ನು ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಸೋಂಕಿತ ವ್ಯಕ್ತಿಯ ಬಿಯು ಸಂಖ್ಯೆ ಪಡೆದು ಐಸಿಯು ಬೆಡ್ ಅಲಾಟ್ ಮಾಡಿದರು. ನಂತರ ನಿಗದಿತ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಲಭ್ಯವಾದ ಮಾಹಿತಿಯನ್ನು ಸಹಾಯವಾಣಿ ಸಿಬ್ಬಂದಿ ಮೂಲಕ ರವಾನಿಸಿದರು

ಮಾಧ್ಯಮಗಳಿಗೆ ಪೊಲೀಸರ ನಿರ್ಬಂಧ : ಸಿಎಂ ಬಿಎಸ್​​ವೈರಿಂದ ವಾರ್ ರೂಮ್ ಭೇಟಿ ಹಿನ್ನೆಲೆ ಸಿಎಂ ವಾರ್ ರೂಮ್ ಭೇಟಿಯ ಮಾಧ್ಯಮ ವರದಿಗೆ ಪೊಲೀಸರಿಂದ ನಿರ್ಬಂಧ ಎದುರಾಗಿದೆ. ಮಾಧ್ಯಮ ವಾಹನಗಳನ್ನು ಅಡ್ಡಗಟ್ಟಿದ ಪೊಲೀಸರು ಮಾಧ್ಯಮಗಳ ನಿರ್ಬಂಧಕ್ಕೆ ಯತ್ನಿಸಿದ್ದಾರೆ

Last Updated : May 24, 2021, 7:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.