ETV Bharat / entertainment

ವಿನಯ್​ ಉತ್ತಮ, ಸಂಗೀತಾ ಕಳಪೆ: 'ಸಮಯ ಉತ್ತರ ಕೊಡುತ್ತೆ' ಎಂದು ಜೈಲಿಗೆ ಹೋದ ಕ್ಯಾಪ್ಟನ್​

author img

By ETV Bharat Karnataka Team

Published : Dec 22, 2023, 6:28 PM IST

Bigg Boss Kannada Season-10: 'ಉತ್ತಮ-ಕಳಪೆಯ ಆಯ್ಕೆ ಮಾಡಿಯಾಯ್ತು ಮನೆಮಂದಿ!' ಎಂಬ ಶೀರ್ಷಿಕೆಯಡಿ ಇಂದಿನ ಬಿಗ್​ ಬಾಸ್​ ಸಂಚಿಕೆಯ ಪ್ರೋಮೋ ನೋಡಬಹುದು.

Bigg Boss Kannada season 10 todays promo
ವಿನಯ್​ ಉತ್ತಮ- ಸಂಗೀತಾ ಕಳಪೆ: 'ಸಮಯ ಉತ್ತರ ಕೊಡುತ್ತೆ' ಎಂದು ಜೈಲಿಗೆ ಹೋದ ಕ್ಯಾಪ್ಟನ್​

ಕನ್ನಡದ 'ಬಿಗ್​ ಬಾಸ್​' ರಿಯಾಲಿಟಿ ಶೋ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸ್ನೇಹಿತರಾಗಿದ್ದ ಸ್ಪರ್ಧಿಗಳು ಶತ್ರುಗಳಾದ್ರೆ, ಯಾವಾಗಲೂ ಕಿತ್ತಾಡುತ್ತಿದ್ದವರು ದಿಢೀರ್ ಫ್ರೆಂಡ್ಸ್​ ಆಗಿದ್ದಾರೆ. ಸದ್ಯ ಮನೆ ಮಂದಿಯೆಲ್ಲಾ ಸೇರಿ ಸಂಗೀತಾ ಒಬ್ಬರನ್ನೇ ಟಾರ್ಗೆಟ್​ ಮಾಡುತ್ತಿರುವಂತಿದೆ. ಇದಕ್ಕೆ ಉದಾಹರಣೆ ಎಂಬಂತೆ, ಈ ವಾರ ಕ್ಯಾಪ್ಟನ್​ ಆಗಿ ತಮ್ಮ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದರೂ ಕೂಡ ಸ್ಪರ್ಧಿಗಳೆಲ್ಲಾ ಅವರಿಗೆ ಕಳಪೆ ಪಟ್ಟ ಕೊಟ್ಟಿರುವುದು ಇಂದಿನ ಪ್ರೋಮೋದಲ್ಲಿದೆ.

'ಉತ್ತಮ-ಕಳಪೆಯ ಆಯ್ಕೆ ಮಾಡಿಯಾಯ್ತು ಮನೆಮಂದಿ!' ಎಂಬ ಶೀರ್ಷಿಕೆಯಲ್ಲಿ ಪ್ರೋಮೋ ಅನಾವರಣಗೊಂಡಿದೆ. ಈ ವಾರ ಸ್ಪರ್ಧಿಗಳಿಗೆ ಬಿಗ್​ ಬಾಸ್​ ವಿಶೇಷ ಟಾಸ್ಕ್​ವೊಂದನ್ನು ನೀಡಿದ್ದರು. ಇದಕ್ಕಾಗಿ ತನಿಷಾ ಮತ್ತು ಸಂಗೀತಾರನ್ನು ತಂಡದ ಮಾಲೀಕರನ್ನಾಗಿ ನಿಯೋಜಿಸಲಾಗಿತ್ತು. ಈ ಎರಡು ಕ್ಯಾಪ್ಟನ್​ಗಳು ತಮ್ಮ ಮನೆಯ ಸದಸ್ಯರ‌ನ್ನು ತಂಡಕ್ಕೆ ಹಣ ಕೊಟ್ಟು ಖರೀದಿಸುವ ಅವಕಾಶ ಕೊಡಲಾಗಿತ್ತು. ಇದರಂತೆ ಸಂಗೀತಾ ತಂಡವನ್ನು ಮನಃಪೂರ್ವಕವಾಗಿ ಸೇರಿಕೊಂಡ ಸ್ಪರ್ಧಿಗಳು ಕೊನೆಯಲ್ಲಿ ಅವರಿಗೆ ತಿರುಗಿ ಬಿದ್ದರು.

ಪ್ರತಿ ವಾರದ ಕೊನೆಯಲ್ಲಿ ಅಂದರೆ ಶುಕ್ರವಾರ ಈ ವಾರದ ಇಡೀ ಆಟವನ್ನು ಗಮನಿಸಿ ಒಬ್ಬರಿಗೆ ಉತ್ತಮ, ಮತ್ತೊಬ್ಬರಿಗೆ ಕಳಪೆ ಪಟ್ಟವನ್ನು ಕೊಡುವುದು ಬಿಗ್​ ಬಾಸ್​ ನಿಯಮ. ಅದರಂತೆ ಸ್ಪರ್ಧಿಗಳು ವಿನಯ್​ಗೆ ಉತ್ತಮ ಕೊಟ್ಟು, ಸಂಗೀತಾ ಅವರಿಗೆ ಕಳಪೆ ನೀಡಿದ್ದಾರೆ. ಮೈಕಲ್​, ವಿನಯ್​, ಕಾರ್ತಿಕ್​, ತುಕಾಲಿ ಸಂತೋಷ್​ ಸೇರಿದಂತೆ ಹೆಚ್ಚಿನವರು ಸಂಗೀತ ಅವರ ಹೆಸರನ್ನೇ ಕಳಪೆಗೆ ಸೂಚಿಸಿದ್ದಾರೆ. ಇದನ್ನು ನಗುಮುಖದಿಂದಲೇ ಸ್ವೀಕರಿಸಿದ ಸಂಗೀತಾ ಅವರು, 'ಇದಕ್ಕೆ ಸಮಯ ಉತ್ತರ ಕೊಡುತ್ತದೆ' ಎಂದು ಹೇಳಿ ಜೈಲಿಗೆ ಹೋಗಿದ್ದಾರೆ.

ಸಂಗೀತಾಗೆ 'ಕಳಪೆ' ನೀಡಿದ ಕಾರ್ತಿಕ್:​ ಎರಡನೇ ಬಾರಿಗೆ ಸಂಗೀತಾ ಅವರು ಮನೆ ಮಂದಿಯಿಂದ ಕಳಪೆ ಪಟ್ಟವನ್ನು ಸ್ವೀಕರಿಸಿದ್ದಾರೆ. ಆದರೆ, ಕಳೆದ ಬಾರಿ ಸಂಗೀತಾ ಜೊತೆಯಾಗಿ ಕಾರ್ತಿಕ್​ ನಿಂತಿದ್ದರು. ಸಂಗೀತಾ ಜೈಲಿನಿಂದ ಹೊರ ಬರುತ್ತಿದ್ದಂತೆ ಹೆಗಲ ಮೇಲೆ ಕೂರಿಸಿಕೊಂಡು ಸೆಲೆಬ್ರೇಶನ್​ ಮಾಡಿದ್ದರು. ಆದರೆ ಈ ಬಾರಿ ಕಾರ್ತಿಕ್​ ಅವರೇ ಸಂಗೀತಾಗೆ ಕಳಪೆ ಕೊಟ್ಟಿದ್ದಾರೆ. ಈಗಾಗಲೇ ಅವರಿಬ್ಬರ ಸ್ನೇಹ ಹಳಸಿ ಹೋಗಿದೆ. ಕಾರ್ತಿಕ್​ ಅವರು ಸಂಗೀತಾರ ವಿರುದ್ಧವಾಗಿಯೇ ಅಖಾಡಕ್ಕಿಳಿದಿದ್ದಾರೆ.

ನಾಳೆಯಿಂದ ವೀಕೆಂಡ್​ ಸಂಚಿಕೆಗಳು ಪ್ರಸಾರ ಆಗಲಿದೆ. ಈ ವಾರದ ಎಲ್ಲಾ ವಿಚಾರಗಳ ಚರ್ಚೆಗಳು ಕಿಚ್ಚ ಸುದೀಪ್​ ಜೊತೆ ನಡೆಯಲಿದೆ. ಇಂದು ಕಳಪೆ ಸ್ವೀಕರಿಸಿರುವ ಸಂಗೀತಾರ ಮುಂದಿನ ನಿರ್ಧಾರವೇನು? ಮನೆ ಮಂದಿಯ ಈ ನಿರ್ಧಾರದ ಬಗ್ಗೆ ವೀಕೆಂಡ್​ ಸಂಚಿಕೆಯಲ್ಲಿ ಸುದೀಪ್​ ಹೇಳೋದೇನು? ಎಂಬ ಬಗ್ಗೆ ತಿಳಿದುಕೊಳ್ಳಲು ಬಿಗ್‌ ಬಾಸ್ ಕನ್ನಡದ 24 ಗಂಟೆಯ ನೇರಪ್ರಸಾರವನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ನೋಡಬಹುದು. ನಿತ್ಯದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್​: 'ದಿನಸಿ' ವಿಚಾರದಲ್ಲೂ ಜಟಾಪಟಿ!

ಕನ್ನಡದ 'ಬಿಗ್​ ಬಾಸ್​' ರಿಯಾಲಿಟಿ ಶೋ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸ್ನೇಹಿತರಾಗಿದ್ದ ಸ್ಪರ್ಧಿಗಳು ಶತ್ರುಗಳಾದ್ರೆ, ಯಾವಾಗಲೂ ಕಿತ್ತಾಡುತ್ತಿದ್ದವರು ದಿಢೀರ್ ಫ್ರೆಂಡ್ಸ್​ ಆಗಿದ್ದಾರೆ. ಸದ್ಯ ಮನೆ ಮಂದಿಯೆಲ್ಲಾ ಸೇರಿ ಸಂಗೀತಾ ಒಬ್ಬರನ್ನೇ ಟಾರ್ಗೆಟ್​ ಮಾಡುತ್ತಿರುವಂತಿದೆ. ಇದಕ್ಕೆ ಉದಾಹರಣೆ ಎಂಬಂತೆ, ಈ ವಾರ ಕ್ಯಾಪ್ಟನ್​ ಆಗಿ ತಮ್ಮ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದರೂ ಕೂಡ ಸ್ಪರ್ಧಿಗಳೆಲ್ಲಾ ಅವರಿಗೆ ಕಳಪೆ ಪಟ್ಟ ಕೊಟ್ಟಿರುವುದು ಇಂದಿನ ಪ್ರೋಮೋದಲ್ಲಿದೆ.

'ಉತ್ತಮ-ಕಳಪೆಯ ಆಯ್ಕೆ ಮಾಡಿಯಾಯ್ತು ಮನೆಮಂದಿ!' ಎಂಬ ಶೀರ್ಷಿಕೆಯಲ್ಲಿ ಪ್ರೋಮೋ ಅನಾವರಣಗೊಂಡಿದೆ. ಈ ವಾರ ಸ್ಪರ್ಧಿಗಳಿಗೆ ಬಿಗ್​ ಬಾಸ್​ ವಿಶೇಷ ಟಾಸ್ಕ್​ವೊಂದನ್ನು ನೀಡಿದ್ದರು. ಇದಕ್ಕಾಗಿ ತನಿಷಾ ಮತ್ತು ಸಂಗೀತಾರನ್ನು ತಂಡದ ಮಾಲೀಕರನ್ನಾಗಿ ನಿಯೋಜಿಸಲಾಗಿತ್ತು. ಈ ಎರಡು ಕ್ಯಾಪ್ಟನ್​ಗಳು ತಮ್ಮ ಮನೆಯ ಸದಸ್ಯರ‌ನ್ನು ತಂಡಕ್ಕೆ ಹಣ ಕೊಟ್ಟು ಖರೀದಿಸುವ ಅವಕಾಶ ಕೊಡಲಾಗಿತ್ತು. ಇದರಂತೆ ಸಂಗೀತಾ ತಂಡವನ್ನು ಮನಃಪೂರ್ವಕವಾಗಿ ಸೇರಿಕೊಂಡ ಸ್ಪರ್ಧಿಗಳು ಕೊನೆಯಲ್ಲಿ ಅವರಿಗೆ ತಿರುಗಿ ಬಿದ್ದರು.

ಪ್ರತಿ ವಾರದ ಕೊನೆಯಲ್ಲಿ ಅಂದರೆ ಶುಕ್ರವಾರ ಈ ವಾರದ ಇಡೀ ಆಟವನ್ನು ಗಮನಿಸಿ ಒಬ್ಬರಿಗೆ ಉತ್ತಮ, ಮತ್ತೊಬ್ಬರಿಗೆ ಕಳಪೆ ಪಟ್ಟವನ್ನು ಕೊಡುವುದು ಬಿಗ್​ ಬಾಸ್​ ನಿಯಮ. ಅದರಂತೆ ಸ್ಪರ್ಧಿಗಳು ವಿನಯ್​ಗೆ ಉತ್ತಮ ಕೊಟ್ಟು, ಸಂಗೀತಾ ಅವರಿಗೆ ಕಳಪೆ ನೀಡಿದ್ದಾರೆ. ಮೈಕಲ್​, ವಿನಯ್​, ಕಾರ್ತಿಕ್​, ತುಕಾಲಿ ಸಂತೋಷ್​ ಸೇರಿದಂತೆ ಹೆಚ್ಚಿನವರು ಸಂಗೀತ ಅವರ ಹೆಸರನ್ನೇ ಕಳಪೆಗೆ ಸೂಚಿಸಿದ್ದಾರೆ. ಇದನ್ನು ನಗುಮುಖದಿಂದಲೇ ಸ್ವೀಕರಿಸಿದ ಸಂಗೀತಾ ಅವರು, 'ಇದಕ್ಕೆ ಸಮಯ ಉತ್ತರ ಕೊಡುತ್ತದೆ' ಎಂದು ಹೇಳಿ ಜೈಲಿಗೆ ಹೋಗಿದ್ದಾರೆ.

ಸಂಗೀತಾಗೆ 'ಕಳಪೆ' ನೀಡಿದ ಕಾರ್ತಿಕ್:​ ಎರಡನೇ ಬಾರಿಗೆ ಸಂಗೀತಾ ಅವರು ಮನೆ ಮಂದಿಯಿಂದ ಕಳಪೆ ಪಟ್ಟವನ್ನು ಸ್ವೀಕರಿಸಿದ್ದಾರೆ. ಆದರೆ, ಕಳೆದ ಬಾರಿ ಸಂಗೀತಾ ಜೊತೆಯಾಗಿ ಕಾರ್ತಿಕ್​ ನಿಂತಿದ್ದರು. ಸಂಗೀತಾ ಜೈಲಿನಿಂದ ಹೊರ ಬರುತ್ತಿದ್ದಂತೆ ಹೆಗಲ ಮೇಲೆ ಕೂರಿಸಿಕೊಂಡು ಸೆಲೆಬ್ರೇಶನ್​ ಮಾಡಿದ್ದರು. ಆದರೆ ಈ ಬಾರಿ ಕಾರ್ತಿಕ್​ ಅವರೇ ಸಂಗೀತಾಗೆ ಕಳಪೆ ಕೊಟ್ಟಿದ್ದಾರೆ. ಈಗಾಗಲೇ ಅವರಿಬ್ಬರ ಸ್ನೇಹ ಹಳಸಿ ಹೋಗಿದೆ. ಕಾರ್ತಿಕ್​ ಅವರು ಸಂಗೀತಾರ ವಿರುದ್ಧವಾಗಿಯೇ ಅಖಾಡಕ್ಕಿಳಿದಿದ್ದಾರೆ.

ನಾಳೆಯಿಂದ ವೀಕೆಂಡ್​ ಸಂಚಿಕೆಗಳು ಪ್ರಸಾರ ಆಗಲಿದೆ. ಈ ವಾರದ ಎಲ್ಲಾ ವಿಚಾರಗಳ ಚರ್ಚೆಗಳು ಕಿಚ್ಚ ಸುದೀಪ್​ ಜೊತೆ ನಡೆಯಲಿದೆ. ಇಂದು ಕಳಪೆ ಸ್ವೀಕರಿಸಿರುವ ಸಂಗೀತಾರ ಮುಂದಿನ ನಿರ್ಧಾರವೇನು? ಮನೆ ಮಂದಿಯ ಈ ನಿರ್ಧಾರದ ಬಗ್ಗೆ ವೀಕೆಂಡ್​ ಸಂಚಿಕೆಯಲ್ಲಿ ಸುದೀಪ್​ ಹೇಳೋದೇನು? ಎಂಬ ಬಗ್ಗೆ ತಿಳಿದುಕೊಳ್ಳಲು ಬಿಗ್‌ ಬಾಸ್ ಕನ್ನಡದ 24 ಗಂಟೆಯ ನೇರಪ್ರಸಾರವನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ನೋಡಬಹುದು. ನಿತ್ಯದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್​: 'ದಿನಸಿ' ವಿಚಾರದಲ್ಲೂ ಜಟಾಪಟಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.