ETV Bharat / entertainment

ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನೆ ಕೇಳಿದ 'ಬುದ್ದಿವಂತ': ಅಷ್ಟಕ್ಕೂ ಉಪ್ಪಿ ಕೇಳಿದ್ದೇನು?

author img

By

Published : Sep 26, 2019, 4:16 PM IST

Updated : Jan 18, 2023, 1:20 PM IST

ಸದ್ಯ ಪ್ರಜಾಪ್ರಭುತ್ವದ ಬಗ್ಗೆ ಪ್ರಜೆಗಳಿಗೆ ಪ್ರಶ್ನೆ ಕೇಳಿರುವ ಉಪೇಂದ್ರ,  ನಿಜವಾದ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾದ ನಮಗೆ ಇರಬೇಕಾದ ಬಹಳ ಮುಖ್ಯವಾದ  ಗುಣ ಯಾವುದು ? ಎಂದು ಕೇಳಿದ್ದಾರೆ.  ಹೀಗೆ ಉಪೇಂದ್ರ ಕೇಳಿರುವ ಪ್ರಶ್ನೆಗೆ ಅಭಿಮಾನಿಗಳು ಕಮೆಂಟ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಉತ್ತಮ ಪ್ರಜಾಕೀಯ ಪಕ್ಷ
ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನೆ ಕೇಳಿದ "ಬುದ್ದಿವಂತ" ಉಪೇಂದ್ರ
  • #upp #prajaakeeya ನಿಜವಾದ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾದ ನಮಗೆ ಇರಬೇಕಾದ ಬಹಳ ಮುಖ್ಯವಾದ ಗುಣ ಯಾವುದು ? pic.twitter.com/CHE5JANjvy

    — Upendra (@nimmaupendra) September 26, 2019 " class="align-text-top noRightClick twitterSection" data=" ">

ಕನ್ನಡ ಚಿತ್ರರಂಗ ಹಾಗೂ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ನಟ, ನಿರ್ದೇಶಕ ಉಪೇಂದ್ರ ಯಾವುದೇ ಕೆಲಸ ಮಾಡಿದರೂ ಡಿಫರೆಂಟ್​ ಆಗಿ ಮಾಡ್ತಾ ಇರ್ತಾರೆ. ತಮ್ಮ ಸಿನಿಮಾಗಳೂ ಕೂಡ ಇದಕ್ಕೆ ಹೊರತಾಗಿಲ್ಲ.

ಉಪೇಂದ್ರ ಸಿನಿಮಾಗಳು ಅಂದರೆ ಸಾಕು ಅದರಲ್ಲಿ ಏನಾದರೂ ಒಂದು ಟ್ವಿಸ್ಟ್​ ಇದ್ದು, ಸಮಾಜವನ್ನು ತಿದ್ದುವ ಕೆಲವು ಅಂಶಗಳು ಅಡಕವಾಗಿರುತ್ತವೆ ಎಂದು ಜನ ತಿಳಿದಿದ್ದಾರೆ.

ಇದೀಗ ಉತ್ತಮ ಪ್ರಜಾಕೀಯ ಪಕ್ಷ ಕಟ್ಟಿರುವ ಉಪೇಂದ್ರ ತಮ್ಮ ಪಕ್ಷದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಪ್ರಜಾ ಪ್ರಭುತ್ವ ಹೇಗಿರಬೇಕು ಎಂಬುದರ ಬಗ್ಗೆ ತಮ್ಮ ಸಂದರ್ಶನದಲ್ಲಿ ಹೇಳುತ್ತಲೇ ಬಂದಿದ್ದಾರೆ. ಇಲ್ಲಿ ಯಾರೂ ನಾಯಕರಲ್ಲ. ರಾಜಕಾರಣಿಗಳನ್ನು ನೀವೇಕೆ ನಾಯಕರು ಎಂದು ಬಿಂಬಿಸುತ್ತೀರಿ. ನಿಮ್ಮಿಂದ ಮತ ಪಡೆದು ನಿಮ್ಮ ಕೆಲಸ ಮಾಡಲು ಬಂದಿರುವ ನೌಕರರು ಎಂದು ಹೇಳುತ್ತಲೇ ಇದ್ದಾರೆ.

ಸದ್ಯ ಪ್ರಜಾಪ್ರಭುತ್ವದ ಬಗ್ಗೆ ಪ್ರಜೆಗಳಿಗೆ ಪ್ರಶ್ನೆ ಕೇಳಿರುವ ಉಪೇಂದ್ರ, ನಿಜವಾದ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾದ ನಮಗೆ ಇರಬೇಕಾದ ಬಹಳ ಮುಖ್ಯವಾದ ಗುಣ ಯಾವುದು ? ಎಂದು ಕೇಳಿದ್ದಾರೆ. ಅಲ್ಲದೇ ಟ್ವೀಟ್​ನಲ್ಲಿ ಅವರದ್ದೇ ಒಂದು ಫೋಟೋ ಹಾಕಿದ್ದು, ಅದರಲ್ಲಿ ಅರಿವೇ ಗುರು ಎಂದು ಬರೆದಿದ್ದಾರೆ. ಇನ್ನು ಆ ಫೋಟೋದಲ್ಲಿ ತಮ್ಮ ಹಣೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿಕೊಂಡಿದ್ದಾರೆ.

ಹೀಗೆ ಉಪೇಂದ್ರ ಕೇಳಿರುವ ಪ್ರಶ್ನೆಗೆ ಅಭಿಮಾನಿಗಳು ಕಮೆಂಟ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ.

  • #upp #prajaakeeya ನಿಜವಾದ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾದ ನಮಗೆ ಇರಬೇಕಾದ ಬಹಳ ಮುಖ್ಯವಾದ ಗುಣ ಯಾವುದು ? pic.twitter.com/CHE5JANjvy

    — Upendra (@nimmaupendra) September 26, 2019 " class="align-text-top noRightClick twitterSection" data=" ">

ಕನ್ನಡ ಚಿತ್ರರಂಗ ಹಾಗೂ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ನಟ, ನಿರ್ದೇಶಕ ಉಪೇಂದ್ರ ಯಾವುದೇ ಕೆಲಸ ಮಾಡಿದರೂ ಡಿಫರೆಂಟ್​ ಆಗಿ ಮಾಡ್ತಾ ಇರ್ತಾರೆ. ತಮ್ಮ ಸಿನಿಮಾಗಳೂ ಕೂಡ ಇದಕ್ಕೆ ಹೊರತಾಗಿಲ್ಲ.

ಉಪೇಂದ್ರ ಸಿನಿಮಾಗಳು ಅಂದರೆ ಸಾಕು ಅದರಲ್ಲಿ ಏನಾದರೂ ಒಂದು ಟ್ವಿಸ್ಟ್​ ಇದ್ದು, ಸಮಾಜವನ್ನು ತಿದ್ದುವ ಕೆಲವು ಅಂಶಗಳು ಅಡಕವಾಗಿರುತ್ತವೆ ಎಂದು ಜನ ತಿಳಿದಿದ್ದಾರೆ.

ಇದೀಗ ಉತ್ತಮ ಪ್ರಜಾಕೀಯ ಪಕ್ಷ ಕಟ್ಟಿರುವ ಉಪೇಂದ್ರ ತಮ್ಮ ಪಕ್ಷದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಪ್ರಜಾ ಪ್ರಭುತ್ವ ಹೇಗಿರಬೇಕು ಎಂಬುದರ ಬಗ್ಗೆ ತಮ್ಮ ಸಂದರ್ಶನದಲ್ಲಿ ಹೇಳುತ್ತಲೇ ಬಂದಿದ್ದಾರೆ. ಇಲ್ಲಿ ಯಾರೂ ನಾಯಕರಲ್ಲ. ರಾಜಕಾರಣಿಗಳನ್ನು ನೀವೇಕೆ ನಾಯಕರು ಎಂದು ಬಿಂಬಿಸುತ್ತೀರಿ. ನಿಮ್ಮಿಂದ ಮತ ಪಡೆದು ನಿಮ್ಮ ಕೆಲಸ ಮಾಡಲು ಬಂದಿರುವ ನೌಕರರು ಎಂದು ಹೇಳುತ್ತಲೇ ಇದ್ದಾರೆ.

ಸದ್ಯ ಪ್ರಜಾಪ್ರಭುತ್ವದ ಬಗ್ಗೆ ಪ್ರಜೆಗಳಿಗೆ ಪ್ರಶ್ನೆ ಕೇಳಿರುವ ಉಪೇಂದ್ರ, ನಿಜವಾದ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾದ ನಮಗೆ ಇರಬೇಕಾದ ಬಹಳ ಮುಖ್ಯವಾದ ಗುಣ ಯಾವುದು ? ಎಂದು ಕೇಳಿದ್ದಾರೆ. ಅಲ್ಲದೇ ಟ್ವೀಟ್​ನಲ್ಲಿ ಅವರದ್ದೇ ಒಂದು ಫೋಟೋ ಹಾಕಿದ್ದು, ಅದರಲ್ಲಿ ಅರಿವೇ ಗುರು ಎಂದು ಬರೆದಿದ್ದಾರೆ. ಇನ್ನು ಆ ಫೋಟೋದಲ್ಲಿ ತಮ್ಮ ಹಣೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿಕೊಂಡಿದ್ದಾರೆ.

ಹೀಗೆ ಉಪೇಂದ್ರ ಕೇಳಿರುವ ಪ್ರಶ್ನೆಗೆ ಅಭಿಮಾನಿಗಳು ಕಮೆಂಟ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ.

Last Updated : Jan 18, 2023, 1:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.