ETV Bharat / entertainment

'ದ ಎಲಿಫೆಂಟ್​ ವಿಸ್ಪರರ್ಸ್': ಮರಿ ಆನೆ ನೋಡಲು ಮುದುಮಲೈ ಶಿಬಿರಕ್ಕೆ ಪ್ರವಾಸಿಗರ ದಂಡು

author img

By

Published : Mar 14, 2023, 10:55 AM IST

'ದ ಎಲಿಫೆಂಟ್​ ವಿಸ್ಪರರ್ಸ್' ಸಾಕ್ಷ್ಯಚಿತ್ರದಲ್ಲಿ ಪ್ರಸಿದ್ಧವಾದ ಮರಿ ಆನೆಯನ್ನು ವೀಕ್ಷಿಸಲು ಪ್ರವಾಸಿಗರು ಮುದುಮಲೈ ಆನೆಶಿಬಿರಕ್ಕೆ ಆಗಮಿಸುತ್ತಿದ್ದಾರೆ.

Tourist
"ದ ಎಲಿಫೆಂಟ್​ ವಿಸ್ಪರರ್ಸ್"

ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರತಿಷ್ಟಿತ ಆಸ್ಕರ್​ ಪ್ರಶಸ್ತಿಯನ್ನು ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ 'ದ ಎಲಿಫೆಂಟ್​ ವಿಸ್ಪರರ್ಸ್' ಪಡೆದುಕೊಂಡಿದೆ. ಅನಾಥ ಆನೆಯನ್ನು ದತ್ತು ತೆಗೆದುಕೊಳ್ಳುವ ಕುಟುಂಬದ ಕಹಾನಿಯೇ ಸಾಕ್ಷ್ಯಚಿತ್ರದ ಕಥಾವಸ್ತು.​ ಈ ಡಾಕ್ಯುಮೆಂಟರಿ ಮೂಲಕ ಪ್ರಸಿದ್ಧವಾದ ಮರಿ ಆನೆಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ತಮಿಳುನಾಡಿನ ನೀಲಗಿರಿ ಪರ್ವತಗಳ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ಹಳೆಯದಾದ ತೆಪ್ಪಕಾಡು ಆನೆ ಶಿಬಿರಕ್ಕೆ ಆಗಮಿಸುತ್ತಿದ್ದಾರೆ.

ನೂರಾರು ಗಜ ಪ್ರೇಮಿಗಳು ಮುದುಮಲೈಗೆ ಭೇಟಿ ನೀಡುತ್ತಿದ್ದಾರೆ. ಕಿರು ಚಿತ್ರದಲ್ಲಿ ನೋಡಿದ ಮರಿ ಆನೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. "ಇದೊಂದು ಉತ್ತಮ ಕ್ಷಣ. ಇಲ್ಲಿಗೆ ಬಂದಿರುವುದು ನಿಜಕ್ಕೂ ಸಂತೋಷ ತಂದಿದೆ. ಆನೆ ನನ್ನ ನೆಚ್ಚಿನ ಪ್ರಾಣಿ ಮತ್ತು ಈ ಆನೆಯ ಡಾಕ್ಯುಮೆಂಟರಿ ಆಸ್ಕರ್​ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದು ನನಗೆ ಖುಷಿಯನ್ನು ತಂದು ಕೊಟ್ಟಿದೆ" ಎಂದು ಪ್ರವಾಸಿಗರೊಬ್ಬರು ತಮ್ಮ ಹರ್ಷ ವ್ಯಕ್ತಪಡಿಸಿದರು.

ತಾಯಿನಾಡು ಭಾರತಕ್ಕೆ ಧನ್ಯವಾದ: ಆಸ್ಕರ್‌ ಪ್ರಶಸ್ತಿಯನ್ನು ಸ್ವೀಕರಿಸಿ ನಿನ್ನೆ ಮಾತನಾಡಿದ್ದ ಕಾರ್ತಿಕಿ ಗೊನ್ಸಾಲ್ವಿಸ್, "ನಮ್ಮ ಮತ್ತು ನೈಸರ್ಗಿಕ ಪ್ರಪಂಚದ ನಡುವಿನ ಪವಿತ್ರ ಬಾಂಧವ್ಯ ಹಾಗೂ ಸ್ಥಳೀಯ ಸಮುದಾಯಗಳ ಗೌರವಕ್ಕಾಗಿ ಮತ್ತು ಇತರೆ ಜೀವಿಗಳ ಕುರಿತು ಸಹಾನುಭೂತಿ, ಸಹಬಾಳ್ವೆಯ ಕುರಿತು ಮಾತನಾಡಲು ನಾನು ಇಂದು ಇಲ್ಲಿ ನಿಂತಿದ್ದೇನೆ. ನನ್ನ ಈ ಸಾಕ್ಷ್ಯಚಿತ್ರವನ್ನು ಗುರುತಿಸಿದಕ್ಕಾಗಿ ಧನ್ಯವಾದಗಳು ಅಕಾಡೆಮಿ. ಜೊತೆಗೆ ನನ್ನ ಇಡೀ ತಂಡಕ್ಕೆ ಮತ್ತು ತಾಯಿನಾಡು ಭಾರತಕ್ಕೆ ಕೃಜ್ಞತೆಗಳು" ಎಂದು ಹೇಳಿದ್ದರು.

ಈ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕಾಗಿ ಕಾರ್ತಿಕಿ ಗೊನ್ಸಾಲ್ವೆಸ್ ಅವರು ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ 5 ವರ್ಷಗಳ ಕಾಲ ತಂಗಿದ್ದರಂತೆ. ಈ ಕಿರುಚಿತ್ರ ಅನಾಥ ಆನೆ ರಘು ಮತ್ತು ಅದರ ಪಾಲಕರಾದ ಮಾವುತ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ನಡುವಿನ ಅಮೂಲ್ಯವಾದ ಬಾಂಧವ್ಯವನ್ನು ನಿರೂಪಿಸುತ್ತದೆ.

ಇದನ್ನೂ ಓದಿ: ಏಷ್ಯಾದ ಹಳೆಯ ಆನೆ ಶಿಬಿರದಲ್ಲಿ ಆಸ್ಕರ್‌ ವಿಜೇತ 'ದ ಎಲಿಫೆಂಟ್ ವಿಸ್ಪರರ್ಸ್' ನಿರ್ಮಾಣ

'ದ ಎಲಿಫೆಂಟ್ ವಿಸ್ಪರರ್ಸ್' ಜೊತೆಗೆ 'ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ‘ಹಾಲ್‌ ಔಟ್’, ‘ಹೌ ಡು ಯು ಮೆಷರ್‌ ಎ ಈಯರ್?' ಮತ್ತು 'ದಿ ಮಾರ್ಥಾ ಮಿಚೆಲ್ ಎಫೆಕ್ಟ್’ ಹಾಗೂ ‘ಸ್ಟ್ರೇಂಜರ್ ಅಟ್ ದಿ ಗೇಟ್’ ಡಾಕ್ಯುಮೆಂಟರಿಗಳು ನಾಮನಿರ್ದೇಶನಗೊಂಡಿದ್ದವು. ಅಂತಿಮವಾಗಿ ಭಾರತದ 'ದ ಎಲಿಫೆಂಟ್ ವಿಸ್ಪರರ್ಸ್' ಆಸ್ಕರ್​ ಪ್ರಶಸ್ತಿ ಪಡೆದುಕೊಂಡಿದೆ.

'ದ ಎಲಿಫೆಂಟ್​ ವಿಸ್ಪರರ್ಸ್' ಕಥೆ ಏನು?: ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಂಪತಿಯ ಕಥೆ ಇದರಲ್ಲಿದೆ. ಆನೆಗಳು ಮತ್ತು ಅವುಗಳ ಪಾಲಕರ ನಡುವಿನ ಅವಿನಾಭಾವ ಸಂಬಂಧವನ್ನು ಮನಸ್ಸಿಗೆ ನಾಟುವಂತೆ ಇದರಲ್ಲಿ ಚಿತ್ರಿಸಲಾಗಿದೆ. ಭಾವನೆಯ ಜೊತೆಗೆ ಪ್ರಾಣಿಗಳು ಮತ್ತು ಮಾನವನ ನಡುವಿನ ಪ್ರೀತಿಯ ಸೆಳೆತ ಕಣ್ಣಿಗೆ ಕಟ್ಟುವಂತೆ ಸಾಕ್ಷ್ಯಚಿತ್ರದಲ್ಲಿ ಮೂಡಿಬಂದಿದೆ. ಒಟ್ಟು 41 ನಿಮಿಷಗಳ ಡಾಕ್ಯುಮೆಂಟರಿ ಇದಾಗಿದೆ.

ಇದನ್ನೂ ಓದಿ: 'ಪ್ರಧಾನಿ ಮೋದಿ ಕರೆ ಮಾಡಿ ರಾಜ್ಯಸಭಾ ಸ್ಥಾನ ನೀಡಿದರು': ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​

ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರತಿಷ್ಟಿತ ಆಸ್ಕರ್​ ಪ್ರಶಸ್ತಿಯನ್ನು ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ 'ದ ಎಲಿಫೆಂಟ್​ ವಿಸ್ಪರರ್ಸ್' ಪಡೆದುಕೊಂಡಿದೆ. ಅನಾಥ ಆನೆಯನ್ನು ದತ್ತು ತೆಗೆದುಕೊಳ್ಳುವ ಕುಟುಂಬದ ಕಹಾನಿಯೇ ಸಾಕ್ಷ್ಯಚಿತ್ರದ ಕಥಾವಸ್ತು.​ ಈ ಡಾಕ್ಯುಮೆಂಟರಿ ಮೂಲಕ ಪ್ರಸಿದ್ಧವಾದ ಮರಿ ಆನೆಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ತಮಿಳುನಾಡಿನ ನೀಲಗಿರಿ ಪರ್ವತಗಳ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ಹಳೆಯದಾದ ತೆಪ್ಪಕಾಡು ಆನೆ ಶಿಬಿರಕ್ಕೆ ಆಗಮಿಸುತ್ತಿದ್ದಾರೆ.

ನೂರಾರು ಗಜ ಪ್ರೇಮಿಗಳು ಮುದುಮಲೈಗೆ ಭೇಟಿ ನೀಡುತ್ತಿದ್ದಾರೆ. ಕಿರು ಚಿತ್ರದಲ್ಲಿ ನೋಡಿದ ಮರಿ ಆನೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. "ಇದೊಂದು ಉತ್ತಮ ಕ್ಷಣ. ಇಲ್ಲಿಗೆ ಬಂದಿರುವುದು ನಿಜಕ್ಕೂ ಸಂತೋಷ ತಂದಿದೆ. ಆನೆ ನನ್ನ ನೆಚ್ಚಿನ ಪ್ರಾಣಿ ಮತ್ತು ಈ ಆನೆಯ ಡಾಕ್ಯುಮೆಂಟರಿ ಆಸ್ಕರ್​ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದು ನನಗೆ ಖುಷಿಯನ್ನು ತಂದು ಕೊಟ್ಟಿದೆ" ಎಂದು ಪ್ರವಾಸಿಗರೊಬ್ಬರು ತಮ್ಮ ಹರ್ಷ ವ್ಯಕ್ತಪಡಿಸಿದರು.

ತಾಯಿನಾಡು ಭಾರತಕ್ಕೆ ಧನ್ಯವಾದ: ಆಸ್ಕರ್‌ ಪ್ರಶಸ್ತಿಯನ್ನು ಸ್ವೀಕರಿಸಿ ನಿನ್ನೆ ಮಾತನಾಡಿದ್ದ ಕಾರ್ತಿಕಿ ಗೊನ್ಸಾಲ್ವಿಸ್, "ನಮ್ಮ ಮತ್ತು ನೈಸರ್ಗಿಕ ಪ್ರಪಂಚದ ನಡುವಿನ ಪವಿತ್ರ ಬಾಂಧವ್ಯ ಹಾಗೂ ಸ್ಥಳೀಯ ಸಮುದಾಯಗಳ ಗೌರವಕ್ಕಾಗಿ ಮತ್ತು ಇತರೆ ಜೀವಿಗಳ ಕುರಿತು ಸಹಾನುಭೂತಿ, ಸಹಬಾಳ್ವೆಯ ಕುರಿತು ಮಾತನಾಡಲು ನಾನು ಇಂದು ಇಲ್ಲಿ ನಿಂತಿದ್ದೇನೆ. ನನ್ನ ಈ ಸಾಕ್ಷ್ಯಚಿತ್ರವನ್ನು ಗುರುತಿಸಿದಕ್ಕಾಗಿ ಧನ್ಯವಾದಗಳು ಅಕಾಡೆಮಿ. ಜೊತೆಗೆ ನನ್ನ ಇಡೀ ತಂಡಕ್ಕೆ ಮತ್ತು ತಾಯಿನಾಡು ಭಾರತಕ್ಕೆ ಕೃಜ್ಞತೆಗಳು" ಎಂದು ಹೇಳಿದ್ದರು.

ಈ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕಾಗಿ ಕಾರ್ತಿಕಿ ಗೊನ್ಸಾಲ್ವೆಸ್ ಅವರು ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ 5 ವರ್ಷಗಳ ಕಾಲ ತಂಗಿದ್ದರಂತೆ. ಈ ಕಿರುಚಿತ್ರ ಅನಾಥ ಆನೆ ರಘು ಮತ್ತು ಅದರ ಪಾಲಕರಾದ ಮಾವುತ ದಂಪತಿ ಬೊಮ್ಮನ್ ಮತ್ತು ಬೆಳ್ಳಿ ನಡುವಿನ ಅಮೂಲ್ಯವಾದ ಬಾಂಧವ್ಯವನ್ನು ನಿರೂಪಿಸುತ್ತದೆ.

ಇದನ್ನೂ ಓದಿ: ಏಷ್ಯಾದ ಹಳೆಯ ಆನೆ ಶಿಬಿರದಲ್ಲಿ ಆಸ್ಕರ್‌ ವಿಜೇತ 'ದ ಎಲಿಫೆಂಟ್ ವಿಸ್ಪರರ್ಸ್' ನಿರ್ಮಾಣ

'ದ ಎಲಿಫೆಂಟ್ ವಿಸ್ಪರರ್ಸ್' ಜೊತೆಗೆ 'ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ‘ಹಾಲ್‌ ಔಟ್’, ‘ಹೌ ಡು ಯು ಮೆಷರ್‌ ಎ ಈಯರ್?' ಮತ್ತು 'ದಿ ಮಾರ್ಥಾ ಮಿಚೆಲ್ ಎಫೆಕ್ಟ್’ ಹಾಗೂ ‘ಸ್ಟ್ರೇಂಜರ್ ಅಟ್ ದಿ ಗೇಟ್’ ಡಾಕ್ಯುಮೆಂಟರಿಗಳು ನಾಮನಿರ್ದೇಶನಗೊಂಡಿದ್ದವು. ಅಂತಿಮವಾಗಿ ಭಾರತದ 'ದ ಎಲಿಫೆಂಟ್ ವಿಸ್ಪರರ್ಸ್' ಆಸ್ಕರ್​ ಪ್ರಶಸ್ತಿ ಪಡೆದುಕೊಂಡಿದೆ.

'ದ ಎಲಿಫೆಂಟ್​ ವಿಸ್ಪರರ್ಸ್' ಕಥೆ ಏನು?: ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಂಪತಿಯ ಕಥೆ ಇದರಲ್ಲಿದೆ. ಆನೆಗಳು ಮತ್ತು ಅವುಗಳ ಪಾಲಕರ ನಡುವಿನ ಅವಿನಾಭಾವ ಸಂಬಂಧವನ್ನು ಮನಸ್ಸಿಗೆ ನಾಟುವಂತೆ ಇದರಲ್ಲಿ ಚಿತ್ರಿಸಲಾಗಿದೆ. ಭಾವನೆಯ ಜೊತೆಗೆ ಪ್ರಾಣಿಗಳು ಮತ್ತು ಮಾನವನ ನಡುವಿನ ಪ್ರೀತಿಯ ಸೆಳೆತ ಕಣ್ಣಿಗೆ ಕಟ್ಟುವಂತೆ ಸಾಕ್ಷ್ಯಚಿತ್ರದಲ್ಲಿ ಮೂಡಿಬಂದಿದೆ. ಒಟ್ಟು 41 ನಿಮಿಷಗಳ ಡಾಕ್ಯುಮೆಂಟರಿ ಇದಾಗಿದೆ.

ಇದನ್ನೂ ಓದಿ: 'ಪ್ರಧಾನಿ ಮೋದಿ ಕರೆ ಮಾಡಿ ರಾಜ್ಯಸಭಾ ಸ್ಥಾನ ನೀಡಿದರು': ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.