ETV Bharat / entertainment

ಹಸಿವಿನಿಂದ ಕಂಗೆಟ್ಟ ಬಿಗ್‌ ಬಾಸ್‌ ಮನೆಮಂದಿಗೆ ಸಿಕ್ತು ಕಿಚ್ಚನ ಕೈಯಡುಗೆ: ವಿಡಿಯೋ ನೋಡಿ

author img

By ETV Bharat Karnataka Team

Published : Dec 15, 2023, 5:37 PM IST

ಬಿಗ್ ಬಾಸ್​ ಸ್ಪರ್ಧಿಗಳಿಗೆ ನಿರೂಪಕ ಸುದೀಪ್​ ಅವರು ತಾವೇ ಕೈಯಾರೆ ತಯಾರಿಸಿದ ಅಡುಗೆಯನ್ನು ಕಳುಹಿಸಿಕೊಟ್ಟಿದ್ದಾರೆ.

Bigg Boss
ಬಿಗ್​ ಬಾಸ್

ಮುದ್ದೆಯೂಟದ ನಂತರ ಬಿಗ್‌ ಬಾಸ್ ಮನೆಯ ಗ್ಯಾಸ್ ಕನೆಕ್ಷನ್ ಡಿಸ್‌ಕನೆಕ್ಟ್‌ ಆದ ಹಿನ್ನೆಲೆಯಲ್ಲಿ ಇಡೀ ಮನೆ ಸದಸ್ಯರೆಲ್ಲಾ ಕಂಗಾಲಾಗಿದ್ದರು. ರಾತ್ರಿಯೆಲ್ಲಾ ಹಸಿದೇ ಇರಬೇಕಾಗುತ್ತದೆ ಎಂಬ ಕಾರಣಕ್ಕೆ ಮನೆಮಂದಿಯಲ್ಲಿ ಅಸಮಾಧಾನದ ಹೊಗೆಯಾಡಲಾರಂಭಿಸಿತ್ತು. ಆದರೆ ಹಸಿವಿನಿಂದ ಕುಳಿತ ಮನೆ ಮಂದಿಗೆ ಎಂದೆಂದಿಗೂ ಮರೆಯಲಾಗದಂಥ ಸಖತ್ ಸ್ಪೆಷಲ್ ಸರ್ಪೈಸ್‌ ಸಿಕ್ಕಿದೆ. ಆ ಸರ್ಪೈಸ್‌ ಏನು ಎಂಬುದು ಜಿಯೋಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಬಹಿರಂಗವಾಗಿದೆ. 'ಮನೆಮಂದಿಗೆ ಸಿಕ್ತು ಕಿಚ್ಚನ ಕೈರುಚಿ ಸವಿಯೋ ಸೌಭಾಗ್ಯ!' ಎಂಬ ಶೀರ್ಷಿಕೆಯಡಿ ಕನ್ನಡ ಬಿಗ್​ ಬಾಸ್​ ಪ್ರೋಮೋ ಅನಾವರಣಗೊಂಡಿದೆ. ಇದು ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಕಿಚ್ಚನ ಕೈಯಡುಗೆ: ಹಸಿದವರಿಗೆ ಊಟ ಸಿಕ್ಕರೆ ಅದಕ್ಕಿಂತ ಹೆಚ್ಚಿನ ಖುಷಿಯೇನು?. ಈ ಖುಷಿ ಬಿಗ್‌ ಬಾಸ್ ಸದಸ್ಯರಿಗೆ ದಕ್ಕಿದೆ. ಊಟ ಎಷ್ಟು ಮುಖ್ಯವೋ, ಎಷ್ಟೋ ಬಾರಿ ಅಡುಗೆ ಮಾಡಿದ ಕೈಗಳೂ ಅಷ್ಟೇ ಮುಖ್ಯವಾಗುತ್ತವೆ. ಯಾಕೆಂದರೆ ಅಡುಗೆ ಮಾಡುವವರ ಅಕ್ಕರೆ, ಪ್ರೀತಿ, ಅವರ ವ್ಯಕ್ತಿತ್ವವೂ ಅಡುಗೆಯಲ್ಲಿ ಸೇರಿರುತ್ತದೆ. ಹಾಗಾಗಿಯೇ ಬಿಗ್‌ ಬಾಸ್‌ ಮನೆ ಮಂದಿಗೆ ಸಿಕ್ಕ ಅಡುಗೆ ಅಷ್ಟು ಸ್ಪೆಷಲ್ ಆಗಿದೆ.

ಮನೆಯ ಸದಸ್ಯರಿಗೆಲ್ಲ ತಮ್ಮ ಕೈಯ್ಯಾರೆ ರೆಡಿ ಮಾಡಿದ ಅಡುಗೆಯನ್ನು ಕಿಚ್ಚ ಸುದೀಪ್ ಕಳುಹಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಊಟದ ಜೊತೆಗೆ ಒಂದೊಂದು ಪತ್ರವನ್ನೂ ಕೂಡ ಬರೆದಿಟ್ಟಿದ್ದಾರೆ. ಈ ಪತ್ರದಲ್ಲಿ ಆಯಾ ಸ್ಪರ್ಧಿಗಳಿಗೆ ಅತ್ಯಮೂಲ್ಯವಾದ ಸಲಹೆಗಳಿವೆ.

ಇದನ್ನೂ ಓದಿ: ಬಿಗ್​​ ಬಾಸ್​ ಮನೆಯಲ್ಲಿ ಮುದ್ದೆ ತಂದ ಆಪತ್ತು...! ವಿಡಿಯೋ ನೋಡಿ

ಇದು ಸರ್ಪೈಸ್‌. ಇಂದಿನ ಅಡುಗೆ, ಕಿಚ್ಚನ ಕೈಯಡುಗೆ ಎಂದು ಹೇಳಿರುವ ಕಿಚ್ಚನ ಮಾತುಗಳೂ ಪ್ರೋಮೋದಲ್ಲಿದೆ. ಕಿಚ್ಚನ ಕಿವಿಮಾತಿನೊಟ್ಟಿಗೆ ಬಂದ ಅಡುಗೆಯನ್ನು ನೋಡಿ ಮನೆ ಮಂದಿಯೆಲ್ಲ ಕುಣಿದು ಕುಪ್ಪಳಿಸುತ್ತಾರೆ. ಒಬ್ಬೊಬ್ಬರೂ ಕ್ಯಾಮರಾದೆದುರು ಬಂದು ಧನ್ಯವಾದ ತಿಳಿಸಿದ್ದಾರೆ. ಇದೊಂದು ಮರೆಯಲಾಗದ ಕೊಡುಗೆ ಎಂದು ಎಲ್ಲಾ ಸ್ಪರ್ಧಿಗಳಿಗೂ ಅನ್ನಿಸಿದೆ. ಇಷ್ಟೊತ್ತು ಹಸಿದುಕೊಂಡಿದ್ದಕ್ಕೂ ಸಾರ್ಥಕವಾಯಿತು ಎಂಬ ಭಾವ ಅವರಲ್ಲಿ ಮೂಡಿತು.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ದೀಪಿಕಾ ಪಡುಕೋಣೆ - ವಿಡಿಯೋ ನೋಡಿ

ಮುದ್ದೆ ತಂದ ಆಪತ್ತು!: ಇಂದು ಬೆಳಿಗ್ಗಿನ ಪ್ರೋಮೋದಲ್ಲಿ ಊಟಕ್ಕಾಗಿ ಗಲಾಟೆಯೇ ನಡೆದಿತ್ತು. ಕೆಲವರು ಸೇರಿ ಮನೆ ಮಂದಿಗೆ ಮುದ್ದೆ ಮಾಡಿ ಕೊಟ್ಟರು. ಆದರೆ ಗ್ಯಾಸ್ ಕನೆಕ್ಷನ್​ ನಿಂತು ಹೋಗಿತ್ತು. ಮುದ್ದೆ ಮಾಡಿದ್ದೇ ಇದಕ್ಕೆ ಕಾರಣ ಎಂದು ದೊಡ್ಡ ಗಲಾಟೆಯೇ ನಡೆಯಿತು. ಈ ಸಂದರ್ಭದಲ್ಲಿ ಕಿಚ್ಚನ ಕೈಯಡುಗೆ ಬರಲಿದೆ ಎಂಬ ಅಂದಾಜು ಸ್ಪರ್ಧಿಗಳಿಗೆ ಇರಲಿಲ್ಲ. ಮನೆಮಂದಿಯ ಮುನಿಸು, ಕಿಚ್ಚನ ಕೈಯಡುಗೆ ಸವಿದ ಕ್ಷಣಗಳೂ ಸೇರಿದಂತೆ ಸಂಪೂರ್ಣ ದೃಶ್ಯಗಳಿಗಾಗಿ ಬಿಗ್‌ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದು.

ಮುದ್ದೆಯೂಟದ ನಂತರ ಬಿಗ್‌ ಬಾಸ್ ಮನೆಯ ಗ್ಯಾಸ್ ಕನೆಕ್ಷನ್ ಡಿಸ್‌ಕನೆಕ್ಟ್‌ ಆದ ಹಿನ್ನೆಲೆಯಲ್ಲಿ ಇಡೀ ಮನೆ ಸದಸ್ಯರೆಲ್ಲಾ ಕಂಗಾಲಾಗಿದ್ದರು. ರಾತ್ರಿಯೆಲ್ಲಾ ಹಸಿದೇ ಇರಬೇಕಾಗುತ್ತದೆ ಎಂಬ ಕಾರಣಕ್ಕೆ ಮನೆಮಂದಿಯಲ್ಲಿ ಅಸಮಾಧಾನದ ಹೊಗೆಯಾಡಲಾರಂಭಿಸಿತ್ತು. ಆದರೆ ಹಸಿವಿನಿಂದ ಕುಳಿತ ಮನೆ ಮಂದಿಗೆ ಎಂದೆಂದಿಗೂ ಮರೆಯಲಾಗದಂಥ ಸಖತ್ ಸ್ಪೆಷಲ್ ಸರ್ಪೈಸ್‌ ಸಿಕ್ಕಿದೆ. ಆ ಸರ್ಪೈಸ್‌ ಏನು ಎಂಬುದು ಜಿಯೋಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಬಹಿರಂಗವಾಗಿದೆ. 'ಮನೆಮಂದಿಗೆ ಸಿಕ್ತು ಕಿಚ್ಚನ ಕೈರುಚಿ ಸವಿಯೋ ಸೌಭಾಗ್ಯ!' ಎಂಬ ಶೀರ್ಷಿಕೆಯಡಿ ಕನ್ನಡ ಬಿಗ್​ ಬಾಸ್​ ಪ್ರೋಮೋ ಅನಾವರಣಗೊಂಡಿದೆ. ಇದು ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಕಿಚ್ಚನ ಕೈಯಡುಗೆ: ಹಸಿದವರಿಗೆ ಊಟ ಸಿಕ್ಕರೆ ಅದಕ್ಕಿಂತ ಹೆಚ್ಚಿನ ಖುಷಿಯೇನು?. ಈ ಖುಷಿ ಬಿಗ್‌ ಬಾಸ್ ಸದಸ್ಯರಿಗೆ ದಕ್ಕಿದೆ. ಊಟ ಎಷ್ಟು ಮುಖ್ಯವೋ, ಎಷ್ಟೋ ಬಾರಿ ಅಡುಗೆ ಮಾಡಿದ ಕೈಗಳೂ ಅಷ್ಟೇ ಮುಖ್ಯವಾಗುತ್ತವೆ. ಯಾಕೆಂದರೆ ಅಡುಗೆ ಮಾಡುವವರ ಅಕ್ಕರೆ, ಪ್ರೀತಿ, ಅವರ ವ್ಯಕ್ತಿತ್ವವೂ ಅಡುಗೆಯಲ್ಲಿ ಸೇರಿರುತ್ತದೆ. ಹಾಗಾಗಿಯೇ ಬಿಗ್‌ ಬಾಸ್‌ ಮನೆ ಮಂದಿಗೆ ಸಿಕ್ಕ ಅಡುಗೆ ಅಷ್ಟು ಸ್ಪೆಷಲ್ ಆಗಿದೆ.

ಮನೆಯ ಸದಸ್ಯರಿಗೆಲ್ಲ ತಮ್ಮ ಕೈಯ್ಯಾರೆ ರೆಡಿ ಮಾಡಿದ ಅಡುಗೆಯನ್ನು ಕಿಚ್ಚ ಸುದೀಪ್ ಕಳುಹಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಊಟದ ಜೊತೆಗೆ ಒಂದೊಂದು ಪತ್ರವನ್ನೂ ಕೂಡ ಬರೆದಿಟ್ಟಿದ್ದಾರೆ. ಈ ಪತ್ರದಲ್ಲಿ ಆಯಾ ಸ್ಪರ್ಧಿಗಳಿಗೆ ಅತ್ಯಮೂಲ್ಯವಾದ ಸಲಹೆಗಳಿವೆ.

ಇದನ್ನೂ ಓದಿ: ಬಿಗ್​​ ಬಾಸ್​ ಮನೆಯಲ್ಲಿ ಮುದ್ದೆ ತಂದ ಆಪತ್ತು...! ವಿಡಿಯೋ ನೋಡಿ

ಇದು ಸರ್ಪೈಸ್‌. ಇಂದಿನ ಅಡುಗೆ, ಕಿಚ್ಚನ ಕೈಯಡುಗೆ ಎಂದು ಹೇಳಿರುವ ಕಿಚ್ಚನ ಮಾತುಗಳೂ ಪ್ರೋಮೋದಲ್ಲಿದೆ. ಕಿಚ್ಚನ ಕಿವಿಮಾತಿನೊಟ್ಟಿಗೆ ಬಂದ ಅಡುಗೆಯನ್ನು ನೋಡಿ ಮನೆ ಮಂದಿಯೆಲ್ಲ ಕುಣಿದು ಕುಪ್ಪಳಿಸುತ್ತಾರೆ. ಒಬ್ಬೊಬ್ಬರೂ ಕ್ಯಾಮರಾದೆದುರು ಬಂದು ಧನ್ಯವಾದ ತಿಳಿಸಿದ್ದಾರೆ. ಇದೊಂದು ಮರೆಯಲಾಗದ ಕೊಡುಗೆ ಎಂದು ಎಲ್ಲಾ ಸ್ಪರ್ಧಿಗಳಿಗೂ ಅನ್ನಿಸಿದೆ. ಇಷ್ಟೊತ್ತು ಹಸಿದುಕೊಂಡಿದ್ದಕ್ಕೂ ಸಾರ್ಥಕವಾಯಿತು ಎಂಬ ಭಾವ ಅವರಲ್ಲಿ ಮೂಡಿತು.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ದೀಪಿಕಾ ಪಡುಕೋಣೆ - ವಿಡಿಯೋ ನೋಡಿ

ಮುದ್ದೆ ತಂದ ಆಪತ್ತು!: ಇಂದು ಬೆಳಿಗ್ಗಿನ ಪ್ರೋಮೋದಲ್ಲಿ ಊಟಕ್ಕಾಗಿ ಗಲಾಟೆಯೇ ನಡೆದಿತ್ತು. ಕೆಲವರು ಸೇರಿ ಮನೆ ಮಂದಿಗೆ ಮುದ್ದೆ ಮಾಡಿ ಕೊಟ್ಟರು. ಆದರೆ ಗ್ಯಾಸ್ ಕನೆಕ್ಷನ್​ ನಿಂತು ಹೋಗಿತ್ತು. ಮುದ್ದೆ ಮಾಡಿದ್ದೇ ಇದಕ್ಕೆ ಕಾರಣ ಎಂದು ದೊಡ್ಡ ಗಲಾಟೆಯೇ ನಡೆಯಿತು. ಈ ಸಂದರ್ಭದಲ್ಲಿ ಕಿಚ್ಚನ ಕೈಯಡುಗೆ ಬರಲಿದೆ ಎಂಬ ಅಂದಾಜು ಸ್ಪರ್ಧಿಗಳಿಗೆ ಇರಲಿಲ್ಲ. ಮನೆಮಂದಿಯ ಮುನಿಸು, ಕಿಚ್ಚನ ಕೈಯಡುಗೆ ಸವಿದ ಕ್ಷಣಗಳೂ ಸೇರಿದಂತೆ ಸಂಪೂರ್ಣ ದೃಶ್ಯಗಳಿಗಾಗಿ ಬಿಗ್‌ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.